AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲೆ ಕುಸಿತ; ಕೊಯಂಬತ್ತೂರ್​​ನಲ್ಲಿ ಟನ್​​ಗಟ್ಟಲೆ ಟೊಮ್ಯಾಟೊ ರಸ್ತೆಗೆ ಸುರಿದ ರೈತರು

1 ಎಕರೆ ಜಮೀನಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು75,000 ರೂ ಖರ್ಚಾಗುತ್ತದೆ ಎಂದು ರೈತ ಆರ್ ಪೆರಿಯಸ್ವಾಮಿ ಹೇಳಿದ್ದಾರೆ. ಹೀಗಿರುವಾಗ 1 ಕೆಜಿಗೆ 15ರೂ ಮಾರಾಟವಾದರೆ ಏನು ಸಿಗುತ್ತದೆ?

ಬೆಲೆ ಕುಸಿತ; ಕೊಯಂಬತ್ತೂರ್​​ನಲ್ಲಿ ಟನ್​​ಗಟ್ಟಲೆ ಟೊಮ್ಯಾಟೊ ರಸ್ತೆಗೆ ಸುರಿದ ರೈತರು
ಟೊಮ್ಯಾಟೊ
TV9 Web
| Edited By: |

Updated on:Jul 19, 2022 | 2:12 PM

Share

15 ಕೆಜಿ ಟೊಮ್ಯಾಟೊ (tomatoes) ಬಾಕ್ಸ್ ಬೆಲೆ ರೂ 50 ಆಗಿ ಇಳಿದಿದ್ದು, ಭಾರಿ ನಷ್ಟ ಅನುಭವಿಸುತ್ತಿರುವ ಕೊಯಂಬತ್ತೂರ್​​ನ  (Coimbatore) ರೈತರು ಸೋಮವಾರ ಟನ್​​ಗಟ್ಟಲೆ ಟೊಮ್ಯಾಟೊವನ್ನು ರಸ್ತೆಗೆ ಸುರಿದಿದ್ದಾರೆ. ಟೊಮ್ಯಾಟೊ ಖರೀದಿ ಮಾಡಲು ಯಾರೂ ಇಲ್ಲ, ಹೀಗಾಗಿ ಟೊಮ್ಯಾಟೊ ದರ ಕೂಡಾ ಕೆಳಕ್ಕೆ ಇಳಿದಿದ.  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, 1 ಎಕರೆ ಜಮೀನಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು75,000 ರೂ ಖರ್ಚಾಗುತ್ತದೆ ಎಂದು ರೈತ ಆರ್ ಪೆರಿಯಸ್ವಾಮಿ ಹೇಳಿದ್ದಾರೆ. ಹೀಗಿರುವಾಗ 1 ಕೆಜಿಗೆ 15ರೂ ಮಾರಾಟವಾದರೆ ಏನು ಸಿಗುತ್ತದೆ. ಖರೀದಿದಾರರು ಬರುತ್ತಿಲ್ಲ ಹೀಗಿರುವಾಗ ರಸ್ತೆಗೆ ಸುರಿಯುವುದು ಬಿಟ್ಟರೆ ನಮಗೆ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ.

ಪ್ರಸ್ತುತ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು ಸೂಕ್ತವಾದ ಹವಾಮಾನ ಇದ್ದ ಕಾರಣ ಈ ಬಾರಿ ಫಸಲು ಚೆನ್ನಾಗಿತ್ತು. ಆದರೆ ಬೆಲೆ ಇಳಿಕೆಯಿಂದಾಗಿ ರೈತರು ಗ್ರಾಹಕರಿಗೆ ಕೆಜಿಗೆ 10 ರೂನಂತೆ ಮಾರಬೇಕಾಯಿತು. ಬೆಲೆ ಇಳಿಕೆಯಿಂದಾಗಿ ರೈತರು ಮಧ್ಯವರ್ತಿ ಅಥವಾ ಮಾರುಕಟ್ಟೆ ಏಜೆಂಟ್ ಗಳನ್ನು ಬಳಸದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ. ಟೊಮ್ಯಾಟೊ ಕೊಳೆಯುವ ಮುನ್ನ ಅದನ್ನು ಖಾಲಿ ಮಾಡುವುದಕ್ಕಾಗಿ ರೈತರೇ ಗ್ರಾಹಕರ ಮನೆ ಬಾಗಿಲಿಗೆ  ಹೋಗಿ ಮಾರಿದ್ದಾರೆ.

ಪ್ರತೀ  ವರ್ಷ ಕೊಯಂಬತ್ತೂರ್​​ ನ ಧರ್ಮಪುರಿ ಪ್ರದೇಶದಲ್ಲಿ 60 ಟನ್​​ಗಳಿಗಿಂತಲ ಹೆಚ್ಚು  ಟೊಮ್ಯಾಟೊ ಬೆಳೆಯಲಾಗುತ್ತದೆ. ಈ ವರ್ಷದ ಆರಂಭದಲ್ಲಿ  ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು ಇದು ರೈತರಲ್ಲಿ  ಹುರುಪು ಹುಟ್ಟಿಸಿತ್ತು. ಇದೀಗ ಬೆಲೆ ಇಳಿಕೆಯಿಂದಾಗಿ ರೈತರ ಸಮಸ್ಯೆ ಎದುರಿಸುತ್ತಿದ್ದಾರೆ.

Published On - 1:53 pm, Tue, 19 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ