AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲೆ ಕುಸಿತ; ಕೊಯಂಬತ್ತೂರ್​​ನಲ್ಲಿ ಟನ್​​ಗಟ್ಟಲೆ ಟೊಮ್ಯಾಟೊ ರಸ್ತೆಗೆ ಸುರಿದ ರೈತರು

1 ಎಕರೆ ಜಮೀನಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು75,000 ರೂ ಖರ್ಚಾಗುತ್ತದೆ ಎಂದು ರೈತ ಆರ್ ಪೆರಿಯಸ್ವಾಮಿ ಹೇಳಿದ್ದಾರೆ. ಹೀಗಿರುವಾಗ 1 ಕೆಜಿಗೆ 15ರೂ ಮಾರಾಟವಾದರೆ ಏನು ಸಿಗುತ್ತದೆ?

ಬೆಲೆ ಕುಸಿತ; ಕೊಯಂಬತ್ತೂರ್​​ನಲ್ಲಿ ಟನ್​​ಗಟ್ಟಲೆ ಟೊಮ್ಯಾಟೊ ರಸ್ತೆಗೆ ಸುರಿದ ರೈತರು
ಟೊಮ್ಯಾಟೊ
TV9 Web
| Edited By: |

Updated on:Jul 19, 2022 | 2:12 PM

Share

15 ಕೆಜಿ ಟೊಮ್ಯಾಟೊ (tomatoes) ಬಾಕ್ಸ್ ಬೆಲೆ ರೂ 50 ಆಗಿ ಇಳಿದಿದ್ದು, ಭಾರಿ ನಷ್ಟ ಅನುಭವಿಸುತ್ತಿರುವ ಕೊಯಂಬತ್ತೂರ್​​ನ  (Coimbatore) ರೈತರು ಸೋಮವಾರ ಟನ್​​ಗಟ್ಟಲೆ ಟೊಮ್ಯಾಟೊವನ್ನು ರಸ್ತೆಗೆ ಸುರಿದಿದ್ದಾರೆ. ಟೊಮ್ಯಾಟೊ ಖರೀದಿ ಮಾಡಲು ಯಾರೂ ಇಲ್ಲ, ಹೀಗಾಗಿ ಟೊಮ್ಯಾಟೊ ದರ ಕೂಡಾ ಕೆಳಕ್ಕೆ ಇಳಿದಿದ.  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, 1 ಎಕರೆ ಜಮೀನಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು75,000 ರೂ ಖರ್ಚಾಗುತ್ತದೆ ಎಂದು ರೈತ ಆರ್ ಪೆರಿಯಸ್ವಾಮಿ ಹೇಳಿದ್ದಾರೆ. ಹೀಗಿರುವಾಗ 1 ಕೆಜಿಗೆ 15ರೂ ಮಾರಾಟವಾದರೆ ಏನು ಸಿಗುತ್ತದೆ. ಖರೀದಿದಾರರು ಬರುತ್ತಿಲ್ಲ ಹೀಗಿರುವಾಗ ರಸ್ತೆಗೆ ಸುರಿಯುವುದು ಬಿಟ್ಟರೆ ನಮಗೆ ಬೇರೆ ಆಯ್ಕೆ ಇಲ್ಲ ಎಂದಿದ್ದಾರೆ.

ಪ್ರಸ್ತುತ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆ ಬೆಳೆಯಲು ಸೂಕ್ತವಾದ ಹವಾಮಾನ ಇದ್ದ ಕಾರಣ ಈ ಬಾರಿ ಫಸಲು ಚೆನ್ನಾಗಿತ್ತು. ಆದರೆ ಬೆಲೆ ಇಳಿಕೆಯಿಂದಾಗಿ ರೈತರು ಗ್ರಾಹಕರಿಗೆ ಕೆಜಿಗೆ 10 ರೂನಂತೆ ಮಾರಬೇಕಾಯಿತು. ಬೆಲೆ ಇಳಿಕೆಯಿಂದಾಗಿ ರೈತರು ಮಧ್ಯವರ್ತಿ ಅಥವಾ ಮಾರುಕಟ್ಟೆ ಏಜೆಂಟ್ ಗಳನ್ನು ಬಳಸದೆ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದ್ದಾರೆ. ಟೊಮ್ಯಾಟೊ ಕೊಳೆಯುವ ಮುನ್ನ ಅದನ್ನು ಖಾಲಿ ಮಾಡುವುದಕ್ಕಾಗಿ ರೈತರೇ ಗ್ರಾಹಕರ ಮನೆ ಬಾಗಿಲಿಗೆ  ಹೋಗಿ ಮಾರಿದ್ದಾರೆ.

ಪ್ರತೀ  ವರ್ಷ ಕೊಯಂಬತ್ತೂರ್​​ ನ ಧರ್ಮಪುರಿ ಪ್ರದೇಶದಲ್ಲಿ 60 ಟನ್​​ಗಳಿಗಿಂತಲ ಹೆಚ್ಚು  ಟೊಮ್ಯಾಟೊ ಬೆಳೆಯಲಾಗುತ್ತದೆ. ಈ ವರ್ಷದ ಆರಂಭದಲ್ಲಿ  ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು ಇದು ರೈತರಲ್ಲಿ  ಹುರುಪು ಹುಟ್ಟಿಸಿತ್ತು. ಇದೀಗ ಬೆಲೆ ಇಳಿಕೆಯಿಂದಾಗಿ ರೈತರ ಸಮಸ್ಯೆ ಎದುರಿಸುತ್ತಿದ್ದಾರೆ.

Published On - 1:53 pm, Tue, 19 July 22

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ