ತೆಲಂಗಾಣದ ಟಿಂಬರ್​ ಡಿಪೋದಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ; 11 ಕಾರ್ಮಿಕರು ಸಜೀವ ದಹನ

ಮೊಟ್ಟ ಮೊದಲು ಡಿಪೋದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರ್ಮಿಕರು ಮೊದಲನೇ ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಸುಮಾರು 12 ಕಾರ್ಮಿಕರು ಇದ್ದರು. ಅದರಲ್ಲಿ ಒಬ್ಬ ಪಾರಾಗಿದ್ದಾನೆ ಎಂದು ಹೇಳಲಾಗಿದೆ.

ತೆಲಂಗಾಣದ ಟಿಂಬರ್​ ಡಿಪೋದಲ್ಲಿ ತಡರಾತ್ರಿ ಭೀಕರ ಅಗ್ನಿ ಅವಘಡ; 11 ಕಾರ್ಮಿಕರು ಸಜೀವ ದಹನ
ಸಿಕಂದರಾಬಾದ್​ನಲ್ಲಿ ಅಗ್ನಿ ಅವಘಡ
Updated By: Lakshmi Hegde

Updated on: Mar 23, 2022 | 9:16 AM

ತೆಲಂಗಾಣದ ಸಿಕಂದರಾಬಾದ್​​ನ ಬೋಯಾಗುಡಾ (Secunderabad Bhoiguda Fire) ದಲ್ಲಿರುವ ಟಿಂಬರ್​ ಡಿಪೋದಲ್ಲಿ ಭಾರಿ ಅಗ್ನಿ ಅವಘಡ (Fire Accident) ನಡೆದಿದೆ. ತಡರಾತ್ರಿ 3ಗಂಟೆಯಲ್ಲಿ ನಡೆದ ಈ ದುರಂತದಲ್ಲಿ 11 ಮಂದಿ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ ಎಂದು ವರದಿಯಾಗಿದೆ. ಇಲ್ಲಿ ಮರದ ದಿಮ್ಮಿಗಳು, ಉರುವಲುಗಳ ಸಂಗ್ರಹ ಇದ್ದಿದ್ದರಿಂದ ಬೆಂಕಿ ಬಹುಬೇಗ ಹರಡಿತು. ಕಾರ್ಮಿಕರು ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ದಟ್ಟವಾದ ಹೊಗೆಯೊಂದಿಗೆ ಬೆಂಕಿ ಭಾರಿ ಪ್ರಮಾಣದಲ್ಲಿ ಹೊತ್ತಿ ಉರಿದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಮೊಟ್ಟ ಮೊದಲು ಡಿಪೋದ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಾರ್ಮಿಕರು ಮೊದಲನೇ ಮಹಡಿಯಲ್ಲಿ ನಿದ್ರಿಸುತ್ತಿದ್ದರು. ಸುಮಾರು 12 ಕಾರ್ಮಿಕರು ಇದ್ದರು. ಅದರಲ್ಲಿ ಒಬ್ಬ ಪಾರಾಗಿದ್ದಾನೆ ಎಂದು ಹೇಳಲಾಗಿದೆ. ಮರದ ದಿಮ್ಮಿ, ಕಟ್ಟಿಗೆಗಳ ಸಂಗ್ರಹ ಆಗಿದ್ದರಿಂದ ಬಹುಬೇಗನೇ ಬೆಂಕಿ ಹರಡಿದೆ. ಸ್ಥಳೀಯರು ಅಗ್ನಿಶಾಮಕ ದಳ, ಪೊಲೀಸರಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸುಮಾರು ಎಂಟು ತಂಡಗಳು ಅಲ್ಲಿಗೆ ಧಾವಿಸಿದ್ದವು. ಸೆಂಟ್ರಲ್​ ಝೋನ್​ ಪೊಲೀಸರು ಸ್ಥಳಕ್ಕೆ ತೆರಳಿ ಅಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಎಲ್ಲ ಕ್ರಮಗಳನ್ನೂ ಕೈಗೊಂಡರು. ಆದರೂ ಬೆಂಕಿಯ ತೀವ್ರತೆ ವಿಪರೀತವಾಗಿದ್ದ ಪರಿಣಾಮ ರಕ್ಷಣೆ ಕಷ್ಟವಾಯಿತು ಎಂದು ವರದಿಯಾಗಿದೆ. ಹಾಗೇ, ಈ ಕಾರ್ಮಿಕರು ಬಿಹಾರ ಮೂಲದವರು ಎಂದೂ ಹೇಳಲಾಗಿದೆ.

ಇದನ್ನೂ ಓದಿ: ನಾನು ಹೇಳಿದಂತೆ ಆಯ್ತು, ಬಿಜೆಪಿ ಅಧಿಕಾರ ರಚಿಸಿದ ಬೆನ್ನಲ್ಲೇ ಇಂಧನ-ಗ್ಯಾಸ್​ ಬೆಲೆ ಜಾಸ್ತಿಯಾಯ್ತು: ಛತ್ತೀಸ್​ಗಢ ಸಿಎಂ

Published On - 8:37 am, Wed, 23 March 22