AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hyderabad: ನಡುರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ

ದುಷ್ಕರ್ಮಿಗಳು ಜನನಿಬಿಡ ರಸ್ತೆಯಲ್ಲಿ ಯುವಕನನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಎಲ್ಲರ ಕಣ್ಣೆದುರೇ ಆತನನ್ನು ಅಡ್ಡಗಟ್ಟಿ ರಸ್ತೆಯಲ್ಲಿ ಬೀಳಿಸಿ ಹಲ್ಲೆ ನಡೆಸಿದ್ದಾರೆ. ಉಮೇಶ್​ ತಮ್ಮ ಕುಟುಂಬದೊಂದಿಗೆ ಮೆಡ್ಚಲ್‌ನಲ್ಲಿ ವಾಸಿಸುತ್ತಿದ್ದರು. ಈ ಕ್ರೂರ ಘಟನೆಯನ್ನು ಕೆಲವರು ಸೆರೆಹಿಡಿದಿದ್ದಾರೆ, ಹಗಲು ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಆಘಾತಕಾರಿ ಕೊಲೆ ನಡೆದಿದ್ದು, ವಾಹನ ಸವಾರರು ಭಯಭೀತರಾಗಿ ದೂರದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ.

Hyderabad: ನಡುರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ
ಅಪರಾಧImage Credit source: Telangana Today
Follow us
ನಯನಾ ರಾಜೀವ್
|

Updated on: Feb 17, 2025 | 8:53 AM

ನಡುರಸ್ತೆಯಲ್ಲಿ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹೈದರಾಬಾದ್​ನ ಮೆಡ್ಚಲ್ ಪ್ರದೇಶದಲ್ಲಿ ನಡೆದಿದೆ. ಜನನಿಬಿಡ ಹೆದ್ದಾರಿಯ ಮಧ್ಯದಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾಮರೆಡ್ಡಿ ಜಿಲ್ಲೆಯ ಮಾಚ ರೆಡ್ಡಿ ಗ್ರಾಮದ ನಿವಾಸಿ ಉಮೇಶ್ ಅವರ ಮೇಲೆ ಚಾಕುಗಳಿಂದ ಶಸ್ತ್ರಸಜ್ಜಿತವಾದ ಇಬ್ಬರು ದುಷ್ಕರ್ಮಿಗಳು ನಿರ್ದಯವಾಗಿ ದಾಳಿ ಮಾಡಿ ಕೊಲೆ ಮಾಡಿದ್ದಾರೆ.

ಉಮೇಶ್​ ತಮ್ಮ ಕುಟುಂಬದೊಂದಿಗೆ ಮೆಡ್ಚಲ್‌ನಲ್ಲಿ ವಾಸಿಸುತ್ತಿದ್ದರು. ಈ ಕ್ರೂರ ಘಟನೆಯನ್ನು ಕೆಲವರು ಸೆರೆಹಿಡಿದಿದ್ದಾರೆ, ಹಗಲು ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಆಘಾತಕಾರಿ ಕೊಲೆ ನಡೆದಿದ್ದು, ವಾಹನ ಸವಾರರು ಭಯಭೀತರಾಗಿ ದೂರದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಈ ಭೀಕರ ದಾಳಿಯಿಂದ ಭಯಭೀತರಾಗಿದ್ದರು. ಕೊಲೆ ಮಾಡಿದ ನಂತರ, ಇಬ್ಬರು ದುಷ್ಕರ್ಮಿಗಳು ಶಾಂತವಾಗಿ ರಸ್ತೆ ದಾಟಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮೆಡ್ಚಲ್ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಈ ಘಟನೆಯು ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕೊಲೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಮತ್ತೊಂದು ವೈರಲ್ ವಿಡಿಯೋದಲ್ಲಿ, ಉಮೇಶ್ ಅವರ ದೇಹವು ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿರುವುದನ್ನು ಕಾಣಬಹುದು, ಅವರ ಕುಟುಂಬವು ಮೃತದೇಹದ ಬಳಿ ರೋದಿಸುತ್ತಿರುವುದನ್ನು ಕಾಣಬಹುದು.

ಇತ್ತೀಚಿನ ವಾರಗಳಲ್ಲಿ, ಹಾಡಹಗಲೇ ಅನೇಕ ಚಾಕು ದಾಳಿಗಳು ಮತ್ತು ಕೊಲೆಗಳು ನಡೆದಿವೆ. ಈ ಹತ್ಯೆಗಳ ಹಿಂದಿನ ಉದ್ದೇಶಗಳು ರಿಯಲ್ ಎಸ್ಟೇಟ್ ವಿವಾದಗಳು ಮತ್ತು ಆಸ್ತಿ ಘರ್ಷಣೆಗಳಿಂದ ಹಿಡಿದು ಪ್ರೇಮದವರೆಗೂ ಇದೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಈ ಕೊಲೆಗೆ ಕಾರಣವೇನು?, ಕೊಲೆ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ