AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಬಾವುಟ ತೆರವುಗೊಳಿಸಿದರೆ, ನಿಮ್ಮ ಬ್ಯಾಡ್ಜ್​ ಕಿತ್ತು ತೆಗೆಯುತ್ತೇನೆ-ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಎಸ್​ಪಿ ಮುಖಂಡ

ಆಸ್ಪತ್ರೆ ಕಟ್ಟಲೆಂದು ನೌಬಾಸ್ಟಾ ಮೌರಂಗ್​ ಮಂಡಿಯಿಂದ ಜಾಗ ತೆಗೆದುಕೊಂಡು ಅಲ್ಲಿ ಬಿಜೆಪಿ ತನ್ನ ಕಚೇರಿ ಕಟ್ಟಿಸಿದೆ ಎಂಬುದು ಸಮಾಜವಾದಿ ಪಕ್ಷದ ಆರೋಪ. ಇದೇ ಆರೋಪವನ್ನು ದೊಡ್ಡದಾಗಿ ಬರೆದ ಪೋಸ್ಟರ್​​ನ್ನು ಸಮಾಜವಾದಿ ಪಕ್ಷ ಬಿಜೆಪಿ ಹೊಸ ಕಚೇರಿಯ ಮೇಲೆ ಹಾಕಿತ್ತು.

ನಮ್ಮ ಬಾವುಟ ತೆರವುಗೊಳಿಸಿದರೆ, ನಿಮ್ಮ ಬ್ಯಾಡ್ಜ್​ ಕಿತ್ತು ತೆಗೆಯುತ್ತೇನೆ-ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಎಸ್​ಪಿ ಮುಖಂಡ
ಪೊಲೀಸರೊಂದಿಗೆ ಜಗಳಕ್ಕೆ ನಿಂತ ಸಮಾಜವಾದಿ ಪಕ್ಷದ ನಾಯಕ
TV9 Web
| Edited By: |

Updated on: Nov 24, 2021 | 4:20 PM

Share

ಪೊಲೀಸ್​ ಅಧಿಕಾರಿಯೊಬ್ಬರಿಗೆ ಸಮಾಜವಾದಿ ಪಕ್ಷದ ನಾಯಕನೊಬ್ಬ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಅದರ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗ್ತಿದೆ. ಬರ್ರಾ ಪೊಲೀಸ್ ಠಾಣೆಯಲ್ಲಿ ಎಸ್​ಪಿ ಕೌನ್ಸಿಲರ್​ ಅರ್ಪಿತ್​ ಯಾದವ್​  ಪೊಲೀಸ್​ ಅಧಿಕಾರಿಗೆ ರೋಪ್​ ಹಾಕಿದ್ದಾರೆ. ‘ನಾವು ಹಾಕಿದ ಬಾವುಟವನ್ನು ನೀವು ಕೆಳಗಿಳಿಸಿದರೆ, ನಾನು ನಿಮ್ಮ ಬ್ಯಾಡ್ಜ್​ ತೆಗೆದು ಹಾಕುತ್ತೇನೆ’ ಎಂದು ಅರ್ಪಿತ್​ ಕೂಗಾಡಿದ ವಿಡಿಯೋ ಈಗ ವೈರಲ್ ಆಗ್ತಿದೆ. ಇತ್ತೀಚೆಗಷ್ಟೇ ನಿರ್ಮಾಣವಾದ ಬಿಜೆಪಿಯ ಪ್ರಾದೇಶಿಕ ಕಚೇರಿ ಮೇಲೆ ಅರ್ಪಿತ್ ಯಾದವ್​ ಮತ್ತು ಅವರ ಬೆಂಬಲಿಗರು ಸೇರಿ ಅವರ ಪಕ್ಷದ ಪೋಸ್ಟರ್, ಬಾವುಟ ಹಾಕಿದ್ದರು. ಅದನ್ನು ಪೊಲೀಸರು ತೆಗೆದುಹಾಕಿದ್ದ ಬೆನ್ನಲ್ಲೇ ಗಲಾಟೆ ಶುರುವಾಗಿತ್ತು. 

ಆಸ್ಪತ್ರೆ ಕಟ್ಟಲೆಂದು ನೌಬಾಸ್ಟಾ ಮೌರಂಗ್​ ಮಂಡಿಯಿಂದ ಜಾಗ ತೆಗೆದುಕೊಂಡು ಅಲ್ಲಿ ಬಿಜೆಪಿ ತನ್ನ ಕಚೇರಿ ಕಟ್ಟಿಸಿದೆ ಎಂಬುದು ಸಮಾಜವಾದಿ ಪಕ್ಷದ ಆರೋಪ. ಇದೇ ಆರೋಪವನ್ನು ದೊಡ್ಡದಾಗಿ ಬರೆದ ಪೋಸ್ಟರ್​​ನ್ನು ಸಮಾಜವಾದಿ ಪಕ್ಷ ಬಿಜೆಪಿ ಹೊಸ ಕಚೇರಿಯ ಮೇಲೆ ಹಾಕಿತ್ತು. ನಿನ್ನೆ ಬಿಜೆಪಿ ನೂತನ ಕಚೇರಿಯ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಆಗಮಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಪೋಸ್ಟರ್​ ತೆಗೆದು ಹಾಕಿದ್ದರು.  ಹಾಗೇ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅರ್ಪಿತ್​ ಯಾದವ್​ರನ್ನು ವಶಕ್ಕೆ ಪಡೆದು, ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.

ಅಂದಹಾಗೆ ಅರ್ಪಿತ್​ ಯಾದವ್​ ಹೀಗೆ ಬೆದರಿಕೆ ಹಾಕಿದ್ದು ಅಜಯ್​ ಸೇಠ್​ ಎಂಬುವರಿಗೆ ಎಂದು ಹೇಳಲಾಗಿದೆ. ಈ ಬಗ್ಗೆ ಇಂಡಿಯಾ ಟುಡೆಗೆ ಪ್ರತಿಕ್ರಿಯೆ ನೀಡಿದ ಅಜಯ್​ ಸೇಠ್​,  ಪೊಲೀಸರು ಅವರ ಕರ್ತವ್ಯವನ್ನು ಮಾಡಿದ್ದಾರೆ.  ಆದರೆ ಅರ್ಪಿತ್ ಅನುಚಿತವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಆಹಾರ: ಕೊನೆಗೂ ಮೌನ ಮುರಿದ ಬಿಸಿಸಿಐ

‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್