AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಬಾವುಟ ತೆರವುಗೊಳಿಸಿದರೆ, ನಿಮ್ಮ ಬ್ಯಾಡ್ಜ್​ ಕಿತ್ತು ತೆಗೆಯುತ್ತೇನೆ-ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಎಸ್​ಪಿ ಮುಖಂಡ

ಆಸ್ಪತ್ರೆ ಕಟ್ಟಲೆಂದು ನೌಬಾಸ್ಟಾ ಮೌರಂಗ್​ ಮಂಡಿಯಿಂದ ಜಾಗ ತೆಗೆದುಕೊಂಡು ಅಲ್ಲಿ ಬಿಜೆಪಿ ತನ್ನ ಕಚೇರಿ ಕಟ್ಟಿಸಿದೆ ಎಂಬುದು ಸಮಾಜವಾದಿ ಪಕ್ಷದ ಆರೋಪ. ಇದೇ ಆರೋಪವನ್ನು ದೊಡ್ಡದಾಗಿ ಬರೆದ ಪೋಸ್ಟರ್​​ನ್ನು ಸಮಾಜವಾದಿ ಪಕ್ಷ ಬಿಜೆಪಿ ಹೊಸ ಕಚೇರಿಯ ಮೇಲೆ ಹಾಕಿತ್ತು.

ನಮ್ಮ ಬಾವುಟ ತೆರವುಗೊಳಿಸಿದರೆ, ನಿಮ್ಮ ಬ್ಯಾಡ್ಜ್​ ಕಿತ್ತು ತೆಗೆಯುತ್ತೇನೆ-ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಎಸ್​ಪಿ ಮುಖಂಡ
ಪೊಲೀಸರೊಂದಿಗೆ ಜಗಳಕ್ಕೆ ನಿಂತ ಸಮಾಜವಾದಿ ಪಕ್ಷದ ನಾಯಕ
TV9 Web
| Edited By: |

Updated on: Nov 24, 2021 | 4:20 PM

Share

ಪೊಲೀಸ್​ ಅಧಿಕಾರಿಯೊಬ್ಬರಿಗೆ ಸಮಾಜವಾದಿ ಪಕ್ಷದ ನಾಯಕನೊಬ್ಬ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಅದರ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗ್ತಿದೆ. ಬರ್ರಾ ಪೊಲೀಸ್ ಠಾಣೆಯಲ್ಲಿ ಎಸ್​ಪಿ ಕೌನ್ಸಿಲರ್​ ಅರ್ಪಿತ್​ ಯಾದವ್​  ಪೊಲೀಸ್​ ಅಧಿಕಾರಿಗೆ ರೋಪ್​ ಹಾಕಿದ್ದಾರೆ. ‘ನಾವು ಹಾಕಿದ ಬಾವುಟವನ್ನು ನೀವು ಕೆಳಗಿಳಿಸಿದರೆ, ನಾನು ನಿಮ್ಮ ಬ್ಯಾಡ್ಜ್​ ತೆಗೆದು ಹಾಕುತ್ತೇನೆ’ ಎಂದು ಅರ್ಪಿತ್​ ಕೂಗಾಡಿದ ವಿಡಿಯೋ ಈಗ ವೈರಲ್ ಆಗ್ತಿದೆ. ಇತ್ತೀಚೆಗಷ್ಟೇ ನಿರ್ಮಾಣವಾದ ಬಿಜೆಪಿಯ ಪ್ರಾದೇಶಿಕ ಕಚೇರಿ ಮೇಲೆ ಅರ್ಪಿತ್ ಯಾದವ್​ ಮತ್ತು ಅವರ ಬೆಂಬಲಿಗರು ಸೇರಿ ಅವರ ಪಕ್ಷದ ಪೋಸ್ಟರ್, ಬಾವುಟ ಹಾಕಿದ್ದರು. ಅದನ್ನು ಪೊಲೀಸರು ತೆಗೆದುಹಾಕಿದ್ದ ಬೆನ್ನಲ್ಲೇ ಗಲಾಟೆ ಶುರುವಾಗಿತ್ತು. 

ಆಸ್ಪತ್ರೆ ಕಟ್ಟಲೆಂದು ನೌಬಾಸ್ಟಾ ಮೌರಂಗ್​ ಮಂಡಿಯಿಂದ ಜಾಗ ತೆಗೆದುಕೊಂಡು ಅಲ್ಲಿ ಬಿಜೆಪಿ ತನ್ನ ಕಚೇರಿ ಕಟ್ಟಿಸಿದೆ ಎಂಬುದು ಸಮಾಜವಾದಿ ಪಕ್ಷದ ಆರೋಪ. ಇದೇ ಆರೋಪವನ್ನು ದೊಡ್ಡದಾಗಿ ಬರೆದ ಪೋಸ್ಟರ್​​ನ್ನು ಸಮಾಜವಾದಿ ಪಕ್ಷ ಬಿಜೆಪಿ ಹೊಸ ಕಚೇರಿಯ ಮೇಲೆ ಹಾಕಿತ್ತು. ನಿನ್ನೆ ಬಿಜೆಪಿ ನೂತನ ಕಚೇರಿಯ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಆಗಮಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಪೋಸ್ಟರ್​ ತೆಗೆದು ಹಾಕಿದ್ದರು.  ಹಾಗೇ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅರ್ಪಿತ್​ ಯಾದವ್​ರನ್ನು ವಶಕ್ಕೆ ಪಡೆದು, ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.

ಅಂದಹಾಗೆ ಅರ್ಪಿತ್​ ಯಾದವ್​ ಹೀಗೆ ಬೆದರಿಕೆ ಹಾಕಿದ್ದು ಅಜಯ್​ ಸೇಠ್​ ಎಂಬುವರಿಗೆ ಎಂದು ಹೇಳಲಾಗಿದೆ. ಈ ಬಗ್ಗೆ ಇಂಡಿಯಾ ಟುಡೆಗೆ ಪ್ರತಿಕ್ರಿಯೆ ನೀಡಿದ ಅಜಯ್​ ಸೇಠ್​,  ಪೊಲೀಸರು ಅವರ ಕರ್ತವ್ಯವನ್ನು ಮಾಡಿದ್ದಾರೆ.  ಆದರೆ ಅರ್ಪಿತ್ ಅನುಚಿತವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಆಹಾರ: ಕೊನೆಗೂ ಮೌನ ಮುರಿದ ಬಿಸಿಸಿಐ

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!