AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಬಾವುಟ ತೆರವುಗೊಳಿಸಿದರೆ, ನಿಮ್ಮ ಬ್ಯಾಡ್ಜ್​ ಕಿತ್ತು ತೆಗೆಯುತ್ತೇನೆ-ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಎಸ್​ಪಿ ಮುಖಂಡ

ಆಸ್ಪತ್ರೆ ಕಟ್ಟಲೆಂದು ನೌಬಾಸ್ಟಾ ಮೌರಂಗ್​ ಮಂಡಿಯಿಂದ ಜಾಗ ತೆಗೆದುಕೊಂಡು ಅಲ್ಲಿ ಬಿಜೆಪಿ ತನ್ನ ಕಚೇರಿ ಕಟ್ಟಿಸಿದೆ ಎಂಬುದು ಸಮಾಜವಾದಿ ಪಕ್ಷದ ಆರೋಪ. ಇದೇ ಆರೋಪವನ್ನು ದೊಡ್ಡದಾಗಿ ಬರೆದ ಪೋಸ್ಟರ್​​ನ್ನು ಸಮಾಜವಾದಿ ಪಕ್ಷ ಬಿಜೆಪಿ ಹೊಸ ಕಚೇರಿಯ ಮೇಲೆ ಹಾಕಿತ್ತು.

ನಮ್ಮ ಬಾವುಟ ತೆರವುಗೊಳಿಸಿದರೆ, ನಿಮ್ಮ ಬ್ಯಾಡ್ಜ್​ ಕಿತ್ತು ತೆಗೆಯುತ್ತೇನೆ-ಪೊಲೀಸ್ ಅಧಿಕಾರಿಗೇ ಧಮ್ಕಿ ಹಾಕಿದ ಎಸ್​ಪಿ ಮುಖಂಡ
ಪೊಲೀಸರೊಂದಿಗೆ ಜಗಳಕ್ಕೆ ನಿಂತ ಸಮಾಜವಾದಿ ಪಕ್ಷದ ನಾಯಕ
TV9 Web
| Edited By: |

Updated on: Nov 24, 2021 | 4:20 PM

Share

ಪೊಲೀಸ್​ ಅಧಿಕಾರಿಯೊಬ್ಬರಿಗೆ ಸಮಾಜವಾದಿ ಪಕ್ಷದ ನಾಯಕನೊಬ್ಬ ಬೆದರಿಕೆ ಹಾಕಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು, ಅದರ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್​ ಆಗ್ತಿದೆ. ಬರ್ರಾ ಪೊಲೀಸ್ ಠಾಣೆಯಲ್ಲಿ ಎಸ್​ಪಿ ಕೌನ್ಸಿಲರ್​ ಅರ್ಪಿತ್​ ಯಾದವ್​  ಪೊಲೀಸ್​ ಅಧಿಕಾರಿಗೆ ರೋಪ್​ ಹಾಕಿದ್ದಾರೆ. ‘ನಾವು ಹಾಕಿದ ಬಾವುಟವನ್ನು ನೀವು ಕೆಳಗಿಳಿಸಿದರೆ, ನಾನು ನಿಮ್ಮ ಬ್ಯಾಡ್ಜ್​ ತೆಗೆದು ಹಾಕುತ್ತೇನೆ’ ಎಂದು ಅರ್ಪಿತ್​ ಕೂಗಾಡಿದ ವಿಡಿಯೋ ಈಗ ವೈರಲ್ ಆಗ್ತಿದೆ. ಇತ್ತೀಚೆಗಷ್ಟೇ ನಿರ್ಮಾಣವಾದ ಬಿಜೆಪಿಯ ಪ್ರಾದೇಶಿಕ ಕಚೇರಿ ಮೇಲೆ ಅರ್ಪಿತ್ ಯಾದವ್​ ಮತ್ತು ಅವರ ಬೆಂಬಲಿಗರು ಸೇರಿ ಅವರ ಪಕ್ಷದ ಪೋಸ್ಟರ್, ಬಾವುಟ ಹಾಕಿದ್ದರು. ಅದನ್ನು ಪೊಲೀಸರು ತೆಗೆದುಹಾಕಿದ್ದ ಬೆನ್ನಲ್ಲೇ ಗಲಾಟೆ ಶುರುವಾಗಿತ್ತು. 

ಆಸ್ಪತ್ರೆ ಕಟ್ಟಲೆಂದು ನೌಬಾಸ್ಟಾ ಮೌರಂಗ್​ ಮಂಡಿಯಿಂದ ಜಾಗ ತೆಗೆದುಕೊಂಡು ಅಲ್ಲಿ ಬಿಜೆಪಿ ತನ್ನ ಕಚೇರಿ ಕಟ್ಟಿಸಿದೆ ಎಂಬುದು ಸಮಾಜವಾದಿ ಪಕ್ಷದ ಆರೋಪ. ಇದೇ ಆರೋಪವನ್ನು ದೊಡ್ಡದಾಗಿ ಬರೆದ ಪೋಸ್ಟರ್​​ನ್ನು ಸಮಾಜವಾದಿ ಪಕ್ಷ ಬಿಜೆಪಿ ಹೊಸ ಕಚೇರಿಯ ಮೇಲೆ ಹಾಕಿತ್ತು. ನಿನ್ನೆ ಬಿಜೆಪಿ ನೂತನ ಕಚೇರಿಯ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಆಗಮಿಸುವವರಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ತೆರಳಿ ಪೋಸ್ಟರ್​ ತೆಗೆದು ಹಾಕಿದ್ದರು.  ಹಾಗೇ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅರ್ಪಿತ್​ ಯಾದವ್​ರನ್ನು ವಶಕ್ಕೆ ಪಡೆದು, ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.

ಅಂದಹಾಗೆ ಅರ್ಪಿತ್​ ಯಾದವ್​ ಹೀಗೆ ಬೆದರಿಕೆ ಹಾಕಿದ್ದು ಅಜಯ್​ ಸೇಠ್​ ಎಂಬುವರಿಗೆ ಎಂದು ಹೇಳಲಾಗಿದೆ. ಈ ಬಗ್ಗೆ ಇಂಡಿಯಾ ಟುಡೆಗೆ ಪ್ರತಿಕ್ರಿಯೆ ನೀಡಿದ ಅಜಯ್​ ಸೇಠ್​,  ಪೊಲೀಸರು ಅವರ ಕರ್ತವ್ಯವನ್ನು ಮಾಡಿದ್ದಾರೆ.  ಆದರೆ ಅರ್ಪಿತ್ ಅನುಚಿತವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Team India: ಟೀಮ್ ಇಂಡಿಯಾ ಆಟಗಾರರಿಗೆ ಹಲಾಲ್ ಆಹಾರ: ಕೊನೆಗೂ ಮೌನ ಮುರಿದ ಬಿಸಿಸಿಐ

Follow Us
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
ಬಜೆಟ್​​ ಬಗ್ಗೆ ಶಾಸಕ ಇಕ್ಬಾಲ್​​ ಕಿಡಿ: ಸಚಿವ ರಾಮಲಿಂಗಾರೆಡ್ಡಿ ಏನಂದ್ರು?
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
Video: ಬಾಲಕಿ ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಫೋಟ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಆಟೋ ಗ್ಯಾಸ್ ಇಲ್ದೆ ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಯಾದಗಿರಿ ಹೋಟೆಲ್​ಗಳ ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಲೇಡಿ ಗೆಟಪ್​​​ನಲ್ಲಿ ಗಮನ ಸೆಳೆದ ಚಂದ್ರಪ್ರಭ; ಎಲ್ಲರಿಗೂ ನಗುವೋ ನಗು
ಇರಾಕ್​​ನಲ್ಲಿ ಯುಎಸ್ ವಾಯುಪಡೆಯ ಇಂಧನ ತುಂಬುವ ವಿಮಾನ ಪತನ
ಇರಾಕ್​​ನಲ್ಲಿ ಯುಎಸ್ ವಾಯುಪಡೆಯ ಇಂಧನ ತುಂಬುವ ವಿಮಾನ ಪತನ
ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು!
ಇರಾನ್-ಇಸ್ರೇಲ್ ಯುದ್ಧದಿಂದ ಗ್ರ್ಯಾನೈಟ್ ಉದ್ಯಮಕ್ಕೂ ಕುತ್ತು!