ಬೇರೆಯವರನ್ನು ಬೆದರಿಸಲು ನಮ್ಮ ಪ್ರದೇಶ ಬಳಸಲು ಯಾರಿಗೂ ಅವಕಾಶ ನೀಡವುದಿಲ್ಲ, ಪಾಕ್​ಗೆ ಭಾರತ, ಅಫ್ಘಾನಿಸ್ತಾನ ಎಚ್ಚರಿಕೆ

ಯಾವುದೋ ಪಡೆಗಳು ನಮ್ಮ ಪ್ರದೇಶವನ್ನು ಇತರರನ್ನು ಬೆದರಿಸಲು ಬಳಕೆ ಮಾಡಲು ನಾವು ಅವಕಾಶ ಕೊಡುವುದಿಲ್ಲ ಎಂದು ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಖಿ ಹೇಳಿದ್ದಾರೆ. ಭಾರತ ಹಾಗೂ ಅಫ್ಘಾನಿಸ್ತಾನ ಎರಡೂ ದೇಶಗಳು ಪಾಕಿಸ್ತಾನವನ್ನು ಟೀಕಿಸಿವೆ.ತನ್ನ ಪ್ರದೇಶವನ್ನು ಯಾರ ವಿರುದ್ಧವೂ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮುತ್ತಕಿ ನವದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದರು.

ಬೇರೆಯವರನ್ನು ಬೆದರಿಸಲು ನಮ್ಮ ಪ್ರದೇಶ ಬಳಸಲು ಯಾರಿಗೂ ಅವಕಾಶ ನೀಡವುದಿಲ್ಲ, ಪಾಕ್​ಗೆ ಭಾರತ, ಅಫ್ಘಾನಿಸ್ತಾನ ಎಚ್ಚರಿಕೆ
ಜೈಶಂಕರ್

Updated on: Oct 10, 2025 | 1:46 PM

ನವದೆಹಲಿ, ಅಕ್ಟೋಬರ್ 10: ಯಾವುದೋ ಪಡೆಗಳು ನಮ್ಮ ಪ್ರದೇಶವನ್ನು ಇತರರನ್ನು ಬೆದರಿಸಲು ಬಳಕೆ ಮಾಡಲು ನಾವು ಅವಕಾಶ ಕೊಡುವುದಿಲ್ಲ ಎಂದು ತಾಲಿಬಾನ್(Taliban) ಸರ್ಕಾರದ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಖಿ ಹೇಳಿದ್ದಾರೆ. ಭಾರತ ಹಾಗೂ ಅಫ್ಘಾನಿಸ್ತಾನ ಎರಡೂ ದೇಶಗಳು ಪಾಕಿಸ್ತಾನವನ್ನು ಟೀಕಿಸಿವೆ.ತನ್ನ ಪ್ರದೇಶವನ್ನು ಯಾರ ವಿರುದ್ಧವೂ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮುತ್ತಕಿ ನವದೆಹಲಿಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದರು.

ಅನೇಕ ಏರಿಳಿತಗಳು ಇದ್ದವು, ಆದಾಗ್ಯೂ, ನಾವು ಎಂದಿಗೂ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಲಿಲ್ಲ ಮತ್ತು ಯಾವಾಗಲೂ ಭಾರತದೊಂದಿಗಿನ ಉತ್ತಮ ಸಂಬಂಧವನ್ನು ಗೌರವಿಸುತ್ತೇವೆ. ಯಾವುದೇ ಪಡೆಗಳು ನಮ್ಮ ಪ್ರದೇಶವನ್ನು ಇತರರ ವಿರುದ್ಧ ಬೆದರಿಸಲು ಅಥವಾ ಬಳಸಲು ನಾವು ಅನುಮತಿಸುವುದಿಲ್ಲ ಎಂದರು.

ಇತ್ತೀಚಿನ ಭೂಕಂಪದ ಸಮಯದಲ್ಲಿ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ನೀಡಿದ್ದಕ್ಕಾಗಿ ಭಾರತಕ್ಕೆ ಮುತ್ತಕಿ ತಮ್ಮ ಹೇಳಿಕೆಯಲ್ಲಿ ಧನ್ಯವಾದ ಅರ್ಪಿಸಿದರು. ಪಾಕಿಸ್ತಾನವನ್ನು ಪರೋಕ್ಷವಾಗಿ ಟೀಕಿಸಿದ ಇಎಎಂ ಜೈಶಂಕರ್, ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ‘ಸಂಪೂರ್ಣವಾಗಿ ಬದ್ಧವಾಗಿದೆ’ ಎಂದು ಹೇಳಿದರು.

ಮತ್ತಷ್ಟು ಓದಿ: ಇತ್ತ ಭಾರತಕ್ಕೆ ತಾಲಿಬಾನ್ ಸಚಿವರ ಭೇಟಿ, ಅತ್ತ ಅಫ್ಘಾನಿಸ್ತಾನದ ಮೇಲೆ ಪಾಕ್​ ವೈಮಾನಿಕ ದಾಳಿ

ಪ್ರಾದೇಶಿಕ ಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವಕ್ಕಾಗಿ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ನಿಕಟ ಸಹಕಾರದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಹೇಳಿಕೆಯಲ್ಲಿ, ಕಾಬೂಲ್‌ನಲ್ಲಿ ಭಾರತ ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯಲಿದೆ ಎಂದು ಜೈಶಂಕರ್ ಘೋಷಿಸಿದರು.

ವಿಡಿಯೋ

ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಕಾಬೂಲ್‌ನಲ್ಲಿ ವೈಮಾನಿಕ ದಾಳಿ ನಡೆಸಿದ ನಂತರ ಭಾರತ ಮತ್ತು ಅಫ್ಘಾನಿಸ್ತಾನ ಈ ಹೇಳಿಕೆಗಳನ್ನು ನೀಡಿವೆ. ಟಿಟಿಪಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಪದೇ ಪದೇ ಅಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡಿದೆ, ತನ್ನ ಭೂಮಿಯನ್ನು ಪಾಕಿಸ್ತಾನ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ