AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ನಡೆಯಲಿದೆ ಭಾರತ- ಜಪಾನ್ ಜಂಟಿ ಸಮರಾಭ್ಯಾಸ; ಎಂದಿನಿಂದ? ಮಾಹಿತಿ ಇಲ್ಲಿದೆ

ಭಾರತ ಹಾಗೂ ಜಪಾನ್​ನ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್ 2022’ ಫೆಬ್ರವರಿ 17ರಿಂದ ಬೆಳಗಾವಿಯಲ್ಲಿ ನಡೆಯಲಿದೆ. ಸ್ಥಳ ಪರಿಶೀಲನೆ ಹಾಗೂ ಈ ಕುರಿತ ಮಾತುಕತೆಗೆ ಜಪಾನ್ ನಿಯೋಗವು ಮೂರು ದಿನಗಳ ಸಭೆಯಲ್ಲಿ ಭಾಗವಹಿಸಿತ್ತು.

ಬೆಳಗಾವಿಯಲ್ಲಿ ನಡೆಯಲಿದೆ ಭಾರತ- ಜಪಾನ್ ಜಂಟಿ ಸಮರಾಭ್ಯಾಸ; ಎಂದಿನಿಂದ? ಮಾಹಿತಿ ಇಲ್ಲಿದೆ
ಭಾರತ ಹಾಗೂ ಜಪಾನ್​​ನ ಅಧಿಕಾರಿಗಳ ಮಾತುಕತೆ (ಪಿಟಿಐ ಚಿತ್ರ)
TV9 Web
| Updated By: shivaprasad.hs|

Updated on:Dec 03, 2021 | 11:09 PM

Share

ಬೆಳಗಾವಿ: ಭಾರತ ಮತ್ತು ಜಪಾನ್ ನಡುವೆ ಮುಂಬರುವ ಜಂಟಿ ಮಿಲಿಟರಿ ಸಮರಾಭ್ಯಾಸವಾದ ‘ಧರ್ಮ ಗಾರ್ಡಿಯನ್-2022’ಕ್ಕಾಗಿ ಮೂರು ದಿನಗಳ ಅಂತಿಮ ಯೋಜನಾ ಸಮ್ಮೇಳನ ಮತ್ತು ಸ್ಥಳ ಪರಿಶೀಲನೆಯನ್ನು ಇಂದು ಜಪಾನ್ ಮತ್ತು ಭಾರತದ ನಿಯೋಗವು ನಡೆಸಿವೆ. ಜಂಟಿ ಸಮರಾಭ್ಯಾಸವನ್ನು 27 ಫೆಬ್ರವರಿ 2022 ರಿಂದ 12 ಮಾರ್ಚ್​​ವರೆಗೆ ಬೆಳಗಾವಿಯ ಮರಾಠಾ ಲಘು ಪದಾತಿದಳ- ‘ಫಾರಿನ್ ಟ್ರೈನಿಂಗ್ ನೋಡ್’ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಧರ್ಮ ಗಾರ್ಡಿಯನ್ ಸಮರಾಭ್ಯಾಸವನ್ನು ಜಪಾನ್ ಹಾಗೂ ಭಾರತವು 2018ರಿಂದ ಜಂಟಿಯಾಗಿ ನಡೆಸುತ್ತಿದೆ. ಭಯೋತ್ಪಾದನಾ ನಿಗ್ರಹ, ಕಾಡು ಮತ್ತು ನಗರ ಬ್ಯಾಪ್ತಿಯಲ್ಲಿ ಭದ್ರತಾ ಕಾರ್ಯಾಚರಣೆ ಸೇರಿದಂತೆ ಹಲವು ತರಬೇತಿಗಳನ್ನು ಈ ಸಮರಾಭ್ಯಾಸದಲ್ಲಿ ಜಂಟಿಯಾಗಿ ಕೈಗೊಳ್ಳಲಾಗುತ್ತದೆ. ಇದು ಭಾರತದ ಪಾಲಿಗೆ ಭದ್ರತೆಯ ವಿಚಾರದಲ್ಲಿ ಮಹತ್ವದ್ದಾಗಿದೆ. ಜಂಟಿ ಮಿಲಿಟರಿ ಸಮರಾಭ್ಯಾಸದಿಂದ ಭಾರತೀಯ ಸೇನೆ ಮತ್ತು ಜಪಾನ್ ಸೇನೆಯ ನಡುವಿನ ರಕ್ಷಣಾ ಸಹಕಾರದ ಮಟ್ಟ ಹೆಚ್ಚಲಿದೆ. ಜತೆಗೆ ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸಲಿದೆ.

India Japan Joint Military Exercise planning

ಸ್ಥಳ ಪರಿಶೀಲನೆಯಲ್ಲಿ ತೊಡಗಿರುವ ಸೇನಾ ಸಿಬ್ಬಂದಿ (ಪಿಟಿಐ ಚಿತ್ರ)

ಭಾರತದ ಜಪಾನ್ ರಾಯಭಾರ ಕಛೇರಿಯ ಲೆಫ್ಟಿನೆಂಟ್ ಕರ್ನಲ್ ಯುಜೊ ಮಸೂದಾ ಸೇರಿದಂತೆ ವಿವಿಧ ಶ್ರೇಣಿಯ ಐವರು ಅಧಿಕಾರಿಗಳನ್ನೊಳಗೊಂಡ ಜಪಾನ್​ನ ನಿಯೋಗವು ನವೆಂಬರ್ 30ರಂದು ಬೆಳಗಾವಿಗೆ ಆಗಮಿಸಿತ್ತು. ಎರಡೂ ದೇಶಗಳ ನಿಯೋಗವು ಜಂಟಿ ಸಮರಾಭ್ಯಾಸವನ್ನು ಸುಗಮವಾಗಿ ನಡೆಸುವ ವಿಧಾನಗಳನ್ನು ಚರ್ಚಿಸಿವೆ. ಜಪಾನಿನ ನಿಯೋಗವು ಎಂಎಲ್​ಐಆರ್​ಸಿನಲ್ಲಿ ಸಮರಾಭ್ಯಾಸಕ್ಕೆ ಅಗತ್ಯವಾದ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಿತು.

India Japan Joint Military Exercise planning

ಭಾರತ ಮತ್ತು ಜಪಾನ್ ಸೇನಾ ಸಿಬ್ಬಂದಿ (ಪಿಟಿಐ ಚಿತ್ರ)

ಎರಡೂ ದೇಶಗಳ ನಿಯೋಗವು ಮುಂಬರುವ ಸಮರಾಭ್ಯಾಸದ ಕಾರ್ಯಸೂಚಿ ಅಂಶಗಳನ್ನು ಅಂತಿಮಗೊಳಿಸಿವೆ. ಜಪಾನಿನ ನಿಯೋಗದ ಭೇಟಿಯ ಕಾರ್ಯ ಅಂತಿಮವಾಗಿದ್ದು, ನಾಳೆ (ಡಿ 04)ನಿರ್ಗಮಿಸಲಿದೆ. 27 ಫೆಬ್ರವರಿ 2022 ರಿಂದ 12 ಮಾರ್ಚ್​​ವರೆಗೆ ಜಂಟಿ ಸಮರಾಭ್ಯಾಸ ನಡೆಯಲಿದೆ.

ಇದನ್ನೂ ಓದಿ:

ಪ್ರತಿಭಟನೆಯಲ್ಲಿ ಸಾವಿಗೀಡಾದ ರೈತರ ಬಗ್ಗೆ ಮಾಹಿತಿ ಇಲ್ಲ ಎಂದ ಕೇಂದ್ರ ವಿರುದ್ಧ ವಾಗ್ದಾಳಿ; ಮೃತ ರೈತರ ಪಟ್ಟಿ ಹಂಚಿಕೊಂಡ ರಾಹುಲ್ ಗಾಂಧಿ

ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್ ಶಾಸಕನ ವಿರುದ್ಧ ಎಫ್​ಐಆರ್ ದಾಖಲು

Published On - 11:09 pm, Fri, 3 December 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ