AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಭಟನೆಯಲ್ಲಿ ಸಾವಿಗೀಡಾದ ರೈತರ ಬಗ್ಗೆ ಮಾಹಿತಿ ಇಲ್ಲ ಎಂದ ಕೇಂದ್ರ ವಿರುದ್ಧ ವಾಗ್ದಾಳಿ; ಮೃತ ರೈತರ ಪಟ್ಟಿ ಹಂಚಿಕೊಂಡ ರಾಹುಲ್ ಗಾಂಧಿ

Rahul Gandhi ಒಂದು ವರ್ಷದ ರೈತರ ಪ್ರತಿಭಟನೆಯಲ್ಲಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ ರಾಹುಲ್, “ನಾವು ಸ್ವಲ್ಪ ಹೋಂವರ್ಕ್ ಮಾಡಿದ್ದೇವೆ. ಪಂಜಾಬ್ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿದ 403 ಜನರ ಹೆಸರು ನಮ್ಮ ಬಳಿ ಇದೆ. 152 ಮಂದಿಗೆ ಉದ್ಯೋಗವನ್ನೂ ಒದಗಿಸಿದೆ. ನಮ್ಮಲ್ಲಿ ಮತ್ತೊಂದು ಪಟ್ಟಿ ಇದೆ. ಅಲ್ಲಿ ನಾವು ಇತರ ರಾಜ್ಯಗಳ 100 ಜನರ ಹೆಸರನ್ನು ಹೊಂದಿದ್ದೇವೆ ಎಂದಿದ್ದಾರೆ.

ಪ್ರತಿಭಟನೆಯಲ್ಲಿ ಸಾವಿಗೀಡಾದ ರೈತರ ಬಗ್ಗೆ ಮಾಹಿತಿ ಇಲ್ಲ ಎಂದ ಕೇಂದ್ರ ವಿರುದ್ಧ ವಾಗ್ದಾಳಿ;  ಮೃತ ರೈತರ ಪಟ್ಟಿ ಹಂಚಿಕೊಂಡ ರಾಹುಲ್ ಗಾಂಧಿ
ರಾಹುಲ್ ಗಾಂಧಿ
TV9 Web
| Edited By: |

Updated on: Dec 03, 2021 | 10:56 PM

Share

ದೆಹಲಿ: ಕೃಷಿ  ಕಾನೂನು (Farm laws) ವಿರುದ್ಧ ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ರೈತರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸರ್ಕಾರ ಸಂಸತ್​​ಗೆ ತಿಳಿಸಿದ ಕೆಲವೇ ದಿನಗಳಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)  400 ಕ್ಕೂ ಹೆಚ್ಚು ಮೃತ ರೈತರ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ರಾಹುಲ್, ಕೃಷಿ ಕಾನೂನು ವಿರುದ್ಧ ಹೋರಾಟದ ವೇಳೆ ಮೃತಪಟ್ಟ ರೈತರಿವರು. ಈ ರೈತರ ಕುಟುಂಬಗಳಿಗೆ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವ ಪಂಜಾಬ್‌ (Punjab) ಸರ್ಕಾರ ಪರಿಹಾರ ನೀಡಿದೆ ಎಂದು ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ “ಮಾನವೀಯತೆಯ ಕೊರತೆ” ಇದೆ, ಸರ್ಕಾರ “ದುರಹಂಕಾರ”ದ್ದು ಎಂದು ಹೇಳಿದ ರಾಹುಲ್, ಕೊವಿಡ್ -19 (Covid-19) ಸಾವುಗಳಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧವಾಗಿಲ್ಲ ಮತ್ತು ಮೃತರ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಸಿದ್ಧವಿಲ್ಲ ಎಂದು ಹೇಳಿದರು. ಭಾರತದ ಪ್ರಧಾನಿ ನಡೆದುಕೊಳ್ಳಬೇಕಾದ ರೀತಿ ಇದು ಅಲ್ಲ. ಇದು ಅತ್ಯಂತ ಅಹಿತಕರ, ಅನೈತಿಕ ಮತ್ತು ಹೇಡಿತನದ ವರ್ತನೆಯಾಗಿದೆ ಎಂದು ರಾಹುಲ್ ಹೇಳಿದ್ದಾರೆ. ಆಂದೋಲನದ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಪ್ರಸ್ತಾಪಿಸಿದ್ದಾರೆಯೇ ಎಂದು ಕೆಲವು ದಿನಗಳ ಹಿಂದೆ ಕೃಷಿ ಕಾನೂನುಗಳು ಮತ್ತು ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಬಗ್ಗೆ ಸರ್ಕಾರದ ಬಳಿ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದರು.

ಒಂದು ವರ್ಷದ ರೈತರ ಪ್ರತಿಭಟನೆಯಲ್ಲಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ ರಾಹುಲ್, “ನಾವು ಸ್ವಲ್ಪ ಹೋಂವರ್ಕ್ ಮಾಡಿದ್ದೇವೆ. ಪಂಜಾಬ್ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಿದ 403 ಜನರ ಹೆಸರು ನಮ್ಮ ಬಳಿ ಇದೆ. 152 ಮಂದಿಗೆ ಉದ್ಯೋಗವನ್ನೂ ಒದಗಿಸಿದೆ. ನಮ್ಮಲ್ಲಿ ಮತ್ತೊಂದು ಪಟ್ಟಿ ಇದೆ. ಅಲ್ಲಿ ನಾವು ಇತರ ರಾಜ್ಯಗಳ 100 ಜನರ ಹೆಸರನ್ನು ಹೊಂದಿದ್ದೇವೆ. ನಂತರ ಮೂರನೇ ಪಟ್ಟಿಯು ಹೆಸರುಗಳು, ವಿಳಾಸಗಳು ಮತ್ತು ಫೋನ್ ಸಂಖ್ಯೆಗಳ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ಸರ್ಕಾರವು ಬಯಸಿದರೆ ಅದನ್ನು ಸುಲಭವಾಗಿ ಪರಿಶೀಲಿಸಬಹುದು.

“ಪಟ್ಟಿಗಳು ಅಸ್ತಿತ್ವದಲ್ಲಿವೆ ಆದರೆ ಸರ್ಕಾರವು ಅವರು ಇಲ್ಲ ಎಂದು ಒತ್ತಾಯಿಸುತ್ತದೆ. ಉದ್ದೇಶವೇನು? ಆಂದೋಲನದಲ್ಲಿ ಈ ಜನರು ಸಾವನ್ನಪ್ಪಿದ್ದಾರೆ. ನಾವು ಕೋಟ್ಯಂತರ ಡಾಲರ್, ಸಾವಿರಾರು ಕೋಟಿ ರೂಪಾಯಿಗಳ ಬಗ್ಗೆ ಮಾತನಾಡುತ್ತಿಲ್ಲ. ಅವರು ಮಾಡಿದ ತ್ಯಾಗಕ್ಕೆ ಕನಿಷ್ಠ ಪರಿಹಾರದ ಬಗ್ಗೆ ಮಾತನಾಡುತ್ತಿದ್ದೇವೆ. ಸ್ವತಃ ಪ್ರಧಾನಿಯೇ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರು ರಾಷ್ಟ್ರದ ಕ್ಷಮೆಯಾಚಿಸಿದ್ದಾರೆ. ತಪ್ಪಿನ ಪರಿಣಾಮವಾಗಿ, 700 ಜನರು ಸಾವನ್ನಪ್ಪಿದ್ದಾರೆ. ಈಗ ನೀವು ಅವರ ಹೆಸರುಗಳ ಬಗ್ಗೆ ಸುಳ್ಳು ಹೇಳುತ್ತಿದ್ದೀರಿ. ಅವರಿಗೆ ಕೊಡಬೇಕಾದ್ದನ್ನು ಕೊಡುವ ಮರ್ಯಾದೆ ನಿಮಗೇಕೆ ಇಲ್ಲ? ಭಾರತ ಸರ್ಕಾರ ಪರಿಹಾರ ನೀಡಬೇಕು ಮತ್ತು ಈ ಕುಟುಂಬಗಳಿಗೆ ಸಹಾಯ ಮಾಡಬೇಕು ಎಂದ ರಾಹುಲ್, ಪ್ರಧಾನಿ ಮತ್ತು ಸರ್ಕಾರದ ಸ್ನೇಹಿತರಾಗಿರುವ ಎರಡು-ಮೂರು ದೊಡ್ಡ ಕೈಗಾರಿಕೋದ್ಯಮಿಗಳಿಗಾಗಿ ಸರ್ಕಾರ ಏನು ಬೇಕಾದರೂ ಮಾಡುತ್ತದೆ ಎಂದು ಆರೋಪಿಸಿದ್ದಾರೆ. ಆದರೆ ರೈತರ ವಿಷಯಕ್ಕೆ ಬಂದರೆ, ಅವರು ಈ 700 ಜನರು ಅಸ್ತಿತ್ವದಲ್ಲಿಲ್ಲ ಎಂದು ನಿರಾಕರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕನಿಷ್ಠ ಪರಿಹಾರವು ನೀವು ನೀಡಬಹುದಾದ ಕನಿಷ್ಠ ಗೌರವವಾಗಿದೆ. ಅವರು ಕ್ಷಮೆ ಕೇಳಿದ್ದು ಯಾಕೆ? ಏಕೆಂದರೆ ಅವರು ತಪ್ಪು ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸಿದರು ಮತ್ತು ಅದರಿಂದ ಈ ಜನರು ಸತ್ತಿದ್ದಾರೆ. ಒಂದೆಡೆ ಕ್ಷಮೆ ಕೇಳುತ್ತಿದ್ದರೆ ಮತ್ತೊಂದೆಡೆ ಸರ್ಕಾರ ಈ ಜನರ ಅಸ್ತಿತ್ವವನ್ನೇ ನಿರಾಕರಿಸುತ್ತಿದೆ. ನಮ್ಮ ಬಳಿ ಪಟ್ಟಿ ಇದೆ. ಪ್ರಧಾನಮಂತ್ರಿ ಅವರು ಬಯಸಿದರೆ, ನೇರವಾಗಿ ಅವರನ್ನು ಕರೆದು ಪರಿಶೀಲಿಸಬಹುದು. ಅವರಿಗೆ ಅದು ಗೊತ್ತಾಗುತ್ತದೆ.

ಈ ಜನರ ಸಾವಿಗೆ ಪಂಜಾಬ್ ಸರ್ಕಾರ ಹೊಣೆಯಲ್ಲ. “ಇದು ನಮ್ಮ ಜವಾಬ್ದಾರಿಯಾಗಿರಲಿಲ್ಲ. ಆದಾಗ್ಯೂ, ನಾವು ಪರಿಹಾರ ನೀಡಿದ್ದೇವೆ. ಏಕೆಂದರೆ ಅವರು ಕಷ್ಟದ ಸಮಯದಲ್ಲಿದ್ದಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಾವು ಅವರಿಗೆ ಹೆಚ್ಚಿನ ಉದ್ಯೋಗಗಳನ್ನು ನೀಡಲು ಉದ್ದೇಶಿಸಿದ್ದೇವೆ ಮತ್ತು ಈಗಾಗಲೇ ಅದರ ಬಗ್ಗೆ ಕಾರ್ಯನಿರ್ವಹಿಸಿದ್ದೇವೆ, ”ಎಂದು ರಾಹುಲ್ ಹೇಳಿದರು.

ಮೃತ ರೈತರ ಕುಟುಂಬಗಳಿಗೆ ಪರಿಹಾರ ಘೋಷಿಸದಿರಲು ಕಾರಣವೇನು ಎಂದು ಸರ್ಕಾರವನ್ನು ಪ್ರಶ್ನಿಸಿದ ಅವರು, “ದುರಹಂಕಾರ. ನಾವು ಅಧಿಕಾರದಲ್ಲಿದ್ದೇವೆ ಎಂದು ಅವರು ಭಾವಿಸುತ್ತಾರೆ, ಆದ್ದರಿಂದ ಎಲ್ಲರೂ ನಮ್ಮ ಮಾತನ್ನು ಕೇಳಬೇಕು. ಮಾನವೀಯತೆ ಇಲ್ಲ. ಕುಟುಂಬಗಳು, ಅವರ ಮಕ್ಕಳು, ಅವರ ಶಿಕ್ಷಣ, ಅವರ ಆರೋಗ್ಯದ ಬಗ್ಗೆ ಯೋಚಿಸಿದ್ದರೆ ಪ್ರಧಾನಿ ಒಂದು ನಿಮಿಷದಲ್ಲಿ ಇದನ್ನು ಮಾಡುತ್ತಿದ್ದರು. ಆದರೆ ಅವರು ತಮ್ಮ ಇಮೇಜ್ ಮತ್ತು ಸ್ಥಾನದ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ ಎಂದಿದ್ದಾರೆ.

ಸಂಸತ್​​ಗೆ ಪತ್ರಿಕಾ ಪ್ರವೇಶ ಇರಬೇಕು: ರಾಹುಲ್

ಸಂಸತ್​​ನ ಪತ್ರಿಕಾ ಗ್ಯಾಲರಿಗೆ ಪ್ರವೇಶದ ಮೇಲಿನ ನಿರ್ಬಂಧಗಳ ಕುರಿತು ಮಾತನಾಡಿದ ರಾಹುಲ್, “ಪತ್ರಿಕಾ ಮಾಧ್ಯಮಗಳು ಸಂಸತ್​​ಗೆ ಖಂಡಿತವಾಗಿಯೂ ಪ್ರವೇಶವನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಇದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದು ನಡೆಯುತ್ತಿಲ್ಲ ಮತ್ತು ಬಹುಶಃ ಅದು ಸಂಭವಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಹೊಸ ಭಾರತ, ಸ್ವಲ್ಪ ಸಮಯ ಒಗ್ಗಿಕೊಳ್ಳಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆಮ್ಲಜನಕದ ಕೊರತೆಯಿಂದಾಗಿ ಪಂಜಾಬ್ ಮಾತ್ರ 4 ಶಂಕಿತ ಸಾವುಗಳನ್ನು ವರದಿ ಮಾಡಿದೆ: ಮನ್ಸುಖ್ ಮಾಂಡವಿಯಾ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ