AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ- ಪಾಕಿಸ್ತಾನದ ನಡುವೆ ಕೈದಿಗಳು, ಮೀನುಗಾರರ ಪಟ್ಟಿಗಳ ವಿನಿಮಯ; ಭಾರತೀಯರ ಶೀಘ್ರ ಬಿಡುಗಡೆಗೆ ಆಗ್ರಹ

ಪಾಕಿಸ್ತಾನದಲ್ಲಿರುವ ಎಲ್ಲಾ ಭಾರತೀಯ ನಾಗರಿಕ ಕೈದಿಗಳು ಮತ್ತು ಮೀನುಗಾರರನ್ನು ಅವರ ದೋಣಿಗಳೊಂದಿಗೆ ಬೇಗನೆ ಬಿಡುಗಡೆ ಮಾಡಿ ವಾಪಾಸ್ ಕಳುಹಿಸಲು ಭಾರತ ಒತ್ತಾಯಿಸಿದೆ. ಹಾಗೇ, ಪಾಕಿಸ್ತಾನದ ವಶದಲ್ಲಿರಬಹುದು ಎಂಬ ಅನುಮಾನವಿರುವ ನಾಪತ್ತೆಯಾದ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಹಿಂದಿರುಗಿಸುವ ಬೇಡಿಕೆಯನ್ನು ಭಾರತ ಸರ್ಕಾರ ಪುನರುಚ್ಚರಿಸಿದೆ.

ಭಾರತ- ಪಾಕಿಸ್ತಾನದ ನಡುವೆ ಕೈದಿಗಳು, ಮೀನುಗಾರರ ಪಟ್ಟಿಗಳ ವಿನಿಮಯ; ಭಾರತೀಯರ ಶೀಘ್ರ ಬಿಡುಗಡೆಗೆ ಆಗ್ರಹ
India Pakistan
ಸುಷ್ಮಾ ಚಕ್ರೆ
|

Updated on: Jul 01, 2025 | 8:48 PM

Share

ನವದೆಹಲಿ, ಜುಲೈ 1: ದೀರ್ಘಕಾಲದ ರಾಜತಾಂತ್ರಿಕ ಪದ್ಧತಿಯ ಪ್ರಕಾರ ಈ ಬಾರಿಯೂ ಭಾರತ (India) ಮತ್ತು ಪಾಕಿಸ್ತಾನ (Pakistan) ಪರಸ್ಪರ ವಶದಲ್ಲಿ ಇರಿಸಲಾಗಿರುವ ಕೈದಿಗಳು ಮತ್ತು ಮೀನುಗಾರರ ಪಟ್ಟಿಗಳನ್ನು ಇಂದು ವಿನಿಮಯ ಮಾಡಿಕೊಂಡವು. 2008ರಲ್ಲಿ ಸಹಿ ಹಾಕಲಾದ ದ್ವಿಪಕ್ಷೀಯ ಕಾನ್ಸುಲರ್ ಪ್ರವೇಶ ಒಪ್ಪಂದದ ಪ್ರಕಾರ, ನವದೆಹಲಿ ಮತ್ತು ಇಸ್ಲಾಮಾಬಾದ್‌ನಲ್ಲಿ ಅಧಿಕೃತ ರಾಜತಾಂತ್ರಿಕ ಮಾರ್ಗಗಳ ಮೂಲಕ ಕೈದಿಗಳು ಮತ್ತು ಮೀನುಗಾರರ ಹೆಸರುಗಳ ವಿನಿಮಯವನ್ನು ಏಕಕಾಲದಲ್ಲಿ ನಡೆಸಲಾಯಿತು. ಈ ಒಪ್ಪಂದದ ಪ್ರಕಾರ, ಎರಡೂ ದೇಶಗಳು ಜನವರಿ 1 ಮತ್ತು ಜುಲೈ 1ರಂದು ಎರಡು ವರ್ಷಗಳಿಗೊಮ್ಮೆ ಈ ಪಟ್ಟಿಗಳನ್ನು ಹಂಚಿಕೊಳ್ಳುತ್ತವೆ.

ಭಾರತದ ಬಂಧನದಲ್ಲಿರುವ 463 ಬಂಧಿತರ ಪಟ್ಟಿ:

ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಪ್ರಕಾರ, ಭಾರತವು ಪಾಕಿಸ್ತಾನದ ಪ್ರಜೆಗಳೆಂದು ದೃಢೀಕರಿಸಲ್ಪಟ್ಟ 382 ನಾಗರಿಕ ಕೈದಿಗಳು ಮತ್ತು ಪ್ರಸ್ತುತ ಭಾರತದ ವಶದಲ್ಲಿರುವ 81 ಮೀನುಗಾರರ ಹೆಸರುಗಳನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ. ಅವರು ಪಾಕಿಸ್ತಾನಿ ಪ್ರಜೆಗಳೆಂದು ದೃಢೀಕರಿಸಲ್ಪಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ, ಪಾಕಿಸ್ತಾನವು ತನ್ನ ವಶದಲ್ಲಿರುವ 53 ನಾಗರಿಕ ಕೈದಿಗಳು ಮತ್ತು 193 ಮೀನುಗಾರರ ವಿವರಗಳನ್ನು ಹಂಚಿಕೊಂಡಿದೆ. ಅವರು ಭಾರತೀಯರೆಂದು ದೃಢೀಕರಿಸಲ್ಪಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ: ಅಕ್ರಮವಾಗಿ ಭಾರತ ಗಡಿ ದಾಟಲು ಯತ್ನಿಸಿದ ಪಾಕಿಸ್ತಾನದ ಜೋಡಿ: ನೀರಿಲ್ಲದೆ ಮರುಭೂಮಿಯಲ್ಲಿ ದುರಂತ ಸಾವು

ಎಲ್ಲಾ ಭಾರತೀಯ ನಾಗರಿಕ ಕೈದಿಗಳು ಮತ್ತು ಮೀನುಗಾರರನ್ನು ಅವರ ದೋಣಿಗಳೊಂದಿಗೆ ಬೇಗನೆ ಬಿಡುಗಡೆ ಮಾಡಿ ಸ್ವದೇಶಕ್ಕೆ ಹಿಂದಿರುಗಿಸುವ ಮತ್ತು ಪಾಕಿಸ್ತಾನದ ವಶದಲ್ಲಿರುವ ಕಾಣೆಯಾದ ಭಾರತೀಯ ರಕ್ಷಣಾ ಸಿಬ್ಬಂದಿಯನ್ನು ಹಿಂದಿರುಗಿಸುವ ಬೇಡಿಕೆಯನ್ನು ಭಾರತ ಸರ್ಕಾರ ಪುನರುಚ್ಚರಿಸಿದೆ. ಈಗಾಗಲೇ ಶಿಕ್ಷೆಯನ್ನು ಪೂರ್ಣಗೊಳಿಸಿದ 159 ಭಾರತೀಯ ಬಂಧಿತರ ಬಿಡುಗಡೆಯನ್ನು ತ್ವರಿತಗೊಳಿಸುವಂತೆ ಭಾರತ ಪಾಕಿಸ್ತಾನವನ್ನು ಒತ್ತಾಯಿಸಿದೆ.

ಪಾಕಿಸ್ತಾನದ ವಶದಲ್ಲಿರುವ 26 ನಾಗರಿಕ ಕೈದಿಗಳು ಮತ್ತು ಮೀನುಗಾರರಿಗೆ ತಕ್ಷಣದ ಕಾನ್ಸುಲರ್ ಪ್ರವೇಶವನ್ನು ಭಾರತ ಕೋರಿದೆ. ಅವರು ಭಾರತೀಯ ಪ್ರಜೆಗಳು ಎನ್ನಲಾಗಿದ್ದು, ಅವರು ಪಾಕಿಸ್ತಾನದ ಅಧಿಕಾರಿಗಳಿಂದ ಇನ್ನೂ ಪ್ರವೇಶವನ್ನು ಪಡೆದಿಲ್ಲ. ಹಾಗೇ, ತನ್ನ ಮಾನವೀಯ ವಿಧಾನವನ್ನು ಎತ್ತಿ ತೋರಿಸುತ್ತಾ, ಭಾರತೀಯ ಬಂಧನದಲ್ಲಿರುವ 80 ನಾಗರಿಕ ಕೈದಿಗಳು ಮತ್ತು ಮೀನುಗಾರರ ರಾಷ್ಟ್ರೀಯತೆಯ ಪರಿಶೀಲನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಭಾರತವು ಪಾಕಿಸ್ತಾನವನ್ನು ವಿನಂತಿಸಿದೆ. ಅವರ ಪಾಕಿಸ್ತಾನಿ ರಾಷ್ಟ್ರೀಯತೆಯ ದೃಢೀಕರಣದ ಕೊರತೆಯಿಂದಾಗಿ ಅವರ ವಾಪಸಾತಿ ಬಾಕಿ ಉಳಿದಿದೆ.

ಇದನ್ನೂ ಓದಿ: ನಾನೂ ಆ ರೂಮಲ್ಲೇ ಇದ್ದೆ; ಭಾರತ-ಪಾಕಿಸ್ತಾನದ ಕದನ ವಿರಾಮ ಕುರಿತು ಸಚಿವ ಜೈಶಂಕರ್ ಹೇಳಿದ್ದೇನು?

ಸತತ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ, ಭಾರತವು 2014ರಿಂದ ಪಾಕಿಸ್ತಾನದಿಂದ ಒಟ್ಟು 2,661 ಭಾರತೀಯ ಮೀನುಗಾರರು ಮತ್ತು 71 ಭಾರತೀಯ ನಾಗರಿಕ ಕೈದಿಗಳನ್ನು ಯಶಸ್ವಿಯಾಗಿ ಸ್ವದೇಶಕ್ಕೆ ವಾಪಸ್ ಕರೆತಂದಿದೆ. ಈ ಪೈಕಿ 2023ರಿಂದ ಈಚೆಗೆ 500 ಮೀನುಗಾರರು ಮತ್ತು 13 ನಾಗರಿಕ ಕೈದಿಗಳು ಭಾರತಕ್ಕೆ ಮರಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ