ಭಾರತವನ್ನು ಗಾಂಧಿ ಕುಟುಂಬ ರಷ್ಯಾಕ್ಕೆ ಮಾರಾಟ ಮಾಡಿತ್ತು; ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗಂಭೀರ ಆರೋಪ
ಬಿಜೆಪಿ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದೆ. ಕೆಜಿಬಿಯಿಂದ 150 ಕಾಂಗ್ರೆಸ್ ಸಂಸದರು ಹಣ ಪಡೆಯುತ್ತಿದ್ದರು. ಮಾಧ್ಯಮಗಳು ಕೆಜಿಬಿಯಿಂದ ಹಣ ಪಡೆಯುತ್ತಿದ್ದವು. ಕೆಜಿಬಿಯಿಂದ 16,000 ಲೇಖನಗಳನ್ನು ಭಾರತೀಯ ಮಾಧ್ಯಮಗಳಲ್ಲಿ ಬಿತ್ತರಿಸಲಾಯಿತು. ಕಾಂಗ್ರೆಸ್ ಸಿಐಎಯಿಂದಲೂ ಹಣ ಪಡೆಯುತ್ತಿತ್ತು. ಕೇರಳ ಚುನಾವಣೆ ಮತ್ತು ರಾಷ್ಟ್ರೀಯ ಚುನಾವಣೆಗಳಿಗಾಗಿ ಸಿಐಎ ಇಂದಿರಾ ಗಾಂಧಿಯವರಿಗೆ ಹಣವನ್ನು ಕಳುಹಿಸಿದೆ. ಒಬ್ಬ ಕಾಂಗ್ರೆಸ್ ಸಂಸದರು ಜರ್ಮನಿಯಿಂದ ಹಣ ಪಡೆಯುತ್ತಿದ್ದರು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.

ನವದೆಹಲಿ, ಜುಲೈ 1: ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ದಾಳಿ ನಡೆಸಿದ್ದಾರೆ. ಇಂದಿರಾ ಗಾಂಧಿ (Indira Gandhi) ಕುಟುಂಬದ ನೇತೃತ್ವದಲ್ಲಿ ನಮ್ಮ ದೇಶವನ್ನು ಸೋವಿಯತ್ ರಷ್ಯಾಕ್ಕೆ ಮಾರಾಟ ಮಾಡಲಾಯಿತು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey) ವಿದೇಶಿ ನಿಧಿಗಳ ಆರೋಪದ ಮೇಲೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಐಎ ದಾಖಲೆಯನ್ನು ಉಲ್ಲೇಖಿಸಿದ ಅವರು, ದಿವಂಗತ ಕಾಂಗ್ರೆಸ್ ನಾಯಕ ಎಚ್ಕೆಎಲ್ ಭಗತ್ ನೇತೃತ್ವದಲ್ಲಿ ಸೋವಿಯತ್ ಒಕ್ಕೂಟವು 150ಕ್ಕೂ ಹೆಚ್ಚು ಕಾಂಗ್ರೆಸ್ ಸಂಸದರಿಗೆ ಹಣಕಾಸು ಒದಗಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಸುಭದ್ರಾ ಜೋಶಿ 1977-80ರ ಅವಧಿಯಲ್ಲಿ ಜರ್ಮನ್ ಸರ್ಕಾರದಿಂದ 5 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎಂಬ ತಮ್ಮ ಆರೋಪಗಳನ್ನು ದುಬೆ ಪುನರುಚ್ಚರಿಸಿದ್ದಾರೆ.
“ಸಿಐಎ ಮತ್ತು ಮಿತ್ರೋಖಿನ್ ಅವರ ಡೈರಿಯಲ್ಲಿ ದಿವಂಗತ ಕಾಂಗ್ರೆಸ್ ನಾಯಕ ಎಚ್ಕೆಎಲ್ ಭಗತ್ ಅವರ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಕಾಂಗ್ರೆಸ್ ಸಂಸದರಿಗೆ ಸೋವಿಯತ್ ರಷ್ಯಾ ಹಣಕಾಸು ನೆರವು ನೀಡಿದೆ ಎಂದು ಉಲ್ಲೇಖಿಸಲಾಗಿದೆ. ರಷ್ಯಾ ಅವರ ಇಚ್ಛೆಯಂತೆ ಒಟ್ಟು 16,000 ಸುದ್ದಿ ಲೇಖನಗಳನ್ನು ಪ್ರಕಟಿಸಿದೆ ಎಂದು ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸುಭದ್ರಾ ಜೋಶಿ 1977-80ರ ಅವಧಿಯಲ್ಲಿ ಚುನಾವಣೆಯ ಹೆಸರಿನಲ್ಲಿ ಜರ್ಮನ್ ಸರ್ಕಾರದಿಂದ 5 ಲಕ್ಷ ರೂ.ಗಳನ್ನು ಪಡೆದರು. ಅದರ ನಂತರ, ಅವರು ಇಂಡೋ-ಜರ್ಮನ್ ವೇದಿಕೆಯ ಅಧ್ಯಕ್ಷರಾದರು. ಇದನ್ನೆಲ್ಲ ನೋಡಿದರೆ ಗಾಂಧಿ ಕುಟುಂಬದ ನೇತೃತ್ವದಲ್ಲಿ ನಮ್ಮ ದೇಶವನ್ನು ಸೋವಿಯತ್ ರಷ್ಯಾಕ್ಕೆ ಮಾರಾಟ ಮಾಡಿದಂತೆ ಕಾಣುತ್ತದೆ” ಎಂದು ನಿಶಿಕಾಂತ್ ದುಬೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಟೀಕಿಸಿದ್ದಾರೆ.
CIA का पैसा कांग्रेस के पास आयरन लेडी इंदिरा गांधी जी ने आयरन पिघलने के बाद यानि शिमला समझौते में पाकिस्तान के आगे सरेंडर करने के बाद अमेरिकी राष्ट्रपति निक्सन को पत्र के जबाब के ज़रिए सम्बन्ध बनाने का आग्रह किया 1. अमेरिकी राष्ट्रपति निक्सन और किशिंगर का फ़ोन वार्तालाप जिसमें… pic.twitter.com/kIUdQxCsmd
— Dr Nishikant Dubey (@nishikant_dubey) July 1, 2025
ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ ಕೇಳಲು 6 ಪ್ರಶ್ನೆ ಸಿದ್ಧ ಮಾಡಿಕೊಂಡ ಸುರ್ಜೇವಾಲ! ಸೆಪ್ಟೆಂಬರ್ ಕ್ರಾಂತಿಗೆ ಸಿದ್ಧವಾಗ್ತಿದೆಯಾ ವೇದಿಕೆ?
ಅಮೆರಿಕದ ರಾಯಭಾರಿ ಮೊಯ್ನಿಹಾನ್ ತಮ್ಮ ಪುಸ್ತಕದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹಣ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ ಎಂದು ದುಬೆ ಆರೋಪಿಸಿದ್ದಾರೆ. “1979ರ ಮೇ 10ರಂದು ರಾಜ್ಯಸಭೆಯಲ್ಲಿ ಚರ್ಚೆ ನಡೆಯಿತು. ಅಮೆರಿಕದ ರಾಯಭಾರಿ ಮೊಯ್ನಿಹಾನ್ ಬರೆದ ಪುಸ್ತಕದಲ್ಲಿ ಅವರು ಇಂದಿರಾ ಗಾಂಧಿಯವರಿಗೆ 2 ಬಾರಿ ಹಣ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ರಾಜ್ಯಸಭೆಯಲ್ಲಿ ಇದರ ಬಗ್ಗೆ ಪೂರ್ಣ ಚರ್ಚೆ ನಡೆಯಿತು. ನಿಕ್ಸನ್ ಮತ್ತು ಕಿಸ್ಸಿಂಜರ್ ನಡುವಿನ ಫೋನ್ ಸಂಭಾಷಣೆಯನ್ನು ನಾನು ಉಲ್ಲೇಖಿಸಿದ್ದೇನೆ. ಅದರಲ್ಲಿ ಅವರು ಹಣ ನೀಡುವ ಬಗ್ಗೆ, ಕಾಂಗ್ರೆಸ್ ಅನ್ನು ಹೇಗೆ ನಿರ್ವಹಿಸಬಹುದು, ಸರ್ಕಾರವನ್ನು ಹೇಗೆ ನಿರ್ವಹಿಸಬಹುದು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಇದೆಲ್ಲವೂ ಆತಂಕಕಾರಿಯಾಗಿದೆ” ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.
#WATCH | Delhi: BJP MP Nishikant Dubey says “The diaries of CIA and Mitrokhin mention that under the leadership of the late Congress leader HKL Bhagat, more than 150 Congress MPs were funded by Soviet Russia. It also mentions that a total of 16,000 news articles were published by… https://t.co/5CqwNDiBel pic.twitter.com/snxzLBm86Q
— ANI (@ANI) July 1, 2025
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯನ್ನು ಹೊರತುಪಡಿಸಿ, 2014ರವರೆಗೆ ಭಾರತ ಸರ್ಕಾರವನ್ನು ಸಿಐಎ ಅಥವಾ ಕೆಜಿಪಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. “2004ರಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ರಚನೆಯಾದಾಗ, ರಾ ಜಂಟಿ ನಿರ್ದೇಶಕರಾಗಿದ್ದ ರಬೀಂದರ್ ಸಿಂಗ್ ಅವರನ್ನು ಬೇರೆಡೆಗೆ ಕಳುಹಿಸಲಾಯಿತು. ಇಲ್ಲಿಯವರೆಗೆ ಅವರು ಎಲ್ಲಿದ್ದಾರೆಂದು ತಿಳಿದಿಲ್ಲ. ಇದೆಲ್ಲವೂ 2014ರವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರ 5ರಿಂದ 6 ವರ್ಷಗಳ ಅವಧಿಯನ್ನು ಬಿಟ್ಟು ಈ ಸರ್ಕಾರವನ್ನು ಕೆಜಿಬಿ ಅಥವಾ ಸಿಐಎ ಮತ್ತು ಕಾಂಗ್ರೆಸ್ ನಡೆಸುತ್ತಿತ್ತು. ಇಡೀ ಗಾಂಧಿ ಕುಟುಂಬವು ಈ ಎರಡು ಸಂಸ್ಥೆಗಳ ಕೈಗೊಂಬೆಗಳಾಗಿತ್ತು ಮತ್ತು ಇದು ದೇಶಕ್ಕೆ ದುರದೃಷ್ಟಕರ ಸಂಗತಿ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಷ್ಯಾದ ಗುಪ್ತಚರ ಸಂಸ್ಥೆಯ 1,100 ಜನರು ಭಾರತದಲ್ಲಿದ್ದರು. ಅವರು ಅಧಿಕಾರಿಗಳು, ವ್ಯಾಪಾರ ಸಂಸ್ಥೆಗಳು, ಕಮ್ಯುನಿಸ್ಟ್ ಪಕ್ಷಗಳು ಮತ್ತು ಅಭಿಪ್ರಾಯ ತಯಾರಕರನ್ನು ತಮ್ಮ “ಜೇಬಿನಲ್ಲಿ” ಇಟ್ಟುಕೊಂಡಿದ್ದರು ಎಂದು ಅವರು ಆರೋಪಿಸಿದರು. “ಪತ್ರಕರ್ತರ ಗುಂಪೊಂದು ಅವರ ಏಜೆಂಟರಾಗಿದ್ದರು. ರಷ್ಯಾದಲ್ಲಿ ಒಟ್ಟು 16,000 ಸುದ್ದಿ ಲೇಖನಗಳು ಪ್ರಕಟವಾದ ಬಗ್ಗೆ ಉಲ್ಲೇಖವಿದೆ. ಆ ಸಮಯದಲ್ಲಿ ರಷ್ಯಾದ ಗುಪ್ತಚರ ಸಂಸ್ಥೆಗಳ 1100 ಜನರು ಭಾರತದಲ್ಲಿದ್ದರು. ಅಧಿಕಾರಿಗಳು, ವ್ಯಾಪಾರ ಸಂಸ್ಥೆಗಳು, ಕಮ್ಯುನಿಸ್ಟ್ ಪಕ್ಷಗಳು ಮತ್ತು ಅಭಿಪ್ರಾಯ ತಯಾರಕರನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಈ ಮಾಹಿತಿಯೊಂದಿಗೆ ಭಾರತದ ನೀತಿಗಳನ್ನು ರೂಪಿಸುತ್ತಿದ್ದರು. ಆ ಸಮಯದಲ್ಲಿ ಚುನಾವಣೆಗಳ ಹೆಸರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭದ್ರಾ ಜೋಶಿ ಜರ್ಮನ್ ಸರ್ಕಾರದಿಂದ 5 ಲಕ್ಷ ರೂಪಾಯಿಗಳನ್ನು ಪಡೆದರು. ಅವರು ಸೋತ ನಂತರ ಇಂಡೋ-ಜರ್ಮನ್ ವೇದಿಕೆಯ ಅಧ್ಯಕ್ಷರಾದರು. ಇದು ಒಂದು ದೇಶವೇ ಅಥವಾ ಗುಲಾಮರು, ಏಜೆಂಟರು ಮತ್ತು ಮಧ್ಯವರ್ತಿಗಳ ಕೈಗೊಂಬೆಯೇ? ಎಂಬ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಬೇಕು” ಎಂದು ನಿಶಿಕಾಂತ್ ದುಬೆ ತಮ್ಮ ‘ಎಕ್ಸ್’ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಡಾ. ಅಜಯ್ ಕುಮಾರ್, “ನಿಶಿಕಾಂತ್ ದುಬೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎನಿಸುತ್ತಿದೆ. ಅವರನ್ನು ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ ತಪಾಸಣೆ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. ಅವರು ಏನು ಹೇಳುತ್ತಿದ್ದಾರೆ? ಅವರು ಮೊದಲು ಮೋದಿಯನ್ನು ಕೇಳಬೇಕು, ಬಿಜೆಪಿ ಸಾವಿರಾರು ಕೋಟಿ ಚುನಾವಣಾ ಬಾಂಡ್ಗಳೊಂದಿಗೆ ಏನು ಮಾಡಿದೆ? ಅವರು ಮಾತ್ರ ಇತರರ ಬಗ್ಗೆ ಮಾತನಾಡಬಹುದು. ನಾವೇನೂ ಪ್ರಶ್ನೆ ಮಾಡುವಂತಿಲ್ಲವಾ? ದುಬೆ ಅವರ ಆರೋಗ್ಯ ಚೆನ್ನಾಗಿಲ್ಲ ಎಂದು ನನಗೆ ಅನಿಸುತ್ತಿದೆ. ಅವರು ಮೊದಲು ತಮ್ಮ ಆರೋಗ್ಯವನ್ನು ನೋಡಿಕೊಳ್ಳಬೇಕು. ನಾವು ಅವರಿಗೆ ಸಹಾಯ ಮಾಡುತ್ತೇವೆ.” ಎಂದು ವ್ಯಂಗ್ಯವಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Tue, 1 July 25




