AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ದರ್ಜೆಯ ಬಡ್ತಿ​ ನೀಡಿದ ಭಾರತೀಯ ಸೇನೆ

Indian Army: ಸೇನೆಯಲ್ಲಿ ಈವರೆಗೆ ಆರ್ಮಿ ವೈದ್ಯಕೀಯ ಕಾರ್ಪ್ಸ್​ (SMC), ಜಡ್ಜ್​ ಅಡ್ವೋಕೇಟ್​​ (JAG) ಮತ್ತು ಆರ್ಮಿ ಶೈಕ್ಷಣಿಕ ಕಾರ್ಪ್ಸ್​ (AEC)ನ ಮಹಿಳಾ ಅಧಿಕಾರಿಗಳಿಗೆ ಮಾತ್ರ ಕರ್ನಲ್​ ಶ್ರೇಣಿ ಪ್ರಮೋಶನ್​ ನೀಡಲಾಗುತ್ತಿತ್ತು.

ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ ದರ್ಜೆಯ ಬಡ್ತಿ​ ನೀಡಿದ ಭಾರತೀಯ ಸೇನೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Aug 23, 2021 | 5:25 PM

ಭಾರತ ಸೇನೆಯ ಆಯ್ಕೆ ಮಂಡಳಿ ಇದೇ ಮೊದಲ ಬಾರಿಗೆ ಐವರು ಮಹಿಳಾ ಅಧಿಕಾರಿಗಳನ್ನು ಕರ್ನಲ್​ ದರ್ಜೆಯ (Time Scale) ಬಡ್ತಿಗೆ ಆಯ್ಕೆ ಮಾಡುವ ಮೂಲಕ, ಕಾರ್ಪ್ಸ್ ಆಫ್​ ಸಿಗ್ನಲ್​, ಕಾರ್ಪ್ಸ್​ ಆಫ್​ ಎಲೆಕ್ಟ್ರಾನಿಕ್​ ಮತ್ತು ಮೆಕ್ಯಾನಿಕಲ್​ ಇಂಜಿನಿಯರ್ಸ್ (EME) ​ಮತ್ತು ಕಾರ್ಪ್ಸ್​ ಆಫ್​ ಇಂಜಿನಿಯರ್​​ ಶ್ರೇಣಿಯ ಮಹಿಳಾ ಅಧಿಕಾರಿಗಳಿಗೆ ಟೈಂ ಸ್ಕೇಲ್​​ನ ಕರ್ನಲ್​ ದರ್ಜೆ ಬಡ್ತಿ ನೀಡುವ ಮಾರ್ಗವನ್ನು ಸುಗಮಗೊಳಿಸಿದೆ. ಸೇನೆಯಲ್ಲಿ ಈವರೆಗೆ ಆರ್ಮಿ ವೈದ್ಯಕೀಯ ಕಾರ್ಪ್ಸ್​ (SMC), ಜಡ್ಜ್​ ಅಡ್ವೋಕೇಟ್​​ (JAG) ಮತ್ತು ಆರ್ಮಿ ಶೈಕ್ಷಣಿಕ ಕಾರ್ಪ್ಸ್​ (AEC)ನ ಮಹಿಳಾ ಅಧಿಕಾರಿಗಳಿಗೆ ಮಾತ್ರ ಕರ್ನಲ್​ ಶ್ರೇಣಿ ಪ್ರಮೋಶನ್​ ನೀಡಲಾಗುತ್ತಿತ್ತು. ಈ ಕಾರಣಕ್ಕೆ ಸೇನಾ ಆಯ್ಕೆ ಮಂಡಳಿಯ ನಿರ್ಧಾರ ಬಹುಮಹತ್ವ ಪಡೆದುಕೊಂಡಿದೆ.

ಸೇನೆಯ ಕಾರ್ಪ್ಸ್ ಆಫ್​ ಸಿಗ್ನಲ್​ (ಸಂಕೇತ ದಳ)ನ ಲೆಫ್ಟಿನಂಟ್​ ಕರ್ನಲ್​ ಸಂಗೀತಾ ಸರ್ದಾನಾ, ಇಎಂಇ ವಿಭಾಗದ ಲೆಫ್ಟಿನೆಂಟ್​ ಕರ್ನಲ್​ಗಳಾದ ಸೋನಿಯಾ ಆನಂದ್​ ಮತ್ತು ನವನೀತ್​ ದುಗ್ಗಾಲ್​, ಇಂಜಿಯರಿಂಗ್​ ಕಾರ್ಪ್ಸ್​ನ ಲೆಫ್ಟಿನೆಂಟ್​ ಕರ್ನಲ್​ಗಳಾದ ರೀನು ಖನ್ನಾ ಮತ್ತು ರಿಚಾ ಸಾಗರ್​ ಅವರಿಗೆ ಸದ್ಯ ಟೈಂ ಸ್ಕೇಲ್​​ನ ಕರ್ನಲ್​ ಶ್ರೇಣಿಗೆ ಬಡ್ತಿ ನೀಡಲಾಗಿದ್ದು, ಇವರೆಲ್ಲರೂ ತಮ್ಮ ತಮ್ಮ ವಿಭಾಗ, ದಳದಲ್ಲಿ 26 ವರ್ಷ ಸೇವೆ ಸಂಪೂರ್ಣಗೊಳಿಸಿದವರಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ ರಚಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿತ್ತು. ಹೀಗಾಗಿ ಸೇನೆಯ ಬಹುತೇಕ ವಿಭಾಗಗಳಲ್ಲಿ ಶಾಶ್ವತ ಆಯೋಗ ರಚಿಸುವ ಜತೆ, ಉನ್ನತ ಶ್ರೇಣಿಗಳಿಗೆ ಬಡ್ತಿ ನೀಡುವುದನ್ನೂ ಹೆಚ್ಚೆಚ್ಚು ವಿಭಾಗಗಳಿಗೆ ವಿಸ್ತರಿಸುವ ಮೂಲಕ, ಸೇನೆಯಲ್ಲಿ ಲಿಂಗ ತಟಸ್ಥ ನೀತಿ ಅನುಸರಣೆಗೆ ಮುಂದಡಿ ಇಡಲಾಗುತ್ತಿದೆ ಎಂದು ಭಾರತೀಯ ಸೇನೆ ಹೇಳಿದೆ.

ಇದನ್ನೂ ಓದಿ: Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್​ಶೀರ್​

Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ

Published On - 5:15 pm, Mon, 23 August 21

ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!