AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್​ ಬೋಟ್​ ವಶ; ಅದರಲ್ಲಿದ್ದುದು 10 ಜನರು, 2 ಟನ್​ ಮೀನು

ಇಂದು ಗುಜರಾತ್​ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್​ ಬೋಟ್​​ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್​ಬಂದರ್​ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್​​ನ ಹೆಸರು ಯಾಸೀನ್​. ಶನಿವಾರ  ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್​​ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ […]

ಗುಜರಾತ್​ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್​ ಬೋಟ್​ ವಶ; ಅದರಲ್ಲಿದ್ದುದು 10 ಜನರು, 2 ಟನ್​ ಮೀನು
ಗುಜರಾತ್​ ಕರಾವಳಿಯಲ್ಲಿ ಸೆರೆ ಸಿಕ್ಕ ಪಾಕ್​ ಬೋಟ್​
TV9 Web
| Edited By: |

Updated on: Jan 09, 2022 | 3:48 PM

Share

ಇಂದು ಗುಜರಾತ್​ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್​ ಬೋಟ್​​ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್​ಬಂದರ್​ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್​​ನ ಹೆಸರು ಯಾಸೀನ್​. ಶನಿವಾರ  ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್​​ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ ಕಡೆಗೆ ಪ್ರವೇಶಿಸಿದ ಪಾಕಿಸ್ತಾನಿ ಯಾಸೀನ್​ ಬೋಟ್​​ನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.

ಭಾರತದ ಭಾಗದ ನೀರನ್ನು ಪ್ರವೇಶಿಸಿದ ಪಾಕಿಸ್ತಾನದ ಯಾಸೀನ್ ಬೋಟ್​​ನಲ್ಲಿ ಸುಮಾರು 2 ಟನ್​  ಮೀನುಗಳಿದ್ದವು, 600 ಲೀಟರ್​ ಇಂಧನವಿತ್ತು.ಅವೆಲ್ಲವನ್ನೂ ಭಾರತೀಯ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಇವು ಬಿಟ್ಟರೆ ಮತ್ತೇನೂ ಮಹತ್ವದ ದಾಖಲೆಗಳಾಗಲಿ, ವಸ್ತುಗಳಾಗಲಿ ಸಿಕ್ಕಿಲ್ಲ ಎಂದು ಹೇಳಲಾಗಿದೆ. 2021ರ ಸೆಪ್ಟೆಂಬರ್​ 15ರಂದು ಇಂಥದ್ದೇ ಒಂದು ಘಟನೆ ನಡೆದಿತ್ತು. ಸುಮಾರು 12 ಸಿಬ್ಬಂದಿಯಿದ್ದ ಪಾಕಿಸ್ತಾನದ ಬೋಟ್​ವೊಂದು ಗುಜರಾತ್​ ಕರಾವಳಿಯಲ್ಲಿ ಭಾರತದ ಒಳಗೆ ಬಂದಿತ್ತು.  ಇನ್ನು ಡಿಸೆಂಬರ್​ 20ರಂದು ಪಾಕಿಸ್ತಾನದ ಮೀನುಗಾರಿಕಾ ಬೋಟ್​ವೊಂದು ಭಾರತದ ಕರಾವಳಿ ರಕ್ಷಕ ಪಡೆಯ ಬಳಿ ಸಿಕ್ಕಿಬಿದ್ದಿತ್ತು. ಅದರಲ್ಲಿ ಸುಮಾರು 400 ಕೋಟಿ ರೂ.ಮೌಲ್ಯದ, 77 ಕೆಜಿಗಳಷ್ಟು ಪ್ರಮಾಣದ ಹೆರೋಯಿನ್​ ಇತ್ತು.  ಹೀಗೆ ಅಕ್ರಮವಾಗಿ ನುಸುಳುವ ಬೋಟ್​ಗಳು ಮಾದಕ ದ್ರವ್ಯ ಸಾಗಣೆ ಮಾಡುತ್ತಿವೆ ಎಂದು ಹೇಳಲಾಗಿದ್ದು, ದೇಶದ ಉಗ್ರ ವಿರೋಧಿ ಪಡೆಗಳು, ಕರಾವಳಿ ರಕ್ಷಕ ಪಡೆಗಳು ಜಂಟಿಯಾಗಿಯೇ ಕಾರ್ಯಾಚರಣೆ ನಡೆಸುತ್ತಿವೆ.

ಇದನ್ನೂ ಓದಿ:‘ನೆಲ,ಜಲ, ಭಾಷೆಗೆ ಧಕ್ಕೆಯಾದಾಗ ರಾಜ್​ಕುಮಾರ್ ಮೊದಲು ಮುಂದೆ ಬರುತ್ತಿದ್ದರು’; ಜಯಮಾಲಾ

Follow Us
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು