AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್​ ಬೋಟ್​ ವಶ; ಅದರಲ್ಲಿದ್ದುದು 10 ಜನರು, 2 ಟನ್​ ಮೀನು

ಇಂದು ಗುಜರಾತ್​ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್​ ಬೋಟ್​​ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್​ಬಂದರ್​ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್​​ನ ಹೆಸರು ಯಾಸೀನ್​. ಶನಿವಾರ  ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್​​ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ […]

ಗುಜರಾತ್​ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್​ ಬೋಟ್​ ವಶ; ಅದರಲ್ಲಿದ್ದುದು 10 ಜನರು, 2 ಟನ್​ ಮೀನು
ಗುಜರಾತ್​ ಕರಾವಳಿಯಲ್ಲಿ ಸೆರೆ ಸಿಕ್ಕ ಪಾಕ್​ ಬೋಟ್​
TV9 Web
| Edited By: |

Updated on: Jan 09, 2022 | 3:48 PM

Share

ಇಂದು ಗುಜರಾತ್​ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್​ ಬೋಟ್​​ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್​ಬಂದರ್​ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್​​ನ ಹೆಸರು ಯಾಸೀನ್​. ಶನಿವಾರ  ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್​​ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ ಕಡೆಗೆ ಪ್ರವೇಶಿಸಿದ ಪಾಕಿಸ್ತಾನಿ ಯಾಸೀನ್​ ಬೋಟ್​​ನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.

ಭಾರತದ ಭಾಗದ ನೀರನ್ನು ಪ್ರವೇಶಿಸಿದ ಪಾಕಿಸ್ತಾನದ ಯಾಸೀನ್ ಬೋಟ್​​ನಲ್ಲಿ ಸುಮಾರು 2 ಟನ್​  ಮೀನುಗಳಿದ್ದವು, 600 ಲೀಟರ್​ ಇಂಧನವಿತ್ತು.ಅವೆಲ್ಲವನ್ನೂ ಭಾರತೀಯ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಇವು ಬಿಟ್ಟರೆ ಮತ್ತೇನೂ ಮಹತ್ವದ ದಾಖಲೆಗಳಾಗಲಿ, ವಸ್ತುಗಳಾಗಲಿ ಸಿಕ್ಕಿಲ್ಲ ಎಂದು ಹೇಳಲಾಗಿದೆ. 2021ರ ಸೆಪ್ಟೆಂಬರ್​ 15ರಂದು ಇಂಥದ್ದೇ ಒಂದು ಘಟನೆ ನಡೆದಿತ್ತು. ಸುಮಾರು 12 ಸಿಬ್ಬಂದಿಯಿದ್ದ ಪಾಕಿಸ್ತಾನದ ಬೋಟ್​ವೊಂದು ಗುಜರಾತ್​ ಕರಾವಳಿಯಲ್ಲಿ ಭಾರತದ ಒಳಗೆ ಬಂದಿತ್ತು.  ಇನ್ನು ಡಿಸೆಂಬರ್​ 20ರಂದು ಪಾಕಿಸ್ತಾನದ ಮೀನುಗಾರಿಕಾ ಬೋಟ್​ವೊಂದು ಭಾರತದ ಕರಾವಳಿ ರಕ್ಷಕ ಪಡೆಯ ಬಳಿ ಸಿಕ್ಕಿಬಿದ್ದಿತ್ತು. ಅದರಲ್ಲಿ ಸುಮಾರು 400 ಕೋಟಿ ರೂ.ಮೌಲ್ಯದ, 77 ಕೆಜಿಗಳಷ್ಟು ಪ್ರಮಾಣದ ಹೆರೋಯಿನ್​ ಇತ್ತು.  ಹೀಗೆ ಅಕ್ರಮವಾಗಿ ನುಸುಳುವ ಬೋಟ್​ಗಳು ಮಾದಕ ದ್ರವ್ಯ ಸಾಗಣೆ ಮಾಡುತ್ತಿವೆ ಎಂದು ಹೇಳಲಾಗಿದ್ದು, ದೇಶದ ಉಗ್ರ ವಿರೋಧಿ ಪಡೆಗಳು, ಕರಾವಳಿ ರಕ್ಷಕ ಪಡೆಗಳು ಜಂಟಿಯಾಗಿಯೇ ಕಾರ್ಯಾಚರಣೆ ನಡೆಸುತ್ತಿವೆ.

ಇದನ್ನೂ ಓದಿ:‘ನೆಲ,ಜಲ, ಭಾಷೆಗೆ ಧಕ್ಕೆಯಾದಾಗ ರಾಜ್​ಕುಮಾರ್ ಮೊದಲು ಮುಂದೆ ಬರುತ್ತಿದ್ದರು’; ಜಯಮಾಲಾ

Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!