AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್​ ಬೋಟ್​ ವಶ; ಅದರಲ್ಲಿದ್ದುದು 10 ಜನರು, 2 ಟನ್​ ಮೀನು

ಇಂದು ಗುಜರಾತ್​ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್​ ಬೋಟ್​​ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್​ಬಂದರ್​ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್​​ನ ಹೆಸರು ಯಾಸೀನ್​. ಶನಿವಾರ  ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್​​ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ […]

ಗುಜರಾತ್​ ಕರಾವಳಿಯಲ್ಲಿ ಪಾಕಿಸ್ತಾನದ ಯಾಸೀನ್​ ಬೋಟ್​ ವಶ; ಅದರಲ್ಲಿದ್ದುದು 10 ಜನರು, 2 ಟನ್​ ಮೀನು
ಗುಜರಾತ್​ ಕರಾವಳಿಯಲ್ಲಿ ಸೆರೆ ಸಿಕ್ಕ ಪಾಕ್​ ಬೋಟ್​
TV9 Web
| Edited By: |

Updated on: Jan 09, 2022 | 3:48 PM

Share

ಇಂದು ಗುಜರಾತ್​ ಕರಾವಳಿ ತೀರ(Gujarat Coast)ದಲ್ಲಿ ಸರಹದ್ದು ದಾಟಿ ಭಾರತದ ಕಡೆಗೆ ಸುಮಾರು 6-7 ಮೈಲುಗಳಷ್ಟು ದೂರ ಬಂದ ಪಾಕಿಸ್ತಾನ್​ ಬೋಟ್​​ವೊಂದನ್ನು ಭಾರತೀಯ ಕರಾವಳಿ ರಕ್ಷಕ ಪಡೆ (ICG) ವಶಕ್ಕೆ ಪಡೆದಿದೆ. ಈ ದೋಣಿಯಲ್ಲಿ ಪಾಕಿಸ್ತಾನದ 10 ಮಂದಿ ಇದ್ದರು. ವಿಚಾರಣೆಗಾಗಿ ಅವರನ್ನೆಲ್ಲ ಪೋರ್​ಬಂದರ್​ಗೆ ಕರೆತರಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೋಟ್​​ನ ಹೆಸರು ಯಾಸೀನ್​. ಶನಿವಾರ  ಭಾರತೀಯ ಕರಾವಳಿ ರಕ್ಷಕ ಪಡೆ ಹಡಗು ಅಂಕಿತ್​​ ಗಸ್ತು ತಿರುಗುತ್ತಿತ್ತು. ಈ ವೇಳೆ ಭಾರತದ ಕಡೆಗೆ ಪ್ರವೇಶಿಸಿದ ಪಾಕಿಸ್ತಾನಿ ಯಾಸೀನ್​ ಬೋಟ್​​ನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದೆ.

ಭಾರತದ ಭಾಗದ ನೀರನ್ನು ಪ್ರವೇಶಿಸಿದ ಪಾಕಿಸ್ತಾನದ ಯಾಸೀನ್ ಬೋಟ್​​ನಲ್ಲಿ ಸುಮಾರು 2 ಟನ್​  ಮೀನುಗಳಿದ್ದವು, 600 ಲೀಟರ್​ ಇಂಧನವಿತ್ತು.ಅವೆಲ್ಲವನ್ನೂ ಭಾರತೀಯ ರಕ್ಷಣಾ ಪಡೆ ವಶಪಡಿಸಿಕೊಂಡಿದೆ. ಇವು ಬಿಟ್ಟರೆ ಮತ್ತೇನೂ ಮಹತ್ವದ ದಾಖಲೆಗಳಾಗಲಿ, ವಸ್ತುಗಳಾಗಲಿ ಸಿಕ್ಕಿಲ್ಲ ಎಂದು ಹೇಳಲಾಗಿದೆ. 2021ರ ಸೆಪ್ಟೆಂಬರ್​ 15ರಂದು ಇಂಥದ್ದೇ ಒಂದು ಘಟನೆ ನಡೆದಿತ್ತು. ಸುಮಾರು 12 ಸಿಬ್ಬಂದಿಯಿದ್ದ ಪಾಕಿಸ್ತಾನದ ಬೋಟ್​ವೊಂದು ಗುಜರಾತ್​ ಕರಾವಳಿಯಲ್ಲಿ ಭಾರತದ ಒಳಗೆ ಬಂದಿತ್ತು.  ಇನ್ನು ಡಿಸೆಂಬರ್​ 20ರಂದು ಪಾಕಿಸ್ತಾನದ ಮೀನುಗಾರಿಕಾ ಬೋಟ್​ವೊಂದು ಭಾರತದ ಕರಾವಳಿ ರಕ್ಷಕ ಪಡೆಯ ಬಳಿ ಸಿಕ್ಕಿಬಿದ್ದಿತ್ತು. ಅದರಲ್ಲಿ ಸುಮಾರು 400 ಕೋಟಿ ರೂ.ಮೌಲ್ಯದ, 77 ಕೆಜಿಗಳಷ್ಟು ಪ್ರಮಾಣದ ಹೆರೋಯಿನ್​ ಇತ್ತು.  ಹೀಗೆ ಅಕ್ರಮವಾಗಿ ನುಸುಳುವ ಬೋಟ್​ಗಳು ಮಾದಕ ದ್ರವ್ಯ ಸಾಗಣೆ ಮಾಡುತ್ತಿವೆ ಎಂದು ಹೇಳಲಾಗಿದ್ದು, ದೇಶದ ಉಗ್ರ ವಿರೋಧಿ ಪಡೆಗಳು, ಕರಾವಳಿ ರಕ್ಷಕ ಪಡೆಗಳು ಜಂಟಿಯಾಗಿಯೇ ಕಾರ್ಯಾಚರಣೆ ನಡೆಸುತ್ತಿವೆ.

ಇದನ್ನೂ ಓದಿ:‘ನೆಲ,ಜಲ, ಭಾಷೆಗೆ ಧಕ್ಕೆಯಾದಾಗ ರಾಜ್​ಕುಮಾರ್ ಮೊದಲು ಮುಂದೆ ಬರುತ್ತಿದ್ದರು’; ಜಯಮಾಲಾ

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?