
ನವದೆಹಲಿ, ಸೆಪ್ಟೆಂಬರ್ 10: ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನೇಪಾಳದ (Nepal Protest) ಮೂಲಕ ಕೈಲಾಸ ಮಾನಸರೋವರ ಯಾತ್ರೆಯನ್ನು ಕೈಗೊಳ್ಳುತ್ತಿರುವ ಭಾರತೀಯ ನಾಗರಿಕರಿಗೆ ಸುರಕ್ಷತಾ ಸಲಹೆಯನ್ನು ನೀಡಿದೆ. ನೇಪಾಳ ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಈ ಸಲಹೆ ನೀಡಲಾಗಿದ್ದು, ಸಹಾಯವಾಣಿಯನ್ನು ಕೂಡ ತೆರೆಯಲಾಗಿದೆ. ಈ ಸಲಹೆಯನ್ನು ಇಂದು ರಾಯಭಾರ ಕಚೇರಿಯ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾಗಿದೆ. ನೇಪಾಳದಲ್ಲಿ ಪ್ರತಿಭಟನೆಗಳು ತಮ್ಮ ಮೂರನೇ ದಿನಕ್ಕೆ ಕಾಲಿಡುತ್ತಿದ್ದಂತೆ ಈ ಎಚ್ಚರಿಕೆ ನೀಡಲಾಗಿದೆ. ಇದು ಗಡಿಯಾಚೆಗಿನ ಪ್ರಯಾಣ ಮಾರ್ಗಗಳನ್ನು ಅಡ್ಡಿಪಡಿಸುತ್ತದೆ ಮತ್ತು ಗಂಭೀರ ಭದ್ರತಾ ಕಾಳಜಿಗಳನ್ನು ಹುಟ್ಟುಹಾಕಿದೆ.
ಅದರಲ್ಲೂ ವಿಶೇಷವಾಗಿ ನೇಪಾಳದ ಮೂಲಕ ಟಿಬೆಟ್ ತಲುಪಲು ಪ್ರಯಾಣಿಸುವ ಭಾರತೀಯ ಪ್ರವಾಸಿಗರು ಮತ್ತು ಯಾತ್ರಿಕರಿಗೆ ಭದ್ರತಾ ಆತಂಕವನ್ನು ಹುಟ್ಟುಹಾಕಿದೆ. ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ನೇಪಾಳದ ಮೂಲಕ ಟಿಬೆಟ್ಗೆ ಪ್ರಯಾಣಿಸುವ ಭಾರತೀಯ ನಾಗರಿಕರ ಬಗ್ಗೆ ರಾಯಭಾರ ಕಚೇರಿಯು ನಿರ್ದಿಷ್ಟವಾಗಿ ಕಳವಳಗಳನ್ನು ಎತ್ತಿ ತೋರಿಸಿದೆ. ನೇಪಾಳದಲ್ಲಿ ಉಂಟಾಗಿರುವ ಪ್ರಕ್ಷುಬ್ಧತೆಯಿಂದಾಗಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರಯಾಣಿಕರಿಗೆ ಭಾರತ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ನೇಪಾಳದಲ್ಲಿ ಹಿಂಸಾಚಾರ; ಜೈಲಿನಲ್ಲಿ 5 ಬಾಲಾಪರಾಧಿಗಳ ಸಾವು, 7000ಕ್ಕೂ ಅಧಿಕ ಕೈದಿಗಳು ಪರಾರಿ
ತೊಂದರೆಗಳನ್ನು ಎದುರಿಸಬಹುದಾದ ಅಥವಾ ತುರ್ತು ಸಹಾಯದ ಅಗತ್ಯವಿರುವ ಭಾರತೀಯ ಪ್ರಜೆಗಳಿಗೆ, ಈ ಕೆಳಗಿನ ಸಂಪರ್ಕ ಸಂಖ್ಯೆಗಳ ಮೂಲಕ ಸಹಾಯವಾಣಿ ತೆರೆಯಲಾಗಿದೆ.
ಭಾರತದ ರಾಯಭಾರ ಕಚೇರಿ – ಬೀಜಿಂಗ್:
0086 185 1428 4905 (ಕರೆಗಳು ಮಾತ್ರ)
0086 135 2065 7602 (ವಾಟ್ಸಾಪ್ನಲ್ಲಿಯೂ ಲಭ್ಯವಿದೆ)
ಭಾರತದ ರಾಯಭಾರ ಕಚೇರಿ – ಕಠ್ಮಂಡು:
+977 980 860 2881 (ವಾಟ್ಸಾಪ್)
+977 981 032 6134 (ವಾಟ್ಸಾಪ್)
ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್, ವಾಟ್ಸಾಪ್ ಮತ್ತು ಎಕ್ಸ್ ಸೇರಿದಂತೆ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಸರ್ಕಾರ ಹಠಾತ್ ನಿಷೇಧ ಹೇರಿದ ನಂತರ ನೇಪಾಳದಲ್ಲಿ ನಡೆಯುತ್ತಿರುವ ಅಶಾಂತಿ ಪ್ರಾರಂಭವಾಯಿತು. ನೇಪಾಳದ ವಾಟ್ನಲ್ಲಿ ನೋಂದಾಯಿಸಿಕೊಳ್ಳಲು ಸರ್ಕಾರ ವಿಧಿಸಿದ್ದ ಗಡುವನ್ನು ಪಾಲಿಸಲು ವಿಫಲವಾದ ಕಾರಣ ಸೋಷಿಯಲ್ ಮೀಡಿಯಾ ವೇದಿಕೆಗಳನ್ನು ನಿರ್ಬಂಧಿಸಲಾಯಿತು. ಇದನ್ನು ವಿರೋಧಿಸಿ ಆರಂಭವಾ ಯುವಕರ ಪ್ರತಿಭಟನೆ ಬಳಿಕ ವ್ಯಾಪಕ ಭ್ರಷ್ಟಾಚಾರ ಮತ್ತು ಮುಕ್ತ ಭಾಷಣದ ದಮನದ ಬಗ್ಗೆ ಯುವಜನರ ಕೋಪದಿಂದಾಗಿ ಬೀದಿ ಪ್ರತಿಭಟನೆಗಳ ರೂಪ ತಳೆಯಿತು. ಫೆಡರಲ್ ಪಾರ್ಲಿಮೆಂಟ್ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಸ್ಥಳಗಳಲ್ಲಿ ಘರ್ಷಣೆಗಳು ನಡೆದವು.
ಪ್ರತಿಭಟನೆಗಳ ಸಮಯದಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನೇಪಾಳದ ಸ್ಥಾಪಿತ ರಾಜಕೀಯ ವರ್ಗವನ್ನು ಸಾಂಕೇತಿಕವಾಗಿ ತಿರಸ್ಕರಿಸುವ ಮೂಲಕ ಪ್ರತಿಭಟನಾಕಾರರು ಸರ್ಕಾರಿ ಕಟ್ಟಡಗಳು ಮತ್ತು ರಾಜಕೀಯ ನಾಯಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡದ ನಡುವೆ, ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದರು. ಇಂದು ನೇಪಾಳದ ಮೊದಲ ಮತ್ತು ಏಕೈಕ ಮಹಿಳಾ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ನೇಮಿಸಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:45 pm, Wed, 10 September 25