ಪನ್ನುನ್ ಪ್ರಕರಣ: ‘ವಿಫಲವಾದ ಹತ್ಯೆ ಸಂಚು’ ತನಿಖೆಗೆ ಭಾರತೀಯ ತನಿಖಾ ಸಮಿತಿ ಇಂದು ಅಮೆರಿಕಕ್ಕೆ ಭೇಟಿ

|

Updated on: Oct 15, 2024 | 6:57 AM

ನಡೆಯುತ್ತಿರುವ ತನಿಖೆಗಳ ಭಾಗವಾಗಿ ಪಡೆದಿರುವ ಮಾಹಿತಿ ಸೇರಿದಂತೆ ಪ್ರಕರಣದ ಕುರಿತು ಚರ್ಚಿಸಲು ಮತ್ತು ಯುಎಸ್ ಅಧಿಕಾರಿಗಳಿಂದ  ಪ್ರಕರಣದ ಬಗ್ಗೆ ಅಪ್ಡೇಟ್ಸ್ ಸ್ವೀಕರಿಸಲು ತನಿಖಾ ಸಮಿತಿಯು ಅಕ್ಟೋಬರ್ 15 ರಂದು ವಾಷಿಂಗ್ಟನ್, ಡಿ.ಸಿ.ಗೆ ಪ್ರಯಾಣಿಸಲಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ

ಪನ್ನುನ್ ಪ್ರಕರಣ: ವಿಫಲವಾದ ಹತ್ಯೆ ಸಂಚು ತನಿಖೆಗೆ ಭಾರತೀಯ ತನಿಖಾ ಸಮಿತಿ ಇಂದು ಅಮೆರಿಕಕ್ಕೆ ಭೇಟಿ
ಗುರುಪತ್ವಂತ್ ಸಿಂಗ್ ಪನ್ನುನ್
Follow us on

ದೆಹಲಿ ಅಕ್ಟೋಬರ್ 15: ಅಮೆರಿಕದ ಪ್ರಜೆಯೊಬ್ಬರನ್ನು ಹತ್ಯೆ ಮಾಡಲು ವಿಫಲವಾದ ಸಂಚಿನಲ್ಲಿ ಭಾರತೀಯ ಪ್ರಜೆಯೊಬ್ಬರು ಭಾಗಿಯಾಗಿರುವ ಬಗ್ಗೆ ವಾಷಿಂಗ್ಟನ್ ಡಿಸಿಯ ಆರೋಪಗಳನ್ನು ತನಿಖೆ ಮಾಡಲು ಸ್ಥಾಪಿಸಲಾದ ಭಾರತೀಯ ತನಿಖಾ ಸಮಿತಿಯು ಮಂಗಳವಾರ ಯುಎಸ್ ರಾಜಧಾನಿಗೆ ಭೇಟಿ ನೀಡಲಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸೋಮವಾರ ತಿಳಿಸಿದೆ. ಇಲ್ಲಿ ಉಲ್ಲೇಖಿಸಲಾದ ಯುಎಸ್ ಪ್ರಜೆ ಬೇರಾರೂ ಅಲ್ಲ, 2020 ರಲ್ಲಿ ಭಾರತ ಸರ್ಕಾರವು ಭಯೋತ್ಪಾದಕ ಎಂದು ಗೊತ್ತುಪಡಿಸಿದ ಖಲಿಸ್ತಾನಿ ಪರ ತೀವ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಎಂದು ಹೇಳಲಾಗಿದೆ.

ನಡೆಯುತ್ತಿರುವ ತನಿಖೆಗಳ ಭಾಗವಾಗಿ ಪಡೆದಿರುವ ಮಾಹಿತಿ ಸೇರಿದಂತೆ ಪ್ರಕರಣದ ಕುರಿತು ಚರ್ಚಿಸಲು ಮತ್ತು ಯುಎಸ್ ಅಧಿಕಾರಿಗಳಿಂದ  ಪ್ರಕರಣದ ಬಗ್ಗೆ ಅಪ್ಡೇಟ್ಸ್ ಸ್ವೀಕರಿಸಲು ತನಿಖಾ ಸಮಿತಿಯು ಅಕ್ಟೋಬರ್ 15 ರಂದು ವಾಷಿಂಗ್ಟನ್, ಡಿ.ಸಿ.ಗೆ ಪ್ರಯಾಣಿಸಲಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಹೆಚ್ಚುವರಿಯಾಗಿ, ಮಾಜಿ ಸರ್ಕಾರಿ ನೌಕರನ ಇತರ ಸಂಪರ್ಕಗಳನ್ನು ತನಿಖೆ ಮಾಡಲು ಅವರು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದಾರೆ ಮತ್ತು ಅಗತ್ಯವಿರುವಂತೆ ಮುಂದಿನ ಕ್ರಮಗಳನ್ನು ನಿರ್ಧರಿಸುತ್ತಾರೆ” ಎಂದು ಭಾರತ ಅಮೆರಿಕಕ್ಕೆ ತಿಳಿಸಿದೆ.

ಕಳೆದ ನವೆಂಬರ್‌ನಲ್ಲಿ ಅಮೆರಿಕ ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್‌ನಲ್ಲಿ ಪನ್ನುನ್‌ನನ್ನು ಹತ್ಯೆ ಮಾಡಲು ಆಪಾದಿತ ಹತ್ಯೆಯ ಸಂಚು ರೂಪಿಸಿದ್ದಕ್ಕಾಗಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ವಿರುದ್ಧ ಆರೋಪ ಹೊರಿಸಿದ್ದರು. ಗುಪ್ತಾ ಅವರನ್ನು ಕಳೆದ ವರ್ಷ ಜೂನ್‌ನಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಗಿದ್ದು, ಜೂನ್ 14 ರಂದು ಯುಎಸ್‌ಗೆ ಹಸ್ತಾಂತರಿಸಲಾಯಿತು. ಭಾರತವು ಆರೋಪಗಳನ್ನು ನಿರಾಕರಿಸಿದ್ದರೂ ಅದನ್ನು ಪರಿಶೀಲಿಸಲು ಆಂತರಿಕ ತನಿಖಾ ತಂಡವನ್ನು ರಚಿಸಿದೆ. ಈ ವರ್ಷದ ಜುಲೈನಲ್ಲಿ, ಗೃಹ ವ್ಯವಹಾರಗಳ ಸಚಿವಾಲಯ (MHA) ಪನ್ನೂನ್‌ನ ಸಿಖ್ಸ್ ಫಾರ್ ಜಸ್ಟಿಸ್ (SFJ) ಮೇಲಿನ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿತು.

ಸಚಿವಾಲಯದ ಪ್ರಕಾರ, ಪನ್ನುನ್​​ನ ಎಸ್​​ಎಫ್​​ಜೆ “ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಪಂಜಾಬ್‌ನಲ್ಲಿ ರಾಷ್ಟ್ರ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳಿಗೆ” ಹೆಸರುವಾಸಿಯಾಗಿದೆ. ಪನ್ನುನ್​​ನ ಎಸ್‌ಎಫ್‌ಜೆಗೆ ಸಂಬಂಧಿಸಿದ ಪ್ರಕರಣದಲ್ಲಿ ಎನ್‌ಐಎ ಪಂಜಾಬ್‌ನಾದ್ಯಂತ ದಾಳಿ ನಡೆಸಿತ್ತು.

ಇದನ್ನೂ ಓದಿ: ದೇಶ ಬಿಟ್ಟು ತೊಲಗುವಂತೆ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತ ಡೆಡ್​ಲೈನ್!

ಕಳೆದ ತಿಂಗಳು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪಂಜಾಬ್‌ನಾದ್ಯಂತ ನಾಲ್ಕು ಸ್ಥಳಗಳಲ್ಲಿ ಭಯೋತ್ಪಾದನೆ-ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವ ಪ್ರಕರಣದಲ್ಲಿ ಮತ್ತು ಸಿಖ್ಸ್ ಫಾರ್ ಜಸ್ಟಿಸ್ (SFJ) ನಾಯಕ ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶೋಧ ನಡೆಸಿತು. ಎನ್‌ಐಎ ತಂಡಗಳು ಮೊಗಾದ ಒಂದು ಸ್ಥಳ, ಬಟಿಂಡಾದ ಎರಡು ಸ್ಥಳಗಳು ಮತ್ತು ಮೊಹಾಲಿಯಲ್ಲಿ ಒಂದು ಸ್ಥಳದಲ್ಲಿ ಶಂಕಿತರೊಂದಿಗೆ ಸಂಪರ್ಕ ಹೊಂದಿದ ಆವರಣದಲ್ಲಿ ದಾಳಿ ನಡೆಸಿದ್ದು ಡಿಜಿಟಲ್ ಸಾಧನಗಳು ಸೇರಿದಂತೆ ವಿವಿಧ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಂಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ