Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಲ್ವಾನ್​ ಘರ್ಷಣೆ ಬಳಿಕ.. ಚೀನಾ ಬುಡಕ್ಕೆ ಬೆಂಕಿ ಇಡಲು ಮುಂದಾಗಿತ್ತು ಭಾರತೀಯ ನೌಕಾಪಡೆ

ದೆಹಲಿ: ಗಲ್ವಾನ್​ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ದೇಶಕ್ಕಾಗಿ ಹೋರಾಡಿ ಮಣಿದ ವೀರ ಯೋಧರ ಬಲಿದಾನವನ್ನು ಇಡೀ ದೇಶ ಎಂದೆಂದಿಗೂ ಮರೆಯೋದಿಲ್ಲ. ಗಡಿಯಲ್ಲಿ ತನ್ನ ವಿಸ್ತಾರವಾದದ ನೀತಿಯನ್ನ ಪ್ರದರ್ಶಿಸಲು ಮುಂದಾದ ಚೀನಾಕ್ಕೆ ಸೆಡ್ಡು ಹೊಡೆದ ಭಾರತೀಯ ಸೇನೆಯ ಶೌರ್ಯಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ, ಭಾರತೀಯ ನೌಕಾಪಡೆ ನಡೆಸಿರುವ ರೋಚಕ ಸಂಗತಿ ಸಹ ಬೆಳಕಿಗೆ ಬಂದಿದೆ. ಹೌದು, ಜೂನ್​ 15ರಂದು ಲಡಾಖ್​ನ ಭೂಭಾಗದಲ್ಲಿರುವ ಗಲ್ವಾನ್​ ಕಣಿವೆಯಲ್ಲಿ ಘರ್ಷಣೆ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ನೌಕಾಪಡೆ ತನ್ನ ಅತ್ಯಾಧುನಿಕ ಯುದ್ಧನೌಕೆಯೊಂದನ್ನು […]

ಗಲ್ವಾನ್​ ಘರ್ಷಣೆ ಬಳಿಕ.. ಚೀನಾ ಬುಡಕ್ಕೆ ಬೆಂಕಿ ಇಡಲು ಮುಂದಾಗಿತ್ತು ಭಾರತೀಯ ನೌಕಾಪಡೆ
Indian Navy Recruitment 2021
Follow us
KUSHAL V
|

Updated on: Aug 30, 2020 | 6:52 PM

ದೆಹಲಿ: ಗಲ್ವಾನ್​ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ದೇಶಕ್ಕಾಗಿ ಹೋರಾಡಿ ಮಣಿದ ವೀರ ಯೋಧರ ಬಲಿದಾನವನ್ನು ಇಡೀ ದೇಶ ಎಂದೆಂದಿಗೂ ಮರೆಯೋದಿಲ್ಲ. ಗಡಿಯಲ್ಲಿ ತನ್ನ ವಿಸ್ತಾರವಾದದ ನೀತಿಯನ್ನ ಪ್ರದರ್ಶಿಸಲು ಮುಂದಾದ ಚೀನಾಕ್ಕೆ ಸೆಡ್ಡು ಹೊಡೆದ ಭಾರತೀಯ ಸೇನೆಯ ಶೌರ್ಯಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ, ಭಾರತೀಯ ನೌಕಾಪಡೆ ನಡೆಸಿರುವ ರೋಚಕ ಸಂಗತಿ ಸಹ ಬೆಳಕಿಗೆ ಬಂದಿದೆ.

ಹೌದು, ಜೂನ್​ 15ರಂದು ಲಡಾಖ್​ನ ಭೂಭಾಗದಲ್ಲಿರುವ ಗಲ್ವಾನ್​ ಕಣಿವೆಯಲ್ಲಿ ಘರ್ಷಣೆ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ನೌಕಾಪಡೆ ತನ್ನ ಅತ್ಯಾಧುನಿಕ ಯುದ್ಧನೌಕೆಯೊಂದನ್ನು ಚೀನಾದ ದಕ್ಷಿಣ ಭಾಗಕ್ಕೆ ಅಂಟಿಕೊಂಡಿರುವ ದಕ್ಷಿಣ ಚೀನಾ ಸಮುದ್ರಕ್ಕೆ(ಸೌತ್ ಚೈನಾ ಸೀ) ರವಾನಿಸಿತ್ತು ಎಂದು ಈಗ ಬೆಳಕಿಗೆ ಬಂದಿದೆ. ನಿಯೋಜನೆಗೊಂಡ ಯುದ್ಧನೌಕೆ ಸಮುದ್ರದಲ್ಲಿದ್ದ ಅಮೆರಿಕದ ನೌಕಾಪಡೆಯ ಹಡಗುಗಳೊಂದಿಗೆ ಸಂಪರ್ಕದಲ್ಲಿದ್ದು ಅವುಗಳೊಂದಿಗೆ ಸಮುದ್ರದಲ್ಲಿ ಗಸ್ತು ಸಹ ಹೊಡೆದಿತ್ತು ಎಂದು ತಿಳಿದುಬಂದಿದೆ.

ದಕ್ಷಿಣ ಚೀನಾ ಸಮುದ್ರ ತನ್ನ ದೇಶದ ಅವಿಭಾಜ್ಯ ಅಂಗ ಎಂದು ಅದರ ಮೇಲೆ ಹಕ್ಕು ಸ್ಥಾಪಿಸಲು ಮುಂದಾಗಿರುವ ಚೀನಾಕ್ಕೆ ನೌಕಾಪಡೆಯ ಈ ನಡೆ ತೀರಾ ಕಸಿವಿಸಿ ತಂದೊಡ್ಡಿತ್ತಂತೆ. ಈ ವಿಚಾರವನ್ನ ಉಭಯ ರಾಷ್ಟ್ರಗಳು ನಡೆಸಿದ ಮಾತುಕತೆಯ ವೇಳೆ ಸಹ ಪ್ರಸ್ತಾಪ ಮಾಡಿತ್ತಂತೆ.

ಅಷ್ಟೇ ಅಲ್ಲದೆ, ಭಾರತೀಯ ನೌಕಾಪಡೆಯ ಮತ್ತಷ್ಟು ಹಡಗುಗಳನ್ನು ಅಂಡಮಾನ್​ ಮತ್ತು ನಿಕೋಬಾರ್ ದ್ವೀಪದ ಬಳಿಯಿರುವ ಮಲಕ್ಕಾ ಜಲಸಂಧಿಯಲ್ಲೂ ಸಹ ನಿಯೋಜಿಸಿಲಾಗಿತ್ತು ಎಂದು ತಿಳಿದುಬಂದಿದೆ. ಈ ಮುಖಾಂತರ ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾಗಿರುವ ಚೀನಾದ ಯುದ್ಧನೌಕೆಗಳ ಮೇಲೆ ನಿಗಾ ವಹಿಸಲು ಮುಂದಾಗಿತ್ತಂತೆ. ಒಟ್ನಲ್ಲಿ, ಗಲ್ವಾನ್​ ಬಳಿಕ ಚೀನಾ ಮತ್ತೊಂದು ದುಸ್ಸಾಹಸಕ್ಕೆ ಕೈಹಾಕಿದ್ದರೆ ನಮ್ಮ ನೌಕಾಪಡೆ ಸರಿಯಾಗಿ ಮುಟ್ಟಿನೋಡಿಕೊಳ್ಳುವಂಥ ಉತ್ತರ ನೀಡಲು ಸಜ್ಜಾಗಿತ್ತು ಎಂಬುದು ಬೆಳಕಿಗೆ ಬಂದಿದೆ.