ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ; 9 ನಕ್ಸಲರ ಬಂಧನ

|

Updated on: Jun 05, 2024 | 4:06 PM

ಛತ್ತೀಸ್​ಗಢದ ಬಿಜಾಪುರದಲ್ಲಿ ಬಂಧಿತರಾಗಿರುವ ಐವರು ನಕ್ಸಲೀಯರು ಕಳೆದ ತಿಂಗಳು ಐಇಡಿ ಬಳಸಿ, ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದ್ದರು. ಆದರೆ, ಆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಸ್ಫೋಟದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು.

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ; 9 ನಕ್ಸಲರ ಬಂಧನ
ನಕ್ಸಲೀಯರು
Follow us on

ನವದೆಹಲಿ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ (Anti Naxal Operation) ಭಾರೀ ಯಶಸ್ಸನ್ನು ಸಾಧಿಸಿರುವ ಭದ್ರತಾ ಪಡೆ ಸಿಬ್ಬಂದಿ (Security Forces) ಇಂದು (ಬುಧವಾರ) ಛತ್ತೀಸಗಡದ ಬಿಜಾಪುರ ಜಿಲ್ಲೆಯ 2 ಸ್ಥಳಗಳಿಂದ 9 ನಕ್ಸಲೀಯರನ್ನು ಬಂಧಿಸಿವೆ. ಅವರಲ್ಲಿ ಐವರು ಕಳೆದ ತಿಂಗಳು ಪೊಲೀಸ್ ಕಾರನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟವನ್ನು ಮಾಡಿದ್ದರು. ಅವರೀಗ ಪೊಲೀಸರ ವಶದಲ್ಲಿದ್ದಾರೆ.

ಬಂಧಿಸಲಾಗಿರುವ ಈ ಐವರು ಉಗ್ರರನ್ನು ಗುಡ್ಡು ಕುಮ್ಮಾ (25), ಬುಧು ಕುಮ್ಮಾ (30), ಸುರೇಶ್ ಓಯಮ್ (29), ವಿನೋದ್ ಕೊರ್ಸಾ (25) ಮತ್ತು ಮುನ್ನಾ ಕುಮ್ಮಾ (25) ಎಂದು ಗುರುತಿಸಲಾಗಿದೆ. ಫರ್ಸೆಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡೆಮ್-ಕುಪ್ರೆಲ್ ಗ್ರಾಮಗಳಲ್ಲಿ ಬಂಧಿಸಲಾಗಿದೆ. ಐವರು ಉಗ್ರರ ತಲೆಯ ಮೇಲೆ ತಲಾ 10,000 ರೂ. ಬಹುಮಾನ ಇತ್ತು.

ಇದನ್ನೂ ಓದಿ: ನಕ್ಸಲರಿಂದ ಬೆದರಿಕೆ; ಪದ್ಮಶ್ರೀ ಪ್ರಶಸ್ತಿ ವಾಪಾಸ್ ನೀಡಲು ವೈದ್ಯ ಹೇಮಚಂದ್ ಮಾಂಝಿ ನಿರ್ಧಾರ

ಮೇ 15ರಂದು ಫರ್ಸೆಗಢ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಕಾಶ್ ಮಸಿಹ್ ಮತ್ತು ಕಾನ್‌ಸ್ಟೆಬಲ್ ಸಂಜಯ್ ಪೊಲೀಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ಇದನ್ನು ಐಇಡಿ ಬಳಸಿ ಮಾಡಲಾಗಿತ್ತು. ಈ ಸ್ಫೋಟದಿಂದ ವಾಹನದ ಬಾನೆಟ್‌ಗೆ ಹಾನಿಯನ್ನುಂಟಾಗಿತ್ತು. ಈ ಸಂದರ್ಭದಲ್ಲಿ ಅವರು ಗಾಯಗಳಿಲ್ಲದೆ ಪಾರಾಗಿದ್ದರು.

ಇದಲ್ಲದೆ, ಇತರ ನಾಲ್ವರು ನಕ್ಸಲೀಯರನ್ನು ಮದ್ದೇಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಎಲ್ಲಾ 9 ನಕ್ಸಲೀಯರು ಕೊಲೆ, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸುವುದು, ಅಕ್ರಮ ಸುಲಿಗೆ, ಮಾವೋವಾದಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕುವ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಮೂವರು ಮಾವೋವಾದಿಗಳ ಎನ್​ಕೌಂಟರ್, 33 ನಕ್ಸಲೀಯರು ಶರಣಾಗತಿ

ಮದ್ದೇಡ್‌ನಿಂದ ಬಂಧಿಸಲ್ಪಟ್ಟ ಇತರ ನಾಲ್ವರಲ್ಲಿ ಒಬ್ಬ ಲಚ್ಚು ಪುಣೆಂ ನಕ್ಸಲೀಯರ ಮದ್ದೇಡ್ ಪ್ರದೇಶ ಸಮಿತಿಯ ಸದಸ್ಯನಾಗಿ ಸಕ್ರಿಯನಾಗಿದ್ದನು. ಅವನ ತಲೆಯ ಮೇಲೆ 5 ಲಕ್ಷ ರೂ. ಬಹುಮಾನವಿತ್ತು. ಪೊಲೀಸರು ಅವನಿಂದ ಸ್ಫೋಟಕ, ಸುರಕ್ಷತಾ ಫ್ಯೂಸ್‌ಗಳು, ಜಿಲೆಟಿನ್ ಕಡ್ಡಿಗಳು, ಮಾವೋವಾದಿಗಳ ಕರಪತ್ರಗಳು ಮತ್ತು ಬ್ಯಾನರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಜೂನ್ 2ರಂದು ಸುಕ್ಮಾದಲ್ಲಿ 8 ನಕ್ಸಲೀಯರು ಸ್ಕ್ಯೂರಿಟಿ ಪಡೆಗಳಿಗೆ ಶರಣಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ