AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವೇಷ ಭಾಷಣ ಪ್ರಕರಣ; ಮುಂಬೈನಲ್ಲಿ ಇಸ್ಲಾಮಿಕ್ ಧರ್ಮ ಪ್ರಚಾರಕ ಬಂಧನ

ಜಾಮಿಯಾ ರಿಯಾಜುಲ್ ಜನ್ನಾ, ಅಲ್-ಅಮಾನ್ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್ ಮತ್ತು ದಾರುಲ್ ಅಮಾನ್ ಸಂಸ್ಥಾಪಕರಾದ ಸಲ್ಮಾನ್ ಅಝ್ಹರಿ ಅವರು ಮುಂಬೈನ ಸುನ್ನಿ ಇಸ್ಲಾಮಿಕ್ ಸಂಶೋಧನಾ ವಿದ್ವಾಂಸರಾಗಿದ್ದಾರೆ. ಈಜಿಪ್ಟ್‌ನ ಜಾಮಿಯಾ ಅಲ್-ಅಲ್ಜರ್‌ನಿಂದ ದಾವಾಹ್ ಇಸ್ಲಾಮಿಯಾವನ್ನು ಅಧ್ಯಯನ ಮಾಡಿದ ಅಝಾರಿ ಜಾಗತಿಕ ಮಟ್ಟದಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ

ದ್ವೇಷ ಭಾಷಣ ಪ್ರಕರಣ; ಮುಂಬೈನಲ್ಲಿ ಇಸ್ಲಾಮಿಕ್ ಧರ್ಮ ಪ್ರಚಾರಕ ಬಂಧನ
ಮುಫ್ತಿ ಸಲ್ಮಾನ್ ಅಝ್ಹರಿ
ರಶ್ಮಿ ಕಲ್ಲಕಟ್ಟ
|

Updated on: Feb 05, 2024 | 12:52 PM

Share

ಮುಂಬೈ ಫೆಬ್ರುವರಿ 05 : ದ್ವೇಷ ಭಾಷಣ(Hate Speech) ಪ್ರಕರಣದ ತನಿಖೆ ನಡೆಸುತ್ತಿರುವ ಗುಜರಾತ್ ಪೊಲೀಸರು (Gujarat Police )ಇಸ್ಲಾಮಿಕ್ ಧರ್ಮ ಪ್ರಚಾರಕ ಮುಫ್ತಿ ಸಲ್ಮಾನ್ ಅಝ್ಹರಿಯನ್ನು(Mufti Salman Azhari) ಮುಂಬೈನಲ್ಲಿ ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಫ್ತಿ ಸಲ್ಮಾನ್ ಪ್ರಸ್ತುತ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮುಫ್ತಿ ಅವರ ನೂರಾರು ಬೆಂಬಲಿಗರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಈ ಪ್ರದೇಶದಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಮಾಡಿದ ಉದ್ರೇಕಕಾರಿ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಜುನಾಗಢ್ ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜನವರಿ 31ರ ರಾತ್ರಿ ಜುನಾಗಢದ ‘ಬಿ’ ಡಿವಿಷನ್ ಪೊಲೀಸ್ ಠಾಣೆ ಬಳಿಯ ತೆರೆದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಫ್ತಿ ಪ್ರಚೋದನಾಕಾರಿ ಭಾಷಣ ಮಾಡಿದ್ದರು.

ವಿಡಿಯೊ ವೈರಲ್ ಆದ ನಂತರ, ಅಝ್ಹರಿ ಮತ್ತು ಸ್ಥಳೀಯ ಸಂಘಟಕರಾದ ಮೊಹಮ್ಮದ್ ಯೂಸುಫ್ ಮಾಲೆಕ್ ಮತ್ತು ಅಜೀಮ್ ಹಬೀಬ್ ಒಡೆದಾರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಬಿ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಅನುಕೂಲಕರವಾದ ಹೇಳಿಕೆಗಳನ್ನು ನೀಡುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಮುಫ್ತಿ ಸಲ್ಮಾನ್ ಅಝ್ಹರಿ ಯಾರು?

ಜಾಮಿಯಾ ರಿಯಾಜುಲ್ ಜನ್ನಾ, ಅಲ್-ಅಮಾನ್ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್ ಮತ್ತು ದಾರುಲ್ ಅಮಾನ್ ಸಂಸ್ಥಾಪಕರಾದ ಸಲ್ಮಾನ್ ಅಝ್ಹರಿ ಅವರು ಮುಂಬೈನ ಸುನ್ನಿ ಇಸ್ಲಾಮಿಕ್ ಸಂಶೋಧನಾ ವಿದ್ವಾಂಸರಾಗಿದ್ದಾರೆ. ಈಜಿಪ್ಟ್‌ನ ಜಾಮಿಯಾ ಅಲ್-ಅಲ್ಜರ್‌ನಿಂದ ದಾವಾಹ್ ಇಸ್ಲಾಮಿಯಾವನ್ನು ಅಧ್ಯಯನ ಮಾಡಿದ ಅಝಾರಿ ಜಾಗತಿಕ ಮಟ್ಟದಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ ಎಂದು ಟೈಮ್ಸ್ ನೌ ವರದಿ ತಿಳಿಸಿದೆ. ಅಝ್ಹರಿ ಅವರ ವಿವಾದಾತ್ಮಕ ಭಾಷಣಗಳಿಗೆ ಹೆಸರುವಾಸಿಯಾಗಿದ್ದು,ಆಗಾಗ್ಗೆ ದ್ವೇಷದ ಭಾಷಣ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪ ಇವರ ಮೇಲಿದೆ.

ಅಂದಹಾಗೆ ಅಝ್ಹರಿ ಬಂಧನಕ್ಕೊಳಗಾಗಿದ್ದು ಇದೇ ಮೊದಲೇನೂ ಅಲ್ಲ. 2018 ರಲ್ಲಿ ಕರ್ನಾಟಕದಲ್ಲಿ ಭಾಷಣ ಮಾಡುವಾಗ ಹಿಂದೂಗಳ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳಿಗಾಗಿ ಅವರನ್ನು ಬಂಧಿಸಲಾಯಿತು. ವರದಿಗಳ ಪ್ರಕಾರ, ಕೆಲವು ದಿನಗಳ ನಂತರ ಅಝಾರಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು, ಆದಾಗ್ಯೂ, ಅವರ ವಿರುದ್ಧದ ಆರೋಪಗಳು ಇನ್ನೂ ಬಾಕಿ ಉಳಿದಿವೆ.

ಇದನ್ನೂ ಓದಿ:ನಾವು ನಿಮ್ಮೊಂದಿಗೇ ಇದ್ದೆವು ಆದರೆ ನೀವೇ ನಮ್ಮನ್ನು ದೂರ ತಳ್ಳಿದ್ದೀರಿ: ಬಿಜೆಪಿ ಬಗ್ಗೆ ಉದ್ಧವ್ ಮಾತು

ಜುನಾಗಢ್ ಪೊಲೀಸರು ಇಬ್ಬರನ್ನು ಬಂಧಿಸಿದ ವೈರಲ್ ಭಾಷಣದ ವಿಡಿಯೊ ಜನವರಿ 31 ರಂದು ಜುನಾಗಢ್‌ನ ಬಿ ಡಿವಿಷನ್ ಪೊಲೀಸ್ ಠಾಣೆ ಬಳಿಯ ತೆರೆದ ಮೈದಾನದಲ್ಲಿ ನಡೆದ ಕಾರ್ಯಕ್ರಮದಿಂದ ಬಂದಿದೆ. ವಾಸ್ತವವಾಗಿ, ಭಾನುವಾರದಂದು ಇಸ್ಲಾಮಿಕ್ ಬೋಧಕನ ಬಂಧನದ ನಂತರ, ನೂರಾರು ಬೆಂಬಲಿಗರು ಘಾಟ್‌ಕೋಪರ್ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದು ಗುಂಪನ್ನು ನಿಭಾಯಿಸಲು ಪೊಲೀಸರು ಲಘು ಲಾಠಿಚಾರ್ಜ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ