AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್​ನಲ್ಲಿ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ; ರಂಗೇರಿತು ಮೊದಲ ದಿನ

69ನೇ ಫಿಲ್ಮ್​ ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಪಾರಶಕ್ತಿ ಖುರಾನ ಮತ್ತು ಕರೀಷ್ಮಾ ತನ್ನಾ ಅವರು ನಿರೂಪಣೆ ಮಾಡಿದ್ದಾರೆ. ಪ್ರಶಸ್ತಿ ಪ್ರದಾನದ ಜೊತೆ ಫ್ಯಾಷನ್​ ಶೋ, ಮನರಂಜನಾ ಕಾರ್ಯಕ್ರ ಕೂಡ ಜರುಗಿವೆ. ಫಿಲ್ಮ್​ ಫೇರ್​ ಜೊತೆ ಡಿಸೈನರ್​ ಶಾಂತನು-ನಿಖಿಲ್​ ಮೆಹ್ತಾ ಅವರ ಸಹಯೋಗದೊಂದಿಗೆ ಈ ಫ್ಯಾಷನ್​ ಶೋ ನಡೆದಿದೆ.

ಗುಜರಾತ್​ನಲ್ಲಿ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ; ರಂಗೇರಿತು ಮೊದಲ ದಿನ
69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ
ಮದನ್​ ಕುಮಾರ್​
|

Updated on:Jan 28, 2024 | 10:40 AM

Share

‘ಗುಜರಾತ್​​ ಪ್ರವಾಸೋದ್ಯಮ ಇಲಾಖೆ’ (Gujarat Tourism) ಸಹಯೋಗದೊಂದಿಗೆ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ  (69th Filmfare Awards) ಕಾರ್ಯಕ್ರಮ ನಡೆಯುತ್ತಿದೆ. ಗುಜರಾತ್​ನ ಗಾಂಧಿನಗರದ ಮಹಾತ್ಮ ಮಂದಿರ್​ ಕನ್ವೆನ್ಷನ್​ ಮತ್ತು ಎಕ್ಸಿಬ್ಯುಷನ್​ ಸೆಂಟರ್​ನಲ್ಲಿ ಎರಡು ದಿನಗಳ ಕಾಲ ಈ ಅದ್ದೂರಿ ಸಮಾರಂಭ ನಡೆಯುತ್ತಿದೆ. ಮೊದಲ ದಿನವಾದ ಜನವರಿ 27ರಂದು ಬಾಲಿವುಡ್​ (Bollywood) ಸಿನಿಮಾಗಳ ಹಲವು ತಾಂತ್ರಿಕ ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ. ಕಲರ್​ಫುಲ್​ ವೇದಿಕೆ ಮೇಲೆ ಫ್ಯಾಷನ್​ ಶೋ ಕೂಡ ನಡೆದಿದೆ. ಬಾಲಿವುಡ್​ ನಟಿ ಜಾನ್ವಿ ಕಪೂರ್​ ಜೊತೆ ಅನೇಕ ಮಾಡೆಲ್​ಗಳು ರ‍್ಯಾಂಪ್​ ವಾಕ್​ ಮಾಡಿದ್ದಾರೆ. ಫಿಲ್ಮ್​ಫೇರ್​ ಜೊತೆ ಡಿಸೈನರ್​ ಶಾಂತನು-ನಿಖಿಲ್​ ಮೆಹ್ತಾ ಅವರ ಸಹಯೋಗದೊಂದಿಗೆ ಈ ಫ್ಯಾಷನ್​ ಶೋ ನಡೆದಿದೆ.

ವಿಕ್ಕಿ ಕೌಶಲ್​ ನಟನೆಯ ‘ಸ್ಯಾಮ್​ ಬಹದ್ದೂರ್​’ ಚಿತ್ರವು ಮೂರು ತಾಂತ್ರಿಕ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ವಸ್ತ್ರ ವಿನ್ಯಾಸ, ಅತ್ಯುತ್ತಮ ಸೌಂಡ್​ ಡಿಸೈನ್​ ಹಾಗೂ ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್​ ವಿಭಾಗದಲ್ಲಿ ಈ ಸಿನಿಮಾಗೆ ಫಿಲ್ಮ್​ಫೇರ್ ಪ್ರಶಸ್ತಿ ಸಿಕ್ಕಿದೆ. 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಪಾರಶಕ್ತಿ ಖುರಾನ ಮತ್ತು ಕರೀಷ್ಮಾ ತನ್ನಾ ಅವರು ನಿರೂಪಣೆ ಮಾಡಿದ್ದಾರೆ.

‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದ ‘ವಾಟ್​ ಜುಮ್ಕಾ..’ ಹಾಡಿಗಾಗಿ ಗಣೇಶ್​ ಆಚಾರ್ಯ ಅವರು ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ವೇದಿಕೆಯಲ್ಲಿ ಡ್ಯಾನ್ಸ್​ ಮಾಡಿ ಅವರು ಎಲ್ಲರನ್ನೂ ರಂಜಿಸಿದ್ದಾರೆ. ವಿಧು ವಿನೋದ್​ ಚೋಪ್ರಾ ನಿರ್ದೇಶನದ ‘12th ಫೇಲ್​’ ಸಿನಿಮಾಗೆ ಅತ್ಯುತ್ತಮ ಸಂಕಲನ ಪ್ರಶಸ್ತಿ ಸಿಕ್ಕಿದೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾಗೆ ಅತ್ಯುತ್ತಮ ಸಾಹಸ ನಿರ್ದೇಶನ ಮತ್ತು ಅತ್ಯುತ್ತಮ ಸ್ಪೆಷಲ್​ ಎಫೆಕ್ಟ್​ ವಿಭಾಗದಲ್ಲಿ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿದೆ.

ಇದನ್ನೂ ಓದಿ: 96th Oscars Shortlist: ಆಸ್ಕರ್​ ರೇಸ್​ನಿಂದ ಹೊರಬಿದ್ದ ಭಾರತದ ‘2018’ ಸಿನಿಮಾ; ಮತ್ತೆ ನಿರಾಸೆ

ಸಂದೀಪ್​ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್​’ ಸಿನಿಮಾಗೆ ಅತ್ಯುತ್ತಮ ಸೌಂಡ್​ ಹಿನ್ನೆಲೆ ಸಂಗೀತ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಸೌಂಡ್​ ಡಿಸೈನ್​ ವಿಭಾಗದಲ್ಲಿ ‘ಸ್ಯಾಮ್​ ಬಹದ್ದೂರ್​’ ಚಿತ್ರದ ಜೊತೆ ‘ಅನಿಮಲ್​’ ಕೂಡ ಪ್ರಶಸ್ತಿ ಹಂಚಿಕೊಂಡಿದೆ. ‘ತ್ರಿ ಆಫ್​ ಅಸ್​’ ಸಿನಿಮಾದ ಛಾಯಾಗ್ರಹಣಕ್ಕೆ ಅವಿನಾಶ್​ ಅರುಣ್​ ಧಾವರೆ ಅವರು ಪ್ರಶಸ್ತಿ ಪಡೆದಿದ್ದಾರೆ. ಇನ್ನುಳಿದ ಮುಖ್ಯ ವಿಭಾಗಗಳ ಪ್ರಶಸ್ತಿಗಳನ್ನು ಇಂದು (ಜನವರಿ 28) ನೀಡಲಾಗುತ್ತದೆ.

ಇದನ್ನೂ ಓದಿ: ಫಿಲ್ಮ್​ಫೇರ್​ನಲ್ಲಿ ಮೈಚಳಿ ಬಿಟ್ಟು ಕುಣಿದ ಜಾಕ್ವೆಲಿನ್

‘ಫಿಲ್ಮ್​ಫೇರ್​ ಜೊತೆ ‘ಶಾಂತನು ಮತ್ತು ನಿಖಿಲ್​’ ಸಹಯೋಗ ಆಗಿರುವುದು ಹೊಸದೇನೂ ಅಲ್ಲ. ಮಿಸ್​ ಇಂಡಿಯಾ ಸೇರಿ ಹಲವು ಕಾರ್ಯಕ್ರಮ ನಮ್ಮ ಸಹಯೋಗದಲ್ಲಿ ಆಗಿತ್ತು. ಗುಜರಾತ್​ನಲ್ಲಿ ನಡೆಯುತ್ತಿರುವ 69ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿರುವುದು ಗೌರವದ ಸಂಗತಿ’ ಎಂದು ಫ್ಯಾಷನ್​ ಡಿಸೈನರ್​ ನಿಖಿಲ್​ ಮೆಹ್ರಾ ಹೇಳಿದ್ದಾರೆ. ‘ಗುಜರಾತ್​ನಲ್ಲಿನ ಸಿನಿಮಾ ಪ್ರೇಮಿಗಳಿಗೆ ಇದು ಮಹತ್ವದ ದಿನ. ಈ ಕಾರ್ಯಕ್ರಮ ಗುಜರಾತ್​ನಲ್ಲಿ ನಡೆಯುತ್ತಿರುವುದರ ಸಂಪೂರ್ಣ ಕೀರ್ತಿ ಇಲ್ಲಿನ ಪ್ರವಾಸೋದ್ಯಮ ಇಲಾಖೆಗೆ ಸಲ್ಲುತ್ತದೆ. ಗುಜರಾತಿ ಸಿನಿಮಾಗಳಿಗಾಗಿಯೇ ವಿಶೇಷ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ದಿನಗಳು ಕೂಡ ದೂರ ಇಲ್ಲ’ ಎಂದು ಗಾಯಕ ಪಾರ್ಥಿವ್​ ಗೋಹಿಲ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:24 am, Sun, 28 January 24

Follow Us
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ