AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ರಿವರ್ಣ ಧ್ವಜ ಮತ್ತು ಆಜಾದಿಸ್ಯಾಟ್​​​​ ಉಪಗ್ರಹ ಹೊತ್ತು ಆಗಸ್ಟ್ 7ರಂದು ಬಾಹ್ಯಾಕಾಶಕ್ಕೆ ಹಾರಲಿದೆ ಇಸ್ರೋದ ಎಸ್ಎಸ್ಎಲ್​​ವಿ

ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಎಸ್ಎಸ್ಎಲ್​​ವಿ ಆಜಾದಿಸ್ಯಾಟ್ ಎಂಬ ಉಪಗ್ರಹವನ್ನೂ ಹೊತ್ತೊಯ್ಯಲಿದೆ. ದೇಶದಾದ್ಯಂತವಿರುವ 75 ಗ್ರಾಮೀಣ ಸರ್ಕಾರಿ ಶಾಲೆಯಲ್ಲಿನ 750 ವಿದ್ಯಾರ್ಥಿನಿಯರು ನಿರ್ಮಿಸಿದ 75 ಪೇಲೋಡ್​​ನ್ನು ಆಜಾದಿ ಸ್ಯಾಟ್ ಹೊಂದಿದೆ.

ತ್ರಿವರ್ಣ ಧ್ವಜ ಮತ್ತು ಆಜಾದಿಸ್ಯಾಟ್​​​​ ಉಪಗ್ರಹ ಹೊತ್ತು ಆಗಸ್ಟ್ 7ರಂದು ಬಾಹ್ಯಾಕಾಶಕ್ಕೆ ಹಾರಲಿದೆ ಇಸ್ರೋದ ಎಸ್ಎಸ್ಎಲ್​​ವಿ
ಎಸ್ಎಸ್ಎಲ್​​ವಿ Image Credit source: ISRO
TV9 Web
| Edited By: |

Updated on:Aug 05, 2022 | 2:20 PM

Share

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹೊತ್ತಲ್ಲಿ ಬಾಹ್ಯಾಕಾಶದಲ್ಲಿಯೂ ನಾವು ತಿರಂಗ ಹಾರಿಸಲಿದ್ದೇವೆ ಎಂದು 2018 ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದರು. ಬಾಹ್ಯಾಕಾಶದಲ್ಲಿಯೂ ರಾಷ್ಟ್ರಧ್ವಜ ಹಾರಿಸುವ ಆ ಕನಸು ನನಸಾಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಗಸ್ಟ್ 7ರಂದು ಅತ್ಯಂತ ಚಿಕ್ಕ ರಾಕೆಟ್,  ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (Small Satellite Launch Vehicle (SSLV) ಉಡ್ಡಯನ ಮಾಡಲಿದ್ದು ಇದು ಬಾಹ್ಯಾಕಾಶಕ್ಕೆ ರಾಷ್ಟ್ರಧ್ವಜವನ್ನು ಕೊಂಡೊಯ್ಯಲಿದೆ. ಆದಾಗ್ಯೂ, ರಾಷ್ಟ್ರಧ್ವಜವನ್ನು ಹೊತ್ತ ಗಗನ್​​ಯಾನ್​​ನಲ್ಲಿ ಮಾನವಸಹಿತ ಬಾಹ್ಯಾಕಾಶ ಮಿಷನ್ ಅನ್ನು ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದರೂ, ಆ ಯೋಜನೆ ವಿಳಂಬವಾಗಿದೆ. ಇಸ್ರೋದ ಎಸ್ಎಸ್ಎಲ್​​ವಿ ಸ್ವ ನಿರ್ಮಿತ ಉಪಗ್ರಹ ಮತ್ತು 500 ಕೆಜಿಗಿಂತ ಕಡಿಮೆ ತೂಕದಪ ಪೇಲೋಡ್​​ನ್ನು ಭೂಮಿಯ ಕೆಳಗಿನ ಕಕ್ಷೆಗೆ ಕೊಂಡೊಯ್ಯುವ ಸಾಧನೆ ಮಾಡುತ್ತಿದೆ. ಅಧಿಕೃತ ಉಡಾವಣೆ ಆಗಸ್ಟ್ 7 ರಂದು ಬೆಳಿಗ್ಗೆ 9:18 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ. ಆಜಾದಿ ಕಾ ಅಮೃತ್ ಮಹೋತ್ಸವದ (Azaadi Ka Amrit Mahotsav) ಸಂದರ್ಭದಲ್ಲಿ ಎಸ್ಎಸ್ಎಲ್​​ವಿ ಆಜಾದಿಸ್ಯಾಟ್ (AzaadiSAT) ಎಂಬ ಉಪಗ್ರಹವನ್ನೂ ಹೊತ್ತೊಯ್ಯಲಿದೆ. ದೇಶದಾದ್ಯಂತವಿರುವ 75 ಗ್ರಾಮೀಣ ಸರ್ಕಾರಿ ಶಾಲೆಯಲ್ಲಿನ 750 ವಿದ್ಯಾರ್ಥಿನಿಯರು ನಿರ್ಮಿಸಿದ 75 ಪೇಲೋಡ್​​ನ್ನು ಆಜಾದಿ ಸ್ಯಾಟ್ ಹೊಂದಿದೆ. ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಮತ್ತು ಯುವತಿಯರಿಗೆ ಬಾಹ್ಯಾಕಾಶ ಸಂಶೋಧನೆಯನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಲು ಅವಕಾಶಗಳನ್ನು ಸೃಷ್ಟಿಸಲು ಈ ಯೋಜನೆಯನ್ನು ವಿಶೇಷವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ವರ್ಷಾಚರಣೆಗಾಗಿ ಸಿದ್ಧಪಡಿಸಲಾಗಿತ್ತು.

ಎಸ್ಎಸ್ಎಲ್ ಅಂದಾಜು 120 ಟನ್ ತೂಕ ಹೊಂದಿದ್ದು, ಸುಮಾರು 500 ಕೆಜಿಯಷ್ಟು ತೂಕವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಬಲ್ಲದು. 34 ಮೀಟರ್ ಎತ್ತರವಿರುವ ಈ ಲಾಂಚರ್ ಇಸ್ರೋದ ಅತ್ಯುತ್ತಮ ಮತ್ತು ಕಡಿಮೆ ವೆಚ್ಚದ ಲಾಂಚರ್ ಎಂದು ಪರಿಗಣಿಸಲಾಗಿದೆ.

ಈ ಹೊಸ ಉಪಗ್ರಹವು ಗೇಮ್ ಚೇಂಜರ್ ಎಂದು ಹೇಳಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಇದು ಸಣ್ಣ ಉಪಗ್ರಹ ಉಡ್ಡಯನ ಮಾರುಕಟ್ಟೆಗೆ ಪ್ರವೇಶಿಸುವ ಭಾರತದ ಕನಸನ್ನು ನನಸಾಗಿಸುತ್ತದೆ.

ಅತ್ಯಂತ ಕಡಿಮೆ ಸಮಯದಲ್ಲಿ ಬೇಡಿಕೆಯ ಮೇಲೆ ಉಡಾವಣೆ ಮಾಡಬಹುದಾದ, ಕಡಿಮೆ ವೆಚ್ಚದ ರಾಕೆಟ್ ಅನ್ನು ದೊಡ್ಡ ಪ್ರಮಾಣದ ಉತ್ಪಾದನೆಗೆ ವಿನ್ಯಾಸಗೊಳಿಸಲಾಗಿದೆ. ಅದರ ಯಶಸ್ವಿ ಉಡಾವಣೆಯೊಂದಿಗೆ, ಎಸ್ಎಸ್ಎಲ್​​ವಿ ಬಾಹ್ಯಾಕಾಶ ವಲಯ ಮತ್ತು ಇತರ ಖಾಸಗಿ ಭಾರತೀಯ ಕಂಪನಿಗಳ ನಡುವೆ ವಿಶೇಷವಾಗಿ ಸಣ್ಣ ಉಪಗ್ರಹಗಳಿಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಸಹಯೋಗವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಸ್ಪೇಸ್ ಕಿಡ್ಸ್ ಇಂಡಿಯಾ ಎಂಬ ವಿದ್ಯಾರ್ಥಿಗಳ ತಂಡವು ಈ ಪೇಲೋಡ್ ತಯಾರಿಸಿದೆ. ಈ ಪೇಲೋಡ್ ಯುಎಚ್ಎಫ್- ವಿಎಚ್ಎಫ್ ಟ್ರಾನ್ಸ್ ಪೋಂಡರ್ ಹೊಂದಿದ್ದು ಇವು ಹಾಮ್ ರೇಡಿಯೊ ಫ್ರೀಕ್ವೆನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಹಾಮ್ ರೇಡಿಯೊ ಫ್ರೀಕ್ವೆನ್ಸಿ ಅಮೆಚೂರ್ ಆಡಿಯೊ ಆಪರೇಟರ್​​ಗಳಿಗೆ ದನಿ ಮತ್ತು ಡೇಟಾ ವಿನಿಮಯ ಮಾಡಲು ಸಹಾಯ ಮಾಡುತ್ತದೆ. ಘನರೂಪದಲ್ಲಿರುವ ಪಿಐಎನ್ ಡಯೋಡ್ ಬೇಸ್ ರೇಡಿಯೇಷವ್ ಕೌಂಟರ್ ಕಕ್ಷೆಯ ಐಯೋನೈಸಿಂಗ್ ರೇಡಿಯೇಷನ್ ಅಳೆಯುತ್ತದೆ. ಇದರಲ್ಲಿ ದೂರ ವ್ಯಾಪ್ತಿಯ ಟ್ರಾನ್ಸ್ ಪೋಂಡರ್ ಮತ್ತು ಸೆಲ್ಫಿಕ್ಯಾಮೆರಾಇದೆ ಎಂದು ಇಸ್ರೋ ಹೇಳಿದೆ. ಸ್ಪೇಸ್ ಕಿಡ್ಸ್ ಇಂಡಿಯಾ ಅಭಿವೃದ್ಧಿ ಪಡಿಸಿದ ಗ್ರೌಂಡ್ ಸ್ಟೇಷನ್ ಸಿಸ್ಟಂ ಇದ್ದು ಇದು ಉಪಗ್ರಹದಿಂದ ಡೇಟಾವನ್ನು ಪಡೆಯಲು ಸಹಕರಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Fri, 5 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ