ತೀವ್ರ ಚಳಿಗೆ ಮಂಜುಗಡ್ಡೆಯಾದ ದಾಲ್ ಕೆರೆ

ಜಮ್ಮು-ಕಾಶ್ಮೀರದ ಶ್ರೀನಗರದ ಜನತೆ ಚಳಿಗೆ ತತ್ತರಿಸಿ ಹೋಗಿದ್ದಾರೆ. ತೀವ್ರ ಚಳಿಗೆ ಜಮ್ಮು-ಕಾಶ್ಮೀರದ ‘ದಾಲ್ ಲೇಕ್’ ಸಂಪೂರ್ಣ ಹೆಪ್ಪುಗಟ್ಟಿ ಹೋಗಿದೆ. ಇಡೀ ಕೆರೆ ಮಂಜು ಗಡ್ಡೆಯಂತೆ ಆಗಿದ್ದು, ಕಣಿವೆ ರಾಜ್ಯದಲ್ಲಿ ಸದ್ಯ ಎದುರಾಗಿರೋ ಪರಿಸ್ಥಿತಿಯನ್ನ ಬಿಂಬಿಸುತ್ತಿದೆ. 4 ಅಂತಸ್ತಿನ ಕಟ್ಟಡ ನೆಲಸಮ 4 ಅಂತಸ್ತಿನ ಕಟ್ಟಡವೊಂದನ್ನು ಇಂಧೋರ್​ ಮಹಾನಗರ ಪಾಲಿಕೆ ನೆಲಸಮಗೊಳಿಸಿದೆ. ನಿಗದಿತ ಎತ್ತರಕ್ಕಿಂತ ಹೆಚ್ಚು ಮಹಡಿ ಕಟ್ಟಿದ ಕಾರಣ ಇಂಧೋರ್ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇಂದೋರ್​ನ ಸಂತ ನಗರದಲ್ಲಿ ಈ ಕಟ್ಟಡವಿತ್ತು. ಪಾಲಿಕೆ ಕ್ರಮಕ್ಕೆ […]

ತೀವ್ರ ಚಳಿಗೆ ಮಂಜುಗಡ್ಡೆಯಾದ ದಾಲ್ ಕೆರೆ
ಸಾಧು ಶ್ರೀನಾಥ್​

Updated on: Dec 30, 2019 | 7:58 AM

ಜಮ್ಮು-ಕಾಶ್ಮೀರದ ಶ್ರೀನಗರದ ಜನತೆ ಚಳಿಗೆ ತತ್ತರಿಸಿ ಹೋಗಿದ್ದಾರೆ. ತೀವ್ರ ಚಳಿಗೆ ಜಮ್ಮು-ಕಾಶ್ಮೀರದ ‘ದಾಲ್ ಲೇಕ್’ ಸಂಪೂರ್ಣ ಹೆಪ್ಪುಗಟ್ಟಿ ಹೋಗಿದೆ. ಇಡೀ ಕೆರೆ ಮಂಜು ಗಡ್ಡೆಯಂತೆ ಆಗಿದ್ದು, ಕಣಿವೆ ರಾಜ್ಯದಲ್ಲಿ ಸದ್ಯ ಎದುರಾಗಿರೋ ಪರಿಸ್ಥಿತಿಯನ್ನ ಬಿಂಬಿಸುತ್ತಿದೆ.

4 ಅಂತಸ್ತಿನ ಕಟ್ಟಡ ನೆಲಸಮ
4 ಅಂತಸ್ತಿನ ಕಟ್ಟಡವೊಂದನ್ನು ಇಂಧೋರ್​ ಮಹಾನಗರ ಪಾಲಿಕೆ ನೆಲಸಮಗೊಳಿಸಿದೆ. ನಿಗದಿತ ಎತ್ತರಕ್ಕಿಂತ ಹೆಚ್ಚು ಮಹಡಿ ಕಟ್ಟಿದ ಕಾರಣ ಇಂಧೋರ್ ಮಹಾನಗರ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇಂದೋರ್​ನ ಸಂತ ನಗರದಲ್ಲಿ ಈ ಕಟ್ಟಡವಿತ್ತು. ಪಾಲಿಕೆ ಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಡುಗುತ್ತಿದೆ ‘ಉತ್ತರ ಭಾರತ’..!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಚಳಿ ದಾಖಲಾಗಿದ್ದು, ಮೈಕೊರೆಯುವ ಚಳಿಯಿಂದ ಜನ ತತ್ತರಿಸಿದ್ದಾರೆ. ನಿನ್ನೆ ಬೆಳಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 3.4ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಿದೆ. ದಟ್ಟ ಮಂಜಿನಿಂದಾಗಿ ರಸ್ತೆಗಳಲ್ಲಿ ಕತ್ತಲು ಆವರಿಸಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಬೀದಿ ನಾಯಿಗಳ ಕಳ್ಳಸಾಗಣೆ
ತ್ರಿಪುರ-ಮಿಜೋರಾಂ ಗಡಿಯಲ್ಲಿ ಬೀದಿ ನಾಯಿಗಳ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 12 ನಾಯಿಗಳನ್ನು ಮಿಜೋರಾಂಗೆ ಕಳ್ಳಸಾಗಣೆ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಮಿಜೋರಾಂನಲ್ಲಿ ನಾಯಿ ಮಾಂಸಕ್ಕೆ ಭಾರಿ ಬೇಡಿಕೆಯಿದ್ದು, ಇದೇ ಕಾರಣಕ್ಕೆ ಕಳ್ಳಸಾಗಾಣೆ ಮಾಡಲು ಯತ್ನಿಸಲಾಗಿದೆ.

Loading...
Unable to load recommendations.
Follow Us