AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿ ಹಾಗೂ ಎರಡು ವರ್ಷದ ಮಗು ನಾಲ್ಕು ದಿನಗಳಿಂದ ನಾಪತ್ತೆ, ಮೂರು ದಿನಗಳ ಬಳಿಕ ವಾಪಸಾದ ನಾಯಿ

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಟುನಿ ಮಂಡಲದ ಸಿಎಚ್ ಅಗ್ರಹಾರದ ತಾಳೆ ಎಣ್ಣೆ ತೋಟದಲ್ಲಿ ಕಾವಲುಗಾರರಾಗಿರುವ ಸುಂಕರ ಭವಾನಿ ಮತ್ತು ಗಣೇಶ್ ದಂಪತಿಯ ಎರಡು ವರ್ಷದ ಮುದ್ದಾದ ಮಗಳು ಜಾಹ್ನವಿ ಕಾಣೆಯಾಗಿ ನಾಲ್ಕು ದಿನಗಳಾಗಿವೆ. ಮಗಳ ಮುಖ ನೋಡಲು ತಾಯಿ ಕಂಗಾಲಾಗಿದ್ದರೆ, ಮತ್ತೊಂದೆಡೆ ಇಡೀ ಆಡಳಿತ ಯಂತ್ರವೇ ಆಕೆಯನ್ನು ಪತ್ತೆಹಚ್ಚಲು ಬೆಟ್ಟ-ಗುಡ್ಡಗಳನ್ನು ಜಾಲಾಡುತ್ತಿದೆ. ಸದ್ಯಕ್ಕೆ ಗಾಢ ಕತ್ತಲೆಯಂತಿರುವ ಈ ಕಥೆಯಲ್ಲಿ ಈಗ ಸಾಕು ನಾಯಿ(Dog)ಯ ಅಚ್ಚರಿಯ ನಡೆ ಮತ್ತು ಅಧಿಕಾರಿಗಳ ತೀವ್ರ ಶೋಧ ಕಾರ್ಯವು ಮಗು ಜೀವಂತವಾಗಿ ಮರಳಿ ಬರಲಿದ್ದಾಳೆ ಎಂಬ ದೊಡ್ಡ ಭರವಸೆಯ ಕಿರಣವನ್ನು ಮೂಡಿಸಿದೆ.

ನಾಯಿ ಹಾಗೂ ಎರಡು ವರ್ಷದ ಮಗು ನಾಲ್ಕು ದಿನಗಳಿಂದ ನಾಪತ್ತೆ, ಮೂರು ದಿನಗಳ ಬಳಿಕ ವಾಪಸಾದ ನಾಯಿ
ಬಾಲಕಿImage Credit source: Tv9 Telugu
ನಯನಾ ರಾಜೀವ್
|

Updated on:Jun 11, 2026 | 2:41 PM

Share

ಕಾಕಿನಾಡ, ಜೂನ್ 11: ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಟುನಿ ಮಂಡಲದ ಸಿಎಚ್ ಅಗ್ರಹಾರದ ತಾಳೆ ಎಣ್ಣೆ ತೋಟದಲ್ಲಿ ಕಾವಲುಗಾರರಾಗಿರುವ ಸುಂಕರ ಭವಾನಿ ಮತ್ತು ಗಣೇಶ್ ದಂಪತಿಯ ಎರಡು ವರ್ಷದ ಮುದ್ದಾದ ಮಗಳು ಜಾಹ್ನವಿ ಕಾಣೆಯಾಗಿ ನಾಲ್ಕು ದಿನಗಳಾಗಿವೆ. ಮಗಳ ಮುಖ ಕಾಣದೆ ತಾಯಿ ಕಂಗಾಲಾಗಿದ್ದರೆ, ಮತ್ತೊಂದೆಡೆ  ಪೊಲೀಸರು, ಜಿಲ್ಲಾಡಳಿತವೇ ಆಕೆಯನ್ನು ಪತ್ತೆಹಚ್ಚಲು ಬೆಟ್ಟ-ಗುಡ್ಡಗಳನ್ನು ಜಾಲಾಡುತ್ತಿದೆ. ಸದ್ಯಕ್ಕೆ ಗಾಢ ಕತ್ತಲೆಯಂತಿರುವ ಈ ಕಥೆಯಲ್ಲಿ ಈಗ ಸಾಕು ನಾಯಿ(Dog)ಯ ಅಚ್ಚರಿಯ ನಡೆ ಮತ್ತು ಅಧಿಕಾರಿಗಳ ತೀವ್ರ ಶೋಧ ಕಾರ್ಯವು ಮಗು ಜೀವಂತವಾಗಿ ಮರಳಿ ಬರಲಿದ್ದಾಳೆ ಎಂಬ ದೊಡ್ಡ ಭರವಸೆಯ ಕಿರಣವನ್ನು ಮೂಡಿಸಿದೆ.

ಅಚ್ಚರಿ ತಂದ ಸಾಕು ನಾಯಿಯ ಆಗಮನ ಮತ್ತು ಮಹತ್ವದ ಸುಳಿವು ಜಾಹ್ನವಿ ನಾಪತ್ತೆಯಾದ ದಿನದಿಂದ ಆಕೆಯ ಬೆನ್ನಿಗೇ ಹೋಗಿದ್ದ ಸಾಕು ನಾಯಿ ಕೂಡ ನಾಪತ್ತೆಯಾಗಿತ್ತು. ಆದರೆ, ಮೂರು ದಿನಗಳ ನಂತರ ಹಠಾತ್ ಆಗಿ ಮನೆಗೆ ಮರಳಿದ ನಾಯಿ, ಮಗು ಎಲ್ಲಿದ್ದಾಳೆ ಎಂಬುದಕ್ಕೆ ಪ್ರಕೃತಿಯೇ ನೀಡಿದಂತೆ ಒಂದು ರೋಚಕ ಸುಳಿವನ್ನು ಬಿಟ್ಟುಕೊಟ್ಟಿದೆ.

ಮನೆಯ ಬಳಿ ಬಂದ ನಾಯಿ, ಮಗುವಿನ ತಾಯಿ ಭವಾನಿಯ ಬಳಿ ಬಂದು ಆಕೆಯ ಸೀರೆಯ ಸೆರಗು ಎಳೆದು ಮತ್ತೆ ಗುಡ್ಡಗಾಡು ಪ್ರದೇಶದತ್ತ ಓಡಿದೆ. ನಾಯಿಯ ಈ ವಿಚಿತ್ರ ವರ್ತನೆಯು “ಮಗು ಗುಡ್ಡದ ಮೇಲಿದ್ದಾಳೆ, ನನ್ನ ಜೊತೆ ಬನ್ನಿ ಎಂದು ಕರೆಯುತ್ತಿರುವ ಸಂಕೇತದಂತಿದೆ. ನಾಯಿ ತಡವಾಗಿ ಬಂದಿರುವುದು ಮತ್ತು ಮಗುವಿನ ಬಟ್ಟೆಯನ್ನು ಎಳೆಯುತ್ತಿರುವುದು ನೋಡಿದರೆ, ಮಗು ಸುರಕ್ಷಿತವಾಗಿದ್ದಾಳೆ ಮತ್ತು ನಾಯಿಯೇ ಇಷ್ಟು ದಿನ ಆಕೆಗೆ ಕಾವಲಾಗಿತ್ತು ಎಂಬ ಆಶಾವಾದ ಪೋಷಕರಲ್ಲಿ ಚಿಗುರೊಡೆದಿದೆ.

ಮತ್ತಷ್ಟು ಓದಿ: Video: 30 ಸೆಕೆಂಡುಗಳಲ್ಲಿ ಹಲವರಿಗೆ ಕಚ್ಚಿದ ಬೀದಿ ನಾಯಿ

ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ: 200ಕ್ಕೂ ಹೆಚ್ಚು ಸಿಬ್ಬಂದಿ ಕಣಕ್ಕೆ ಪುಟ್ಟ ಕಂದಮ್ಮನನ್ನು ಹೇಗಾದರೂ ಮಾಡಿ ತಾಯಿಯ ಮಡಿಲು ಸೇರಿಸಲೇಬೇಕು ಎಂದು ಪೆಡ್ಢಾಪುರಂ ವಿಭಾಗದ 200 ಕ್ಕೂ ಹೆಚ್ಚು ಪೊಲೀಸರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಅರಣ್ಯದ ಹಾದಿಗಳು ಮತ್ತು ದಟ್ಟವಾದ ತಾಳೆ ತೋಟಗಳಲ್ಲಿ ಆಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಕಣ್ಗಾವಲು ಇಡಲಾಗಿದೆ. ಇತ್ತೀಚೆಗೆ ಗುಡ್ಡಗಾಡು ಪ್ರದೇಶದಲ್ಲಿ ಮಗುವಿನ ಅಳುವ ಶಬ್ದ ಕೇಳಿಸಿದೆ ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದ್ದು, ಶೋಧ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಮಗುವಿನ ಪತ್ತೆಗೆ ಸಾರ್ವಜನಿಕರ ಸಹಕಾರವನ್ನೂ ಕೋರಿರುವ ಪೊಲೀಸರು, ಜಾಹ್ನವಿ ಬಗ್ಗೆ ನಿಖರ ಮಾಹಿತಿ ನೀಡುವವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಮಾಹಿತಿ ನೀಡಿದವರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ನಿರ್ಧಾರದಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರೂ ಸಹ ಈಗ ಜಾಗೃತರಾಗಿದ್ದು, ಹುಡುಕಾಟಕ್ಕೆ ದೊಡ್ಡ ಬಲ ಬಂದಿದೆ.

ನಾಯಿಯ ಚಲನವಲನಗಳ ಮೇಲೆ ತಜ್ಞರ ನಿಗಾ ತುನಿ ಪುರಸಭೆ ಆಯುಕ್ತ ವೆಂಕಟ್ ರಾವ್ ನೇತೃತ್ವದಲ್ಲಿ ಸಾಕು ನಾಯಿಯನ್ನು ಸದ್ಯ ಸುರಕ್ಷಿತವಾಗಿ ಸೆರೆಹಿಡಿಯಲಾಗಿದ್ದು, ಶ್ವಾನದಳದ ತಜ್ಞರು ಅದರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ನಾಯಿ ತೋರಿಸುವ ದಾರಿಯಲ್ಲೇ ಸಾಗಲು ಪೊಲೀಸರು ಬ್ಲೂಪ್ರಿಂಟ್ ಸಿದ್ಧಪಡಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:19 pm, Thu, 11 June 26

Follow Us
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
28 ಕೋಟಿ ರೂ. ಪರಿಹಾರದ ಕ್ರೆಡಿಟ್ ವಾರ್
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ
ಭಾರತಕ್ಕೆ ಜಪಾನ್ ಪ್ರಧಾನಿ ಭೇಟಿ