ಕಪಾಳಮೋಕ್ಷ ಮಾಡಿಲ್ಲ: ಕಂಗನಾ ರಣಾವತ್ ಪ್ರಕರಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಬೆಂಬಲಕ್ಕೆ ನಿಂತ ರಾಕೇಶ್ ಟಿಕಾಯತ್

|

Updated on: Jun 07, 2024 | 8:42 PM

ಸಾರ್ವಜನಿಕ ವ್ಯಕ್ತಿಗಳಿಂದ ಗೌರವಾನ್ವಿತ ಭಾಷೆ ಮತ್ತು ನಡವಳಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಟಿಕಾಯತ್, “ಯಾವುದೇ ಸಂಸದರು, ಯಾವುದೇ ವ್ಯಕ್ತಿ, ಯಾವುದೇ ಜಾತಿ, ಯಾವುದೇ ವೃತ್ತಿ, ಯಾವುದೇ ಧರ್ಮದ ವಿರುದ್ಧ ಅಥವಾ ಯಾವುದೇ ರೈತರು ಅಥವಾ ಬುಡಕಟ್ಟು ಜನಾಂಗದ ವಿರುದ್ಧ ತಪ್ಪು ಪದಗಳನ್ನು ಬಳಸಬಾರದು. ಇವೆಲ್ಲನ್ನೂ ನಿಯಂತ್ರಿಸಬೇಕು ಎಂದಿದ್ದಾರೆ.

ಕಪಾಳಮೋಕ್ಷ ಮಾಡಿಲ್ಲ: ಕಂಗನಾ ರಣಾವತ್ ಪ್ರಕರಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಬೆಂಬಲಕ್ಕೆ ನಿಂತ ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್
Follow us on

ಚಂಡೀಗಢ ಜೂನ್ 07: ಹೊಸದಾಗಿ ಚುನಾಯಿತ ಸಂಸದೆ ಹಾಗೂ ನಟಿ ಕಂಗನಾ ರಣಾವತ್​​ಗೆ (Kangana Ranaut) ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಭಾರತೀಯ ಕಿಸಾನ್ ಯೂನಿಯನ್ (BKU) ಮುಖಂಡ ರಾಕೇಶ್ ಟಿಕಾಯತ್ (Rakesh Tikait) ಸಿಐಎಸ್‌ಎಫ್ ಸಿಬ್ಬಂದಿ ಬೆಂಬಲಕ್ಕೆ ನಿಂತಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೊ ಹೇಳಿಕೆಯ ಮೂಲಕ ಟಿಕಾಯತ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ರಣಾವತ್ ಮತ್ತು ಸಿಐಎಸ್‌ಎಫ್ ಸಿಬ್ಬಂದಿ ನಡುವೆ ದೇಹ ಮುಟ್ಟಿ ಜಗಳ ನಡೆದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ. “ಅಲ್ಲಿ ಕಪಾಳಮೋಕ್ಷ ಮಾಡಿಲ್ಲ. ಅಲ್ಲಿ ಜಗಳವಾಗಿರಬಹುದು, ಅದರಿಂದ ಆಕೆಗೆ ನೋವಾಗಿದ್ದಿರಬಹುದು ಎಂದಿದ್ದಾರೆ ಟಿಕಾಯತ್.

“ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆಯನ್ನು ಉಲ್ಲೇಖಿಸಿದ ಟಿಕಾಯತ್,  ರೈತ ಕುಟುಂಬದಿಂದ ಬಂದಿರುವ ಸಿಬ್ಬಂದಿ, ರೈತರ ಮೇಲೆ ನಡೆದಿರುವ ಹಿಂದಿನ ಘಟನೆಗಳಿಂದ ನೊಂದಿರಬಹುದು ಎಂದಿದ್ದಾರೆ. ಸಾರ್ವಜನಿಕ ವ್ಯಕ್ತಿಗಳಿಂದ ಗೌರವಾನ್ವಿತ ಭಾಷೆ ಮತ್ತು ನಡವಳಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಟಿಕಾಯತ್, “ಯಾವುದೇ ಸಂಸದರು, ಯಾವುದೇ ವ್ಯಕ್ತಿ, ಯಾವುದೇ ಜಾತಿ, ಯಾವುದೇ ವೃತ್ತಿ, ಯಾವುದೇ ಧರ್ಮದ ವಿರುದ್ಧ ಅಥವಾ ಯಾವುದೇ ರೈತರು ಅಥವಾ ಬುಡಕಟ್ಟು ಜನಾಂಗದ ವಿರುದ್ಧ ತಪ್ಪು ಪದಗಳನ್ನು ಬಳಸಬಾರದು. ಇವೆಲ್ಲನ್ನೂ ನಿಯಂತ್ರಿಸಬೇಕು ಎಂದಿದ್ದಾರೆ.

ರಾಕೇಶ್ ಟಿಕಾಯತ್ ಪೋಸ್ಟ್ ಮಾಡಿರುವ ವಿಡಿಯೊ


ಸಿಐಎಸ್‌ಎಫ್ ಸಿಬ್ಬಂದಿ ಬಗ್ಗೆ ಮಾತನಾಡಿದ ಟಿಕಾಯತ್, ಆಕೆಗೆ ಏನೋ ಹೇಳುವುದಿತ್ತು, ಅವಳು ತನ್ನ ವಿಷಯವನ್ನು ಹೇಳಬೇಕು. ಹಾಗಾಗಿ ಆಕೆಗೆ ಎಲ್ಲೋ ನೋವಾಯಿತು. ಆದರೆ ಸಮವಸ್ತ್ರ ಧರಿಸಿದ್ದಾಳೆ. ಆಕೆ ಕರ್ತವ್ಯದಲ್ಲಿದ್ದು ಹಾಗೆ ಮಾಡಬಾರದಿತ್ತು. ಪ್ರತಿಭಟನೆಗಳು ಮತ್ತು ಕಾನೂನು ಕ್ರಮಗಳು ಕುಂದುಕೊರತೆಗಳನ್ನು ಪರಿಹರಿಸಲು ಇರುವ ಸೂಕ್ತ ಮಾರ್ಗಗಳು ಎಂದಿದ್ದಾರೆ.

“ಪ್ರತಿಭಟಿಸಲು ಸಾಕಷ್ಟು ಇದೆ, ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ, ಏನಾದರೂ ಸಂಭವಿಸಿದಲ್ಲಿ ನೀವು ಕ್ರಮವನ್ನು ಅನ್ವಯಿಸಬೇಕು ಮತ್ತು ಅವರಿಗೆ ನೋಟಿಸ್ ನೀಡಬೇಕು ಎಂದು ರೈತ ಮುಖಂಡರು ಹೇಳಿದ್ದಾರೆ. ಘಟನೆಯ ನಂತರ, ಸಿಐಎಸ್ಎಫ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ, ಇದು ವಿವಿಧ ಗುಂಪುಗಳಿಂದ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ರೈತ ಸಂಘಟನೆಗಳು ಟಿಕಾಯತ್‌ನ ಅಭಿಪ್ರಾಯಗಳೊಂದಿಗೆ ಸಿಬ್ಬಂದಿಗೆ ಬೆಂಬಲ ವ್ಯಕ್ತಪಡಿಸಿವೆ.

ಇದನ್ನೂ ಓದಿ: Narendra Modi: ಎನ್‌ಡಿಎ ಬಲಿಷ್ಠ, ಸ್ಥಿರ ಮತ್ತು ಅಭಿವೃದ್ಧಿಯ ಧ್ಯೇಯ ಹೊಂದಿರುವ ಸರ್ಕಾರವನ್ನು ರಚಿಸಲಿದೆ: ಮೋದಿ

ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸುವ ಬಗ್ಗೆಯೂ ಟಿಕಾಯತ್ ಪ್ರತಿಕ್ರಿಯಿಸಿದ್ದಾರೆ. ನೂತನ ಸರಕಾರ ಸರ್ವಾಧಿಕಾರಿ ಧೋರಣೆ ತಪ್ಪಿಸಿ ನಿಯಂತ್ರಿತವಾಗಿ ಕೆಲಸ ಮಾಡಬೇಕು. ಮೂರನೇ ಬಾರಿಗೆ ಸರ್ಕಾರ ರಚನೆಯಾಗುತ್ತಿದೆ. ಸಮ್ಮಿಶ್ರ ಸರ್ಕಾರ ರಚನೆ ಆಗುತ್ತಿದ್ದರೆ ಈ ಹಿಂದೆ ಮಾಡಿದ ರೀತಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸಬಾರದು. ಈ ಬಾರಿ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಲಿದೆ. ಸರ್ಕಾರ ನಿಯಂತ್ರಣದಲ್ಲಿರಬೇಕು ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ಮಹತ್ವವನ್ನು ಒತ್ತಿ ಹೇಳಿದ ಅವರು ಸರ್ಕಾರವು ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದರು. “ಈ ದೇಶ ಸ್ವತಂತ್ರ ದೇಶ. ಅದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಅದರ ಘನತೆಯನ್ನು ಕಾಪಾಡಿಕೊಳ್ಳಿ. ಸರ್ಕಾರಗಳಿವೆ, ಜನರಿಗಾಗಿ ಕೆಲಸ ಮಾಡಬೇಕು, ಅಭಿವೃದ್ಧಿಯತ್ತ ಗಮನ ಹರಿಸಬೇಕು ಮತ್ತು ಸ್ಪರ್ಧೆಯು ಅಭಿವೃದ್ಧಿಯ ಮೇಲೆ ಇರಬೇಕು ಎಂದು ಟಿಕಾಯತ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 8:40 pm, Fri, 7 June 24