Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಖ್​ ಯಾತ್ರಾರ್ಥಿಗಳಿಗೆ ಶುಭ ಸಮಾಚಾರ; ಕರ್ತಾರ್​ಪುರ ಕಾರಿಡಾರ್​ನ್ನು ನಾಳೆಯಿಂದ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ

ಪಂಜಾಬ್​​ನ ಗುರುದಾಸ್​​ಪುರದಲ್ಲಿರುವ ದೇರಾ ಬಾಬಾ ನಾನಕ್​ ಮತ್ತು ಪಾಕಿಸ್ತಾನದ ಕರ್ತಾರ್​ಪುರ್​​ನಲ್ಲಿರುವ ದರ್ಬಾರ್​ ಸಾಹೀಬ್​​ ಗುರುದ್ವಾರಗಳನ್ನು ಸಂಪರ್ಕಿರುವ ಈ ಕಾರಿಡಾರ್​ 2019ರಲ್ಲಿ ಉದ್ಘಾಟನೆಯಾಗಿದೆ.

ಸಿಖ್​ ಯಾತ್ರಾರ್ಥಿಗಳಿಗೆ ಶುಭ ಸಮಾಚಾರ; ಕರ್ತಾರ್​ಪುರ ಕಾರಿಡಾರ್​ನ್ನು ನಾಳೆಯಿಂದ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ
ಕರ್ತಾರ್​ಪುರ ಗುರುದ್ವಾರ
Follow us
TV9 Web
| Updated By: Lakshmi Hegde

Updated on: Nov 16, 2021 | 5:04 PM

ನಾಳೆ (ಬುಧವಾರ-17-11-2021)ಕರ್ತಾರ್​ಪುರ ಸಾಹೀಬ್​ ಕಾರಿಡಾರ್​​ ತೆರೆಯಲು  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.  ನವೆಂಬರ್ 19ರಂದು ನಡೆಯಲಿರುವ ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ, ಲಕ್ಷಾಂತರ ಸಿಖ್​​ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಇದೀಗ ಕರ್ತಾರ್​ಪುರ ಸಾಹೀಬ್​ ಕಾರಿಡಾರ್​ ತೆರೆಯಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. 

ಈ ಬಗ್ಗೆ ಗೃಹ ಸಚಿವ ಅಮಿತ್​ ಶಾ ಎರಡು ಟ್ವೀಟ್​ಗಳ ಮೂಲಕ ತಿಳಿಸಿದ್ದಾರೆ. ಮೊದಲ ಟ್ವೀಟ್​ನಲ್ಲಿ, ನಾಳೆಯಿಂದ ಕರ್ತಾರ್​ಪುರ ಸಾಹೀಬ್​ ಕಾರಿಡಾರ್​ನ್ನು ಮತ್ತೆ ತೆರೆಯಲು ನರೇಂದ್ರ ಮೋದಿ ಸರ್ಕಾರ ನಿರ್ಧಾರ ಮಾಡಿದೆ. ಇದು ಗುರುನಾನಕ್​ ದೇವ್​ ಜಿ ಮತ್ತು ಸಿಖ್​ ಸಮುದಾಯದ ಬಗ್ಗೆ ಮೋದಿ ಸರ್ಕಾರಕ್ಕೆ ಇರುವ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಇನ್ನೊಂದು ಟ್ವೀಟ್​​ನಲ್ಲಿ,  ನವೆಂಬರ್​ 19ರಂದು ಗುರುನಾನಕ್​ ದೇವ್​ ಜಿ ಜನ್ಮಜಯಂತಿ ನಿಮಿತ್ತ ಪ್ರಕಾಶ ಉತ್ಸವ ಆಚರಿಸಲು ದೇಶದಲ್ಲಿ ಸಿದ್ಧತೆ ನಡೆಯುತ್ತಿದೆ. ಇದೇ ಹೊತ್ತಲ್ಲಿ ಕರ್ತಾರಪುರ ಕಾರಿಡಾರ್​ ತೆರೆಯಲು ಮೋದಿ ಸರ್ಕಾರ ನಿರ್ಧಾರ ಮಾಡಿದ್ದು, ಸಿಖ್​ ಸಮುದಾಯದವರಿಗೆ ಇನ್ನಷ್ಟು ಸಂತೋಷದಿಂದ ಉತ್ಸವ ಆಚರಿಸಲು ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಪಂಜಾಬ್​​ನ ಗುರುದಾಸ್​​ಪುರದಲ್ಲಿರುವ ದೇರಾ ಬಾಬಾ ನಾನಕ್​ ಮತ್ತು ಪಾಕಿಸ್ತಾನದ ಕರ್ತಾರ್​ಪುರ್​​ನಲ್ಲಿರುವ ದರ್ಬಾರ್​ ಸಾಹೀಬ್​​ ಗುರುದ್ವಾರಗಳನ್ನು ಸಂಪರ್ಕಿರುವ ಈ ಕಾರಿಡಾರ್​ 2019ರಲ್ಲಿ ಉದ್ಘಾಟನೆಯಾಗಿದೆ. ಕರ್ತಾರಪುರ್​​ನಲ್ಲಿರುವ ಗುರುದ್ವಾರಕ್ಕೆ ಭಾರತದ ಸಿಖ್​ ಯಾತ್ರಾರ್ಥಿಗಳು ವೀಸಾ ಇಲ್ಲದೆ ಹೋಗಬಹುದಾದ ವ್ಯವಸ್ಥೆಯಾಗಿದೆ.  ಕೊವಿಡ್​ 19 ಕಾರಣದಿಂದಾಗಿ 2020ರ ಮಾರ್ಚ್​ 20ರಿಂದ ಈ ಕಾರಿಡಾರ್​ನ್ನು ಮುಚ್ಚಲಾಗಿತ್ತು. ಇದೀಗ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಮತ್ತೆ ಓಪನ್ ಮಾಡಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ನಿಮ್ಮ ವಿಡಿಯೋಗೆ ಯೂಟ್ಯೂಬ್ ವೇದಿಕೆಯಲ್ಲಿ ಡಿಸ್ಲೈಕ್​ಗಳು ಬರುತ್ತಿದ್ದರೆ ಚಿಂತೆ ಬೇಡ, ಇನ್ನು ಮುಂದೆ ಆ ಕೌಂಟರ್ ಕಾಣದಂತೆ ಮರೆಯಾಗುವುದು

ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ