AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದಲ್ಲಿ ಸೆರೆಹಿಡಿಯಲಾದ ಈ ಕಬಾಬ್​ ತಯಾರಕನ ಫೋಟೋಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ; ಭಾರತೀಯ ಛಾಯಾಗ್ರಾಹಕಿಗೆ ಒಲಿದ ಪಿಂಕ್​ ಲೇಡಿ

ಪಿಂಕ್​ ಲೇಡಿ ಫೋಟೋಗ್ರಾಫರ್ ಆಫ್​ ದಿ ಇಯರ್ ಎಂಬ  ಜಾಗತಿಕ ಮಟ್ಟದ ಫೋಟೋ ಸ್ಪರ್ಧೆ ಮೊಟ್ಟಮೊದಲು ಶುರುವಾಗಿದ್ದು 2011ರಲ್ಲಿ. ಇದು ಆಹಾರ ಫೋಟೋಗ್ರಫಿ (ಚಿತ್ರ) ಸ್ಪರ್ಧೆ. ಅಂದರೆ ಇಲ್ಲಿ ಸ್ಪರ್ಧೆಗೆ ಬರುವುದು ಆಹಾರ, ತಿನಿಸುಗಳಿಗೆ ಸಂಬಂಧಪಟ್ಟ ಚಿತ್ರಗಳು.

ಕಾಶ್ಮೀರದಲ್ಲಿ ಸೆರೆಹಿಡಿಯಲಾದ ಈ ಕಬಾಬ್​ ತಯಾರಕನ ಫೋಟೋಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ; ಭಾರತೀಯ ಛಾಯಾಗ್ರಾಹಕಿಗೆ ಒಲಿದ ಪಿಂಕ್​ ಲೇಡಿ
ಪ್ರಶಸ್ತಿ ಗೆದ್ದ ಫೋಟೋ
TV9 Web
| Edited By: |

Updated on:Apr 28, 2022 | 5:11 PM

Share

ಈ ಬಾರಿಯ (2022ನೇ ಸಾಲಿನ) ಪ್ರತಿಷ್ಠಿತ ಪಿಂಕ್ ಲೇಡಿ ಇಂಟರ್​ನ್ಯಾಶನಲ್​ ಫುಡ್​ ಫೋಟೋ ಸ್ಪರ್ಧೆಯಲ್ಲಿ ಭಾರತದ ಛಾಯಾಗ್ರಾಹಕಿ ದೇಬ್​ದತ್ತಾ ಚಕ್ರವರ್ತಿ ಗೆದ್ದಿದ್ದಾರೆ. ದೇಬದತ್ತಾ ಅವರು ಕಾಶ್ಮೀರದಲ್ಲಿ ತೆಗೆದ ಕಬಾಬ್​ ತಯಾರಕನ ಫೋಟೋಕ್ಕೆ ಈ ಬಾರಿ ಪ್ರಶಸ್ತಿ ಬಂದಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಖಯ್ಯಮ್​ ಚೌಕ್​​ನಲ್ಲಿ, ರಸ್ತೆಬದಿಯ ಕಬಾಬ್​ ವ್ಯಾಪಾರಿಯೊಬ್ಬನ ಫೋಟೋ ಇದು. ವ್ಯಾಪಾರಿ ಕಬಾಬ್​ ತಯಾರಿಸುತ್ತಿದ್ದರೆ, ದಟ್ಟವಾದ ಹೊಗೆ ಆತನ ಸುತ್ತಲೂ ಹರಡಿದೆ. ವ್ಯಾಪಾರಿಯ ಮುಖ- ಕಬಾಬ್​ ಕಾಣಿಸುತ್ತಿದೆ. ಅದೊಂತರ ಮೋಡಗಳ ಮಧ್ಯೆ ಕುಳಿತು ಕಬಾಬ್​ ತಯಾರಿಸುತ್ತಿರುವಂತೆ ಭಾಸವಾಗುತ್ತಿದೆ. ಈ ಫೋಟೋಕ್ಕೆ ಕೆಬಾಬಿಯಾನಾ ಎಂದು ಹೆಸರು ದೇಬದತ್ತಾ ಹೆಸರು ಕೊಟ್ಟಿದ್ದಾರೆ.  

ಪಿಂಕಿ ಲೇಡಿ ಫುಡ್​ ಫೋಟೋಗ್ರಾಫರ್​ ಆಫ್​ ದಿ ಇಯರ್​​ನ ಸಂಸ್ಥಾಪಕಿ ಮತ್ತು ನಿರ್ದೇಶಕಿಯಾರ ಕ್ಯಾರೋಲಿನ್ ಕೆನ್ಯನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಾರಿ ಗೆದ್ದ ಫೋಟೋ ಅತ್ಯಂತ ಸುಂದರವಾಗಿ ಸೆರೆ ಹಿಡಿಯಲ್ಪಟ್ಟಿದೆ. ಕಬಾಬ್​ ತಯಾರಕನ ಮುಖದಲ್ಲಿ ತಾನು ತಯಾರಿಸುತ್ತಿರುವ ಆಹಾರವನ್ನು ಹಂಚಿಕೊಳ್ಳುವ ಭಾವವಿದೆ. ಆತನನ್ನು ಹೊಗೆ ಆಲಿಂಗಿಸಿದೆ ಮತ್ತು ಸಿದ್ಧವಾದ ಆಹಾರದಿಂದ ಬಂಗಾರದ ಬಣ್ಣದ ಬೆಳಕು ಬರುತ್ತಿದೆ ಎಂದು ವರ್ಣಿಸಿದ್ದಾರೆ. ಅಷ್ಟೇ ಅಲ್ಲ, ಕಬಾಬ್​​ ಹುರಿಯುವಾಗ ಅದರ ಕಿಡಿಗಳು ಹಾರುತ್ತಿವೆ. ಆ ಕಿಡಿಗಳ ಮೂಲಕವೇ ನಾವದರ ಸುವಾಸನೆಯನ್ನು ಆಘ್ರಾಣಿಸಬಹುದು ಎನ್ನಿಸುತ್ತದೆ. ಈ ಫೋಟೋ ತುಂಬ ಸೌಮ್ಯ ಸ್ವರೂಪವನ್ನು ಹೊಂದಿದ್ದರೂ, ನಮ್ಮ ಆತ್ಮಕ್ಕೆ ಅತ್ಯಂತ ಆಳವಾಗಿ ತಲುಪುತ್ತದೆ ಎಂದು ಹೇಳಿದ್ದಾರೆ.

ಅಂದಹಾಗೇ, ಈ ಪಿಂಕ್​ ಲೇಡಿ ಫೋಟೋಗ್ರಾಫರ್ ಆಫ್​ ದಿ ಇಯರ್ ಎಂಬ  ಜಾಗತಿಕ ಮಟ್ಟದ ಫೋಟೋ ಸ್ಪರ್ಧೆ ಮೊಟ್ಟಮೊದಲು ಶುರುವಾಗಿದ್ದು 2011ರಲ್ಲಿ. ಇದು ಆಹಾರ ಫೋಟೋಗ್ರಫಿ (ಚಿತ್ರ) ಸ್ಪರ್ಧೆ. ಅಂದರೆ ಇಲ್ಲಿ ಸ್ಪರ್ಧೆಗೆ ಬರುವುದು ಆಹಾರ, ತಿನಿಸುಗಳಿಗೆ ಸಂಬಂಧಪಟ್ಟ ಚಿತ್ರಗಳು. ಈ ಬಾರಿಯೂ ಸಹ ಸುಮಾರು 60 ದೇಶಗಳಿಂದ ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಈ ಸ್ಪರ್ಧೆಗೆ ಕಳಿಸಲಾಗಿತ್ತು. ವಿವಿಧ ವಿಭಾಗಗಳಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಈ ಕಾರ್ಯಕ್ರಮವನ್ನು ಪಿಂಕ್​ ಲೇಡಿ ಫೋಟೋಗ್ರಾಫರ್​ ಯೂಟ್ಯೂಬ್​​ನಲ್ಲಿ ಲೈವ್​ ಆಗಿ ಪ್ರಸಾರ ಮಾಡಲಾಗಿದೆ. ಜಡ್ಜ್​ ಆಗಿ ಭಾಗವಹಿಸಿದ್ದ ರೆಸ್ಟೋರೆಂಟ್​​ವೊಂದರ ಮಾಲೀಕರಾದ ಮೋನಿಕಾ ಗ್ಯಾಲೆಟ್ಟಿ ಪ್ರಶಸ್ತಿ ಗೆದ್ದವರ ಹೆಸರನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: ಅಜಯ್​ ದೇವಗನ್ ಟ್ವೀಟ್ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದೇನು?

Published On - 5:11 pm, Thu, 28 April 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ