AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶ್ಮೀರದಲ್ಲಿ ಸೆರೆಹಿಡಿಯಲಾದ ಈ ಕಬಾಬ್​ ತಯಾರಕನ ಫೋಟೋಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ; ಭಾರತೀಯ ಛಾಯಾಗ್ರಾಹಕಿಗೆ ಒಲಿದ ಪಿಂಕ್​ ಲೇಡಿ

ಪಿಂಕ್​ ಲೇಡಿ ಫೋಟೋಗ್ರಾಫರ್ ಆಫ್​ ದಿ ಇಯರ್ ಎಂಬ  ಜಾಗತಿಕ ಮಟ್ಟದ ಫೋಟೋ ಸ್ಪರ್ಧೆ ಮೊಟ್ಟಮೊದಲು ಶುರುವಾಗಿದ್ದು 2011ರಲ್ಲಿ. ಇದು ಆಹಾರ ಫೋಟೋಗ್ರಫಿ (ಚಿತ್ರ) ಸ್ಪರ್ಧೆ. ಅಂದರೆ ಇಲ್ಲಿ ಸ್ಪರ್ಧೆಗೆ ಬರುವುದು ಆಹಾರ, ತಿನಿಸುಗಳಿಗೆ ಸಂಬಂಧಪಟ್ಟ ಚಿತ್ರಗಳು.

ಕಾಶ್ಮೀರದಲ್ಲಿ ಸೆರೆಹಿಡಿಯಲಾದ ಈ ಕಬಾಬ್​ ತಯಾರಕನ ಫೋಟೋಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ; ಭಾರತೀಯ ಛಾಯಾಗ್ರಾಹಕಿಗೆ ಒಲಿದ ಪಿಂಕ್​ ಲೇಡಿ
ಪ್ರಶಸ್ತಿ ಗೆದ್ದ ಫೋಟೋ
TV9 Web
| Edited By: |

Updated on:Apr 28, 2022 | 5:11 PM

Share

ಈ ಬಾರಿಯ (2022ನೇ ಸಾಲಿನ) ಪ್ರತಿಷ್ಠಿತ ಪಿಂಕ್ ಲೇಡಿ ಇಂಟರ್​ನ್ಯಾಶನಲ್​ ಫುಡ್​ ಫೋಟೋ ಸ್ಪರ್ಧೆಯಲ್ಲಿ ಭಾರತದ ಛಾಯಾಗ್ರಾಹಕಿ ದೇಬ್​ದತ್ತಾ ಚಕ್ರವರ್ತಿ ಗೆದ್ದಿದ್ದಾರೆ. ದೇಬದತ್ತಾ ಅವರು ಕಾಶ್ಮೀರದಲ್ಲಿ ತೆಗೆದ ಕಬಾಬ್​ ತಯಾರಕನ ಫೋಟೋಕ್ಕೆ ಈ ಬಾರಿ ಪ್ರಶಸ್ತಿ ಬಂದಿದೆ. ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಖಯ್ಯಮ್​ ಚೌಕ್​​ನಲ್ಲಿ, ರಸ್ತೆಬದಿಯ ಕಬಾಬ್​ ವ್ಯಾಪಾರಿಯೊಬ್ಬನ ಫೋಟೋ ಇದು. ವ್ಯಾಪಾರಿ ಕಬಾಬ್​ ತಯಾರಿಸುತ್ತಿದ್ದರೆ, ದಟ್ಟವಾದ ಹೊಗೆ ಆತನ ಸುತ್ತಲೂ ಹರಡಿದೆ. ವ್ಯಾಪಾರಿಯ ಮುಖ- ಕಬಾಬ್​ ಕಾಣಿಸುತ್ತಿದೆ. ಅದೊಂತರ ಮೋಡಗಳ ಮಧ್ಯೆ ಕುಳಿತು ಕಬಾಬ್​ ತಯಾರಿಸುತ್ತಿರುವಂತೆ ಭಾಸವಾಗುತ್ತಿದೆ. ಈ ಫೋಟೋಕ್ಕೆ ಕೆಬಾಬಿಯಾನಾ ಎಂದು ಹೆಸರು ದೇಬದತ್ತಾ ಹೆಸರು ಕೊಟ್ಟಿದ್ದಾರೆ.  

ಪಿಂಕಿ ಲೇಡಿ ಫುಡ್​ ಫೋಟೋಗ್ರಾಫರ್​ ಆಫ್​ ದಿ ಇಯರ್​​ನ ಸಂಸ್ಥಾಪಕಿ ಮತ್ತು ನಿರ್ದೇಶಕಿಯಾರ ಕ್ಯಾರೋಲಿನ್ ಕೆನ್ಯನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಾರಿ ಗೆದ್ದ ಫೋಟೋ ಅತ್ಯಂತ ಸುಂದರವಾಗಿ ಸೆರೆ ಹಿಡಿಯಲ್ಪಟ್ಟಿದೆ. ಕಬಾಬ್​ ತಯಾರಕನ ಮುಖದಲ್ಲಿ ತಾನು ತಯಾರಿಸುತ್ತಿರುವ ಆಹಾರವನ್ನು ಹಂಚಿಕೊಳ್ಳುವ ಭಾವವಿದೆ. ಆತನನ್ನು ಹೊಗೆ ಆಲಿಂಗಿಸಿದೆ ಮತ್ತು ಸಿದ್ಧವಾದ ಆಹಾರದಿಂದ ಬಂಗಾರದ ಬಣ್ಣದ ಬೆಳಕು ಬರುತ್ತಿದೆ ಎಂದು ವರ್ಣಿಸಿದ್ದಾರೆ. ಅಷ್ಟೇ ಅಲ್ಲ, ಕಬಾಬ್​​ ಹುರಿಯುವಾಗ ಅದರ ಕಿಡಿಗಳು ಹಾರುತ್ತಿವೆ. ಆ ಕಿಡಿಗಳ ಮೂಲಕವೇ ನಾವದರ ಸುವಾಸನೆಯನ್ನು ಆಘ್ರಾಣಿಸಬಹುದು ಎನ್ನಿಸುತ್ತದೆ. ಈ ಫೋಟೋ ತುಂಬ ಸೌಮ್ಯ ಸ್ವರೂಪವನ್ನು ಹೊಂದಿದ್ದರೂ, ನಮ್ಮ ಆತ್ಮಕ್ಕೆ ಅತ್ಯಂತ ಆಳವಾಗಿ ತಲುಪುತ್ತದೆ ಎಂದು ಹೇಳಿದ್ದಾರೆ.

ಅಂದಹಾಗೇ, ಈ ಪಿಂಕ್​ ಲೇಡಿ ಫೋಟೋಗ್ರಾಫರ್ ಆಫ್​ ದಿ ಇಯರ್ ಎಂಬ  ಜಾಗತಿಕ ಮಟ್ಟದ ಫೋಟೋ ಸ್ಪರ್ಧೆ ಮೊಟ್ಟಮೊದಲು ಶುರುವಾಗಿದ್ದು 2011ರಲ್ಲಿ. ಇದು ಆಹಾರ ಫೋಟೋಗ್ರಫಿ (ಚಿತ್ರ) ಸ್ಪರ್ಧೆ. ಅಂದರೆ ಇಲ್ಲಿ ಸ್ಪರ್ಧೆಗೆ ಬರುವುದು ಆಹಾರ, ತಿನಿಸುಗಳಿಗೆ ಸಂಬಂಧಪಟ್ಟ ಚಿತ್ರಗಳು. ಈ ಬಾರಿಯೂ ಸಹ ಸುಮಾರು 60 ದೇಶಗಳಿಂದ ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಈ ಸ್ಪರ್ಧೆಗೆ ಕಳಿಸಲಾಗಿತ್ತು. ವಿವಿಧ ವಿಭಾಗಗಳಿಗೆ ಪ್ರಶಸ್ತಿ ಘೋಷಣೆಯಾಗಿದ್ದು, ಈ ಕಾರ್ಯಕ್ರಮವನ್ನು ಪಿಂಕ್​ ಲೇಡಿ ಫೋಟೋಗ್ರಾಫರ್​ ಯೂಟ್ಯೂಬ್​​ನಲ್ಲಿ ಲೈವ್​ ಆಗಿ ಪ್ರಸಾರ ಮಾಡಲಾಗಿದೆ. ಜಡ್ಜ್​ ಆಗಿ ಭಾಗವಹಿಸಿದ್ದ ರೆಸ್ಟೋರೆಂಟ್​​ವೊಂದರ ಮಾಲೀಕರಾದ ಮೋನಿಕಾ ಗ್ಯಾಲೆಟ್ಟಿ ಪ್ರಶಸ್ತಿ ಗೆದ್ದವರ ಹೆಸರನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: ಅಜಯ್​ ದೇವಗನ್ ಟ್ವೀಟ್ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದೇನು?

Published On - 5:11 pm, Thu, 28 April 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್