Kerala Boat Tragedy: ಕೇರಳದ ಬೋಟ್ ದುರಂತ ಕಾಡುತ್ತದೆ, ಅದನ್ನು ಮರೆಯಬಾರದು: ಹೈಕೋರ್ಟ್

|

Updated on: May 09, 2023 | 12:57 PM

ತನೂರಿನ ದೋಣಿ ದುರಂತ ಬಗ್ಗೆ ಮೇ 12 ರೊಳಗೆ ವರದಿ ಸಲ್ಲಿಸುವಂತೆ ಮಲಪ್ಪುರಂ ಜಿಲ್ಲಾಧಿಕಾರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಅದೇ ವೇಳೆ ದೋಣಿ ದುರಂತ ಘಟನೆಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನು ನ್ಯಾಯಾಲಯ ಟೀಕಿಸಿದೆ

Kerala Boat Tragedy: ಕೇರಳದ ಬೋಟ್ ದುರಂತ ಕಾಡುತ್ತದೆ, ಅದನ್ನು ಮರೆಯಬಾರದು: ಹೈಕೋರ್ಟ್
ಕೇರಳ ದೋಣಿ ದುರಂತ
Follow us on

ತಿರುವನಂತಪುರಂ: ಕೇರಳದ (Kerala) ಮಲಪ್ಪುರಂ (Malappuram) ಜಲ್ಲೆಯ ತಾನೂರಿನಲ್ಲಿ (Tanur Boat Tragedy) ಸಂಭವಿಸಿದ ಹೌಸ್ ಬೋಟ್ ದುರಂತ ಕಾಡುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ಈ ದುರಂತದಲ್ಲಿ 15 ಮಕ್ಕಳು ಸೇರಿದಂತೆ 22 ಮಂದಿ ಸಾವಿಗೀಡಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಸ್ವಯಂ ಪ್ರೇರಿತ ರಿಟ್ ಅರ್ಜಿಯನ್ನು ಸಲ್ಲಿಸುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದ ಹೈಕೋರ್ಟ್,ದುರಂತವನ್ನು ಮರೆಯಬಾರದು ಎಂದು ಹೇಳಿದೆ. ಇದೇ ಮೊದಲಲ್ಲ. ಈ ರೀತಿಯ ಘಟನೆ ನಡೆದಾಗಲೆಲ್ಲಾ ಕೆಲವು ತನಿಖೆ ಅಥವಾ ಶಿಫಾರಸುಗಳು ಇರುತ್ತವೆ. ಎಲ್ಲವೂ ಮರೆತುಹೋಗಿದೆ. (ನಂತರ) ಇದು ಮತ್ತೆ ಸಂಭವಿಸುತ್ತದೆ, ಜನರು ಸಾಯುತ್ತಾರೆ, ಆಪರೇಟರ್ ಹೊರತುಪಡಿಸಿ ಬೇರೆ ಯಾರೂ ಜವಾಬ್ದಾರರಲ್ಲವೇ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ನೇತೃತ್ವದ ವಿಭಾಗೀಯ ಪೀಠವು ಪ್ರದೇಶದ ಉಸ್ತುವಾರಿ ಬಂದರು ಅಧಿಕಾರಿಯಿಂದ ವಿವರಗಳನ್ನು ಕೇಳಿದೆ. ಇನ್‌ಲ್ಯಾಂಡ್ ನ್ಯಾವಿಗೇಷನ್‌ನ ಉಸ್ತುವಾರಿ ಯಾರು? ನಮಗೆ ವಿವರಗಳು ತಿಳಿದಿಲ್ಲ. ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೀಠ ಹೇಳಿದೆ.

ಹಿಂದಿನ ದುರಂತಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಾಲಯ, ಕೆಲವು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲೂ ಇದನ್ನು ಮಾಡಲಾಗಿದೆ. ಆದರೆ ಯಾವುದೇ ನಿರ್ವಾಹಕರು ಇದನ್ನೆಲ್ಲಾ ತಾವಾಗಿಯೇ ಮಾಡಲು ಸಾಧ್ಯವಿಲ್ಲ. ಇದೆಲ್ಲವೂ ಉದ್ದೇಶಪೂರ್ವಕವಾಗಿ ಅಥವಾ ಬೇರೆ ರೀತಿಯಲ್ಲಿ ಕೆಲವು ಬೆಂಬಲ ಸ್ವೀಕರಿಸಿ ಮಾಡಲಾಗಿದೆ. ಸಮಸ್ಯೆಯ ಮೂಲ ಯಾವುದು ಎಂಬುದನ್ನು ನಾವು ತಿಳಿಯಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Kerala boat tragedy: ಬೋಟ್​​ನ ಗಾಜು ಕೈಯಿಂದಲೇ ಒಡೆದು 7 ಜನರನ್ನು ರಕ್ಷಿಸಿದ ರಶೀದ್, ತಾನೂರಿನ ಸ್ಥಳೀಯರೇ ರಿಯಲ್ ಹೀರೋಗಳು

ತನೂರಿನ ದೋಣಿ ದುರಂತ ಬಗ್ಗೆ ಮೇ 12 ರೊಳಗೆ ವರದಿ ಸಲ್ಲಿಸುವಂತೆ ಮಲಪ್ಪುರಂ ಜಿಲ್ಲಾಧಿಕಾರಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ಅದೇ ವೇಳೆ ದೋಣಿ ದುರಂತ ಘಟನೆಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನು ನ್ಯಾಯಾಲಯ ಟೀಕಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Tue, 9 May 23