
ಎರ್ನಾಕುಲಂ, ಆಗಸ್ಟ್ 28: ಕೇರಳದ ಎರ್ನಾಕುಲಂ ಜಿಲ್ಲೆಯ ಕಕ್ಕೂರು ಬಳಿ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಸುಮಾರು 35 ಪ್ರಯಾಣಿಕರಿದ್ದ ಖಾಸಗಿ ಪ್ರವಾಸಿ ಬಸ್(Bus) ಪಲ್ಟಿಯಾಗಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯಾವುದೇ ಸಿಗ್ನಲ್ ನೀಡದೆ ರಸ್ತೆಯ ಮಧ್ಯಕ್ಕೆ ಅಡ್ಡ ಬಂದ ಸ್ಕೂಟರ್ ಸವಾರನನ್ನು ರಕ್ಷಿಸಲು ಚಾಲಕ ಏಕಾಏಕಿ ಬಲಕ್ಕೆ ತಿರುವು ನೀಡಿ ಬ್ರೇಕ್ ಹಾಕಿದಾಗ ಈ ಅವಘಡ ಸಂಭವಿಸಿದೆ. ಅಪಘಾತದ ಸಂಪೂರ್ಣ ದೃಶ್ಯಾವಳಿ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್ನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೂತಟ್ಟುಕುಲಂ-ಪಿರವೋಮ್ ರಸ್ತೆಯ ಕಕ್ಕೂರು ಬಳಿ ಬೆಳಗ್ಗೆ10.30 ರ ಸುಮಾರಿಗೆ ವೇಗವಾಗಿ ಬಂದ ಬಸ್, ಸ್ಕೂಟರ್ ತಪ್ಪಿಸಲು ಹೋಗಿ ರಸ್ತೆಯಿಂದ ಆಚೆಗೆ ಜಾರಿ ಪೆಟ್ರೋಲ್ ಬಂಕ್ನ ಮುಂಭಾಗದ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಒಂದು ವೇಳೆ ಇಂಧನ ಪಂಪ್ಗೆ ಡಿಕ್ಕಿಯಾಗಿದ್ದರೆ ಭಾರೀ ಸ್ಫೋಟ ಹಾಗೂ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆಯಿತ್ತು.
ಶಬ್ದ ಕೇಳಿದ ತಕ್ಷಣವೇ ಪೆಟ್ರೋಲ್ ಬಂಕ್ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಧಾವಿಸಿ, ಬಸ್ಸಿನ ಕಿಟಕಿಗಳ ಮೂಲಕ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಸಮೀಪದ ಕೂತಟ್ಟುಕುಲಂ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತಷ್ಟು ಓದಿ: ಆಂಧ್ರಪ್ರದೇಶದ ಪಲ್ನಾಡು ಬಳಿ ಭೀಕರ ರಸ್ತೆ ಅಪಘಾತ: ಆಟೋಗೆ ಡಿಕ್ಕಿ ಹೊಡೆದ ಖಾಸಗಿ ಬಸ್ , 7 ಮಂದಿ ದಾರುಣ ಸಾವು
ಇಂಡಿಕೇಟರ್ ಹಾಕದೆ ಅಥವಾ ಹಿಂಬದಿಯ ವಾಹನ ಗಮನಿಸದೆ ರಸ್ತೆಗೆ ನುಗ್ಗುವ ದ್ವಿಚಕ್ರ ವಾಹನ ಸವಾರರ ಬೇಜವಾಬ್ದಾರಿಯೇ ಇಂತಹ ಅವಘಡಗಳಿಗೆ ನೇರ ಕಾರಣ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿರಿದಾದ ರಸ್ತೆಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಲೆಕ್ಕಿಸದೆ ಅತಿಯಾದ ವೇಗ ಹಾಗೂ ಆಕ್ರಮಣಕಾರಿ ಓವರ್ಟೇಕ್ ಮಾಡುವ ಬಸ್ ಚಾಲಕರ ಚಾಲನಾ ಶೈಲಿಯೂ ಇಷ್ಟೊಂದು ದೊಡ್ಡ ಅಪಘಾತಕ್ಕೆ ಕಾರಣ ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ.
ವಿಡಿಯೋ
🚨 KERALA | TOURIST BUS OVERTURNS AFTER SWERVING TO AVOID SCOOTER
A tourist bus carrying a wedding party overturned after the driver reportedly swerved to avoid a scooter near Kakkoor in Koothattukulam, Ernakulam, Kerala.
The bus lost control and crashed into the side of a… pic.twitter.com/OBvWCm4frU
— contentkikamii (@contentkikamii) August 27, 2026
ಕಿರಿದಾದ ರಾಜ್ಯ ಹೆದ್ದಾರಿಗಳಲ್ಲಿ ಸಾಗುವಾಗ ಹಿಂಬದಿಯ ನೋಟದ ಕನ್ನಡಿ ವೀಕ್ಷಿಸದೆ ಮತ್ತು ಸೂಚನಾ ದೀಪಗಳನ್ನು ಬಳಸದೆ ದಿಢೀರ್ ಲೇನ್ ಬದಲಾಯಿಸುವುದು ಗಂಭೀರ ಅಪರಾಧ ಹಾಗೂ ಅಪಾಯಕಾರಿ.ಜನನಿಬಿಡ ಮತ್ತು ಪೆಟ್ರೋಲ್ ಬಂಕ್ಗಳಂತಹ ಸೂಕ್ಷ್ಮ ವಲಯಗಳಲ್ಲಿ ಭಾರಿ ವಾಹನಗಳು ನಿಗದಿತ ವೇಗ ಮಿತಿಯನ್ನು ಕಾಯ್ದುಕೊಳ್ಳುವುದರಿಂದ ತುರ್ತು ಸಂದರ್ಭಗಳಲ್ಲಿ ವಾಹನ ನಿಯಂತ್ರಣ ತಪ್ಪುವುದನ್ನು ತಡೆಯಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ