AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಬರಿಮಲೆ ಪೊನ್ನಂಬಲಮೇಡುನಲ್ಲಿ ಬೆಳಗಿದ ಮಕರ ಜ್ಯೋತಿ; ದರ್ಶನ ಪಡೆದ ಅಯ್ಯಪ್ಪ ಭಕ್ತರು

ಮಕರ ಸಂಕ್ರಾಂತಿ (Makar Sankranti) ದಿನ ಆಕಾಶದಲ್ಲಿ ನಕ್ಷತ್ರ ಉದಯಿಸುತ್ತಿದ್ದಂತೆ ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ ಬೆಳಗಿತು. ಮಕರ ಜ್ಯೋತಿ ದರ್ಶನ ಪಡೆದು ಶರಣಂ ಅಯ್ಯಪ್ಪ ಎಂಬ ಸ್ತುತಿಯೊಂದಿಗೆ ಅಯ್ಯಪ್ಪ ಭಕ್ತರು ಪುನೀತರಾದ ಕ್ಷಣ ಅದಾಗಿತ್ತು.

ಶಬರಿಮಲೆ ಪೊನ್ನಂಬಲಮೇಡುನಲ್ಲಿ ಬೆಳಗಿದ ಮಕರ ಜ್ಯೋತಿ; ದರ್ಶನ ಪಡೆದ ಅಯ್ಯಪ್ಪ ಭಕ್ತರು
ಮಕರ ಜ್ಯೋತಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 14, 2022 | 8:17 PM

Share

ಶಬರಿಮಲೆ: ಶಬರಿಮಲೆ (Sabarimala) ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ (Makara Jyothi) ಕಾಣಿಸಿದೆ. ಮಕರ ಸಂಕ್ರಾಂತಿ (Makar Sankranti) ದಿನ ಆಕಾಶದಲ್ಲಿ ನಕ್ಷತ್ರ ಉದಯಿಸುತ್ತಿದ್ದಂತೆ ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ ಬೆಳಗಿತು. ಮಕರ ಜ್ಯೋತಿ ದರ್ಶನ ಪಡೆದು ಶರಣಂ ಅಯ್ಯಪ್ಪ ಎಂಬ ಸ್ತುತಿಯೊಂದಿಗೆ ಅಯ್ಯಪ್ಪ ಭಕ್ತರು ಪುನೀತರಾದ ಕ್ಷಣ ಅದಾಗಿತ್ತು. ಶಬರಿಮಲೆ ಸನ್ನಿಧಾನಂ ದೇಗುಲದಲ್ಲಿ ತಿರುವಾಭರಣ ಅಲಂಕೃತ ಅಯ್ಯಪ್ಪನಿಗೆ ದೀಪಾರಾಧನೆ ವೇಳೆ ಮಕರವಿಳಕ್ಕು ಬೆಳಗಿತು. ಸನ್ನಿಧಾನಂ, ಪಂಪಾ ಸೇರಿದಂತೆ ಪೊನ್ನಂಬಲಮೇಡು ಕಾಣಸಿಗುವ ಸ್ಥಳಗಳಲ್ಲಿ ಅಯ್ಯಪ್ಪ ಭಕ್ತರು ಜ್ಯೋತಿ ದರ್ಶನಕ್ಕಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದರು.  ಮಕರಸಂಕ್ರಮಣದ ಮುನ್ನಾದಿನದಂದು ಅಯ್ಯಪ್ಪನಿಗೆ ತೊಡುವ ತಿರುವಾಭರಣಗಳೊಂದಿಗೆ ಪಂದಳಂನಿಂದ ಮೆರವಣಿಗೆಯು ಸಂಜೆ 5 ಗಂಟೆಗೆ ಶರಂಕುತ್ತಿ ತಲುಪಿತು. ಅಲ್ಲಿಂದ ದೇವಸ್ವಂ ಬೋರ್ಡ್ ನಿಯೋಗವು ಮೆರವಣಿಗೆಯನ್ನು ಬರಮಾಡಿಕೊಂಡು ವಾದ್ಯಮೇಳದೊಂದಿಗೆ ಸನ್ನಿಧಾನಕ್ಕೆ ಕೊಂಡೊಯ್ದಿತು. ಧ್ವಜಸ್ತಂಭದಡಿಯಲ್ಲಿ ಅವರನ್ನು ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್, ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್, ಸದಸ್ಯ ಮನೋಜ್ ಚರಲೇಲ್, ಎಡಿಜಿಪಿ ಎಸ್.ಶ್ರೀಜಿತ್ ಬರಮಾಡಿಕೊಂಡರು. ಸ್ವೀಕರಿಸಿದ ತಿರುವಾಭರಣಗಳನ್ನು ಅಯ್ಯಪ್ಪನ ಮೂರ್ತಿಗೆ ತೊಡಿಸಿ ತಂತ್ರಿ ಮತ್ತು ಮೇಲ್ಶಾಂತಿ ಪೂಜೆಸಲ್ಲಿಸಿದರು. ಬಳಿಕ ಪೊನ್ನಂಬಲಮೇಡುಬೆಟ್ಟದಲ್ಲಿ ಮಕರವಿಳಕ್ಕು ಕಾಣಿಸಿತು . ಮಧ್ಯಾಹ್ನ 2.29ಕ್ಕೆ ಮಕರ ಸಂಕ್ರಮಣದ ವೇಳೆ ಕವಡಿಯಾರ್ ಅರಮನೆಯಿಂದ ತುಪ್ಪದಿಂದ ಅಯ್ಯಪ್ಪನಿಗೆ ಅಭಿಷೇಕ ಮಾಡಲಾಯಿತು. ಮಕರ ಸಂಕ್ರಮಣ ಪೂಜೆಯ ನಂತರ ಮುಚ್ಚಿದ್ದ ಮೆಟ್ಟಿಲುಗಳನ್ನು ಸಂಜೆ 5 ಗಂಟೆಗೆ ತೆರೆಯಲಾಯಿತು.

ಕೊವಿಡ್ ಹಿನ್ನೆಲೆಯಲ್ಲಿ ಮತ್ತೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಬಾರಿ ಎಲ್ಲಿಯೂ ಗುಡಿಸಲು ಕಟ್ಟಲು ಅನುಮತಿ ಇರಲಿಲ್ಲ. ಈ ಬಾರಿ ಪುಲ್ಲುಮೇಟ್ಟುಗೆ ಭೇಟಿ ನೀಡಲು ಅನುಮತಿ ಇರಲಿಲ್ಲ. ನಿನ್ನೆ ರಾತ್ರಿ ಳಾಹ ಫಾರೆಸ್ಟ್ ಛತ್ರದಲ್ಲಿ ವಿಶ್ರಾಂತಿ ಪಡೆದು ಮುಂಜಾನೆ 3 ಗಂಟೆಗೆ ತಿರುವಾಭರಣ ಮೆರವಣಿಗೆಯು ತಲಪ್ಪಾರ ಕೋಟೆ, ಅಟ್ಟತೊಡು ಕಾಲೋನಿ, ಎತ್ತಪಟ್ಟಿ ಮತ್ತು ಒಳಿಯಂಬುಳ ಮೂಲಕ ಮಧ್ಯಾಹ್ನ ವಲಿಯಾನವಟ್ಟಂಗೆ ತಲುಪಿತು. ವಿಶ್ರಾಂತಿ ಪಡೆದು ಚೆರಿಯಾನವಟ್ಟಂ, ನೀಲಿಮಲ, ಅಪ್ಪಾಚ್ಚಿ ಮೇಡ್ ಮತ್ತು ಶಬರಿ ಪೀಠದ ಮೂಲಕ ಶರಂಕುತ್ತಿಗೆ ತಲುಪಿತ್ತು. ಜನವರಿ 19ರವರೆಗೆ ಭಕ್ತರು ದರ್ಶನ ಪಡೆಯಬಹುದು.

ಪಂಪಾ ‘ವಿಳಕ್ಕು’, ‘ಸದ್ಯ’ ಇದಕ್ಕೂ ಮುನ್ನ ಗುರುವಾರ ಪಂಪಾ (ಪಂಬಾ) ನದಿಯ ದಡದಲ್ಲಿ ತೀರ್ಥೋದ್ಭವದ ಅಂಗವಾಗಿ ಪಂಬಾ ‘ವಿಳಕ್ಕು’ ಮತ್ತು ‘ಸದ್ಯ’ ವಿಧಿವಿಧಾನಗಳನ್ನು ನಡೆಸಲಾಯಿತು. ಮಧ್ಯಾಹ್ನದ ಸಮಯದಲ್ಲಿ ಹಲವಾರು ರುಚಿಕರವಾದ ಭಕ್ಷ್ಯಗಳನ್ನು ಒಳಗೊಂಡಿರುವ ‘ಸದ್ಯ’ವನ್ನು ಬಡಿಸಲಾಗುತ್ತದೆ ಮತ್ತು ಬಿದಿರಿನಿಂದ ಮಾಡಿದ ದೀಪಗಳನ್ನು ನದಿಯಲ್ಲಿ ತೇಲಿಸುವ ‘ವಿಳಕ್ಕು’ ಎಂಬ ಆಚರಣೆಯು ಸೂರ್ಯಾಸ್ತದ ನಂತರ ನಡೆಯಿತು. ಈ ಆಚರಣೆಗಳ ನಂತರ, ಅಲಂಗಾಡ್ ಮತ್ತು ಅಂಬಲಪ್ಪುಳದ ಯಾತ್ರಾರ್ಥಿಗಳ ತಂಡಗಳು ಪಂಬಾದಿಂದ ಸನ್ನಿಧಾನಂನಲ್ಲಿರುವ ಬೆಟ್ಟದ ಮೇಲಿರುವ ದೇವಸ್ಥಾನಕ್ಕೆ ತಮ್ಮ ಹತ್ತಲು ಪ್ರಾರಂಭಿಸಿದವು.

ಇದನ್ನೂ ಓದಿ:  Kumbalangi: ಕೇರಳದ ಕುಂಬಳಂಗಿ ದೇಶದ ಮೊಟ್ಟ ಮೊದಲ ಸ್ಯಾನಿಟರಿ ಪ್ಯಾಡ್ ಮುಕ್ತ ಗ್ರಾಮ!

Published On - 8:10 pm, Fri, 14 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ