AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಪೊಲೀಸ್​ ಅಧಿಕಾರಿ ಹತ್ಯೆ ಪ್ರಕರಣದ ರೂವಾರಿ, ಲಷ್ಕರ್​ ಇ ತೈಯ್ಬಾದ ಉನ್ನತ ಕಮಾಂಡರ್​ ನದೀಮ್​ ಅಬ್ರಾರ್​ ಹತ್ಯೆ..

ನದೀಮ್​ ಅಬ್ರಾರ್ ಮೋಸ್ಟ್​ ವಾಂಟೆಡ್​ ಪಟ್ಟಿಯಲ್ಲಿ ಇದ್ದ ಉಗ್ರನಾಗಿದ್ದ. ಇತ್ತೀಚೆಗೆ ಕಾಶ್ಮೀರದಲ್ಲಿ ರಕ್ಷಣಾ ಪಡೆಗಳು, ನಾಗರಿಕರ ಮೇಲೆ ನಡೆದ ಹಲವು ದಾಳಿಯಲ್ಲಿ ಭಾಗಿಯಾಗಿದ್ದ. ನಿನ್ನೆ ರಾತ್ರಿ ಈತನನ್ನು ಬಂಧಿಸಲಾಗಿತ್ತು

ಮಾಜಿ ಪೊಲೀಸ್​ ಅಧಿಕಾರಿ ಹತ್ಯೆ ಪ್ರಕರಣದ ರೂವಾರಿ, ಲಷ್ಕರ್​ ಇ ತೈಯ್ಬಾದ ಉನ್ನತ ಕಮಾಂಡರ್​ ನದೀಮ್​ ಅಬ್ರಾರ್​  ಹತ್ಯೆ..
ನದೀಮ್​ ಅಬ್ರಾರ್​
TV9 Web
| Edited By: |

Updated on: Jun 29, 2021 | 8:07 AM

Share

ಪಾಕಿಸ್ತಾನದ ಲಷ್ಕರ್​ ಇ ತೈಬಾ ಉಗ್ರಸಂಘಟನೆಯ ಉನ್ನತ ಕಮಾಂಡರ್​ ಆಗಿದ್ದ ನದೀಮ್​ ಅಬ್ರಾರ್​ ಮತ್ತು ಇನ್ನೊಬ್ಬಾತ ಉಗ್ರನನ್ನು ಇಂದು ಮುಂಜಾನೆ ಎನ್​ಕೌಂಟರ್​​ನಲ್ಲಿ ಹತ್ಯೆಗೈದಿದ್ದಾಗಿ ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ. ಶ್ರೀನಗರದ ಮಲ್ಹೂರಾ ಪರಿಂಪೋರದಲ್ಲಿ ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇಬ್ಬರನ್ನು ಹತ್ಯೆಗೈಯಲಾಗಿದ್ದು, ಅವರ ಬಳಿಯಿದ್ದ ಹಲವಾರು ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ, ಉನ್ನತ ಕಮಾಂಡರ್​ ಸೇರಿ ಇಬ್ಬರನ್ನು ಹತ್ಯೆ ಮಾಡಿದ ಬಗ್ಗೆ ಕಾಶ್ಮೀರ ಝೋನ್​​ ಐಜಿಪಿ ವಿಜಯ್​ ಕುಮಾರ್​ ಟ್ವೀಟ್​ ಮೂಲಕ ದೃಢಪಡಿಸಿದ್ದಾರೆ.

ನದೀಮ್​ ಅಬ್ರಾರ್ ಮೋಸ್ಟ್​ ವಾಂಟೆಡ್​ ಪಟ್ಟಿಯಲ್ಲಿ ಇದ್ದ ಉಗ್ರನಾಗಿದ್ದ. ಇತ್ತೀಚೆಗೆ ಕಾಶ್ಮೀರದಲ್ಲಿ ರಕ್ಷಣಾ ಪಡೆಗಳು, ನಾಗರಿಕರ ಮೇಲೆ ನಡೆದ ಹಲವು ದಾಳಿಯಲ್ಲಿ ಭಾಗಿಯಾಗಿದ್ದ. ನಿನ್ನೆ ರಾತ್ರಿ ಈತನನ್ನು ಬಂಧಿಸಲಾಗಿತ್ತು. ಆದರೆ ನಂತರ ಉಗ್ರರ ಅಡಗುತಾಣವನ್ನು ತೋರಿಸಲು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಅಬ್ರಾರ್ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಯಿತು. ಆತನ ಸಹಚರನೊಬ್ಬ ನಮ್ಮ ಸಿಆರ್​ಪಿಎಫ್​ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ. ಇದರಿಂದಾಗಿ ಮೂವರು ಸಿಆರ್​ಪಿಎಫ್​ ಸಿಬ್ಬಂದಿ ಗಾಯಗೊಂಡರು. ಇದರಿಂದಾಗಿ ಮತ್ತೆ ಉಗ್ರರು ಹಾಗೂ ರಕ್ಷಣಾ ಪಡೆಗಳ ನಡುವೆ ಎನ್​ಕೌಂಟರ್​ ನಡೆಯಿತು. ಈ ವೇಳೆ ಅಬ್ರಾರ್​​ನನ್ನು ಹತ್ಯೆಗೈಯಲಾಯಿತು ಎಂದು ಕಾಶ್ಮೀರ ಝೋನ್​ ಐಜಿಪಿ ಮಾಹಿತಿ ನೀಡಿದ್ದಾರೆ.

ಮೊನ್ನೆಯಷ್ಟೇ ಮಾಜಿ ಪೊಲೀಸ್​ ಅಧಿಕಾರಿ ಫಯಾಜ್​ ಅಹ್ಮದ್​, ಅವರ ಪತ್ನಿ ಮತ್ತು ಪುತ್ರಿಯನ್ನು ಉಗ್ರರು ಮನೇಗೆ ನುಗ್ಗಿ ಗುಂಡು ಹೊಡೆದು ಹತ್ಯೆ ಮಾಡಿದ್ದರು. ಈ ದಾಳಿಯಲ್ಲಿ ಸಹ ಅಬ್ರಾರ್​ ಕೈವಾಡವಿತ್ತು. ಈ ಅಬ್ರಾರ್​ ನೇತೃತ್ವದಲ್ಲಿ ಅನೇಕ ದಾಳಿಗಳು ನಡೆದಿದ್ದು, ಹಲವು ಸಿಆರ್​ಪಿಎಫ್​ ಯೋಧರು ಜೀವ ಕಳೆದುಕೊಂಡಿದ್ದಾರೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಪುಲ್ವಾಮಾದಲ್ಲಿ ಮಾಜಿ ಪೊಲೀಸ್ ಅಧಿಕಾರಿ, ಅವರ ಪತ್ನಿ, ಪುತ್ರಿಯನ್ನೂ ಕೊಂದ ಉಗ್ರರು; ಮನೆಗೇ ನುಗ್ಗಿ ಗುಂಡಿನ ದಾಳಿ

ಮೈಸೂರಿನಲ್ಲಿ ಮನೆಯ ಪಕ್ಕದ ಗಲ್ಲಿಯಲ್ಲೇ ಗಾಂಜಾ ಬೆಳೆದಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಬೆಂಗಳೂರಿನಲ್ಲೂ ಓರ್ವ ಬಂಧನ

(Lashkar e Taiba top commander Nadeem Abrar shot down In Kashmir)

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ
ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು