AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Loan Moratorium: ಸುಪ್ರೀಂಕೋರ್ಟ್​ನಲ್ಲಿ ಮಾರ್ಚ್ 23ಕ್ಕೆ ಸಾಲ ವಿನಾಯಿತಿ ಪ್ರಕರಣದ ತೀರ್ಪು

ಸುಪ್ರೀಂಕೋರ್ಟ್​ನಿಂದ ಮಾರ್ಚ್ 23ನೇ ತಾರೀಕಿನ ಮಂಗಳವಾರದಂದು ಸಾಲ ವಿನಾಯಿತಿ ಪ್ರಕರಣದ (Loan Moratorium) ತೀರ್ಪನ್ನು ನೀಡುವ ಸಾಧ್ಯತೆ ಇದೆ ಎಂದು ಎಎನ್​ಐ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

Loan Moratorium: ಸುಪ್ರೀಂಕೋರ್ಟ್​ನಲ್ಲಿ ಮಾರ್ಚ್ 23ಕ್ಕೆ ಸಾಲ ವಿನಾಯಿತಿ ಪ್ರಕರಣದ ತೀರ್ಪು
ಸುಪ್ರೀಂ ಕೋರ್ಟ್​
Srinivas Mata
| Edited By: |

Updated on:Mar 22, 2021 | 9:25 PM

Share

ಸಾಲ ವಿನಾಯಿತಿ (Loan Moratorium) ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಮಂಗಳವಾರ (ಮಾರ್ಚ್ 23) ನೀಡಲಾಗುತ್ತದೆ ಎಂದು ಎಎನ್​ಐ ಸುದ್ದಿಸಂಸ್ಥೆಯು ವರದಿ ಮಾಡಿದೆ. ಕೋವಿಡ್​- 19 ಲಾಕ್​ಡೌನ್ ಸಂದರ್ಭದಲ್ಲಿ ಎದುರಾದ ಕಷ್ಟದ ಸನ್ನಿವೇಶವನ್ನು ದಾಟಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಮೊದಲಿಗೆ ಮಾರ್ಚ್ 1, 2020ರಿಂದ ಮೇ 31, 2020 ಹಾಗೂ ಆನಂತರ ಆಗಸ್ಟ್ 31, 2020ರ ತನಕ ಸಾಲದ ಮೇಲಿನ ಕಂತು ಪಾವತಿಯಿಂದ ಸಾಲಗಾರರಿಗೆ ವಿನಾಯಿತಿ ನೀಡುವಂತೆ ಸಂಸ್ಥೆಗಳಿಗೆ ಭಾರತೀಯ ರಿಸರ್ವ್​ ಬ್ಯಾಂಕ್ (ಆರ್​ಬಿಐ) ಸೂಚಿಸಿತ್ತು. 

ಇದಾದ ಮೇಲೆ ಸಾಲವನ್ನು ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಎನ್​ಪಿಎ) ಎಂದು ಪರಿಗಣಿಸದೆ ಒಂದು ಬಾರಿಯ ಮರುಹೊಂದಾಣಿಕೆಗೂ ಅವಕಾಶ ನೀಡುವಂತೆ ತಿಳಿಸಿತ್ತು. ಆದರೆ ಅದು ಮಾರ್ಚ್ 1, 2020ಕ್ಕೆ ಯಾವ ವೈಯಕ್ತಿಕ ಖಾತೆದಾರರು ಅಥವಾ ಕಂಪೆನಿಯ ಸಾಲ ಖಾತೆಯು 30 ದಿನಗಳಿಗೆ ಹೆಚ್ಚಿಗೆ ಆಗದಂತೆ ಬಾಕಿ ಇದ್ದಲ್ಲಿ ಈ ಒಂದು ಸಲದ ಮರುಹೊಂದಾಣಿಕೆಗೆ ಅರ್ಹರಿದ್ದರು. ಬ್ಯಾಂಕ್​ಗಳು ಡಿಸೆಂಬರ್ 31, 2020ರೊಳಗೆ ತೀರುವಳಿ ಯೋಜನೆಯನ್ನು ತಂದು, 2021ರ ಜೂನ್ 30ರ ತನಕ ಜಾರಿ ಮಾಡಬಹುದಾಗಿದೆ.

ಇನ್ನು ವೈಯಕ್ತಿಕ ಸಾಲಗಾರರಿಗೆ ಡಿಸೆಂಬರ್ 31, 2020ರೊಳಗೆ ತೀರುವಳಿ ಯೋಜನೆಯನ್ನು ತಂದು, 90 ದಿನದೊಳಗಾಗಿ ಅದು ಅನ್ವಯಿಸಬೇಕಿತ್ತು. ಆದರೆ ಈ ಸಾಲ ಖಾತೆಯು ಸ್ಟ್ಯಾಂಡರ್ಡ್ ಆಗಿದ್ದು, ಮಾರ್ಚ್ 1, 2020ಕ್ಕೆ ಸಾಲ ಉಳಿಸಿಕೊಂಡಿರುವುದು 30 ದಿನಕ್ಕೆ ಮೀರಿರಬಾರದು. ಆಗಸ್ಟ್ 31, 2020ಕ್ಕೆ ಅನ್ವಯ ಆಗುವಂತೆ ಶೇಕಡಾ 26.6ರಷ್ಟು ಬ್ಯಾಂಕಿಂಗೇತರ ಸಂಸ್ಥೆಗಳ ಗ್ರಾಹಕರು ಸಾಲ ಪಾವತಿ ವಿನಾಯಿತಿ ಪಡೆದಿದ್ದರೆ, ಒಟ್ಟಾರೆಯಾಗಿ ಸಾಲ ಬಾಕಿ ಉಳಿಸಿಕೊಂಡವರಲ್ಲಿ ಶೇ 44.9ರಷ್ಟು ವಿನಾಯಿತಿ ಪಡೆದಿದ್ದರು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಬ್ಯಾಂಕ್​ಗಳಿಗೆ ಬಡ್ಡಿ ಮನ್ನಾ ಹೊರೆ ಭರಿಸುವುದು ಅಸಾಧ್ಯ: ಸುಪ್ರೀಂಗೆ ವಿವರ ಸಲ್ಲಿಸಿದ ಕೇಂದ್ರ

Published On - 9:20 pm, Mon, 22 March 21

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!