AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕಾಸ ಯಾತ್ರೆ ಕಾರ್ಯಕ್ರಮದ ಮಧ್ಯೆ, ಕುರ್ತಾ ಬಿಚ್ಚಿ, ನೀರಿನಿಂದ ಮೈತೊಳೆದುಕೊಂಡ ಬಿಜೆಪಿ ಸಚಿವ

ಮಧ್ಯಪ್ರದೇಶದ ಮುಂಗೋಲಿಯಲ್ಲಿ ಬಿಜೆಪಿಯ ವಿಕಾಸ ಯಾತ್ರೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ಸಚಿವರೊಬ್ಬರು ಏಕಾಏಕಿ ಕುರ್ತಾವನ್ನು ಬಿಚ್ಚಿ, ನೀರಿನಿಂದ ಮೈತೊಳೆದುಕೊಂಡಿರುವ ಘಟನೆ ನಡೆದಿದೆ.

ವಿಕಾಸ ಯಾತ್ರೆ ಕಾರ್ಯಕ್ರಮದ ಮಧ್ಯೆ, ಕುರ್ತಾ ಬಿಚ್ಚಿ, ನೀರಿನಿಂದ ಮೈತೊಳೆದುಕೊಂಡ ಬಿಜೆಪಿ ಸಚಿವ
ಮಧ್ಯಪ್ರದೇಶ ಬಿಜೆಪಿ ಸಚಿವ ಬ್ರಜೇಂದ್ರ ಸಿಂಗ್ ಯಾದವ್
ನಯನಾ ರಾಜೀವ್
|

Updated on: Feb 10, 2023 | 10:15 AM

Share

ಮಧ್ಯಪ್ರದೇಶದ ಮುಂಗೋಲಿಯಲ್ಲಿ ಬಿಜೆಪಿವಿಕಾಸ ಯಾತ್ರೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ಸಚಿವರೊಬ್ಬರು ಏಕಾಏಕಿ ಕುರ್ತಾವನ್ನು ಬಿಚ್ಚಿ, ನೀರಿನಿಂದ ಮೈತೊಳೆದುಕೊಂಡಿರುವ ಘಟನೆ ನಡೆದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇದಿಕೆಯಲ್ಲಿರುವಾಗ ಸಚಿವ ಬ್ರಿಜೇಂದ್ರ ಸಿಂಗ್ ಯಾದವ್​ಗೆ ಮೈಯಲ್ಲಿ ತುರಿಕೆ ಶುರುವಾಯಿತು, ಅದು ಹೆಚ್ಚಾದ ಕಾರಣ ಅನಿವಾರ್ಯವಾಗಿ ಕುರ್ತಾವನ್ನು ತೆಗೆದು ಮೈ ತೊಳೆದುಕೊಳ್ಳಬೇಕಾಯಿತು, ಬಳಿಕವೂ ತುರಿಕೆ ಕಡಿಮೆಯಾಗದ ಕಾರಣ, ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ಊರಿಗೆ ತೆರಳಿದರು.

ಬಿಜೆಪಿ ವಿಕಾಸ ಯಾತ್ರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಫೆ.12 ರಂದು ವಿಕಾಸ ಯಾತ್ರೆಗೆ ಚಾಲನೆ ನೀಡಿದ್ದರು. ಅದು ಫೆ.25ರವರೆಗೆ ನಡೆಯಲಿದೆ. ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಸಲುವಾಗಿ, ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಜಾಗೃತಿ ಮೂಡಿಸಲಾಗುತ್ತದೆ.

ಮತ್ತಷ್ಟು ಓದಿ: Tripura Elections 2023: 2018ರಲ್ಲಿ ಸೋತ 5 ಕ್ಷೇತ್ರಗಳೂ ಸೇರಿ ತ್ರಿಪುರದ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸ್ಪರ್ಧೆ

ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ ಸಂಜೆ ತಮ್ಮ ಕ್ಷೇತ್ರ ಮುಂಗಾವಲಿಗೆ ಭೇಟಿ ನೀಡಿದ್ದರು. ಅವರು ದೇವರ್ಚಿ ಗ್ರಾಮವನ್ನು ತಲುಪಿದಾಗ, ಯಾರೂ ತುರಿಕೆ ಪುಡಿಯನ್ನು ಅವರ ಮೈಗೆ ಎರಚಿದ್ದರು, ಇದರಿಂದ ಸಚಿವರ ಕೈ ಸೇರಿದಂತೆ ದೇಹದ ನಾನಾ ಭಾಗಗಳಲ್ಲಿ ತುರಿಕೆ ಶುರುವಾಗಿತ್ತು. ತುರಿಕೆ ತೀವ್ರವಾಗಿ ಆರಂಭವಾದ ತಕ್ಷಣ ಸುತ್ತಮುತ್ತಲಿನವರು ಸಚಿವರ ಬಟ್ಟೆ ಬಿಚ್ಚಿಸಿ ನೀರಿನಿಂದ ಮೈ ತೊಳೆದಿದ್ದಾರೆ. ಆದರೆ ಈ ಕೆಲಸ ಯಾರು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪೌಡರ್ ಅನ್ನು ಸ್ಪರ್ಶಿಸಿದಾಗ ಅಥವಾ ದೇಹದ ಯಾವುದೇ ಭಾಗ ಮತ್ತು ಬಟ್ಟೆಯ ಸಂಪರ್ಕಕ್ಕೆ ಬಂದಾಗ ತೀವ್ರವಾದ ತುರಿಕೆ ಇರುತ್ತದೆ. ವಿಶೇಷವೆಂದರೆ ತುರಿಕೆ ಹೆಚ್ಚುತ್ತಲೇ ಇರುತ್ತದೆ. ಈ ತುರಿಕೆ ಗಿಡದ ಕಾಯಿಗಳ ಪುಡಿಯನ್ನು ಸಚಿವರ ಬಟ್ಟೆಯ ಮೇಲೆ ಲೇಪಿಸಲಾಗಿದೆ, ಇದರಿಂದ ಇಡೀ ದೇಹದಲ್ಲಿ ತುರಿಕೆ ಉಂಟಾಗಿ ಕಾರ್ಯಕ್ರಮ ಬಿಟ್ಟು ಹೋಗಬೇಕಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್