AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆ, ಸಿಸಿಟಿವಿ, ಲೈಟ್​ ಅಳವಡಿಸಿದಾಗ ರಾತ್ರಿ ಹೊತ್ತು ಕಂಡಿದ್ದೇನು?

ಮಧ್ಯಪ್ರದೇಶದ ಭೋಪಾನ್​ನ ಗ್ರಾಮವೊಂದರ ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಜನರಿಗೆ ಅನುಮಾನ ಬಂದಿತ್ತು., ಹಾಗಾಗಿ ಅದನ್ನು ತಿಳಿಯಲು ಸ್ಮಶಾನದಲ್ಲಿ ಸಿಸಿಟಿವಿ ಹಾಗೂ ಲೈಟ್​ಗಳನ್ನು ಅಳವಡಿಸಿದ್ದರು. ಗ್ರಾಮಸ್ಥರು ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯನ್ನು ಮಾಡಲು ಬರುತ್ತಿದ್ದರು, ಮತ್ತು ಮರುದಿನ ಚಿತಾಭಸ್ಮವನ್ನು ಸಂಗ್ರಹಿಸಲು ಹಿಂತಿರುಗಿದಾಗ, ಎಲ್ಲವೂ ಅಸ್ತವ್ಯಸ್ತವಾಗಿರುತ್ತಿತ್ತು.

ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆ, ಸಿಸಿಟಿವಿ, ಲೈಟ್​ ಅಳವಡಿಸಿದಾಗ ರಾತ್ರಿ ಹೊತ್ತು ಕಂಡಿದ್ದೇನು?
ಸ್ಮಶಾನ Image Credit source: Los Angels Times
ನಯನಾ ರಾಜೀವ್
|

Updated on:Feb 13, 2025 | 12:23 PM

Share

ಮಧ್ಯಪ್ರದೇಶದ ಭೋಪಾನ್​ನ ಗ್ರಾಮವೊಂದರ ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಜನರಿಗೆ ಅನುಮಾನ ಬಂದಿತ್ತು., ಹಾಗಾಗಿ ಅದನ್ನು ತಿಳಿಯಲು ಸ್ಮಶಾನದಲ್ಲಿ ಸಿಸಿಟಿವಿ ಹಾಗೂ ಲೈಟ್​ಗಳನ್ನು ಅಳವಡಿಸಿದ್ದರು. ಗ್ರಾಮಸ್ಥರು ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯನ್ನು ಮಾಡಲು ಬರುತ್ತಿದ್ದರು, ಮತ್ತು ಮರುದಿನ ಚಿತಾಭಸ್ಮವನ್ನು ಸಂಗ್ರಹಿಸಲು ಹಿಂತಿರುಗಿದಾಗ, ಎಲ್ಲವೂ ಅಸ್ತವ್ಯಸ್ತವಾಗಿರುತ್ತಿತ್ತು.

ಅಲ್ಲಿನ ಪರಿಸ್ಥಿತಿ ನೋಡಿ ಅವರು ಅಸಮಾಧಾನಗೊಂಡರು. ಮಾಟಮಂತ್ರದ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು, ನಿಗೂಢತೆಯನ್ನು ಬಯಲು ಮಾಡಲು ಸ್ಮಶಾನದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ದೀಪಗಳನ್ನು ಅಳವಡಿಸಲು ನಿರ್ಧರಿಸಿದರು.

ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋದಲ್ಲಿ ಮಧ್ಯರಾತ್ರಿಯಲ್ಲಿ ಉರಿಯುತ್ತಿರುವ ಚಿತೆ ಬಳಿ ಮಾಂತ್ರಿಕರ ಗುಂಪೊಂದು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. ಈ ಜನರು ದೀರ್ಘಕಾಲದವರೆಗೆ ಸ್ಮಶಾನದಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸುತ್ತಿದ್ದರು.

ಪೊಲೀಸರು ಇಬ್ಬರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಮಾವಾಸ್ಯೆಯಲ್ಲಿ ಮಾಟ, ಮಂತ್ರ ಅಭ್ಯಾಸ ಮಾಡಲಾಗುತ್ತಿತ್ತು. ಅಲ್ಲಿಯೇ ಹತ್ತಿರದ ನಿವಾಸಿಯೊಬ್ಬರು ಮಾತನಾಡಿ, ಸ್ಮಶಾನದಲ್ಲಿ ಮಾಟಗಾರರು ಈ ರೀತಿಯ ತಂತ್ರಗಳನ್ನು ಮಾಡುತ್ತಿರುವುದು ನಿವಾಸಿಗಳಿಗೆ ಆತಂಕ ಉಂಟು ಮಾಡಿತ್ತು. ಅಮವಾಸ್ಯ ಮತ್ತು ಪೂರ್ಣಿಮೆಯಂದು, ಮಧ್ಯರಾತ್ರಿಯ ಸುಮಾರಿಗೆ ಅಪರಿಚಿತ ಜನರು ಸ್ಮಶಾನಕ್ಕೆ ಆಗಮಿಸುತ್ತಿದ್ದರು.

ಮತ್ತಷ್ಟು ಓದಿ: ಗದಗ: ಅನ್ನದಾನೇಶ್ವರ ಮಠದ ಆಸ್ತಿಯಲ್ಲೂ ವಕ್ಫ್ ಹೆಸರು, ಸ್ಮಶಾನ, ರೈತರ 50 ಎಕರೆ ಜಮೀನಿಗೂ ಕಂಟಕ

ಗ್ರಾಮಸ್ಥರು ಅಲ್ಲಿ ಹ್ಯಾಲೊಜೆನ್ ದೀಪಗಳನ್ನು ಸಹ ಅಳವಡಿಸಿದ್ದರು. ಆದರೂ, ಘಟನೆಗಳು ನಿಲ್ಲುತ್ತಿರಲಿಲ್ಲ. ಅದರ ನಂತರ, ಪರಸ್ಪರ ಒಪ್ಪಿಗೆಯಿಂದ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಲಾಯಿತು. ಮೂವರು ಪುರುಷರು ಮತ್ತು ಒಬ್ಬ ಮಹಿಳೆ ನವರಾತ್ರಿ 9ನೇ ರಾತ್ರಿ ಇವರು ತಾಂತ್ರಿಕ ವಿಧಿ ವಿಧಾನಗಳನ್ನು ನಡೆಸುತ್ತಿರುವುದನ್ನು ನಾವು ನೋಡಿದ್ದೇವೆ.

ಅಲ್ಲಿ ಕಪ್ಪು ಬಟ್ಟೆಯಿಂದ ಮಾಡಿದ ಪುಸ್ತಕಗಳನ್ನು ಇಡಲಾಗಿತ್ತು. ರೊಟ್ಟಿ ಮತ್ತು ಪೂರಿಗಳನ್ನು ಒಂದು ತಟ್ಟೆಯಲ್ಲಿ ಇರಿಸಲಾಗಿತ್ತು. ಗ್ರಾಮಸ್ಥರು ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ವಶಕ್ಕೆ ಪಡೆದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:17 pm, Thu, 13 February 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ