ಸಂದೀಪ್ ಶಿಂಧೆ ಸಮಿತಿ ವರದಿ ಅಂಗೀಕರಿಸಿದ ಬಳಿಕ ಮರಾಠಿಗರಿಗೆ ಕುಣಬಿ ಪ್ರಮಾಣ ಪತ್ರ ಕುರಿತು ಸಂಪುಟ ತೀರ್ಮಾನ

ಸಂದೀಪ್ ಶಿಂಧೆ ಸಮಿತಿ ಸಲ್ಲಿಸಿರುವ ಪ್ರಾಥಮಿಕ ವರದಿಯನ್ನು ಅಂಗೀಕರಿಸಿದ ಬಳಿಕ ಮರಾಠಿಗರಿಗೆ ಕುನಬಿ ಪ್ರಮಾಣ ಪತ್ರ ನೀಡುವ ಕುರಿತು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಾರಂಗೆ ಪಾಟೀಲ್ ಅವರಿಗೆ ಸಿಎಂ ತಿಳಿಸಿರುವುದಾಗಿ ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಸಂದೀಪ್ ಶಿಂಧೆ ಸಮಿತಿ ವರದಿ ಅಂಗೀಕರಿಸಿದ ಬಳಿಕ ಮರಾಠಿಗರಿಗೆ ಕುಣಬಿ ಪ್ರಮಾಣ ಪತ್ರ ಕುರಿತು ಸಂಪುಟ ತೀರ್ಮಾನ
ಏಕನಾಥ್ ಶಿಂಧೆ
Follow us
|

Updated on:Oct 31, 2023 | 5:23 PM

ಮುಂಬೈ ಅಕ್ಟೋಬರ್31: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಅವರು ಮಂಗಳವಾರ ಮರಾಠಾ ಮೀಸಲಾತಿ (Maratha reservation) ಹೋರಾಟಗಾರ ಮನೋಜ್ ಜಾರಂಗೆ-ಪಾಟೀಲ್ ಅವರನ್ನು ದೂರವಾಣಿ ಕರೆ ಮೂಲಕ ಮರಾಠ ಮೀಸಲಾತಿಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದ್ದು, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಒತ್ತಾಯಿಸಿದರು. ಬೀಡ್ ಮತ್ತು ಛತ್ರಪತಿ ಸಂಭಾಜಿ ನಗರ ಜಿಲ್ಲೆಗಳಲ್ಲಿ ಕನಿಷ್ಠ ಮೂವರು ಶಾಸಕರ ಕಚೇರಿ ಮತ್ತು ವಸತಿ ಆವರಣಗಳ ಮೇಲೆ ನಡೆಯುತ್ತಿರುವ ಮೀಸಲಾತಿ ಆಂದೋಲನದ ಬಗ್ಗೆ ಚರ್ಚಿಸುವ ನಿರೀಕ್ಷೆಯಿರುವ ರಾಜ್ಯ ಸಚಿವ ಸಂಪುಟ ಸಭೆಗೆ ಗಂಟೆಗಳ ಮೊದಲು ಜಾರಂಜ್-ಪಾಟೀಲ್ ಅವರೊಂದಿಗೆ ಶಿಂಧೆ ಅವರು ಮಂಗಳವಾರ 20 ನಿಮಿಷಗಳ ದೂರವಾಣಿ ಕರೆ ಮಾಡಿದ್ದಾರೆ.

ಸಂದೀಪ್ ಶಿಂಧೆ ಸಮಿತಿ ಸಲ್ಲಿಸಿರುವ ಪ್ರಾಥಮಿಕ ವರದಿಯನ್ನು ಅಂಗೀಕರಿಸಿದ ಬಳಿಕ ಮರಾಠಿಗರಿಗೆ ಕುಣಬಿ ಪ್ರಮಾಣ ಪತ್ರ ನೀಡುವ ಕುರಿತು ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಾರಂಗೆ ಪಾಟೀಲ್ ಅವರಿಗೆ ಸಿಎಂ ತಿಳಿಸಿರುವುದಾಗಿ ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಮೀಸಲಾತಿ ಸಮಸ್ಯೆಯನ್ನು ಕಾನೂನುಬದ್ಧವಾಗಿ ಪರಿಹರಿಸಲು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದೆ. ಅದನ್ನು ಆಲಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ ಎಂದು ಸಿಎಂ ಹೇಳಿದ್ದಾರೆ. ಕಾನೂನಾತ್ಮಕ ಪರಿಶೀಲನೆಗೆ ನಿಲ್ಲುವ ಸುಸ್ಥಿರ ಮೀಸಲಾತಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರಿಗೆ ತಿಳಿಸಲಾಗಿದೆ ಎಂದು ಸಿಎಂಒ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.ಮುಖ್ಯಮಂತ್ರಿಗಳು ಸಹ ಕಾರ್ಯಕರ್ತನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಹೇಳಿದ್ದ, ಅವರ ಕೋರಿಕೆಯ ಮೇರೆಗೆ ಜಾರಂಗೆ-ಪಾಟೀಲರು ಒಂದು ಲೋಟ ನೀರುಕುಡಿದಿದ್ದಾರೆ.

ಆದರೆ ಜಾರಂಗೆ-ಪಾಟೀಲ್ ಸದ್ಯಕ್ಕೆ ತಮ್ಮ ಪ್ರತಿಭಟನೆಯನ್ನು ನಿಲ್ಲಿಸಲು ನಿರಾಕರಿಸಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಾರಂಗೆ-ಪಾಟೀಲ್, ರಾಜ ಶಿವಾಜಿಯ ವಂಶಸ್ಥರಾದ ಶಾಹು ಮಹಾರಾಜರ ಕೋರಿಕೆಯ ಮೇರೆಗೆ ಮುಂದಿನ ಎರಡು ದಿನಗಳವರೆಗೆ ನೀರು ತೆಗೆದುಕೊಳ್ಳುವುದಾಗಿ ಹೇಳಿದರು. ಆದರೆ ಕುನಬಿ ಜಾತಿ ಪ್ರಮಾಣ ಪತ್ರ ನೀಡುವ ಮೂಲಕ ಎಲ್ಲ ಮರಾಠಿಗರನ್ನು ಒಬಿಸಿ ವರ್ಗಕ್ಕೆ ಸೇರಿಸುವ ನಿರ್ಧಾರ ಕೈಗೊಳ್ಳಲು ಸರಕಾರ ವಿಫಲವಾದರೆ ಎರಡು ದಿನಗಳ ನಂತರ ನೀರು ಕೂಡಾ ಬಿಡುವುದಾಗಿ ಎಚ್ಚರಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು, ಮರಾಠರಿಗೆ ಮೀಸಲಾತಿ ನೀಡಬೇಕು: ಮನೋಜ ಜಾರಂಗೆ

ಮರಾಠ ಮೀಸಲಾತಿ ಬೇಡಿಕೆ ಕುರಿತು ಚರ್ಚಿಸಲು ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಎಂದು ಜಾರಂಗೆ ಒತ್ತಾಯಿಸಿದ್ದಾರೆ.ಮಹಾರಾಷ್ಟ್ರದ ಸಚಿವರ ನಿಯೋಗವು ಸಂಜೆ ಕಾರ್ಯಕರ್ತ ಅಥವಾ ಅವರ ಪ್ರತಿನಿಧಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಪಾಟೀಲ ಅವರು ಸಮುದಾಯಕ್ಕೆ ಕೋಟಾ ಪಡೆಯಲು ಅನುವು ಮಾಡಿಕೊಡಲು ಎಲ್ಲಾ ಮರಾಠಿಗರಿಗೆ ಕುಮನಬಿ ಪ್ರಮಾಣಪತ್ರ ನೀಡುವ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ. ಕುಣಬಿ, ಉಪ-ಮರಾಠ ಜಾತಿ, ಒಬಿಸಿ ವರ್ಗದ ಅಡಿಯಲ್ಲಿ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಕೋಟಾವನ್ನು ಹೊಂದಿದೆ.

ಇದಲ್ಲದೆ, ಹಿಂದುಳಿದ ವರ್ಗಗಳ ಆಯೋಗವು ಮರಾಠ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರೀಕ್ಷಿಸಲು ಹೊಸ ಪ್ರಾಯೋಗಿಕ ಡೇಟಾವನ್ನು ಸರ್ಕಾರ ಸಂಗ್ರಹಿಸುತ್ತದೆ. ದಿಲೀಪ್ ಭೋಸ್ಲೆ ಅಧ್ಯಕ್ಷತೆಯಲ್ಲಿ ಮರೋಟಿ ಗಾಯಕ್ವಾಡ್ ಅವರ ಸಲಹಾ ಮಂಡಳಿ, ನ್ಯಾ ಸಂದೀಪ್ ಶಿಂಧೆ ಅವರು ಮರಾಠ ಮೀಸಲಾತಿಗೆ ಸಂಬಂಧಿಸಿದ ಕಾನೂನು ವಿಷಯಗಳಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.

ರಾಜ್ಯ ಸಚಿವ ಸಂಪುಟ ಸಭೆಯ ಇತರ ನಿರ್ಧಾರಗಳು ರಾಜ್ಯ ವಿಪತ್ತು ನಿರ್ವಹಣಾ ನಿಧಿಯ ನಿಯಮಗಳ ಪ್ರಕಾರ, ನೈಸರ್ಗಿಕ ವಿಕೋಪದಿಂದ ಸಂತ್ರಸ್ತರಾದವರಿಗೆ 2 ಹೆಕ್ಟೇರ್ ಬದಲಿಗೆ 3 ಹೆಕ್ಟೇರ್ ಮಿತಿಯೊಳಗೆ ಪರಿಹಾರವನ್ನು ನೀಡಲಾಗುತ್ತದೆ. (ಪರಿಹಾರ ಮತ್ತು ಪುನರ್ವಸತಿ ಇಲಾಖೆ). ಚೆಂಬೂರ್‌ನಲ್ಲಿ ಎಸ್‌ಸಿ ಬಾಲಕ ಮತ್ತು ಬಾಲಕಿಯರಿಗಾಗಿ ಐಟಿಐ ಕೋರ್ಸ್‌ ಆರಂಭಿಸಲಾಗುವುದು (ಕೌಶಲ ಅಭಿವೃದ್ಧಿ).ನಂದಗಾಂವ್ (ಕಂದಾಯ ಮತ್ತು ಅರಣ್ಯ) ನಲ್ಲಿ ಪಿಎಂ ಮಿತ್ರ ಪಾರ್ಕ್ ನಿರ್ಮಾಣಕ್ಕಾಗಿ ಸ್ಟಾಂಪ್ ನೋಂದಣಿ ಶುಲ್ಕದಲ್ಲಿ 100 ಪ್ರತಿಶತ ರಿಯಾಯಿತಿ. ಚಿಟ್ ಫಂಡ್ ನ್ಯಾಯಾಲಯದ ಪ್ರಕರಣಗಳು ವೇಗಗೊಳ್ಳಲಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Tue, 31 October 23

ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ