ಪುಣೆ ಅಪಘಾತದ ಬಗ್ಗೆ ರಾಹುಲ್ ಗಾಂಧಿಯವರ ‘ಎರಡು ಭಾರತ’ ಗೇಲಿ; ಇದು ಕೀಳುಮಟ್ಟದ ಪ್ರಯತ್ನ ಎಂದ ಫಡ್ನವೀಸ್

“ಈ ಅಪಘಾತದಲ್ಲಿ ಪೊಲೀಸರು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಿದರು. ಬಾಲ ನ್ಯಾಯ ಮಂಡಳಿಯ ಆದೇಶದ ಬಗ್ಗೆ ನಾವೂ ದಿಗ್ಭ್ರಮೆ ವ್ಯಕ್ತಪಡಿಸಿದ್ದೇವೆ. ಆದರೆ, ಪೊಲೀಸರು ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್‌ ವಿಚಾರಣೆಗೆ ಒಳಪಟ್ಟಿದೆ. ಅಲ್ಲದೇ ಅಪ್ರಾಪ್ತ ಬಾಲಕನಿಗೆ ಮದ್ಯ ನೀಡಿದವರು ಹಾಗೂ ಆರೋಪಿಯ ಅಪ್ಪನನ್ನು ಬಂಧಿಸಲಾಗಿದೆ. ಪೊಲೀಸರು ಅಗತ್ಯವಿರುವ ಎಲ್ಲವನ್ನೂ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಪ್ರತಿಯೊಂದು ವಿಷಯದಲ್ಲೂ ಚುನಾವಣಾ ರಾಜಕೀಯವನ್ನು ತರುವ ಪ್ರಯತ್ನ ತಪ್ಪು ಎಂದು ಫಡ್ನವೀಸ್ ಹೇಳಿದ್ದಾರೆ.

ಪುಣೆ ಅಪಘಾತದ ಬಗ್ಗೆ ರಾಹುಲ್ ಗಾಂಧಿಯವರ ‘ಎರಡು ಭಾರತ’ ಗೇಲಿ; ಇದು ಕೀಳುಮಟ್ಟದ ಪ್ರಯತ್ನ ಎಂದ ಫಡ್ನವೀಸ್
ದೇವೇಂದ್ರ ಫಡ್ನವೀಸ್- ರಾಹುಲ್ ಗಾಂಧಿ
Follow us
|

Updated on: May 22, 2024 | 8:17 PM

ಮುಂಬೈ ಮೇ 22: ಪುಣೆಯಲ್ಲಿ (Pune Accident) ಅಪ್ರಾಪ್ತ ಪೋರ್ಷೆ ಕಾರು ಚಲಾಯಿಸಿ ಸಂಭವಿಸಿದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ (Rahul Gandhi) ಅವರ ‘ಎರಡು ಭಾರತ’ ಹೇಳಿಕೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಬುಧವಾರ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆ ಘಟನೆಯನ್ನು ರಾಜಕೀಯಗೊಳಿಸುವ ಕೀಳು ಮಟ್ಟದ ಪ್ರಯತ್ನವಾಗಿದೆ ಎಂದು ಫಡ್ನವೀಸ್ ಹೇಳಿದ್ದಾರೆ. ನಿನ್ನೆ ರಾಹುಲ್ ಗಾಂಧಿ ಪುಣೆ ಕಾರು ಅಪಘಾತದ ವಿಡಿಯೊವನ್ನು ಬಿಡುಗಡೆ ಮಾಡಿದ್ದರು. ಅಪಘಾತವನ್ನು ರಾಜಕೀಯಗೊಳಿಸಲು ಇದು ಅತ್ಯಂತ ಕೀಳು ಮಟ್ಟದ ಪ್ರಯತ್ನ ಎಂದು ನಾನು ನಂಬುತ್ತೇನೆ ಎಂದು ಫಡ್ನವೀಸ್ ಸುದ್ದಿಗಾರರಿಗೆ ತಿಳಿಸಿದರು.

“ಈ ಅಪಘಾತದಲ್ಲಿ ಪೊಲೀಸರು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಿದರು. ಬಾಲ ನ್ಯಾಯ ಮಂಡಳಿಯ ಆದೇಶದ ಬಗ್ಗೆ ನಾವೂ ದಿಗ್ಭ್ರಮೆ ವ್ಯಕ್ತಪಡಿಸಿದ್ದೇವೆ. ಆದರೆ, ಪೊಲೀಸರು ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್‌ ವಿಚಾರಣೆಗೆ ಒಳಪಟ್ಟಿದೆ. ಅಲ್ಲದೇ ಅಪ್ರಾಪ್ತ ಬಾಲಕನಿಗೆ ಮದ್ಯ ನೀಡಿದವರು ಹಾಗೂ ಆರೋಪಿಯ ಅಪ್ಪನನ್ನು ಬಂಧಿಸಲಾಗಿದೆ. ಪೊಲೀಸರು ಅಗತ್ಯವಿರುವ ಎಲ್ಲವನ್ನೂ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಪ್ರತಿಯೊಂದು ವಿಷಯದಲ್ಲೂ ಚುನಾವಣಾ ರಾಜಕೀಯವನ್ನು ತರುವ ಪ್ರಯತ್ನ ತಪ್ಪು. ನಾನು ಇದನ್ನು ಖಂಡಿಸುತ್ತೇನೆ ಎಂದು ಫಡ್ನವೀಸ್ ಹೇಳಿದ್ದಾರೆ.

ಮಂಗಳವಾರ, ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು, ಸಂಪತ್ತಿನ ಮೇಲೆ ನ್ಯಾಯವನ್ನು ಅವಲಂಬಿಸಿರುವ ಎರಡು ಭಾರತಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ದೇವೇಂದ್ರ ಫಡ್ನವೀಸ್ ಮಾತು

ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ರಾಹುಲ್ ಗಾಂಧಿ ಅವರು ಬಸ್ ಚಾಲಕ, ಟ್ರಕ್ ಚಾಲಕ ಅಥವಾ ಯಾವುದೇ ಓಲಾ, ಉಬರ್ ಅಥವಾ ಆಟೋ ಚಾಲಕರು ಆಕಸ್ಮಿಕವಾಗಿ ಯಾರನ್ನಾದರೂ ಕೊಂದರೆ, ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಶ್ರೀಮಂತ ಮನೆಯ 16-17 ವರ್ಷದ ಮಗ, ಪೋರ್ಷೆ ಚಾಲನೆ ಮಾಡುತ್ತಿದ್ದರೆ, ಅವನನ್ನು ಪ್ರಬಂಧ ಬರೆಯಲು ಕೇಳಲಾಗುತ್ತದೆ” ದರು. “ಟ್ರಕ್ ಡ್ರೈವರ್‌ಗಳು ಅಥವಾ ಬಸ್ ಡ್ರೈವರ್‌ಗಳಿಗೆ ಪ್ರಬಂಧ ಬರೆಯುವಂತೆ ಯಾಕೆ ಹೇಳಿಲ್ಲ ಎಂದು ರಾಹುಲ್ ಪ್ರಶ್ನಿಸಿದ್ದಾರೆ,

ಮದ್ಯದ ಅಮಲಿನಲ್ಲಿ ಅಪ್ರಾಪ್ತ ಬಾಲಕನೊಬ್ಬ ವೇಗವಾಗಿ ಚಲಾಯಿಸುತ್ತಿದ್ದ ಐಷಾರಾಮಿ ವಾಹನಕ್ಕೆ ಡಿಕ್ಕಿ ಹೊಡೆದು ಮೋಟಾರ್‌ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಟೆಕಿಗಳು ಸಾವಿಗೀಡಾಗಿದ್ದರು. 24 ವರ್ಷದ ಅನೀಶ್ ಅವಧಿಯಾ ಮತ್ತು ಅಶ್ವಿನಿ ಕೋಸ್ಟಾ ಚಲಿಸುತ್ತಿದ್ದ ಬೈಕಿಗೆ ಅಪ್ರಾಪ್ತ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿತ್ತು.

15 ದಿನಗಳ ಕಾಲ ಯರವಾಡ ಟ್ರಾಫಿಕ್ ಪೊಲೀಸರೊಂದಿಗೆ ಕೆಲಸ ಮಾಡುವ ಮತ್ತು ರಸ್ತೆ ಅಪಘಾತಗಳ ಬಗ್ಗೆ ಪ್ರಬಂಧ ಬರೆಯುವ ಷರತ್ತಿನಡಿಯಲ್ಲಿ ಘಟನೆ ನಡೆದ ಗಂಟೆಗಳ ನಂತರ ಅಪ್ರಾಪ್ತನಿಗೆ ಜಾಮೀನು ನೀಡಲಾಯಿತು.

ಆಕ್ರೋಶದ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಪೋರ್ಷೆ ಕಾರು ಅಪಘಾತ; ಅಪ್ರಾಪ್ತನ ತಂದೆ ವಿಶಾಲ್ ಅಗರ್​ವಾಲ್ 3 ದಿನ ಪೊಲೀಸ್ ವಶಕ್ಕೆ

ಅಪಘಾತದ ರಾತ್ರಿ ಬಾಲಾಪರಾಧಿಗಳಿಗೆ ಮದ್ಯ ಬಡಿಸಿದ ಬಾರ್ ಮಾಲೀಕರು ಮತ್ತು ಬಾರ್ ಮ್ಯಾನೇಜರ್ ಬಂಧಿತರಲ್ಲಿ ಸೇರಿದ್ದಾರೆ. ಮೂರನೇ ಆರೋಪಿ ಮತ್ತೊಂದು ಬಾರ್‌ನ ಬಾರ್ ಮ್ಯಾನೇಜರ್. ಆರೋಪಿಯ ಅಪ್ಪ ಖ್ಯಾತ ರಿಯಲ್ ಎಸ್ಟೇಟ್ ಡೆವಲಪರ್ ನ್ನು ಮಂಗಳವಾರ ಬಂಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ