Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ: ಕಿಕ್ಕಿರಿದು ತುಂಬಿದ್ದ ರೈಲಿನಿಂದ ಬಿದ್ದ ಮಹಿಳೆ, ಗಂಭೀರ ಗಾಯ

ಕಿಕ್ಕಿರಿದು ತುಂಬಿದ್ದ ರೈಲಿನಿಂದ ಮಹಿಳೆ ಆಯತಪ್ಪಿ ಬಿದ್ದು, ಗಂಭೀರ ಗಾಯಗಳಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬದ್ಲಾಪುರ ರೈಲು ನಿಲ್ದಾಣದ ಲೋಕಲ್ ರೈಲಿನಿಂದ ಮಹಿಳೆಯೊಬ್ಬರು ಬಿದ್ದು ತಲೆಗೆ ತೀವ್ರ ಗಾಯಗಳಾಗಿವೆ. ಇಂದು ಬೆಳಗ್ಗೆ 8.59 ಕ್ಕೆ ಕರ್ಜತ್-ಮುಂಬೈ ಲೋಕಲ್ ರೈಲು ಬದ್ಲಾಪುರ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಈ ಘಟನೆ ನಡೆದಿದೆ.

ಮಹಾರಾಷ್ಟ್ರ: ಕಿಕ್ಕಿರಿದು ತುಂಬಿದ್ದ ರೈಲಿನಿಂದ ಬಿದ್ದ ಮಹಿಳೆ, ಗಂಭೀರ ಗಾಯ
ಮಹಿಳೆ Image Credit source: India Today
Follow us
ನಯನಾ ರಾಜೀವ್
|

Updated on: Mar 07, 2025 | 3:13 PM

ಮಹಾರಾಷ್ಟ್ರ, ಮಾರ್ಚ್​ 07: ಕಿಕ್ಕಿರಿದು ತುಂಬಿದ್ದ ರೈಲಿನಿಂದ ಮಹಿಳೆ ಆಯತಪ್ಪಿ ಬಿದ್ದು, ಗಂಭೀರ ಗಾಯಗಳಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬದ್ಲಾಪುರ ರೈಲು ನಿಲ್ದಾಣದ ಲೋಕಲ್ ರೈಲಿನಿಂದ ಮಹಿಳೆಯೊಬ್ಬರು ಬಿದ್ದು ತಲೆಗೆ ತೀವ್ರ ಗಾಯಗಳಾಗಿವೆ. ಇಂದು ಬೆಳಗ್ಗೆ 8.59 ಕ್ಕೆ ಕರ್ಜತ್-ಮುಂಬೈ ಲೋಕಲ್ ರೈಲು ಬದ್ಲಾಪುರ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಈ ಘಟನೆ ನಡೆದಿದೆ.

ಕಲ್ಪನಾ ಜೇಡಿಯಾ ಎಂದು ಗುರುತಿಸಲ್ಪಟ್ಟ ಮಹಿಳೆ ರೈಲು ಹತ್ತಲು ಪ್ರಯತ್ನಿಸುತ್ತಿದ್ದರು. ಆದರೆ, ವಿಪರೀತ ಜನದಟ್ಟಣೆಯಿಂದಾಗಿ, ಅವಳು ಹೆಜ್ಜೆ ಇಡಲು ಸಾಧ್ಯವಾಗಲಿಲ್ಲ. ರೈಲು ನಿಲ್ದಾಣದಿಂದ ಹೊರಟಾಗ, ಜನಸಂದಣಿಯಿಂದ ಬಂದ ಒತ್ತಡದಿಂದಾಗಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದರ ಪರಿಣಾಮವಾಗಿ ತಲೆಗೆ ಗಂಭೀರ ಗಾಯಗಳಾಗಿವೆ.

ಅವರನ್ನು ತಕ್ಷಣ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಬದ್ಲಾಪುರದಿಂದ ಪ್ರಯಾಣಿಸುವ ಪ್ರಯಾಣಿಕರು, ವಿಶೇಷವಾಗಿ ಪೀಕ್ ಅವರ್ ಗಳಲ್ಲಿ ತೀವ್ರ ದಟ್ಟಣೆಯನ್ನು ಎದುರಿಸುತ್ತಾರೆ. ಬೆಳಗ್ಗೆ 8.59 ಕ್ಕೆ ಲೋಕಲ್ ರೈಲು ಹೊರಟರೆ ನಂತರ ಮುಂದಿನ 30 ನಿಮಿಷಗಳ ಕಾಲ ಬೇರೆ ಯಾವುದೇ ರೈಲು ಇರುವುದಿಲ್ಲ, ಇದರಿಂದಾಗಿ ಪ್ರಯಾಣಿಕರು ರೈಲಿನಲ್ಲಿ ನಿಂತು ಪ್ರಯಾಣಿಸಲು ಕೂಡ ಪರದಾಡಬೇಕಾಗುತ್ತದೆ.

ಮತ್ತಷ್ಟು ಓದಿ: Video: ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್

ಕರ್ಜತ್ ನಿಂದ ಹೊರಟ ಈ ರೈಲು ಬದ್ಲಾಪುರ ತಲುಪುವ ಹೊತ್ತಿಗೆ ಜನರಿಂದ ತುಂಬಿ ತುಳುಕುತ್ತಿದ್ದು, ಪ್ರಯಾಣದ ಸಮಯದಲ್ಲಿ ಅನೇಕ ಪ್ರಯಾಣಿಕರು ಬಾಗಿಲುಗಳಿಗೆ ಅಂಟಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ.

ಅಪಾಯಕಾರಿ ಪರಿಸ್ಥಿತಿಗಳ ಬಗ್ಗೆ ಪ್ರಯಾಣಿಕರು ಬಹಳ ಹಿಂದಿನಿಂದಲೂ ಕಳವಳ ವ್ಯಕ್ತಪಡಿಸಿದ್ದಾರೆ, ಇಂತಹ ಘಟನೆಗಳು ಆಗಾಗ ಸಂಭವಿಸುವುದರಿಂದ ಪ್ರಯಾಣವು ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ. ಸುರಕ್ಷತೆಯನ್ನು ಸುಧಾರಿಸಲು ಮತ್ತು ಜನದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರೈಲ್ವೆ ಅಧಿಕಾರಿಗಳು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪುನೀತ್ ಸಮಾಧಿಗೆ ಶಿವಣ್ಣ-ಗೀತಕ್ಕ ಭೇಟಿ; ಭಾವುಕರಾದ ದಂಪತಿ
ಪುನೀತ್ ಸಮಾಧಿಗೆ ಶಿವಣ್ಣ-ಗೀತಕ್ಕ ಭೇಟಿ; ಭಾವುಕರಾದ ದಂಪತಿ
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಬಿಜೆಪಿ ನಾಯಕರು ಹೇಳುವ ಸುಳ್ಳುಗಳನ್ನು ನಂಬಲು ಜನ ತಯಾರಿಲ್ಲ: ಸಿದ್ದರಾಮಯ್ಯ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಂದೆ ನಿಧನ, ಪ್ರಧಾನಿ ಮೋದಿ ಅಂತಿಮ ನಮನ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಂದೆ ನಿಧನ, ಪ್ರಧಾನಿ ಮೋದಿ ಅಂತಿಮ ನಮನ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ4 ರಷ್ಟು ಮೀಸಲಾತಿ ಅಸವಿಂಧಾನಿಕ: ಸೂರ್ಯ
ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ4 ರಷ್ಟು ಮೀಸಲಾತಿ ಅಸವಿಂಧಾನಿಕ: ಸೂರ್ಯ
ಕೇಂದ್ರ ನೀಡಿರೋದು ₹ 10,000 ಕೋಟಿ ಅಲ್ಲ, ₹1030 ಕೋಟಿ ಮಾತ್ರ: ಸಿದ್ದರಾಮಯ್ಯ
ಕೇಂದ್ರ ನೀಡಿರೋದು ₹ 10,000 ಕೋಟಿ ಅಲ್ಲ, ₹1030 ಕೋಟಿ ಮಾತ್ರ: ಸಿದ್ದರಾಮಯ್ಯ
ಕಾರಿಂದ ಇಳಿಯುವ ಮೊದಲು ಸುಮಾರು ಹೊತ್ತು ಫೋನಲ್ಲಿ ಸಿಎಂ ಮಾತು!
ಕಾರಿಂದ ಇಳಿಯುವ ಮೊದಲು ಸುಮಾರು ಹೊತ್ತು ಫೋನಲ್ಲಿ ಸಿಎಂ ಮಾತು!
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್