Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಬೆಳ್ಳಿ ಗಜ್ಜೆಗಾಗಿ ಅಜ್ಜಿಯ ಪಾದವನ್ನೇ ಕತ್ತರಿಸಿ ಕೊಲೆ ಮಾಡಿದ ಮೊಮ್ಮಗ; ಶವ ಹೂಳಲು ಸೋದರನ ಸಹಕಾರ

ಶುಕ್ರವಾರ ರಾಜೇಶ್​ ತನ್ನ ಅಜ್ಜಿಯ ಬಳಿ ಹೋಗಿ ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಡೋಕೆ ಒಪ್ಪಲಿಲ್ಲ. ನನ್ನ ಬಳಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ಆದರೆ ಸುಮ್ಮನಾಗದ ರಾಜೇಶ್​, ಹಾಗಿದ್ದರೆ ಬೆಳ್ಳಿಯ ಗಜ್ಜೆ ಕೊಡುವಂತೆ ಕೇಳಿದ್ದಾನೆ.

Shocking News: ಬೆಳ್ಳಿ ಗಜ್ಜೆಗಾಗಿ ಅಜ್ಜಿಯ ಪಾದವನ್ನೇ ಕತ್ತರಿಸಿ ಕೊಲೆ ಮಾಡಿದ ಮೊಮ್ಮಗ; ಶವ ಹೂಳಲು ಸೋದರನ ಸಹಕಾರ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Feb 17, 2022 | 6:34 PM

24 ವರ್ಷದ ಯುವಕನೊಬ್ಬ ತನ್ನ ಅಜ್ಜಿಯ ಪಾದ ಕತ್ತರಿಸಿ, ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಇಂಧೋರ್​ ಜಿಲ್ಲೆಯ(Indore District)ಖುಡೇಲ್​​ನಲ್ಲಿ ನಡೆದಿದೆ. ಆರೋಪಿಯ ಹೆಸರು ರಾಜೇಶ್​. ಈ ವ್ಯಕ್ತಿಗೆ ಸಹೋದರ ಸುರೇಶ್​ ಸಹಾಯ ಮಾಡಿದ್ದಾನೆ. ನಂತರ ಇಬ್ಬರೂ ಸೇರಿ ಅಜ್ಜಿಯ ಮೃತದೇಹವನ್ನು  ಗುಪ್ತವಾಗಿ ಮಣ್ಣು ಮಾಡಿದ್ದಾರೆ.

ಅಷ್ಟಕ್ಕೂ ಅಜ್ಜಿಯನ್ನು ಕೊಂದಿದ್ದು ಕೇವಲ ಒಂದು ಜತೆ ಗಜ್ಜೆಗಾಗಿ. ಮೃತರ ಹೆಸರು ಜಮ್ನಾಬಾಯಿ (75). ಇವರು ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಸೋಮವಾರ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಅದಾದ ಬಳಿಕ ಮಂಗಳವಾರ ಅಜ್ಜಿಯ ಮೃತದೇಹ ಸಿಕ್ಕಿದೆ. ಮನೆಯ ಸಮೀಪವೇ ಇರುವ ಬಯೋಗ್ಯಾಸ್​ ಗುಂಡಿಯಲ್ಲಿ ಜಮ್ನಾಬಾಯಿ ಶವ ಇತ್ತು. ಪಾದ ಕತ್ತರಿಸಿದ ಸ್ಥಿತಿಯಲ್ಲಿದ್ದು ಗಜ್ಜೆ ಇರಲಿಲ್ಲ ಎಂದು ಪ್ರಕರಣ ದಾಖಲು ಮಾಡಿಕೊಂಡಿರುವ ಖುಡೇಲ್​ ಪೊಲೀಸರು ತಿಳಿಸಿದ್ದಾರೆ.

ಕೆಲವು ಪುರಾವೆಗಳು ರಾಜೇಶ್ ಅಪರಾಧಿ ಎಂದು ತೋರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ತಾನು ಕೊಲೆ ಮಾಡಿದ್ದನ್ನು ಅವನು ಒಪ್ಪಿಕೊಂಡಿದ್ದಾನೆ. ಶುಕ್ರವಾರ ರಾಜೇಶ್​ ತನ್ನ ಅಜ್ಜಿಯ ಬಳಿ ಹೋಗಿ ಹಣ ಕೇಳಿದ್ದಾನೆ. ಆದರೆ ಅವರು ಹಣ ಕೊಡೋಕೆ ಒಪ್ಪಲಿಲ್ಲ. ನನ್ನ ಬಳಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ಆದರೆ ಸುಮ್ಮನಾಗದ ರಾಜೇಶ್​, ಹಾಗಿದ್ದರೆ ಬೆಳ್ಳಿಯ ಗಜ್ಜೆ ಕೊಡುವಂತೆ ಕೇಳಿದ್ದಾನೆ. ಅದು ಸುಮಾರು 750 ಗ್ರಾಂ ತೂಕವಿದ್ದು, ಮಾರಾಟ ಮಾಡಿದರೆ ದುಡ್ಡು ಬರುತ್ತದೆ ಎಂಬ ಖತರ್ನಾಕ್​ ಐಡಿಯಾ ಅವನದಾಗಿತ್ತು.  ಆದರೆ ಅಜ್ಜಿ ಒಪ್ಪಲಿಲ್ಲ.

ಇದೇ ಕಾರಣಕ್ಕೆ ರಾಜೇಶ್​ ಮತ್ತು ಅಜ್ಜಿ ಜಗಳವಾಡಿಕೊಂಡಿದ್ದಾರೆ. ಹೊಡೆದಾಟವೂ ನಡೆದಿದೆ. ಆಗ ರಾಜೇಶ್ ಅಜ್ಜಿಯನ್ನು ಹತ್ಯೆ ಮಾಡಿದ್ದಾನೆ. ನಂತರ ಪಾದವನ್ನೂ ಕಡಿದಿದ್ದಾನೆ. ಗೆಜ್ಜೆ ಮತ್ತು ಉಳಿದ ಆಭರಣಗಳನ್ನೂ ಕದ್ದೊಯ್ದಿದ್ದಾನೆ.  ಇದೆಲ್ಲವನ್ನೂ ಪೊಲೀಸರಿಗೆ ಆತನೇ ತಿಳಿಸಿದ್ದಾನೆ.

ಇದನ್ನೂ ಓದಿ: ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಅಂತ ಈಶ್ವರಪ್ಪ ಹೇಳಿಲ್ಲ ಎಂದರು ಬಿಜೆಪಿ ನಾಯಕ ಸಿಟಿ ರವಿ

ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್