AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​​ಲೈನ್​ ವಹಿವಾಟು ಸಹವಾಸ ಎಚ್ಚರ !- ಹಸು ಮಾರಲು ಹೋಗಿ 1 ಲಕ್ಷ ರೂಪಾಯಿ ಕಳೆದುಕೊಂಡ ಯುವಕ

Online Frauds: ನನಗೆ ಹಸು ಇಷ್ಟವಾಯಿತು, ಕೊಳ್ಳುತ್ತೇನೆ. ಆದರೆ ನಾನು ಭಾರತೀಯ ಸೇನೆಯಲ್ಲಿ ಇರುವುದರಿಂದ ಫೋನ್​​ಪೇ ಬಳಕೆ ಮಾಡುತ್ತಿಲ್ಲ. ಹಾಗಾಗಿ ನಾನೊಂದು QR ಕೋಡ್​ ಕಳಿಸುತ್ತೇನೆ. ಅದನ್ನು ಸ್ಕ್ಯಾನ್​ ಮಾಡಿದರೆ ನಿಮ್ಮ ಅಕೌಂಟ್​ಗೆ ನನ್ನ ಅಕೌಂಟ್​ನಿಂದ ಹಣ ಬರುತ್ತದೆ ಎಂದಿದ್ದ ವಂಚಕ.

ಆನ್​​ಲೈನ್​ ವಹಿವಾಟು ಸಹವಾಸ ಎಚ್ಚರ !- ಹಸು ಮಾರಲು ಹೋಗಿ 1 ಲಕ್ಷ ರೂಪಾಯಿ ಕಳೆದುಕೊಂಡ ಯುವಕ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Mar 16, 2021 | 1:43 PM

Share

ಭುವನೇಶ್ವರ್​: ನೀವೇನೇ ಹೇಳಿ, ಈ ಆನ್​ಲೈನ್​ ವಹಿವಾಟಿನಿಂದ ಉಪಯೋಗಗಳು ಎಷ್ಟೋ..ಅಷ್ಟೇ ಅಪಾಯವೂ ಇದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಕಳೆದ ಕೆಲವು ವರ್ಷಗಳಿಂದ ಡಿಜಿಟಲ್​ ಬಳಕೆ ಜಾಸ್ತಿಯಾಗಿದೆ. ಹಣ ವರ್ಗಾವಣೆ, ಖರೀದಿ, ಮಾರಾಟ..ಹೀಗೆ ಅನೇಕ ವಿಚಾರಗಳಲ್ಲಿ ನಾವು ಆನ್​ಲೈನ್​ ಮೊರೆ ಹೋಗಿದ್ದೇವೆ. ಆದರೆ ಇನ್ನೊಂದೆಡೆ ಸೈಬರ್ ಕ್ರೈಂಗಳೂ ಅಷ್ಟೇ ಹೆಚ್ಚಾಗಿವೆ. ಆನ್​ಲೈನ್​ನಲ್ಲಿ ವಂಚನೆ ಮಾಡುವವರ ಗುಂಪು ಸದ್ದಿಲ್ಲದೆ ಬೆಳೆಯುತ್ತಿದೆ. ಈಗ ಅಂಥದ್ದೇ ಒಂದು ಪ್ರಕರಣ ಒಡಿಶಾದಲ್ಲಿ ನಡೆದಿದ್ದು ವರದಿಯಾಗಿದೆ. ಆನ್​ಲೈನ್​ನಲ್ಲಿ ಹಸು ಮಾರಲು ಹೋದ ಯುವಕನಿಗೆ ಬರೋಬ್ಬರಿ 1 ಲಕ್ಷ ರೂ. ವಂಚನೆಯಾದ ಘಟನೆ ಇದು !

ದೇಬಾಸಿಶ್​ ಸಾಹೂ ಎಂಬುವರು ತಮ್ಮ ಸದೃಢ ಹಸುವನ್ನು ಮಾರಾಟ ಮಾಡಲು ನಿಶ್ಚಯಿಸಿದರು. ಇದಕ್ಕೆ ಆನ್​ಲೈನ್​ ವೇದಿಕೆ ಆಯ್ಕೆ ಮಾಡಿಕೊಂಡ ಅವರು, ಕೃಷಿಫೈ (ಕೃಷಿಗೆ ಸಂಬಂಧಪಟ್ಟ ಆ್ಯಪ್​)ನಲ್ಲಿ ಜಾಹೀರಾತನ್ನೂ ನೀಡಿದರು. ಅದಾದ ಬಳಿಕ ಅವರಿಗೆ, ತನ್ನನ್ನು ಮಂಜಿತ್​ ಎಂದು ಪರಿಚಯಿಸಿಕೊಂಡು ಒಬ್ಬ ಕರೆ ಮಾಡಿದ್ದ. ಅಷ್ಟೇ ಅಲ್ಲ, ತಾನು ಸೇನೆಯಲ್ಲಿ ಅಧಿಕಾರಿಯಾಗಿದ್ದೇನೆ ಎಂದೂ ದೇಬಾಸಿಶ್​ಗೆ ಆತ ಹೇಳಿದ್ದ. ಇಬ್ಬರ ನಡುವೆಯೂ ಮಾತುಕತೆ ನಡೆದು ವ್ಯವಹಾರ 20,000ಕ್ಕೆ ಕುದುರಿತು. ಅಂದರೆ ದೇಬಾಸಿಶ್​ ತನ್ನ ಹಸುವನ್ನು ಮಂಜಿತ್​ಗೆ 20,000 ರೂಪಾಯಿಗೆ ಮಾರಾಟ ಮಾಡಲು ಒಪ್ಪಿಕೊಂಡ.

ನನಗೆ ಹಸು ಇಷ್ಟವಾಯಿತು, ಕೊಳ್ಳುತ್ತೇನೆ. ಆದರೆ ನಾನು ಭಾರತೀಯ ಸೇನೆಯಲ್ಲಿ ಇರುವುದರಿಂದ ಫೋನ್​​ಪೇ ಬಳಕೆ ಮಾಡುತ್ತಿಲ್ಲ. ಹಾಗಾಗಿ ನಾನೊಂದು QR ಕೋಡ್​ ಕಳಿಸುತ್ತೇನೆ. ಅದನ್ನು ಸ್ಕ್ಯಾನ್​ ಮಾಡಿದರೆ ನಿಮ್ಮ ಅಕೌಂಟ್​ಗೆ ನನ್ನ ಅಕೌಂಟ್​ನಿಂದ ಹಣ ಬರುತ್ತದೆ ಎಂದು ಹೇಳಿದ. ಆತ ಎಷ್ಟೆಂದರೂ ಸೇನಾ ಅಧಿಕಾರಿ ಎಂದು ಸಂಪೂರ್ಣವಾಗಿ ನಂಬಿದ್ದ ಸಾಹೂ, ಹಿಂದೆಮುಂದೆ ಯೋಚಿಸದೆ ಒಪ್ಪಿಕೊಂಡ. ಅದಾದ ಬಳಿಕ ಮಂಜಿತ್​ ಒಟ್ಟು 5 ಬಾರಿ ಸಾಹೂ ಮೊಬೈಲ್​ಗೆ ಕ್ಯೂಆರ್​ ಕೋಡ್​ ಕಳಿಸಿದ. ಒಟ್ಟು 5 QR ಕೋಡ್​​ಗಳನ್ನೂ ಸಾಹೂ ಸ್ಕ್ಯಾನ್​ ಮಾಡಿದ್ದರಿಂದ 5 ಬಾರಿ 20,000 ರೂ.ನಂತೆ 1 ಲಕ್ಷ ರೂಪಾಯಿ ಸಾಹೂ ಅಕೌಂಟ್​​ನಿಂದ ಮಂಜಿತ್​ ಅಕೌಂಟ್​ಗೆ ವರ್ಗಾವಣೆ ಆಗಿದೆ. ಅಷ್ಟಾದ ಮೇಲೆ ತಾನು ಮೋಸ ಹೋಗಿದ್ದು ಸಾಹೂಗೆ ಅರ್ಥವಾಗಿದೆ.

ಇನ್ನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಸಾಹೂ, ಮೊದಲು ನನಗೆ 5 ರೂಪಾಯಿಯ ಕ್ಯೂಆರ್​ ಸ್ಕ್ಯಾನ್​ ಕೋಡ್​ ಕಳಿಸಿದ. ನಾನು ಸ್ಕ್ಯಾನ್​ ಮಾಡುತ್ತಿದ್ದಂತೆ 5 ರೂ.ಕ್ರೆಡಿಟ್​ ಆಯಿತು. ಅದಾದ ಮೇಲೆ ಇನ್ನೊಂದು ಕಳಿಸಿದ. ಆಗ ನಾನು ಸ್ಕ್ಯಾನ್​ ಮಾಡುತ್ತಿದ್ದಂತೆ 20,000ರೂ. ನನ್ನ ಅಕೌಂಟ್​ನಿಂದಲೇ ಡೆಬಿಟ್​ ಆಯಿತು. ಅದನ್ನು ನಾನವನಿಗೆ ಹೇಳಿದ್ದಕ್ಕೆ, ಇದು ಟೆಕ್ನಿಕಲ್​ ಸಮಸ್ಯೆ ಎಂದು ಹೇಳಿದ. ಹೀಗೆ 1 ಲಕ್ಷ ರೂ.ನನ್ನ ಅಕೌಂಟ್​​ನಿಂದ ಡೆಬಿಟ್​ ಆಗಿದೆ ಎಂದು ತಿಳಿಸಿದ್ದಾರೆ. ಭರತ್​​ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಆನ್​​ಲೈನ್​​ನಲ್ಲಿ ಹಣವಹಿವಾಟು ಮಾಡುವಾಗ ತುಂಬ ಎಚ್ಚರಿಕೆಯಿಂದ ಇರಿ ಎಂದು ದೇಬಾಸಿಶ್​ ಸಾಹೂ ಒಂದು ವಿಡಿಯೋ ಮೂಲಕ ಸಾಮಾನ್ಯ ಜನರಿಗೆ ಮನವಿಯನ್ನೂ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 8: ಅರವಿಂದ್​ ಪ್ರಪೋಸಲ್​​ಗೆ ಓಕೆ ಎಂದ ದಿವ್ಯಾ ಉರುಡುಗ!

13ವರ್ಷದ ಬಾಲಕಿಯ 8 ತಿಂಗಳ ಗರ್ಭ ತೆಗೆಸಲು ಅನುಮತಿ ನೀಡದ ಬಾಂಬೆ ಹೈಕೋರ್ಟ್​; ‘ಒಂದು ಮಗು..ಇನ್ನೊಂದು ಮಗುವಿಗೆ ಜನ್ಮ ನೀಡಲಿದೆ’ ಎಂದ ವಕೀಲ

Published On - 12:58 pm, Tue, 16 March 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ