AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿಯಾಗಲಿದೆ ತಾಜ್​​ಮಹಲ್​ ವೀಕ್ಷಣೆ; ಪ್ರವಾಸಿಗರ ಪ್ರವೇಶ ಶುಲ್ಕ ಹೆಚ್ಚಿಸಲು ಆಗ್ರಾ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ

ಹೊಸ ನಿಯಮ ಅನ್ವಯ ಆದ ತಕ್ಷಣದಿಂದ ಮುಖ್ಯ ಗುಮ್ಮಟ ಪ್ರವೇಶಿಸಲು ಇಚ್ಛಿಸುವ ದೇಶೀಯ ಪ್ರವಾಸಿಗರು ಒಟ್ಟೂ 480 ರೂ. ಮತ್ತು ವಿದೇಶೀ ಪ್ರವಾಸಿಗರು 1600 ರೂ. ಪ್ರವೇಶ ಶುಲ್ಕ ನೀಡಬೇಕು.

ದುಬಾರಿಯಾಗಲಿದೆ ತಾಜ್​​ಮಹಲ್​ ವೀಕ್ಷಣೆ; ಪ್ರವಾಸಿಗರ ಪ್ರವೇಶ ಶುಲ್ಕ ಹೆಚ್ಚಿಸಲು ಆಗ್ರಾ ಅಭಿವೃದ್ಧಿ ಪ್ರಾಧಿಕಾರ ನಿರ್ಧಾರ
ತಾಜ್​ಮಹಲ್​
Lakshmi Hegde
|

Updated on: Mar 16, 2021 | 11:28 AM

Share

ಆಗ್ರಾ: ತಾಜ್​ಮಹಲ್ (Taj Mahal ) ಪ್ರವಾಸಿಗರಿಗೆ​ ಪ್ರವೇಶ ಶುಲ್ಕವನ್ನು ಹೆಚ್ಚು ಮಾಡಲು ಆಗ್ರಾ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ನಿರ್ಧಾರ ಮಾಡಿದೆ.ಇಷ್ಟುದಿನ ದೇಶೀಯ ಅಂದರೆ ನಮ್ಮ ದೇಶದ ಪ್ರವಾಸಿಗರು ತಾಜ್​​ಮಹಲ್​ ವೀಕ್ಷಣೆಗೆ ಹೋಗುವಾಗ ಪ್ರವೇಶ ಶುಲ್ಕವೆಂದು 50 ರೂ.ಕೊಡಬೇಕಿತ್ತು. ಹಾಗೇ ವಿದೇಶೀ ಪ್ರವಾಸಿಗರು 1100 ರೂ.ನೀಡಬೇಕಿತ್ತು. ಆದರೆ ಇದೀಗ ಎರಡೂ ವಿಧದ ಪ್ರವಾಸಿಗರ ಪ್ರವೇಶ ಶುಲ್ಕವನ್ನೂ ಹೆಚ್ಚಿಸುವ ಪ್ರಸ್ತಾಪವನ್ನು ಎಡಿಎ ಇಟ್ಟಿದೆ.

ಇನ್ನು ಮುಂದೆ ತಾಜ್​ಮಹಲ್​​ಗೆ ಭೇಟಿ ನೀಡಲಿರುವ ದೇಶೀಯ ಪ್ರವಾಸಿಗರ ಪ್ರವೇಶ ಶುಲ್ಕವನ್ನು 80 ರೂ.ಗೆ ಏರಿಸಲು, ವಿದೇಶಿ ಪ್ರವಾಸಿಗರಿಗೆ ಎಂಟ್ರಿ ಶುಲ್ಕವನ್ನು 1200 ರೂ.ಗೆ ಏರಿಕೆ ಮಾಡುವ ಬಗ್ಗೆ ಎಡಿಎ ಪ್ರಸ್ತಾಪದಲ್ಲಿ ಉಲ್ಲೇಖಿಸಿದ್ದು, ಇನ್ನು ತಾಜ್​ನ ಮುಖ್ಯ ಗುಮ್ಮಟ ಪ್ರವೇಶ ಮಾಡುವವರಿಗೆ 200 ರೂ.ಪ್ರವೇಶ ಶುಲ್ಕವಿಧಿಸಲು ನಿರ್ಧಾರ ಮಾಡಿದೆ. ತಾಜ್​ಮಹಲ್​ನ ಮುಖ್ಯ ಗುಮ್ಮಟವನ್ನು ಪ್ರವೇಶಿಸುವವರಿಗೆ ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ಈಗಾಗಲೇ 200 ರೂ.ವಿಧಿಸುತ್ತಿದ್ದು, ಅದರ ಹೊರತಾಗಿ ಈಗ ಆಗ್ರಾ ಅಭಿವೃದ್ಧಿ ಪ್ರಾಧಿಕಾರವೂ 200 ರೂ. ಶುಲ್ಕ ನಿಗದಿಪಡಿಸಲು ಮುಂದಾಗಿದೆ.

ಈ ಹೊಸ ನಿಯಮ ಅನ್ವಯ ಆದ ತಕ್ಷಣದಿಂದ ಮುಖ್ಯ ಗುಮ್ಮಟ ಪ್ರವೇಶಿಸಲು ಇಚ್ಛಿಸುವ ದೇಶೀಯ ಪ್ರವಾಸಿಗರು ಒಟ್ಟೂ 480 ರೂ. ಮತ್ತು ವಿದೇಶೀ ಪ್ರವಾಸಿಗರು 1600 ರೂ. ಪ್ರವೇಶ ಶುಲ್ಕ ನೀಡಬೇಕು. ಆದರೆ ತಾಜ್​ಮಹಲ್​ ಪ್ರವೇಶ ಟಿಕೆಟ್​ ಬೆಲೆ ಹೆಚ್ಚುತ್ತಿದೆ ಎಂಬುದನ್ನು ಕೇಳುತ್ತಿದ್ದಂತೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯರು ತಮ್ಮ ಪರಂಪರೆಯ ಸೌಂದರ್ಯ ನೋಡಲು ಇಷ್ಟು ಪ್ರಮಾಣದ ಹಣ ತುಂಬಬೇಕಾಗಿ ಬಂದಿರುವುದು ಬೇಸರದ ಸಂಗತಿ. ಹೀಗಾದರೆ ತಾಜ್​ಮಹಲ್​​ಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಗ್ರಾ: ವಿಶ್ವ ಪ್ರಸಿದ್ಧ ತಾಜ್​ಮಹಲ್​ಗೆ ಬಾಂಬ್ ಬೆದರಿಕೆ; ಪ್ರವಾಸಿಗರು ಹೊರಕ್ಕೆ – ಹುಸಿ ಕರೆ ಮಾಡಿದ ವ್ಯಕ್ತಿ ಅಂದರ್

ತಾಜ್​ಮಹಲ್ ಮುಂದೆ ಕೇಸರಿ ಧ್ವಜ ಹಾರಿಸಿದ ಹಿಂದೂ ಜಾಗರಣ್ ಮಂಚ್ ಸದಸ್ಯರ ಬಂಧನ

Follow Us
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!
ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!