Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ ಮನಮೋಹನ್ ಸಿಂಗ್, ಧರ್ಮೇಂದ್ರ ಪ್ರಧಾನ್ ಸೇರಿ 68 ಸಂಸದರು

ಈ ವರ್ಷ 68 ರಾಜ್ಯಸಭಾ ಸಂಸದರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದೆ. ಇದರಲ್ಲಿ 9 ಕೇಂದ್ರ ಸಚಿವರು ಸೇರಿದಂತೆ ಭಾರತೀಯ ಜನತಾ ಪಕ್ಷದ 60 ಸದಸ್ಯರು ಸೇರಿದ್ದಾರೆ. ಈ ಪೈಕಿ ಹಲವು ಸಂಸದರು ಲೋಕಸಭೆ ಚುನಾವಣೆಗೂ ಸ್ಪರ್ಧಿಸಬಹುದು ಎಂದು ನಿರೀಕ್ಷಿಸಲಾಗಿದೆ. 9 ಕೇಂದ್ರ ಸಚಿವರಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪರಿಸರ ಸಚಿವ ಭೂಪೇಂದ್ರ ಯಾದವ್, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಇತರ ಸಚಿವರು ಸೇರಿದ್ದಾರೆ. ಇದಲ್ಲದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯೂ ಈ ವರ್ಷದ ಏಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿದೆ. ಉತ್ತರ ಪ್ರದೇಶ ಕೋಟಾದಿಂದ 10 ಸೀಟುಗಳು ಖಾಲಿಯಾಗುತ್ತಿವೆ.

ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ ಮನಮೋಹನ್ ಸಿಂಗ್, ಧರ್ಮೇಂದ್ರ ಪ್ರಧಾನ್ ಸೇರಿ 68 ಸಂಸದರು
ಸಂಸತ್​
Follow us
ನಯನಾ ರಾಜೀವ್
|

Updated on: Jan 05, 2024 | 12:09 PM

ಈ ವರ್ಷ 68 ರಾಜ್ಯಸಭಾ(Rajya Sabha) ಸಂಸದರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದೆ. ಇದರಲ್ಲಿ 9 ಕೇಂದ್ರ ಸಚಿವರು ಸೇರಿದಂತೆ ಭಾರತೀಯ ಜನತಾ ಪಕ್ಷದ 60 ಸದಸ್ಯರು ಸೇರಿದ್ದಾರೆ. ಈ ಪೈಕಿ ಹಲವು ಸಂಸದರು ಲೋಕಸಭೆ ಚುನಾವಣೆಗೂ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. 9 ಕೇಂದ್ರ ಸಚಿವರಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪರಿಸರ ಸಚಿವ ಭೂಪೇಂದ್ರ ಯಾದವ್, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಇತರ ಸಚಿವರು ಸೇರಿದ್ದಾರೆ. ಇದಲ್ಲದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯೂ ಈ ವರ್ಷದ ಏಪ್ರಿಲ್‌ನಲ್ಲಿ ಪೂರ್ಣಗೊಳ್ಳಲಿದೆ. ಉತ್ತರ ಪ್ರದೇಶ ಕೋಟಾದಿಂದ 10 ಸೀಟುಗಳು ಖಾಲಿಯಾಗುತ್ತಿವೆ.

ಇದರ ನಂತರ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ 6-6, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 5-5, ಕರ್ನಾಟಕ ಮತ್ತು ಗುಜರಾತ್‌ನಲ್ಲಿ 4-4, ಒಡಿಶಾ, ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ 3-3 ಸ್ಥಾನಗಳು, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ 2-2 , ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಛತ್ತೀಸ್‌ಗಢದಲ್ಲಿ ತಲಾ ಒಂದು ಸ್ಥಾನವಿದೆ. ನಾಲ್ಕು ನಾಮನಿರ್ದೇಶಿತ ಸದಸ್ಯರು ಜುಲೈನಲ್ಲಿ ನಿವೃತ್ತರಾಗುತ್ತಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ತವರು ರಾಜ್ಯ ಹಿಮಾಚಲ ಪ್ರದೇಶದ ಹೊರಗೆ ಸ್ಥಾನವನ್ನು ಹುಡುಕಬೇಕಾಗಿದೆ. ಏಕೆಂದರೆ ಅಲ್ಲಿ ಕಾಂಗ್ರೆಸ್ ಹಿಡಿತದಲ್ಲಿದೆ. ಕಳೆದ ವರ್ಷ ಅಧಿಕಾರಕ್ಕೆ ಬಂದ ಕರ್ನಾಟಕ ಹಾಗೂ ತೆಲಂಗಾಣದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಮೇಲ್ಮನೆಗೆ ಕಳುಹಿಸುವ ನಿರೀಕ್ಷೆಯಿದೆ.

ಮತ್ತಷ್ಟು ಓದಿ: ಒಂದೇ ದಿನ 78 ಸಂಸದರು ಅಮಾನತು; ಇಲ್ಲಿವರೆಗೆ ಅಮಾನತುಗೊಂಡ ಸದಸ್ಯರ ಸಂಖ್ಯೆ 92ಕ್ಕೆ ಏರಿಕೆ

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ತೆಲಂಗಾಣದಿಂದ ರಾಜ್ಯಸಭೆಗೆ ಕನಿಷ್ಠ ಇಬ್ಬರು ಅಭ್ಯರ್ಥಿಗಳನ್ನು ಕಾಂಗ್ರೆಸ್ ಕಳುಹಿಸುವ ನಿರೀಕ್ಷೆಯಿದೆ. ಈ 68 ಹುದ್ದೆಗಳ ಪೈಕಿ ಈಗಾಗಲೇ ದೆಹಲಿಯ ಮೂರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಇಲ್ಲಿ ಆಮ್ ಆದ್ಮಿ ಪಕ್ಷದ ನಾಯಕರಾದ ಸಂಜಯ್ ಸಿಂಗ್, ನಾರಾಯಣ ದಾಸ್ ಗುಪ್ತಾ ಮತ್ತು ಸುಶೀಲ್ ಕುಮಾರ್ ಗುಪ್ತಾ ಅವರ ಅಧಿಕಾರಾವಧಿ ಜನವರಿ 27 ರಂದು ಪೂರ್ಣಗೊಳ್ಳಲಿದೆ.

ಸಿಕ್ಕಿಂನ ಏಕೈಕ ರಾಜ್ಯಸಭಾ ಸ್ಥಾನಕ್ಕೂ ಚುನಾವಣೆ ನಡೆಸುವಂತೆ ಕೇಳಿಕೊಳ್ಳಲಾಗಿದೆ. SDF ಸದಸ್ಯ ಹಿಶೆ ಲಚುಂಗ್ಪಾ ಫೆಬ್ರವರಿ 23 ರಂದು ಇಲ್ಲಿಂದ ನಿವೃತ್ತರಾಗಲಿದ್ದಾರೆ.

ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರಲ್ಲಿ ಮನಮೋಹನ್ ಸಿಂಗ್ ಮತ್ತು ಭೂಪೇಂದ್ರ ಯಾದವ್ (ರಾಜಸ್ಥಾನ), ಅಶ್ವಿನಿ ವೈಷ್ಣವ್, ಬಿಜೆಡಿ ಸದಸ್ಯರಾದ ಪ್ರಶಾಂತ್ ನಂದರ್ ಮತ್ತು ಅಮರ್ ಪಟ್ನಾಯಕ್ (ಒಡಿಶಾ), ಬಿಜೆಪಿ ಮುಖ್ಯ ವಕ್ತಾರ ಅನಿಲ್ ಬಲುನಿ (ಉತ್ತರಾಖಂಡ), ಮನ್ಸುಖ್ ಮಾಂಡವೀಯ ಮತ್ತು ಮೀನುಗಾರಿಕಾ ಸಚಿವ ಪರಶೋತ್ತಮ್ ಸೇರಿದ್ದಾರೆ.

ರೂಪಾಲಾ, ಕಾಂಗ್ರೆಸ್ ಸದಸ್ಯ ನಾರಾಯಣಭಾಯಿ ರಥ್ವಾ ಮತ್ತು ಗುಜರಾತ್‌ನಿಂದ ಅಮಿ ಯಾಗ್ನಿಕ್. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್, ಎಂಎಸ್‌ಎಂಇ ಸಚಿವ ನಾರಾಯಣ ರಾಣೆ, ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕಾಂಗ್ರೆಸ್ ಸದಸ್ಯ ಕುಮಾರ್ ಕೇತ್ಕರ್, ಎನ್‌ಸಿಪಿ ಸದಸ್ಯೆ ವಂದನಾ ಚವಾಣ್ ಮತ್ತು ಶಿವಸೇನಾ (ಯುಬಿಟಿ) ಸದಸ್ಯ ಅನಿಲ್ ದೇಸಾಯಿ ಮಹಾರಾಷ್ಟ್ರದಿಂದ ನಿವೃತ್ತರಾಗಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ