AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಜಾನೆ ಬಿಹಾರದ ಚೌರಾ ರೈಲ್ವೆ ಸ್ಟೇಶನ್​​ಗೆ ಮುತ್ತಿಗೆ ಹಾಕಿದ್ದ ಮಾವೋವಾದಿಗಳು; ಸುಮಾರು 2 ತಾಸು ರೈಲು ಸಂಚಾರ ಬಂದ್​

ಬೆಳ್ಳಂಬೆಳಗ್ಗೆ ಮಾವೋವಾದಿಗಳು ರೈಲ್ವೆ ಸ್ಟೇಶನ್​ನ್ನು ಸುತ್ತುವರಿದಿದ್ದರು. ಅದರಲ್ಲೊಬ್ಬ ಒಳಹೋಗಿ, ಸ್ಟೇಶನ್​ ಮಾಸ್ಟರ್​ ಬಿನಯ್​ ಕುಮಾರ್​ ಅವರಿದ್ದ ಕೊಠಡಿಯನ್ನು ಪ್ರವೇಶಿಸಿದ. ಟ್ರ್ಯಾಕ್​ ಸಿಗ್ನಲ್​ಗಳನ್ನೆಲ್ಲ ಕೆಂಪಾಗಿಯೇ ಇಡಬೇಕು ಎಂದು ಬೆದರಿಕೆ ಹಾಕಿದ.

ಮುಂಜಾನೆ ಬಿಹಾರದ ಚೌರಾ ರೈಲ್ವೆ ಸ್ಟೇಶನ್​​ಗೆ ಮುತ್ತಿಗೆ ಹಾಕಿದ್ದ ಮಾವೋವಾದಿಗಳು; ಸುಮಾರು 2 ತಾಸು ರೈಲು ಸಂಚಾರ ಬಂದ್​
ಬಿಹಾರ ರೈಲ್ವೆ ಸ್ಟೇಶನ್​
TV9 Web
| Edited By: |

Updated on: Jul 31, 2021 | 12:11 PM

Share

ಬಿಹಾರ (Bihar)ದ ಜಮುಯಿಯ ಚೌರಾ ರೈಲ್ವೆ ಸ್ಟೇಶನ್ (Railway Station)​​ನ್ನು ಇಂದು ಬೆಳಗ್ಗೆ ಸುಮಾರು 2 ತಾಸುಗಳ ಕಾಲ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಕಾರಣ, ದೆಹಲಿ-ಹೌರಾಹ್​ ಮಾರ್ಗದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹತ್ಯೆಯಾದ ತಮ್ಮ ಒಡನಾಡಿಗಳ ಸ್ಮರಣಾರ್ಥ ಮಾವೋವಾದಿಗಳು ಇಲ್ಲಿ ಬಂದ್​ ನಡೆಸುತ್ತಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಬಂದ್​ನ ನಾಲ್ಕನೇ ದಿನ ರೈಲ್ವೆ ಸ್ಟೇಶನ್​ನ್ನು ಅವರು ಆಕ್ರಮಿಸಿಕೊಂಡಿದ್ದರು.

ಬೆಳ್ಳಂಬೆಳಗ್ಗೆ ಮಾವೋವಾದಿಗಳು ರೈಲ್ವೆ ಸ್ಟೇಶನ್​ನ್ನು ಸುತ್ತುವರಿದಿದ್ದರು. ಅದರಲ್ಲೊಬ್ಬ ಒಳಹೋಗಿ, ಸ್ಟೇಶನ್​ ಮಾಸ್ಟರ್​ ಬಿನಯ್​ ಕುಮಾರ್​ ಅವರಿದ್ದ ಕೊಠಡಿಯನ್ನು ಪ್ರವೇಶಿಸಿದ. ಟ್ರ್ಯಾಕ್​ ಸಿಗ್ನಲ್​ಗಳನ್ನೆಲ್ಲ ಕೆಂಪಾಗಿಯೇ ಇಡಬೇಕು. ರೈಲುಗಳು ಮುಂದೆ ಚಲಿಸುವಂತಿಲ್ಲ. ಹಾಗೊಮ್ಮೆ ನಮ್ಮ ಮಾತನ್ನು ಮೀರಿದರೆ ಖಂಡಿತ ರೈಲ್ವೇ ಸ್ಟೇಶನ್​ನ್ನು ಸ್ಫೋಟಿಸುತ್ತೇವೆ ಎಂದು ಬೆದರಿಕೆ ಹಾಕಿದ. ಹಾಗಾಗಿ ರೈಲು ಸಂಚಾರ ತಡೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಸ್ಟೇಶನ್​ಗೆ ತಾವು ಮುತ್ತಿಗೆ ಹಾಕಿರುವ ಬಗ್ಗೆ ನಿಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಬಿನಯ್​ ಕುಮಾರ್​ಗೆ ಹೇಳಿದರು. ಅಷ್ಟೇ ಅಲ್ಲ, ತಾವೇ ಮೈಕ್​ ಹಿಡಿದು, ಪ್ರಯಾಣಿಕರ ಬಳಿ, ನೀವೆಲ್ಲ ರೈಲಿನಲ್ಲಿಯೇ ಕುಳಿತುಕೊಂಡಿರಬೇಕು. ಯಾವ ಕಾರಣಕ್ಕೂ ಕೆಳಕ್ಕೆ ಇಳಿಯುವಂತಿಲ್ಲ ಎಂದೂ ಹೇಳಿದರು. ಅಷ್ಟರಲ್ಲಿ ಜಮುಯಿ ಎಸ್​ಪಿ ಪ್ರಮೋದ್​ ಕುಮಾರ್ ಮಂಡಲ್​ ಮತ್ತು ಪ್ಯಾರಾಮಿಲಿಟರಿ ಪಡೆಗಳು ಸ್ಥಳಕ್ಕೆ ಆಗಮಿಸಿದವು. ಮಾವೋವಾದಿಗಳು ಸ್ಥಳಕ್ಕೆ ಭದ್ರತಾ ಪಡೆಗಳನ್ನು ಕರೆಸಿ, ಹೊಂಚು ಹಾಕಿ ದಾಳಿ ನಡೆಸಲು ಹೀಗೆಲ್ಲ ಪ್ಲ್ಯಾನ್​ ಮಾಡಿದ್ದರು ಎಂದು ಸಿಆರ್​​ಪಿಎಫ್​ ಅಧಿಕಾರಿಗಳು ಹೇಳಿದ್ದಾರೆ.

ಮಾವೋವಾದಿಗಳ ಮುತ್ತಿಗೆಯಿಂದ ಮುಂಜಾನೆ 3.20ರಿಂದ 5.30ರವರೆಗೆ ರೈಲು ಸಂಚಾರಗಳೆಲ್ಲ ಸ್ಥಗಿತಗೊಂಡಿದ್ದವು. ನಂತರ ಸ್ಫೋಟಕಗಳನ್ನೇನಾದರೂ ಇಡಲಾಗಿದೆಯಾ ಎಂದು ಹಳಿಗಳನ್ನೆಲ್ಲ ಪರಿಶೀಲನೆ ಮಾಡಲಾಯಿತು. 5.30ರ ಬಳಿಕ ರೈಲು ಸಂಚಾರ ಮರು ಆರಂಭಗೊಂಡಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್​ ಕುಮಾರ್​ ತಿಳಿಸಿದ್ದಾರೆ.

ಇದನ್ನೂ ಓದಿ:ನೆರೆ ಸಂತ್ರಸ್ತರ ಕರೆ ಬಂದರೆ ಫೋನ್ ಎಸೆಯಬೇಕಂತ ಅನಿಸುತ್ತೆ; ಅಥಣಿ ಶಾಸಕ ಮಹೇಶ್ ಕುಮಟ್ಟಳ್ಳಿಯ ಅಸಡ್ಡೆ ಮಾತುಗಳು ಫುಲ್ ವೈರಲ್

Maoists take over Chaura railway station in Bihar

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ