ಸ್ಥಳೀಯ ಆಡಳಿತಗಳು ಆದ್ಯವಾಗಿ ಇಂತಹವರ ನೆರವಿಗೆ ಬರಬೇಕು…

ಮಹಾರಾಷ್ಟ್ರ: ವಲಸೆ ಕಾರ್ಮಿಕರು ಸೈಕಲ್​ ಉರುಳಿಸುತ್ತಾ ಬದುಕಿನ ಜಂಜಾಟವನ್ನು ಹೊತ್ತು ಸಾಗಿದ್ದಾರೆ. ನಾಗ್ಪುರದಿಂದ ಸತ್ನಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ನಡೆದು ಹೋಗುತ್ತಿದ್ದಾರೆ. ಒಬ್ಬ ಮಹಾತಾಯಿಯಂತೂ ತನ್ನ 1 ವರ್ಷದ ಮಗುವನ್ನು ಜೋಪಾನವಾಗಿ ಎದೆಗವಚಿಕೊಳ್ಳುತ್ತಾ, ಐದು ದಿನಗಳಿಂದ ನಡೆದು ನಡೆದೇ ಸಾಗುತ್ತಿದ್ದಾಳೆ. ಇನ್ನೂ 6 ದಿನ ಹೀಗೇ ನಡೆದರೆ ಮಧ್ಯಪ್ರದೇಶದಲ್ಲಿರುವ ನನ್ನ ಊರು ಸಿಕ್ಕುತ್ತದೆ ಎಂದು ದಯನೀಯವಾಗಿ ಹೇಳುವಾಗ ಎಂಥವನಿಗೇ ಆದರೂ ಕರುಳು ಚುರಕ್ ಅನ್ನದೇ ಇರದು. ಪತ್ನಿ-ಪುತ್ರನ ಬವಣೆಯನ್ನು ಕಣ್ಣಂಚಿನಲ್ಲೇ ನೋಡುತ್ತಾ, ಮನೆ ಸಾಮಾನುಗಳನ್ನು ಸೈಕಲ್​ಗೆ​ ನೇತುಹಾಕಿ […]

ಸ್ಥಳೀಯ ಆಡಳಿತಗಳು ಆದ್ಯವಾಗಿ ಇಂತಹವರ ನೆರವಿಗೆ ಬರಬೇಕು...
ಸಾಧು ಶ್ರೀನಾಥ್​

Updated on: Apr 17, 2020 | 4:29 PM

ಮಹಾರಾಷ್ಟ್ರ: ವಲಸೆ ಕಾರ್ಮಿಕರು ಸೈಕಲ್​ ಉರುಳಿಸುತ್ತಾ ಬದುಕಿನ ಜಂಜಾಟವನ್ನು ಹೊತ್ತು ಸಾಗಿದ್ದಾರೆ. ನಾಗ್ಪುರದಿಂದ ಸತ್ನಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ನಡೆದು ಹೋಗುತ್ತಿದ್ದಾರೆ.

ಒಬ್ಬ ಮಹಾತಾಯಿಯಂತೂ ತನ್ನ 1 ವರ್ಷದ ಮಗುವನ್ನು ಜೋಪಾನವಾಗಿ ಎದೆಗವಚಿಕೊಳ್ಳುತ್ತಾ, ಐದು ದಿನಗಳಿಂದ ನಡೆದು ನಡೆದೇ ಸಾಗುತ್ತಿದ್ದಾಳೆ. ಇನ್ನೂ 6 ದಿನ ಹೀಗೇ ನಡೆದರೆ ಮಧ್ಯಪ್ರದೇಶದಲ್ಲಿರುವ ನನ್ನ ಊರು ಸಿಕ್ಕುತ್ತದೆ ಎಂದು ದಯನೀಯವಾಗಿ ಹೇಳುವಾಗ ಎಂಥವನಿಗೇ ಆದರೂ ಕರುಳು ಚುರಕ್ ಅನ್ನದೇ ಇರದು.

ಪತ್ನಿ-ಪುತ್ರನ ಬವಣೆಯನ್ನು ಕಣ್ಣಂಚಿನಲ್ಲೇ ನೋಡುತ್ತಾ, ಮನೆ ಸಾಮಾನುಗಳನ್ನು ಸೈಕಲ್​ಗೆ​ ನೇತುಹಾಕಿ ಸಾಥ್​ ನೀಡುತ್ತಿದ್ದಾನೆ ಪತಿ. ಜನಜೀವನವನ್ನು ಎಲ್ಲಿಗೆ ತಂದಿದೆ ನೋಡಿ ಮನೆಮಾರಿ ಹಾಳು ಕೊರೊನಾ ವೈರಸ್!

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us