ವಂದೇ ಭಾರತ್ ರೈಲು ಖಾಲಿ ಓಡುತ್ತಿದೆ ಎಂದ ಕಾಂಗ್ರೆಸ್ ಟೀಕೆಗೆ ಸಚಿವ ವೈಷ್ಣವ್ ಉತ್ತರ ಇದು

Ashwini Vaishnaw says Vande Bharat has 103pc occupancy rate: ಶೇ. 50ಕ್ಕಿಂತ ಹೆಚ್ಚು ವಂದೇ ಭಾರತ್ ರೈಲುಗಳು ಖಾಲಿ ಓಡುತ್ತಿವೆ ಎಂದು ಕಾಂಗ್ರೆಸ್ ಪಕ್ಷ ಮಾಡಿರುವ ಆರೋಪಕ್ಕೆ ಕೇಂದ್ರ ಸಚಿವ ಎ ವೈಷ್ಣವ್ ತಿರುಗೇಟು ನೀಡಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ಮೇ 7ರವರೆಗೆ ವಂದೇ ಭಾರತ್ ರೈಲಿನಲ್ಲಿನ ಆಕ್ಯುಪೆನ್ಸಿ ಶೇ. 103ರಷ್ಟಿದೆ ಎನ್ನುವ ದತ್ತಾಂಶವನ್ನು ವೈಷ್ಣವ್ ಕೊಟ್ಟಿದ್ದಾರೆ. ಮೇ 8ರಂದು ಕಾಂಗ್ರೆಸ್​ನ ಕೇರಳ ಘಟಕ ಸರಣಿ ಟ್ವೀಟ್ ಮಾಡಿ, ವಂದೇ ಭಾರತ್ ರೈಲುಗಳು ದುಬಾರಿ ಟಿಕೆಟ್ ಹೊಂದಿರುವುದರಿಂದ ಪ್ರಯಾಣಿಕರಿಲ್ಲದೆ ಖಾಲಿ ಓಡಾಡುತ್ತಿವೆ ಎಂದು ಐಆರ್​ಸಿಟಿಸಿ ಟಿಕೆಟ್ ಬುಕಿಂಗ್ ದತ್ತಾಂಶ ಆಧಾರದಲ್ಲಿ ಹೇಳಿತ್ತು.

ವಂದೇ ಭಾರತ್ ರೈಲು ಖಾಲಿ ಓಡುತ್ತಿದೆ ಎಂದ ಕಾಂಗ್ರೆಸ್ ಟೀಕೆಗೆ ಸಚಿವ ವೈಷ್ಣವ್ ಉತ್ತರ ಇದು
ವಂದೇ ಭಾರತ್
Follow us
|

Updated on: May 09, 2024 | 6:09 PM

ನವದೆಹಲಿ, ಮೇ 9: ವಂದೇ ಭಾರತ್ ರೈಲುಗಳಲ್ಲಿ ಟಿಕೆಟ್ ದರ ದುಬಾರಿಯಾಗಿದ್ದು, ರೈಲುಗಳೂ ಖಾಲಿ ಓಡಾಡುತ್ತಿವೆ ಎಂದು ಕೇರಳ ಘಟಕದ ಕಾಂಗ್ರೆಸ್ ಪಕ್ಷ ಮಾಡಿದ ಆರೋಪವನ್ನು ಕೇಂದ್ರ ರೈಲ್ವೆ ಸಚಿವ ಡಾ. ಎ ವೈಷ್ಣವ್ (Ashwini vaishnaw) ತಳ್ಳಿಹಾಕಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ವಂದೇ ಭಾರತ್ ರೈಲುಗಳಲ್ಲಿ (Vande Bharat train) ಪ್ರಯಾಣಿಕರ ಸಂಖ್ಯೆ (occupancy rate) ಶೇ. 103ರಷ್ಟಿದೆ. ಕಾಂಗ್ರೆಸ್ ಪಕ್ಷದ ಸುಳ್ಳುಗಳ ಗುಳ್ಳೆಯನ್ನು ಒಡೆಯುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ. ಐಆರ್​ಸಿಟಿಸಿಯ ಟಿಕೆಟ್ ಬುಕಿಂಗ್ ಡಾಟಾದ ವಿಶ್ಲೇಷಣೆಯೊಂದನ್ನು ಆಧರಿಸಿ ಕಾಂಗ್ರೆಸ್ ಪಕ್ಷ ನಿನ್ನೆ ಬುಧವಾರ ಸರಣಿ ಟ್ವೀಟ್ ಮಾಡಿತ್ತು. ವಂದೇ ಭಾರತ್ ಎಂಬ ಗುಳ್ಳೆಯನ್ನು ಒಡೆಯಲು ನಿರ್ಧರಿಸಿದ್ದೇವೆ ಎಂದು ಆರಂಭಿಸಿ, ದೇಶದ ವಿವಿಧ ಮಾರ್ಗಗಳಲ್ಲಿ ಶೇ. 50ಕ್ಕಿಂತ ಹೆಚ್ಚು ವಂದೇ ಭಾರತ್ ರೈಲುಗಳು ಖಾಲಿ ಓಡಾಡುತ್ತಿವೆ ಎಂದು ದತ್ತಾಂಶವನ್ನು ಕಾಂಗ್ರೆಸ್ ತನ್ನ ಸರಣಿ ಟ್ವೀಟ್​ಗಳಲ್ಲಿ ಮುಂದಿಟ್ಟಿತ್ತು.

ಇದಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಪೋಸ್ಟ್​ನಲ್ಲೇ ಉತ್ತರ ಕೊಟ್ಟಿದ್ದಾರೆ. ‘ಕಾಂಗ್ರೆಸ್​ನ ಸುಳ್ಳುಗಳ ಗುಳ್ಳೆಯನ್ನು ಹೊಡೆಯುವ ಸಮಯ ಬಂದಿದೆ. ಮೇ 7ರಂದು ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರ ಪ್ರಮಾಣ ಶೇ. 98ರಷ್ಟಿತ್ತು. 2024-25ರ ಹಣಕಾಸು ವರ್ಷದಲ್ಲಿ (ಮೇ 7ರವರೆಗೆ) ಪ್ರಯಾಣಿಕರ ಸಂಖ್ಯೆ ಶೇ. 103ರಷ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ವಂದೇ ಭಾರತ್ ರೈಲು ನಿಲ್ಲುವುದು ಬೇಕಾ?’ ಎಂದು ಡಾ. ಅಶ್ವಿನಿ ವೈಷ್ಣವ್ ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು; ಅಮಿತ್ ಶಾ ಘೋಷಣೆ

ಕಡಿಮೆ ಟಿಕೆಟ್ ಬೆಲೆಯ ಮಾಮೂಲಿಯ ರೈಲಿಗೆ ಸಿಕ್ಕಾಪಟ್ಟೆ ಬೇಡಿಕೆ ಎಂಬುದು ಕೈ ವಾದ

ಕಾಂಗ್ರೆಸ್ ಪಕ್ಷ ಐಆರ್​ಸಿಟಿಸಿ ಟಿಕೆಟ್ ಬುಕಿಂಗ್ ದತ್ತಾಂಶಗಳನ್ನಿಟ್ಟುಕೊಂಡು ವಿಶ್ಲೇಷಣೆ ಮಾಡಿದೆ. ರೈಲು ಹೊರಡುವ ಕೆಲ ಗಂಟೆಗಳ ಮೊದಲು ಐಆರ್​ಸಿಟಿಸಿಯಲ್ಲಿನ ಟಿಕೆಟ್ ಬುಕಿಂಗ್ ದತ್ತಾಂಶವನ್ನು ಪರಿಗಣಿಸಲಾಗಿದೆ. ವಂದೇ ಭಾರತ್ ರೈಲುಗಳನ್ನು ಬಳಸುವ ಜನರು ಉತ್ತಮ ಆರ್ಥಿಕತೆಯ ಪ್ರದೇಶಗಳಲ್ಲಿನವರು. ಹಿಂದುಳಿದ ಪ್ರದೇಶಗಳಲ್ಲಿ ವಂದೇ ಭಾರತ್​ಗೆ ಪ್ರಯಾಣಿಕರು ಕಡಿಮೆ ಎಂಬುದನ್ನು ಕೇರಳ ಕಾಂಗ್ರೆಸ್ ಎತ್ತಿತೋರಿಸಿದೆ.

ಅಷ್ಟೇ ಅಲ್ಲ, ಕಡಿಮೆ ಟಿಕೆಟ್ ಬೆಲೆ ಇರುವ ಮಾಮೂಲಿಯ ರೈಲುಗಳು ಜನರಿಂದ ತುಂಬಿತುಳುಕುತ್ತಿರುವ ವಿಡಿಯೋವೊಂದನ್ನೂ ಅದು ಶೇರ್ ಮಾಡಿದೆ. ಕೆಳ ಮಧ್ಯಮ ವರ್ಗದ ಜನರಿಗೆ ವಂದೇ ಭಾರತ್ ಕೈಗೆಟುಕದಂತಾಗಿದೆ ಎಂದು ತನ್ನ ಸರಣಿ ಟ್ವೀಟ್​​ಗಳಲ್ಲಿ ಕೇರಳ ಕಾಂಗ್ರೆಸ್ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
‘ನನ್ನ ದೇವ್ರು’ ಮೂಲಕ ಕಿರತೆರೆಗೆ ಮರಳಿದ ಅಶ್ವಿನಿ ನಕ್ಷತ್ರದ ‘ಹೆಂಡ್ತಿ’
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
ಯುವತಿಯರ ಮುಂದೆ ಬಾಡಿ ಪ್ರದರ್ಶಿಸುತ್ತಿದ್ದ ಯುವಕನಿಗೆ ಪಾಠ ಕಲಿಸಿದ  ಪೊಲೀಸರು
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
‘ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ’; ವಿ ಮನೋಹರ್ ಹೇಳಿಕೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ಕಿರುತೆರೆಗೆ ಎಂಟ್ರಿಕೊಟ್ಟ ನರಸಿಂಹರಾಜು ಮೊಮ್ಮಗ ಅವಿನಾಶ್ ದಿವಾಕರ್
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ದೇವಸ್ಥಾನದಲ್ಲಿ ಶಟಗೋಪ ತಲೆ ಮೇಲೆ ಇಡುವುದರ ಮಹತ್ವ ಏನು? ಈ ವಿಡಿಯೋ ನೋಡಿ
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಈ ರಾಶಿಯವರು ಇಂದು ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವರು
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​