AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಿಸ್​ ದೆಹಲಿ’ ಅರೆಸ್ಟ್! ವಂಚಿಸಲು ಹೋಗಿ ಗೆಳೆಯನ ಜೊತೆಗೆ ಸಿಕ್ಕಿಬಿದ್ದ ಸುಂದರಿಯ ಕತೆ ಇದು

ನವದೆಹಲಿ: ಟ್ರಿಪ್ ಗೆ ಹೋಗಿ ಮಜಾ ಮಾಡುವುದಕ್ಕಾಗಿ ಫಾರ್​ಎಕ್ಸ್​ ಸಂಸ್ಥೆಯ (ವಿದೇಶಿ ಕರೆನ್ಸಿ ವಿನಿಮಯ) ಉದ್ಯೋಗಿಯನ್ನೇ ವಂಚಿಸಿದ್ದ ಯುವತಿ ಮತ್ತವಳ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಸೇರಿ, ಪಕ್ಕಾ ಪ್ಲ್ಯಾನ್ ಮಾಡಿ, ನ.5ರಂದು ಉದ್ಯೋಗಿಯಿಂದ 3,300 US ಡಾಲರ್​​ಗಳನ್ನು ಎಗರಿಸಿದ್ದರು. ಯುವತಿಯ ಹೆಸರು ಅಮೃತಾ ಸೇಥಿ ಹಾಗೂ ಆಕೆಯ ಗೆಳೆಯ ಅಕ್ಷಿತ್ ಜಾಂಬ್. ಅಮೃತಾ ಸೇಥಿ ತಾನೊಬ್ಬ ಸಾಮಾಜಿಕ ಕಾರ್ಯಕರ್ತೆ, ಫ್ಯಾಶನ್ ಡಿಸೈನರ್, ಏಷ್ಯಾದ ಟಾಪ್ ಟೆನ್ ವೃತ್ತಿಪರ ಪೋಕರ್ ಆಟಗಾರರಲ್ಲಿ ಒಬ್ಬಳು, ‘ಮಿಸ್ ದೆಹಲಿ’ ಎಂದು […]

‘ಮಿಸ್​ ದೆಹಲಿ' ಅರೆಸ್ಟ್! ವಂಚಿಸಲು ಹೋಗಿ ಗೆಳೆಯನ ಜೊತೆಗೆ ಸಿಕ್ಕಿಬಿದ್ದ ಸುಂದರಿಯ ಕತೆ ಇದು
ಸಾಧು ಶ್ರೀನಾಥ್​
|

Updated on:Nov 20, 2020 | 5:51 PM

Share

ನವದೆಹಲಿ: ಟ್ರಿಪ್ ಗೆ ಹೋಗಿ ಮಜಾ ಮಾಡುವುದಕ್ಕಾಗಿ ಫಾರ್​ಎಕ್ಸ್​ ಸಂಸ್ಥೆಯ (ವಿದೇಶಿ ಕರೆನ್ಸಿ ವಿನಿಮಯ) ಉದ್ಯೋಗಿಯನ್ನೇ ವಂಚಿಸಿದ್ದ ಯುವತಿ ಮತ್ತವಳ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಸೇರಿ, ಪಕ್ಕಾ ಪ್ಲ್ಯಾನ್ ಮಾಡಿ, ನ.5ರಂದು ಉದ್ಯೋಗಿಯಿಂದ 3,300 US ಡಾಲರ್​​ಗಳನ್ನು ಎಗರಿಸಿದ್ದರು.

ಯುವತಿಯ ಹೆಸರು ಅಮೃತಾ ಸೇಥಿ ಹಾಗೂ ಆಕೆಯ ಗೆಳೆಯ ಅಕ್ಷಿತ್ ಜಾಂಬ್. ಅಮೃತಾ ಸೇಥಿ ತಾನೊಬ್ಬ ಸಾಮಾಜಿಕ ಕಾರ್ಯಕರ್ತೆ, ಫ್ಯಾಶನ್ ಡಿಸೈನರ್, ಏಷ್ಯಾದ ಟಾಪ್ ಟೆನ್ ವೃತ್ತಿಪರ ಪೋಕರ್ ಆಟಗಾರರಲ್ಲಿ ಒಬ್ಬಳು, ‘ಮಿಸ್ ದೆಹಲಿ’ ಎಂದು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾಳೆ. ಅವಳ ಖಾತೆ ವೆರಿಫೈಡ್ ಅಲ್ಲ. ಇವರಿಬ್ಬರೂ ಗೋವಾಕ್ಕೆ ಟ್ರಿಪ್​ ಹೋಗಿ, ಪೋಕರ್ ಆಡುವುದಕ್ಕೋಸ್ಕರ ಹಣ ಕದ್ದಿದ್ದರು ಎಂದು ದೆಹಲಿ ಪೊಲೀಸರು ಇದೀಗ ತಿಳಿಸಿದ್ದಾರೆ.

ಬ್ಯಾಗ್​ ಎಳೆದುಕೊಂಡು ಹೋದರು! ಅಮೃತಾ ಮತ್ತು ಅಕ್ಷಿತ್ ಪಶ್ಚಿಮ ದೆಹಲಿಯ ನಿವಾಸಿಗಳು. ನವೆಂಬರ್ 5ರಂದು ಹೌಜ್ ಖಾಸ್​​ನಲ್ಲಿರುವ ಫಾರ್​ಎಕ್ಸ್​ ಕಂಪನಿಗೆ ಕರೆ ಮಾಡಿ, ನಮ್ಮ ಬಳಿ 2.50 ಲಕ್ಷ ರೂ. ಇದೆ. ಅದರ ಬದಲು ಯುಎಸ್ ಡಾಲರ್ ಕೊಡಬೇಕಿತ್ತು ಎಂದು ವಿಧೇಯವಾಗಿ ಕೇಳಿದ್ದಾರೆ. ಸಂಸ್ಥೆಯ ಮನೋಜ್ ಸೂದ್ ಎಂಬ ಉದ್ಯೋಗಿ ಡಾಲರ್ ತೆಗೆದುಕೊಂಡು ದಕ್ಷಿಣ ದೆಹಲಿಯ ಪಂಚಶೀಲ ಕ್ಲಬ್ ಬಳಿ ತೆರಳಿದ್ದರು.

ಆದರೆ ಅಲ್ಲಿ ಈ ಜೋಡಿ ತನ್ನ ನಿಜರೂಪ ತೋರಿಸಿದೆ. ನಾವು ಹಣ ವಿತ್​ಡ್ರಾ ಮಾಡಬೇಕು. ಸದ್ಯ ಸಮಸ್ಯೆ ಇದೆ. ನಂತರ ಮಾಡುತ್ತೇವೆ ಎಂದೆಲ್ಲ ಕತೆ ಕಟ್ಟಿದ್ದಾರೆ. ಅವರ ನಡೆಯಿಂದ ಅನುಮಾನಗೊಂಡ ಮನೋಜ್​ ಡಾಲರ್​ ಕೊಡಲು ನಿರಾಕರಿಸಿದಾಗ ಕೈನಿಂದ ಬ್ಯಾಗ್​ ಕಿತ್ತುಕೊಂಡು ಕಾರಿನಲ್ಲಿ ಎಸ್ಕೇಪ್​ ಆಗಿದ್ದಾರೆ.

ಆ ಪ್ರದೇಶದಲ್ಲಿ ಇದ್ದ ಸಿಸಿಟಿವಿ ಫೂಟೇಜ್ ಗಳಿಂದ ಕಾರಿನ ನಂಬರ್ ನೋಡಿದ ಪೊಲೀಸರು, ಆರೋಪಿಗಳನ್ನು ಟ್ರೇಸ್ ಮಾಡಿದ್ದಾರೆ. ನಂತರ ಗೋವಾ ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.

Published On - 5:21 pm, Fri, 20 November 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?