AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಿಸ್​ ದೆಹಲಿ’ ಅರೆಸ್ಟ್! ವಂಚಿಸಲು ಹೋಗಿ ಗೆಳೆಯನ ಜೊತೆಗೆ ಸಿಕ್ಕಿಬಿದ್ದ ಸುಂದರಿಯ ಕತೆ ಇದು

ನವದೆಹಲಿ: ಟ್ರಿಪ್ ಗೆ ಹೋಗಿ ಮಜಾ ಮಾಡುವುದಕ್ಕಾಗಿ ಫಾರ್​ಎಕ್ಸ್​ ಸಂಸ್ಥೆಯ (ವಿದೇಶಿ ಕರೆನ್ಸಿ ವಿನಿಮಯ) ಉದ್ಯೋಗಿಯನ್ನೇ ವಂಚಿಸಿದ್ದ ಯುವತಿ ಮತ್ತವಳ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಸೇರಿ, ಪಕ್ಕಾ ಪ್ಲ್ಯಾನ್ ಮಾಡಿ, ನ.5ರಂದು ಉದ್ಯೋಗಿಯಿಂದ 3,300 US ಡಾಲರ್​​ಗಳನ್ನು ಎಗರಿಸಿದ್ದರು. ಯುವತಿಯ ಹೆಸರು ಅಮೃತಾ ಸೇಥಿ ಹಾಗೂ ಆಕೆಯ ಗೆಳೆಯ ಅಕ್ಷಿತ್ ಜಾಂಬ್. ಅಮೃತಾ ಸೇಥಿ ತಾನೊಬ್ಬ ಸಾಮಾಜಿಕ ಕಾರ್ಯಕರ್ತೆ, ಫ್ಯಾಶನ್ ಡಿಸೈನರ್, ಏಷ್ಯಾದ ಟಾಪ್ ಟೆನ್ ವೃತ್ತಿಪರ ಪೋಕರ್ ಆಟಗಾರರಲ್ಲಿ ಒಬ್ಬಳು, ‘ಮಿಸ್ ದೆಹಲಿ’ ಎಂದು […]

‘ಮಿಸ್​ ದೆಹಲಿ' ಅರೆಸ್ಟ್! ವಂಚಿಸಲು ಹೋಗಿ ಗೆಳೆಯನ ಜೊತೆಗೆ ಸಿಕ್ಕಿಬಿದ್ದ ಸುಂದರಿಯ ಕತೆ ಇದು
ಸಾಧು ಶ್ರೀನಾಥ್​
|

Updated on:Nov 20, 2020 | 5:51 PM

Share

ನವದೆಹಲಿ: ಟ್ರಿಪ್ ಗೆ ಹೋಗಿ ಮಜಾ ಮಾಡುವುದಕ್ಕಾಗಿ ಫಾರ್​ಎಕ್ಸ್​ ಸಂಸ್ಥೆಯ (ವಿದೇಶಿ ಕರೆನ್ಸಿ ವಿನಿಮಯ) ಉದ್ಯೋಗಿಯನ್ನೇ ವಂಚಿಸಿದ್ದ ಯುವತಿ ಮತ್ತವಳ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಸೇರಿ, ಪಕ್ಕಾ ಪ್ಲ್ಯಾನ್ ಮಾಡಿ, ನ.5ರಂದು ಉದ್ಯೋಗಿಯಿಂದ 3,300 US ಡಾಲರ್​​ಗಳನ್ನು ಎಗರಿಸಿದ್ದರು.

ಯುವತಿಯ ಹೆಸರು ಅಮೃತಾ ಸೇಥಿ ಹಾಗೂ ಆಕೆಯ ಗೆಳೆಯ ಅಕ್ಷಿತ್ ಜಾಂಬ್. ಅಮೃತಾ ಸೇಥಿ ತಾನೊಬ್ಬ ಸಾಮಾಜಿಕ ಕಾರ್ಯಕರ್ತೆ, ಫ್ಯಾಶನ್ ಡಿಸೈನರ್, ಏಷ್ಯಾದ ಟಾಪ್ ಟೆನ್ ವೃತ್ತಿಪರ ಪೋಕರ್ ಆಟಗಾರರಲ್ಲಿ ಒಬ್ಬಳು, ‘ಮಿಸ್ ದೆಹಲಿ’ ಎಂದು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾಳೆ. ಅವಳ ಖಾತೆ ವೆರಿಫೈಡ್ ಅಲ್ಲ. ಇವರಿಬ್ಬರೂ ಗೋವಾಕ್ಕೆ ಟ್ರಿಪ್​ ಹೋಗಿ, ಪೋಕರ್ ಆಡುವುದಕ್ಕೋಸ್ಕರ ಹಣ ಕದ್ದಿದ್ದರು ಎಂದು ದೆಹಲಿ ಪೊಲೀಸರು ಇದೀಗ ತಿಳಿಸಿದ್ದಾರೆ.

ಬ್ಯಾಗ್​ ಎಳೆದುಕೊಂಡು ಹೋದರು! ಅಮೃತಾ ಮತ್ತು ಅಕ್ಷಿತ್ ಪಶ್ಚಿಮ ದೆಹಲಿಯ ನಿವಾಸಿಗಳು. ನವೆಂಬರ್ 5ರಂದು ಹೌಜ್ ಖಾಸ್​​ನಲ್ಲಿರುವ ಫಾರ್​ಎಕ್ಸ್​ ಕಂಪನಿಗೆ ಕರೆ ಮಾಡಿ, ನಮ್ಮ ಬಳಿ 2.50 ಲಕ್ಷ ರೂ. ಇದೆ. ಅದರ ಬದಲು ಯುಎಸ್ ಡಾಲರ್ ಕೊಡಬೇಕಿತ್ತು ಎಂದು ವಿಧೇಯವಾಗಿ ಕೇಳಿದ್ದಾರೆ. ಸಂಸ್ಥೆಯ ಮನೋಜ್ ಸೂದ್ ಎಂಬ ಉದ್ಯೋಗಿ ಡಾಲರ್ ತೆಗೆದುಕೊಂಡು ದಕ್ಷಿಣ ದೆಹಲಿಯ ಪಂಚಶೀಲ ಕ್ಲಬ್ ಬಳಿ ತೆರಳಿದ್ದರು.

ಆದರೆ ಅಲ್ಲಿ ಈ ಜೋಡಿ ತನ್ನ ನಿಜರೂಪ ತೋರಿಸಿದೆ. ನಾವು ಹಣ ವಿತ್​ಡ್ರಾ ಮಾಡಬೇಕು. ಸದ್ಯ ಸಮಸ್ಯೆ ಇದೆ. ನಂತರ ಮಾಡುತ್ತೇವೆ ಎಂದೆಲ್ಲ ಕತೆ ಕಟ್ಟಿದ್ದಾರೆ. ಅವರ ನಡೆಯಿಂದ ಅನುಮಾನಗೊಂಡ ಮನೋಜ್​ ಡಾಲರ್​ ಕೊಡಲು ನಿರಾಕರಿಸಿದಾಗ ಕೈನಿಂದ ಬ್ಯಾಗ್​ ಕಿತ್ತುಕೊಂಡು ಕಾರಿನಲ್ಲಿ ಎಸ್ಕೇಪ್​ ಆಗಿದ್ದಾರೆ.

ಆ ಪ್ರದೇಶದಲ್ಲಿ ಇದ್ದ ಸಿಸಿಟಿವಿ ಫೂಟೇಜ್ ಗಳಿಂದ ಕಾರಿನ ನಂಬರ್ ನೋಡಿದ ಪೊಲೀಸರು, ಆರೋಪಿಗಳನ್ನು ಟ್ರೇಸ್ ಮಾಡಿದ್ದಾರೆ. ನಂತರ ಗೋವಾ ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.

Published On - 5:21 pm, Fri, 20 November 20

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?