AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

48 ದಿನ ನಂತರ ಹೆಚ್ಚಳವಾಯ್ತು ಪೆಟ್ರೋಲ್ ದರ, ಟ್ವಿಟರ್​​ನಲ್ಲಿ ಹರಿಯಿತು ಮೀಮ್ ಮಹಾಪೂರ..

ಬೆಂಗಳೂರು: ನಗರ ಸೇರಿದಂತೆ ದೇಶದ ವಿವಿಧೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶುಕ್ರವಾರ ತುಸು ಹೆಚ್ಚಾಗಿದೆ. ಸುಮಾರು 2 ತಿಂಗಳುಗಳಿಂದ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಬದಲಾವಣೆ ಆಗಿರಲಿಲ್ಲ. ಇಂಧನ ಬೆಲೆ ಏರಿಕೆಯ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. #PetrolPrice ಹ್ಯಾಷ್​ ಟ್ಯಾಗ್ ಟ್ವಿಟರ್​​ ಜಾಲತಾಣದಲ್ಲಿ ‘ಇಂಡಿಯಾ ಟ್ರೆಂಡಿಂಗ್’ನಲ್ಲಿ ಎದ್ದು ಕಾಣುತ್ತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರಿಗೆ 16 ಪೈಸೆ ಹೆಚ್ಚಾಗಿದ್ದು, ₹ 83.92 ಮುಟ್ಟಿದೆ. ಡೀಸೆಲ್ ದರವು 22 ಪೈಸೆ ಹೆಚ್ಚಾಗಿದ್ದು, ₹ 74.91 ಮುಟ್ಟಿದೆ. ಏಕೆ ಹೆಚ್ಚಳ […]

48 ದಿನ ನಂತರ ಹೆಚ್ಚಳವಾಯ್ತು ಪೆಟ್ರೋಲ್ ದರ, ಟ್ವಿಟರ್​​ನಲ್ಲಿ ಹರಿಯಿತು ಮೀಮ್ ಮಹಾಪೂರ..
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
|

Updated on:Nov 20, 2020 | 3:31 PM

Share

ಬೆಂಗಳೂರು: ನಗರ ಸೇರಿದಂತೆ ದೇಶದ ವಿವಿಧೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶುಕ್ರವಾರ ತುಸು ಹೆಚ್ಚಾಗಿದೆ. ಸುಮಾರು 2 ತಿಂಗಳುಗಳಿಂದ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಬದಲಾವಣೆ ಆಗಿರಲಿಲ್ಲ. ಇಂಧನ ಬೆಲೆ ಏರಿಕೆಯ ಬಗ್ಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. #PetrolPrice ಹ್ಯಾಷ್​ ಟ್ಯಾಗ್ ಟ್ವಿಟರ್​​ ಜಾಲತಾಣದಲ್ಲಿ ‘ಇಂಡಿಯಾ ಟ್ರೆಂಡಿಂಗ್’ನಲ್ಲಿ ಎದ್ದು ಕಾಣುತ್ತಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರವು ಲೀಟರಿಗೆ 16 ಪೈಸೆ ಹೆಚ್ಚಾಗಿದ್ದು, ₹ 83.92 ಮುಟ್ಟಿದೆ. ಡೀಸೆಲ್ ದರವು 22 ಪೈಸೆ ಹೆಚ್ಚಾಗಿದ್ದು, ₹ 74.91 ಮುಟ್ಟಿದೆ.

ಏಕೆ ಹೆಚ್ಚಳ ಕೊರೊನಾ ತಡೆಗಟ್ಟುವ ಲಸಿಕೆಯ ಭರವಸೆ ಆಶಾವಾದ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವದ ವಿವಿಧೆಡೆ ಸಾರಿಗೆ ಸೇರಿದಂತೆ ವಿವಿಧ ಉದ್ಯಮ ವಲಯಗಳು ಚೇತರಿಸಿಕೊಂಡಿವೆ. ಇಂಧನಕ್ಕೂ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಕಚ್ಚಾ ತೈಲದ ದರವೂ ಮುಂದಿನ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ.

ಅಕ್ಟೋಬರ್ ತಿಂಗಳಿನಲ್ಲಿ ಒಂದು ಬ್ಯಾರೆಲ್ ಬ್ರೆಂಟ್ ಕ್ರೂಡ್ (ಕಚ್ಚಾತೈಲ) ಬೆಲೆ 40 ಡಾಲರ್ ಆಸುಪಾಸಿನಲ್ಲಿತ್ತು. ಶುಕ್ರವಾರ (ನ.20) ಇದು 44 ಡಾಲರ್ ಮುಟ್ಟಿದೆ.

ಕಚ್ಚಾ ತೈಲದ ಬೆಲೆ ಒಂದು ಡಾಲರ್ ಹೆಚ್ಚಾದರೆ, ಪೆಟ್ರೋಲ್ ಅಥವಾ ಡೀಸೆಲ್ನ ಚಿಲ್ಲರೆ ಮಾರಾಟ ದರವು 40 ಪೈಸೆಗಳಷ್ಟು ಏರುವುದು ವಾಡಿಕೆ. ಈ ಲೆಕ್ಕಾಚಾರದಂತೆ ಪ್ರಸ್ತುತ ಇಂಧನ ದರವು ಪ್ರತಿ ಲೀಟರ್​ಗೆ ₹ 1.20ರಷ್ಟು ಏರಿಕೆಯಾಗಬೇಕಿತ್ತು. ಆದರೆ ಕಚ್ಚಾ ತೈಲದ ದರ ಕಡಿಮೆಯಿದ್ದ ಅವಧಿಯೂ ಸೇರಿದಂತೆ, ಕಳೆದ 2 ತಿಂಗಳುಗಳಿಂದ ಇಂಧನ ದರ ಪರಿಷ್ಕರಣೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ದರ ಏರಿಕೆಗೆ ತೈಲ ಕಂಪನಿಗಳು ಮುಂದಾಗಿವೆ.

ಟ್ವಿಟರ್​​ನಲ್ಲಿ #PetrolPrice ಟ್ರೆಂಡಿಂಗ್ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಕಡಿಮೆಯಿದ್ದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿಯೂ ಸದ್ದು ಮಾಡಿದೆ.

#PetrolPrice ಹ್ಯಾಷ್​ ಟ್ಯಾಗ್ ಟ್ವಿಟರ್​​ ಜಾಲತಾಣದಲ್ಲಿ ಇಂಡಿಯಾ ಟ್ರೆಂಡಿಂಗ್​ನಲ್ಲಿ ಎದ್ದು ಕಾಣುತ್ತಿದೆ. ಶುಕ್ರವಾರ ಮಧ್ಯಾಹ್ನ 12.30ರ ಹೊತ್ತಿಗೆ ಈ ಹ್ಯಾಷ್​ ಟ್ಯಾಗ್​ನೊಂದಿಗೆ 1,548 ಟ್ವೀಟ್​ಗಳು ಪೋಸ್ಟ್ ಆಗಿದ್ದವು.

ಕುತೂಹಲಕಾರಿ ಟ್ವೀಟ್​ಗಳು ಇಲ್ಲಿವೆ..

‘ಪೆಟ್ರೋಲ್ ದರ ಏರಿಕೆಗೂ ಮೊದಲು ಜೋಡಿಗಳು ಲಾಂಗ್​ ಡ್ರೈವ್​ಗಾಗಿ ಕಾರು ಏರುತ್ತಿದ್ದರು. ಈಗ ಸೈಕಲ್ ಸಾಕಾಗಿದೆ’ ಎಂದು ಸಂಸ್ಕೃತಿಕ ಶರ್ಮಾ ಎಂಬುವವರು ನಟ ಅಕ್ಷಯ್ ಕುಮಾರ್ ಅವರ ಎರಡು ಭಿನ್ನ ಸಿನಿಮಾಗಳ ದೃಶ್ಯಗಳನ್ನು ಟ್ವೀಟ್ ಮಾಡಿದ್ದಾರೆ.

ಬೆಲೆ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಾಗರ್ ಎನ್ನುವವರು, ಬೆಲೆ ಏರಿಕೆಯ ಪರಿಣಾಮ ಬಿಂಬಿಸುವ ವ್ಯಂಗ್ಯಚಿತ್ರವೊಂದನ್ನು ಟ್ವೀಟ್ ಜೊತೆಗೆ ಲಗತ್ತಿಸಿದ್ದಾರೆ.

ಪೆಟ್ರೋಲ್ ದರ ಏರಿಕೆ ಚರ್ಚೆಗಳು ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿವೆ. ಎಕ್ಸ್​ವೈಝೆಡ್ ಟ್ವಿಟರ್ ಅಕೌಂಟ್​ನಿಂದ ಟ್ವೀಟ್ ಆಗಿರುವ ಪೋಸ್ಟ್ ಒಂದು ದೇಶದ ವಿವಿಧ ರಾಜ್ಯಗಳ ಪೆಟ್ರೋಲ್ ದರವನ್ನು ಹೋಲಿಸಿದೆ.

ಪೆಟ್ರೋಲ್ ದರವು ಉತ್ತರ ಪ್ರದೇಶದಲ್ಲಿ ಪ್ರತಿ ಲೀಟರಿಗೆ ₹ 81.63, ಗುಜರಾತ್​ನಲ್ಲಿ ₹ 78.50 ಇದೆ. ಮಹಾರಾಷ್ಟ್ರದಲ್ಲಿ ₹ 88, ರಾಜಸ್ಥಾನದಲ್ಲಿ ₹87.50 ಇದೆ ಎಂದು ಎತ್ತಿ ತೋರಿಸುವ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿರುವ ದರ ವ್ಯತ್ಯಾಸವನ್ನು ಎತ್ತಿ ತೋರಿಸಿದೆ.

Published On - 3:30 pm, Fri, 20 November 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ