ಜಿಎಸ್​​ಟಿ ಪರಿಷ್ಕರಣೆ: ಸಾಮಾನ್ಯ ಜನರ ಜೀವನ ಸುಲಭಗೊಳಿಸಿ, ದೇಶದ ಆರ್ಥಿಕತೆ ಬಲ ಪಡಿಸುವುದು ನಮ್ಮ ಉದ್ದೇಶ: ಪ್ರಧಾನಿ ಮೋದಿ

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಇದು ಸಾಮಾನ್ಯ ಜನರಿಗೆ ಹಾಗೂ ಉದ್ಯಮಿಗಳಿಗೆ ನೇರ ಪರಿಹಾರವನ್ನು ನೀಡುತ್ತದೆ. ಈಗ ಕೇವಲ ಎರಡು ಜಿಎಸ್‌ಟಿ ಸ್ಲ್ಯಾಬ್‌ಗಳು, 5% ಮತ್ತು 18% ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ವ್ಯಾಪಾರ ಮಾಡುವುದು ಸುಲಭವಾಗುತ್ತದೆ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ಸಾಮಾನ್ಯ ಜನರ ಜೀವನವನ್ನು ಸರಳಗೊಳಿಸುವುದು ಮತ್ತು ಸಣ್ಣ ವ್ಯವಹಾರಗಳಿಗೆ ವ್ಯಾಪಾರ ವಾತಾವರಣವನ್ನು ಸುಧಾರಿಸುವುದು ಈ ಸುಧಾರಣೆಗಳ ಉದ್ದೇಶವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಿಎಸ್​​ಟಿ ಪರಿಷ್ಕರಣೆ: ಸಾಮಾನ್ಯ ಜನರ ಜೀವನ ಸುಲಭಗೊಳಿಸಿ, ದೇಶದ ಆರ್ಥಿಕತೆ ಬಲ ಪಡಿಸುವುದು ನಮ್ಮ ಉದ್ದೇಶ: ಪ್ರಧಾನಿ ಮೋದಿ
ನರೇಂದ್ರ ಮೋದಿ

Updated on: Sep 04, 2025 | 7:56 AM

ನವದೆಹಲಿ, ಆಗಸ್ಟ್ 04: ಜಿಎಸ್‌ಟಿ(GST)ಕೌನ್ಸಿಲ್ ಸಭೆಯಲ್ಲಿ ಹೊಸ ಜಿಎಸ್‌ಟಿ ದರಗಳ ಕುರಿತು ತೆಗೆದುಕೊಂಡ ನಿರ್ಧಾರಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ಹಣಕಾಸು ಸಚಿವಾಲಯವನ್ನು ಶ್ಲಾಘಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಜಿಎಸ್ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರುವ ನಮ್ಮ ಉದ್ದೇಶದ ಬಗ್ಗೆ ಮಾತನಾಡಿದ್ದೆ. ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವುದು ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ ಎಂದು ಮೋದಿ ಹೇಳಿದ್ದಾರೆ.

ರೈತರು, ಸಣ್ಣ ಮತ್ತು ಮಧ್ಯಮ ವರ್ಗದವರು, ಮಹಿಳೆಯರು ಮತ್ತು ಯುವಕರು ಈ ಸುಧಾರಣೆಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ಹೇಳಿದರು. ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ವ್ಯಾಪಾರ ಮಾಡುವುದು ಸುಲಭವಾಗುತ್ತದೆ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ಸಾಮಾನ್ಯ ಜನರ ಜೀವನವನ್ನು ಸರಳಗೊಳಿಸುವುದು ಮತ್ತು ಸಣ್ಣ ವ್ಯವಹಾರಗಳಿಗೆ ವ್ಯಾಪಾರ ವಾತಾವರಣವನ್ನು ಸುಧಾರಿಸುವುದು ಈ ಸುಧಾರಣೆಗಳ ಉದ್ದೇಶವಾಗಿದೆ.

ಇದು ತೆರಿಗೆ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರಯೋಜನವಾಗುತ್ತದೆ. ಮುಂದಿನ ಪೀಳಿಗೆಯ ಸುಧಾರಣೆಗಳು ಮತ್ತು ಜಿಎಸ್‌ಟಿ ಕಾನೂನುಗಳಿಗೆ ತಿದ್ದುಪಡಿಗಳಿಗಾಗಿ ಕಾರ್ಯಪಡೆ ರಚನೆಯನ್ನು ಪ್ರಧಾನಿ ಮೋದಿ ಘೋಷಿಸಿದ್ದರು. ಸ್ವಾತಂತ್ರ್ಯ ದಿನದಂದು ಅವರು ತಮ್ಮ 103 ನಿಮಿಷಗಳ ಭಾಷಣದ ಬಹುಪಾಲು ಭಾಗವನ್ನು ಸೆಮಿಕಂಡಕ್ಟರ್‌ಗಳಿಂದ ರಸಗೊಬ್ಬರಗಳವರೆಗೆ ಅನೇಕ ಕ್ಷೇತ್ರಗಳಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವತ್ತ ಕೇಂದ್ರೀಕರಿಸಿದ್ದರು.

ಮತ್ತಷ್ಟು ಓದಿ: New GST Rates: ಜಿಎಸ್​ಟಿ ಪರಿಷ್ಕರಣೆ; ಈ ವಸ್ತುಗಳಿಗೆ ನೀವಿನ್ನು ತೆರಿಗೆಯೇ ಪಾವತಿಸಬೇಕಿಲ್ಲ!

ಕೇಂದ್ರ ಸರ್ಕಾರ ಇದಕ್ಕಾಗಿ ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ, ಇದರಲ್ಲಿ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡುವ ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸುವ ಕ್ರಮಗಳು ಇದರಲ್ಲಿ ಸೇರಿವೆ. ಈ ಪ್ರಸ್ತಾವನೆಯನ್ನು ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಒಳಗೊಂಡಿರುವ ಜಿಎಸ್‌ಟಿ ಕೌನ್ಸಿಲ್ ಒಮ್ಮತದಿಂದ ಅನುಮೋದಿಸಿದೆ.

ಈಗ ಕೇವಲ ಎರಡು ಜಿಎಸ್​ಟಿ ಸ್ಲ್ಯಾಬ್​​ಗಳಿವೆ. ಶೇ.5 ಮತ್ತು ಶೇ.18. ಅಂದರೆ ಶೇ.12 ಹಾಗೂ ಶೇ.28 ಸ್ಲ್ಯಾಬ್​​ಗಳನ್ನು ರದ್ದುಪಡಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ, ದಿನನಿತ್ಯದ ವಸ್ತುಗಳು ಅಗ್ಗವಾಗುತ್ತವೆ ಮತ್ತು ಜೀವ ಉಳಿಸುವ ಔಷಧಿಗಳನ್ನು ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.

ಮೋದಿ ಪೋಸ್ಟ್​

ಜಿಎಸ್‌ಟಿ ಸ್ಲ್ಯಾಬ್‌ಗೆ ಸಂಬಂಧಿಸಿದಂತೆ ಸರ್ಕಾರವು ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದೆ. ಯಾವ ವಸ್ತುವಿನ ಮೇಲೆ ಎಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ ಎಂಬುದನ್ನು ಇದು ಹೇಳುತ್ತದೆ. ದೇಶದ ಜನರಿಗೆ ಪ್ರಧಾನಿ ಮೋದಿಯವರ ಸಂದೇಶವೂ ಈ ಪೋಸ್ಟರ್‌ನಲ್ಲಿದೆ.

ಹಾಲು, ಪನೀರ್, ಪಿಜ್ಜಾ ಬ್ರೆಡ್, ರೋಟಿ, ಪರಾಠಾಗಳನ್ನು ಈಗ ಶೂನ್ಯ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ಇರಿಸಲಾಗಿದ್ದು, ಅವುಗಳ ಮೇಲೆ ಯಾವುದೇ ಜಿಎಸ್‌ಟಿ ವಿಧಿಸಲಾಗುವುದಿಲ್ಲ. ಇದಲ್ಲದೆ, ವೈಯಕ್ತಿಕ ವಿಮಾ ಪಾಲಿಸಿಯ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸಿ ಶೂನ್ಯಗೊಳಿಸಲಾಗಿದೆ. ಶೈಕ್ಷಣಿಕ ವಸ್ತುಗಳು, ಪೆನ್ಸಿಲ್, ಕಟ್ಟರ್, ಎರೇಸರ್ ಮತ್ತು ನೋಟ್‌ಬುಕ್‌ಗಳ ಮೇಲಿನ 12% ತೆರಿಗೆಯನ್ನು ಸಹ ತೆಗೆದುಹಾಕಲಾಗಿದೆ ಮತ್ತು ತೆರಿಗೆ ಮುಕ್ತಗೊಳಿಸಲಾಗಿದೆ.

ಶಾಂಪೂ, ಸೋಪ್, ಎಣ್ಣೆ ಸೇರಿದಂತೆ ಮನೆಗಳಲ್ಲಿ ದಿನನಿತ್ಯ ಬಳಸುವ ವಸ್ತುಗಳನ್ನು ಈಗ 5% ವರ್ಗಕ್ಕೆ ಸೇರಿಸಲಾಗಿದೆ. ಇದರ ಜೊತೆಗೆ, ಪಾಸ್ತಾ, ಕಾಫಿ, ನೂಡಲ್ಸ್ ಮೇಲಿನ ತೆರಿಗೆಯನ್ನು ಸಹ 5% ಕ್ಕೆ ಇಳಿಸಲಾಗಿದೆ. ಥರ್ಮಾಮೀಟರ್‌ಗಳು ಮತ್ತು ಗ್ಲುಕೋಮೀಟರ್‌ಗಳನ್ನು ಸಹ 18% ರಿಂದ ಕಡಿಮೆ ಮಾಡುವ ಮೂಲಕ ಈ ವರ್ಗಕ್ಕೆ ಸೇರಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:55 am, Thu, 4 September 25