AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಸ್ಥಾಪನೆಯಾಗಲಿದೆ ಜಮಾಲುದ್ದೀನ್ ನಿರ್ಮಿಸಿದ ರಾಮನ ವಿಗ್ರಹ

ಮೊಹಮ್ಮದ್ ಜಮಾಲುದ್ದೀನ್ ದತ್ತಪುಕೂರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಘರ್ ಮೋರ್ ಪ್ರದೇಶದ ನಿವಾಸಿ. ಸುಮಾರು 15-16 ಅಡಿ ಎತ್ತರದ ಎರಡು ವಿಗ್ರಹಗಳನ್ನು ತಯಾರಿಸಲು ಜಮಾಲುದ್ದೀನ್‌ಗೆ ಅವರ ಮಗ ಬಿಟ್ಟು ಸಹಾಯ ಮಾಡಿದ್ದಾನೆ. ಎರಡು ವಿಗ್ರಹಗಳನ್ನು ಮಾಡುವಂತೆ ಕೇಳಿದಾಗ, ಎರಡು ವಿಗ್ರಹಗಳು ಅಯೋಧ್ಯೆಗೆ ಹೋಗುತ್ತವೆ ಎಂದು ಮಾತ್ರ ಅವರಿಗೆ ಗೊತ್ತಿತ್ತು. ಆಮೇಲೆ ರಾಮಮಂದಿರದ ಆವರಣದಲ್ಲಿ ಸ್ಥಾಪಿಸಲಾಗುವುದು ಎಂಬುದು ತಿಳಿದುಬಂತು ಎಂದಿದ್ದಾರೆ.

ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಸ್ಥಾಪನೆಯಾಗಲಿದೆ ಜಮಾಲುದ್ದೀನ್ ನಿರ್ಮಿಸಿದ ರಾಮನ ವಿಗ್ರಹ
ಮೊಹಮ್ಮದ್ ಜಮಾಲುದ್ದೀನ್
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:Dec 28, 2023 | 11:13 AM

ಅಯೋಧ್ಯೆ ಡಿಸೆಂಬರ್ 19: ಜನವರಿ 22 ರಂದು ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram mandir) ಉದ್ಘಾಟನೆಯಾಗಲಿದೆ.. ದೇವಾಲಯದ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಸದ್ಯ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ, ಅಯೋಧ್ಯೆಯಲ್ಲಿ ರಾಮನ ವಿಗ್ರಹವು ಉತ್ತರ 24 ಪರಗಣಗಳ ದತ್ತಪುಕೂರಿನಿಂದ ಹೋಗಿದ. ದತ್ತಪುಕೂರ್ ಕಲಾವಿದ ಮೊಹಮ್ಮದ್ ಜಮಾಲುದ್ದೀನ್ (mohammed jamaluddin) ಎರಡು ಫೈಬರ್ ಶಿಲ್ಪಗಳನ್ನು ತಯಾರಿಸಿದ್ದಾರೆ. ಮೊದಲಿಗೆ ಪ್ರತಿಮೆ ಎಲ್ಲಿಗೆ ಹೋಗುತ್ತಿದೆ ಎಂದು ತಿಳಿದಿರಲಿಲ್ಲ. ನಂತರ, ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಪತ್ರಿಕೆಯೊಂದರಿಂದ ತಿಳಿದುಕೊಂಡೆ ಎಂದಿದ್ದಾರೆ ಕಲಾವಿದ ಜಮಾಲುದ್ದೀನ್.

ಮೊಹಮ್ಮದ್ ಜಮಾಲುದ್ದೀನ್ ದತ್ತಪುಕೂರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಘರ್ ಮೋರ್ ಪ್ರದೇಶದ ನಿವಾಸಿ. ಸುಮಾರು 15-16 ಅಡಿ ಎತ್ತರದ ಎರಡು ವಿಗ್ರಹಗಳನ್ನು ತಯಾರಿಸಲು ಜಮಾಲುದ್ದೀನ್‌ಗೆ ಅವರ ಮಗ ಬಿಟ್ಟು ಸಹಾಯ ಮಾಡಿದ್ದಾನೆ. ಎರಡು ವಿಗ್ರಹಗಳನ್ನು ಮಾಡುವಂತೆ ಕೇಳಿದಾಗ, ಎರಡು ವಿಗ್ರಹಗಳು ಅಯೋಧ್ಯೆಗೆ ಹೋಗುತ್ತವೆ ಎಂದು ಮಾತ್ರ ಅವರಿಗೆ ತಿಳಿದಿತ್ತು. ನಂತರ ರಾಮಮಂದಿರದ ಆವರಣಕ್ಕೆ ವಿಗ್ರಹವೊಂದು ಹೋಗುತ್ತಿರುವುದು ತಿಳಿಯಿತು ಎಂದಿದ್ದಾರೆ.

ಗ್ಲಾಸ್ ಫೈಬರ್ ಪ್ರತಿಮೆಗಳನ್ನು ತಯಾರಿಸಲು ದತ್ತಪುಕೂರ್ ಜನಪ್ರಿಯವಾಗಿದೆ. ಪ್ರದೇಶದಲ್ಲಿ 50-60 ಕಾರ್ಯಾಗಾರಗಳಲ್ಲಿ ಫೈಬರ್ ಕೆಲಸ ಮಾಡಲಾಗುತ್ತದೆ. ವಿವಿಧ ಸ್ಥಳಗಳಿಂದ ಆರ್ಡರ್‌ಗಳು ಬರುತ್ತವೆ. ಖರೀದಿದಾರರು ದತ್ತಾಪುಕೂರ್‌ಗೆ ಹೋಗಿ ವಿವಿಧ ಕಾರ್ಯಾಗಾರಗಳಿಗೆ ಭೇಟಿ ನೀಡಿ ಚೌಕಾಸಿ ಮಾಡಿ ನಂತರ ಆರ್ಡರ್ ಮಾಡಿದ್ದಾರೆ ಎಂದು ಜಮಾಲುದ್ದೀನ್ ಹೇಳಿದರು. ಹೀಗಾಗಿಯೇ ರಾಮನ ಪ್ರತಿಮೆ ನಿರ್ಮಾಣಕ್ಕೆ ಆರ್ಡರ್ ನೀಡಲಾಗಿದೆ. ಒಂದು ಆರ್ಡರ್ ಅನ್ನು 1 ವರ್ಷ ಮುಂಚಿತವಾಗಿ ಇರಿಸಲಾಗುತ್ತದೆ ಮತ್ತು ಇನ್ನೊಂದು ಆರ್ಡರ್ ಅನ್ನು 6 ರಿಂದ 8 ತಿಂಗಳ ಮುಂಚಿತವಾಗಿ ಇರಿಸಲಾಗುತ್ತದೆ.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ ಘಂಟೆ, ಪೂಜೆ ಸಾಮಾಗ್ರಿ ಕಳಿಸಿದ ಬಗ್ಗೆ ಕಾರಣ ಬಿಚ್ಚಿಟ್ಟ ಬೆಂಗಳೂರು ಉದ್ಯಮಿ

ಜಮಾಲುದ್ದೀನ್ ಯಾವುದೇ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಅವರು ಕಲೆಯೊಂದಿಗೆ ಧರ್ಮವನ್ನು ಬೆರೆಸಲೂ ಬಯಸುವುದಿಲ್ಲ. ಇದೇ ಮೊದಲಲ್ಲ, ಈ ಹಿಂದೆಯೂ ಇವರು ದುರ್ಗಾ, ಜಗದ್ಧಾತ್ರಿಯ ಫೈಬರ್ ಮೂರ್ತಿಗಳನ್ನು ತಯಾರಿಸಿದ್ದಾರೆ. ಮಣ್ಣಿನ ವಿಗ್ರಹಗಳಿಗೆ ಹೋಲಿಸಿದರೆ ಈ ಫೈಬರ್ ವಿಗ್ರಹಗಳು ದುಬಾರಿ ಮತ್ತು ಹೆಚ್ಚು ಬಾಳಿಕೆ ಬರುತ್ತವೆ. ಪ್ರತಿ ವಿಗ್ರಹದ ಬೆಲೆ ಸುಮಾರು 2.8 ಲಕ್ಷ ರೂಪಾಯಿ ಆಗಬಹುದು. ಆದಾಗ್ಯೂ, ಬೆಲೆಯು ವಿಗ್ರಹದ ಗಾತ್ರ ಮತ್ತು ಉತ್ತಮವಾದ ಕರಕುಶಲತೆಯನ್ನು ಅವಲಂಬಿಸಿರುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Tue, 19 December 23

ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು
ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು
ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್