AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಷನಲ್ ಪೆನ್ಷನ್ ಸಿಸ್ಟಮ್, ಅಟಲ್ ಪೆನ್ಷನ್ ಯೋಜನಾ ಚಂದಾದಾರರ ಸಂಖ್ಯೆ ಶೇ 22ಹೆಚ್ಚಳ

ನ್ಯಾಷನಲ್ ಪೆನ್ಷನ್ ಸ್ಕೀಮ್ ಹಾಗೂ ಅಟಲ್ ಪೆನ್ಷನ್ ಯೋಜನಾದಲ್ಲಿ ಚಂದಾದಾರರ ಸಂಖ್ಯೆಯಲ್ಲಿ 2021ರ ಫೆಬ್ರವರಿ ಕೊನೆ ಹೊತ್ತಿಗೆ ಶೇಕಡಾ 22ರಷ್ಟು ಹೆಚ್ಚಳವಾಗಿದೆ. ಈಗಿರುವ ಒಟ್ಟಾರೆ ಚಂದಾದಾರರ ಸಂಖ್ಯೆ 4.15 ಕೋಟಿ.

ನ್ಯಾಷನಲ್ ಪೆನ್ಷನ್ ಸಿಸ್ಟಮ್, ಅಟಲ್ ಪೆನ್ಷನ್ ಯೋಜನಾ ಚಂದಾದಾರರ ಸಂಖ್ಯೆ ಶೇ 22ಹೆಚ್ಚಳ
ಸಾಂದರ್ಭಿಕ ಚಿತ್ರ
Srinivas Mata
| Edited By: |

Updated on:Mar 17, 2021 | 9:35 PM

Share

ನ್ಯಾಷನಲ್ ಪೆನ್ಷನ್ ಸಿಸ್ಟಮ್ ಮತ್ತು ಅಟಲ್ ಪೆನ್ಷನ್ ಯೋಜನಾ ಪಿಂಚಣಿ ಯೋಜನೆಗಳ ಚಂದಾದಾರರ ಸಂಖ್ಯೆಯಲ್ಲಿ 2021ರ ಫೆಬ್ರವರಿ ಕೊನೆಗೆ ಶೇಕಡಾ 22ರಷ್ಟು ಬೆಳವಣಿಗೆ ಕಂಡಿದ್ದು, 4.15 ಕೋಟಿಗೆ ತಲುಪಿದೆ ಎಂಬ ಮಾಹಿತಿಯು ಮಾರ್ಚ್ 17ರ ಸರ್ಕಾರದ ದತ್ತಾಂಶದಿಂದ ಗೊತ್ತಾಗಿದೆ. “ವಿವಿಧ ಯೋಜನೆಗಳಿಗೆ ಚಂದಾದಾರರ ಸಂಖ್ಯೆಯು 2020ರ ಫೆಬ್ರವರಿಯಲ್ಲಿ 340.34 ಲಕ್ಷ ಇದ್ದದ್ದು 2021ರ ಫೆಬ್ರವರಿ ಕೊನೆಗೆ 414.70 ಲಕ್ಷಕ್ಕೆ ಏರಿಕೆಯಾಗಿದೆ. ಆ ಮೂಲಕ ವರ್ಷದಿಂದ ವರ್ಷಕ್ಕೆ ಶೇ 21.85ರಷ್ಟು ಏರಿಕೆಯನ್ನು ತೋರಿಸುತ್ತಿದೆ,” ಎಂದು ಪಿಎಫ್​​ಆರ್​​ಡಿಎ ಹೇಳಿಕೆಯಲ್ಲಿ ತಿಳಿಸಿದೆ. 

ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್​ಪಿಎಸ್) ಮತ್ತು ಅಟಲ್ ಪೆನ್ಷನ್ ಯೋಜನಾ (ಎಪಿವೈ) ಅಡಿಯಲ್ಲಿ ವರ್ಷದ ಹಿಂದೆ 3.43 ಕೋಟಿ ಚಂದಾದಾರರಿದ್ದರು. ಫೆಬ್ರವರಿ 28, 2021ಕ್ಕೆ ಒಟ್ಟಾರೆ ಪೆನ್ಷನ್ ಅಸೆಟ್ಸ್ ಅಂಡರ್ ಮ್ಯಾನೇಜ್​ಮೆಂಟ್ ರೂ. 5,59,594 ಕೋಟಿ ಇದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 33.09ರಷ್ಟು ಬೆಳವಣಿಗೆ ತೋರಿಸುತ್ತಿದೆ ಎಂದು ಪಿಎಫ್​ಆರ್​ಡಿಎ ತಿಳಿಸಿದೆ.

ಸರ್ಕಾರಿ ನೌಕರರು, ಸ್ವಾಯತ್ತ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ವಲಯದ ಸಿಬ್ಬಂದಿಗಾಗಿ ಎನ್​ಪಿಎಸ್ ಇದೆ. ಇನ್ನು ದೇಶದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ವಯಸ್ಸಾದ ಮೇಲೆ ಪಿಂಚಣಿ ಒದಗಿಸುವುದನ್ನೇ ಗುರಿಯಾಗಿ ಇಟ್ಟುಕೊಂಡು ಅಟಲ್ ಪೆನ್ಷನ್ ಯೋಜನೆಯನ್ನು ರೂಪಿಸಲಾಗಿದೆ.

ಇದನ್ನೂ ಓದಿ: Income Tax Rules: ಏಪ್ರಿಲ್ 1ರಿಂದ ಬದಲಾಗಲಿದೆ ಆದಾಯ ತೆರಿಗೆಯ ಈ 5 ನಿಯಮ

Published On - 9:06 pm, Wed, 17 March 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ