AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕ ಹಾಲಿನ ಇಳುವರಿ ನೀಡುವ ನೂತನ ಎಮ್ಮೆ ತಳಿ ಸೃಷ್ಟಿಸಿದ ಭಾರತದ NDRI ಸಂಸ್ಥೆ

ಚಂಡೀಗಢ: ಹರಿಯಾಣದ ಕರ್ನಾಲ್​ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯು (NDRI) ಅಧಿಕ ಹಾಲಿನ ಇಳುವರಿ ನೀಡುವ ಎಮ್ಮೆ ತಳಿಯ ಕರು ಒಂದನ್ನು ತದ್ರೂಪಿ ಸೃಷ್ಟಿ (ಕ್ಲೋನ್) ತಂತ್ರಜ್ಞಾನದ ಮುಖಾಂತರ ಅಭಿವೃದ್ಧಿಪಡಿಸಿದೆ. ಈ ಗಂಡು ಕರುವಿಗೆ ತೇಜಸ್​ ಎಂದು ನಾಮಕರಣ ಸಹ ಮಾಡಿದೆ. ಈ ನೂತನ ತಳಿ ದೇಶಾದ್ಯಂತ ಹಾಲು ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಮನ್ಮೋಹನ್​ ಸಿಂಗ್​ ಚೌಹಾನ್ ತಿಳಿಸಿದ್ದಾರೆ. ಈ ಹೊಸ ತದ್ರೂಪಿ ತೇಜಸ್ ಕರುವನ್ನು […]

ಅಧಿಕ ಹಾಲಿನ ಇಳುವರಿ ನೀಡುವ ನೂತನ ಎಮ್ಮೆ ತಳಿ ಸೃಷ್ಟಿಸಿದ ಭಾರತದ NDRI ಸಂಸ್ಥೆ
ಸಾಧು ಶ್ರೀನಾಥ್​
| Edited By: |

Updated on: Sep 20, 2020 | 7:20 PM

Share

ಚಂಡೀಗಢ: ಹರಿಯಾಣದ ಕರ್ನಾಲ್​ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯು (NDRI) ಅಧಿಕ ಹಾಲಿನ ಇಳುವರಿ ನೀಡುವ ಎಮ್ಮೆ ತಳಿಯ ಕರು ಒಂದನ್ನು ತದ್ರೂಪಿ ಸೃಷ್ಟಿ (ಕ್ಲೋನ್) ತಂತ್ರಜ್ಞಾನದ ಮುಖಾಂತರ ಅಭಿವೃದ್ಧಿಪಡಿಸಿದೆ. ಈ ಗಂಡು ಕರುವಿಗೆ ತೇಜಸ್​ ಎಂದು ನಾಮಕರಣ ಸಹ ಮಾಡಿದೆ. ಈ ನೂತನ ತಳಿ ದೇಶಾದ್ಯಂತ ಹಾಲು ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಮನ್ಮೋಹನ್​ ಸಿಂಗ್​ ಚೌಹಾನ್ ತಿಳಿಸಿದ್ದಾರೆ.

ಈ ಹೊಸ ತದ್ರೂಪಿ ತೇಜಸ್ ಕರುವನ್ನು ಎಮ್ಮೆ ಜಾತಿಯ ಮುರ್ರಾ ತಳಿಯಿಂದ ಅಭಿವೃದ್ಧಿಪಡಿಸಲಾಗಿದೆ. ಮುರ್ರಾ ಎಮ್ಮೆ ತಳಿ ಹೆಚ್ಚಿನ ಹಾಲು ಇಳುವರಿಗೆ ಹೆಸರುವಾಸಿಯಾಗಿದೆ ಎಂದು ಚೌಹಾನ್ ಹೇಳಿದ್ದಾರೆ. ಜೊತೆಗೆ, 2021-22ರ ವೇಳೆಗೆ ಎಮ್ಮೆಗಳ ಕೃತಕ ಗರ್ಭಧಾರಣೆಗೆ ದೇಶದಲ್ಲಿ 140 ದಶಲಕ್ಷ ವೀರ್ಯದ ಡೋಸ್​ನ ಅವಶ್ಯಕತೆಯಿದೆ. ಆದರೆ ಪ್ರಸ್ತುತ, 85 ದಶಲಕ್ಷ ಡೋಸ್‌ ಮಾತ್ರ ಲಭ್ಯವಿದೆ ಎಂಬ ಮಾಹಿತಿಯನ್ನು ಚೌಹಾನ್​ ನೀಡಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಎಮ್ಮೆಯ ಹಾಲು, ಕಿವಿ, ಮೂತ್ರ, ರಕ್ತ ಮತ್ತು ವೀರ್ಯದಲ್ಲಿರುವ ಜೀವಕೋಶಗಳನ್ನು ಬಳಸಿ ದೇಶದಲ್ಲಿ 16 ತದ್ರೂಪಿ ಎಮ್ಮೆಗಳನ್ನುಅಭಿವೃದ್ಧಿಪಡಿಸಲಾಗಿದೆ ಎಂದು ಚೌಹಾನ್ ಹೇಳಿದ್ದಾರೆ. 2009ರಲ್ಲಿ, NDRI ಸಂಸ್ಥೆಯು ಗರಿಮಾ ಎಂಬ ಹೆಸರಿನ ತದ್ರೂಪಿ ಎಮ್ಮೆಯನ್ನು ಅಭಿವೃದ್ಧಿಪಡಿಸಿತ್ತು. ನಂತರ, ಗರಿಮಾ ಸಾಮಾನ್ಯ ಜನನದ ಮೂಲಕ 2013 ಮತ್ತು 2014 ರಲ್ಲಿ ಮಹಿಮಾ ಮತ್ತು ಕರಿಷ್ಮಾ ಎಂಬ ಎಮ್ಮೆ ಕರುಗಳಿಗೆ ಜನ್ಮ ನೀಡಿತ್ತು.

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ