AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕ ಹಾಲಿನ ಇಳುವರಿ ನೀಡುವ ನೂತನ ಎಮ್ಮೆ ತಳಿ ಸೃಷ್ಟಿಸಿದ ಭಾರತದ NDRI ಸಂಸ್ಥೆ

ಚಂಡೀಗಢ: ಹರಿಯಾಣದ ಕರ್ನಾಲ್​ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯು (NDRI) ಅಧಿಕ ಹಾಲಿನ ಇಳುವರಿ ನೀಡುವ ಎಮ್ಮೆ ತಳಿಯ ಕರು ಒಂದನ್ನು ತದ್ರೂಪಿ ಸೃಷ್ಟಿ (ಕ್ಲೋನ್) ತಂತ್ರಜ್ಞಾನದ ಮುಖಾಂತರ ಅಭಿವೃದ್ಧಿಪಡಿಸಿದೆ. ಈ ಗಂಡು ಕರುವಿಗೆ ತೇಜಸ್​ ಎಂದು ನಾಮಕರಣ ಸಹ ಮಾಡಿದೆ. ಈ ನೂತನ ತಳಿ ದೇಶಾದ್ಯಂತ ಹಾಲು ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಮನ್ಮೋಹನ್​ ಸಿಂಗ್​ ಚೌಹಾನ್ ತಿಳಿಸಿದ್ದಾರೆ. ಈ ಹೊಸ ತದ್ರೂಪಿ ತೇಜಸ್ ಕರುವನ್ನು […]

ಅಧಿಕ ಹಾಲಿನ ಇಳುವರಿ ನೀಡುವ ನೂತನ ಎಮ್ಮೆ ತಳಿ ಸೃಷ್ಟಿಸಿದ ಭಾರತದ NDRI ಸಂಸ್ಥೆ
ಸಾಧು ಶ್ರೀನಾಥ್​
| Updated By: KUSHAL V|

Updated on: Sep 20, 2020 | 7:20 PM

Share

ಚಂಡೀಗಢ: ಹರಿಯಾಣದ ಕರ್ನಾಲ್​ನಲ್ಲಿರುವ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯು (NDRI) ಅಧಿಕ ಹಾಲಿನ ಇಳುವರಿ ನೀಡುವ ಎಮ್ಮೆ ತಳಿಯ ಕರು ಒಂದನ್ನು ತದ್ರೂಪಿ ಸೃಷ್ಟಿ (ಕ್ಲೋನ್) ತಂತ್ರಜ್ಞಾನದ ಮುಖಾಂತರ ಅಭಿವೃದ್ಧಿಪಡಿಸಿದೆ. ಈ ಗಂಡು ಕರುವಿಗೆ ತೇಜಸ್​ ಎಂದು ನಾಮಕರಣ ಸಹ ಮಾಡಿದೆ. ಈ ನೂತನ ತಳಿ ದೇಶಾದ್ಯಂತ ಹಾಲು ಉತ್ಪಾದನೆ ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ಎಂದು ಸಂಸ್ಥೆಯ ನಿರ್ದೇಶಕ ಮನ್ಮೋಹನ್​ ಸಿಂಗ್​ ಚೌಹಾನ್ ತಿಳಿಸಿದ್ದಾರೆ.

ಈ ಹೊಸ ತದ್ರೂಪಿ ತೇಜಸ್ ಕರುವನ್ನು ಎಮ್ಮೆ ಜಾತಿಯ ಮುರ್ರಾ ತಳಿಯಿಂದ ಅಭಿವೃದ್ಧಿಪಡಿಸಲಾಗಿದೆ. ಮುರ್ರಾ ಎಮ್ಮೆ ತಳಿ ಹೆಚ್ಚಿನ ಹಾಲು ಇಳುವರಿಗೆ ಹೆಸರುವಾಸಿಯಾಗಿದೆ ಎಂದು ಚೌಹಾನ್ ಹೇಳಿದ್ದಾರೆ. ಜೊತೆಗೆ, 2021-22ರ ವೇಳೆಗೆ ಎಮ್ಮೆಗಳ ಕೃತಕ ಗರ್ಭಧಾರಣೆಗೆ ದೇಶದಲ್ಲಿ 140 ದಶಲಕ್ಷ ವೀರ್ಯದ ಡೋಸ್​ನ ಅವಶ್ಯಕತೆಯಿದೆ. ಆದರೆ ಪ್ರಸ್ತುತ, 85 ದಶಲಕ್ಷ ಡೋಸ್‌ ಮಾತ್ರ ಲಭ್ಯವಿದೆ ಎಂಬ ಮಾಹಿತಿಯನ್ನು ಚೌಹಾನ್​ ನೀಡಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಎಮ್ಮೆಯ ಹಾಲು, ಕಿವಿ, ಮೂತ್ರ, ರಕ್ತ ಮತ್ತು ವೀರ್ಯದಲ್ಲಿರುವ ಜೀವಕೋಶಗಳನ್ನು ಬಳಸಿ ದೇಶದಲ್ಲಿ 16 ತದ್ರೂಪಿ ಎಮ್ಮೆಗಳನ್ನುಅಭಿವೃದ್ಧಿಪಡಿಸಲಾಗಿದೆ ಎಂದು ಚೌಹಾನ್ ಹೇಳಿದ್ದಾರೆ. 2009ರಲ್ಲಿ, NDRI ಸಂಸ್ಥೆಯು ಗರಿಮಾ ಎಂಬ ಹೆಸರಿನ ತದ್ರೂಪಿ ಎಮ್ಮೆಯನ್ನು ಅಭಿವೃದ್ಧಿಪಡಿಸಿತ್ತು. ನಂತರ, ಗರಿಮಾ ಸಾಮಾನ್ಯ ಜನನದ ಮೂಲಕ 2013 ಮತ್ತು 2014 ರಲ್ಲಿ ಮಹಿಮಾ ಮತ್ತು ಕರಿಷ್ಮಾ ಎಂಬ ಎಮ್ಮೆ ಕರುಗಳಿಗೆ ಜನ್ಮ ನೀಡಿತ್ತು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ