ದೆಹಲಿ: ಏರ್​ಪೋರ್ಟ್​ನಲ್ಲಿ ವ್ಹೀಲ್​ ಚೇರ್ ಕೊಡದ ಏರ್​ಇಂಡಿಯಾ, ಬಿದ್ದು ಐಸಿಯುಗೆ ದಾಖಲಾದ ವೃದ್ಧೆ

ದೆಹಲಿ ಏರ್​ಪೋರ್ಟ್​ನಲ್ಲಿ ಏರ್​ ಇಂಡಿಯಾವು ಮುಂಗಡವಾಗಿ ಬುಕ್​ ಮಾಡಿದ್ದ ವ್ಹೀಲ್​ಚೇರ್​ ಕೊಡಲು ನಿರಾಕರಿಸಿದ ಕಾರಣ 82 ವರ್ಷದ ಮಹಿಳೆ ನಡೆಯಲಾಗದೆ ಬಿದ್ದು ಐಸಿಯುನಲ್ಲಿ ದಾಖಲಾಗಿರುವ ಘಟನೆ ವರದಿಯಾಗಿದೆ. ಮೆದುಳಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಇರುವುದರಿಂದ ತೀವ್ರ ನಿಗಾದಲ್ಲಿರಲಾಗಿದೆ. ಆಕೆಗೆ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ದೂರ ನಡೆಯಲು ಸಾಧ್ಯವಾಗಿರಲಿಲ್ಲ. ಕಾಲುಗಳು ಶಕ್ತಿ ಕಳೆದುಕೊಂಡಂತಾಗಿ ವಿಮಾನಯಾನ ಸಂಸ್ಥೆಯ ಕೌಂಟರ್​ ಮುಂದೆಯೇ ಬಿದ್ದಿದ್ದಾರೆ.

ದೆಹಲಿ: ಏರ್​ಪೋರ್ಟ್​ನಲ್ಲಿ ವ್ಹೀಲ್​ ಚೇರ್ ಕೊಡದ ಏರ್​ಇಂಡಿಯಾ, ಬಿದ್ದು ಐಸಿಯುಗೆ ದಾಖಲಾದ ವೃದ್ಧೆ
ಮಹಿಳೆ
Image Credit source: ABP Live

Updated on: Mar 08, 2025 | 1:23 PM

ನವದೆಹಲಿ, ಮಾರ್ಚ್​ 8: ದೆಹಲಿ ಏರ್​ಪೋರ್ಟ್ ​ನಲ್ಲಿ ಏರ್​ ಇಂಡಿಯಾ(Air India)ವು ಮುಂಗಡವಾಗಿ ಬುಕ್​ ಮಾಡಿದ್ದ ವ್ಹೀಲ್​ಚೇರ್​ ಕೊಡಲು ನಿರಾಕರಿಸಿದ ಕಾರಣ 82 ವರ್ಷದ ಮಹಿಳೆ ನಡೆಯಲಾಗದೆ ಬಿದ್ದು ಐಸಿಯುನಲ್ಲಿ ದಾಖಲಾಗಿರುವ ಘಟನೆ ವರದಿಯಾಗಿದೆ. ಮೆದುಳಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಇರುವುದರಿಂದ ತೀವ್ರ ನಿಗಾದಲ್ಲಿರಲಾಗಿದೆ. ಆಕೆಗೆ ವಿಮಾನ ನಿಲ್ದಾಣದಲ್ಲಿ ಸಾಕಷ್ಟು ದೂರ ನಡೆಯಲು ಸಾಧ್ಯವಾಗಿರಲಿಲ್ಲ. ಕಾಲುಗಳು ಶಕ್ತಿ ಕಳೆದುಕೊಂಡಂತಾಗಿ ವಿಮಾನಯಾನ ಸಂಸ್ಥೆಯ ಕೌಂಟರ್​ ಮುಂದೆಯೇ ಬಿದ್ದಿದ್ದಾರೆ.

ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಈ ಘಟನೆ ಮಾರ್ಚ್ 4 ರಂದು ನಡೆದಿದ್ದು, ಅವರ ಮೊಮ್ಮಗಳು ಈ ಘಟನೆಯನ್ನು ಬೆಳಕಿಗೆ ತಂದರು. 82 ವರ್ಷದ ಮಹಿಳೆ ಬಿದ್ದು ಗಾಯಗೊಂಡ ನಂತರವೂ ವಿಮಾನಯಾನ ಸಂಸ್ಥೆ ಅವರಿಗೆ ಸಹಾಯ ಮಾಡಲು ಮುಂದಾಗಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಏನಾಯಿತು?
ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮಹಿಳೆಯ ಮೊಮ್ಮಗಳು ಪಾರುಲ್ ಕನ್ವರ್, ವಿಮಾನ ಟಿಕೆಟ್​ಗಳನ್ನು ಬುಕ್ ಮಾಡುವಾಗ ವಿಮಾನಯಾನ ಸಂಸ್ಥೆಯು ವ್ಹೀಲ್​ಚೇರ್ ಲಭ್ಯತೆಯನ್ನು ದೃಢಪಡಿಸಿದೆ. ಪದೇ ಪದೇ ಮನವಿ ಮಾಡಿ ಒಂದು ಗಂಟೆಗಳ ಕಾಲ ಕಾದರೂ ವ್ಹೀಲ್​ಚೇರ್ ಕೊಟ್ಟಿರಲಿಲ್ಲ.

ಮತ್ತಷ್ಟು ಓದಿ: ವರ್ಷದಿಂದ ಹಾರಾಡದ ವಿಮಾನ​​: ಮುಚ್ಚುವ ಭೀತಿಯಲ್ಲಿ ಬೀದರ್ ಏರ್​ಪೋರ್ಟ್​!

ಬೇರೆ ದಾರಿ ಇಲ್ಲದೆ ಮಹಿಳೆ ನಿಧಾನವಾಗಿ ಪಾರ್ಕಿಂಗ್ ಲೇನ್ ದಾಟಿ, ನಡೆದುಕೊಂಡೇ ವಿಮಾನ ನಿಲ್ದಾಣ ಪ್ರವೇಶಿಸಿದರು. ಆದರೆ ಅವರಿಗೆ ವ್ಹೀಲ್​ಚೇರ್ ಒದಗಿಸಿರಲಿಲ್ಲ. ನಡೆಯುತ್ತಿರುವಾಗಲೇ ಹೆಜ್ಜೆ ಕಿತ್ತಿಡಲಾಗದೆ ಬಿದ್ದಿದ್ದಾರೆ. ಅಜ್ಜಿ ಎರಡು ದಿನಗಳಿಂದ ಐಸಿಯುನಲ್ಲಿ ನಿಗಾದಲ್ಲಿದ್ದಾರೆ ಮತ್ತು ಅವರ ದೇಹದ ಎಡಭಾಗವು ಶಕ್ತಿ ಕಳೆದುಕೊಳ್ಳುತ್ತಿದೆ ಎಂದು ಮೊಮ್ಮಗಳು ಮಾಹಿತಿ ನೀಡಿದ್ದಾಳೆ.

ಕೊನೆಗೂ ತನ್ನ ಅಜ್ಜಿಗೆ ವೀಲ್‌ಚೇರ್ ನೀಡಲಾಯಿತು, ಆದರೆ ವಿಮಾನಯಾನ ಸಂಸ್ಥೆಯು ಸರಿಯಾದ ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡದ ಕಾರಣ ರಕ್ತಸ್ರಾವವಾಗುವ ತುಟಿ ಮತ್ತು ತಲೆ ಮತ್ತು ಮೂಗಿಗೆ ಗಾಯವಾಗಿ ವಿಮಾನ ಹತ್ತಬೇಕಾಯಿತು. ವಿಮಾನ ಸಿಬ್ಬಂದಿ ಐಸ್ ಪ್ಯಾಕ್‌ಗಳೊಂದಿಗೆ ಸಹಾಯ ಮಾಡಿದರು ಮತ್ತು ವೈದ್ಯಕೀಯ ಸಹಾಯಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆ ಮಾಡಿದರು, ಅಲ್ಲಿ ವೈದ್ಯರು ಅವರನ್ನು ನೋಡಿದರು ಮತ್ತು 2 ಹೊಲಿಗೆಗಳನ್ನು ಹಾಕಿದರು ಎಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us