AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Rules in March: ಎಟಿಎಂ, ಫಾಸ್​ಟ್ಯಾಗ್​ ಸೇರಿ ಮಾ.1ರಿಂದ ಅನ್ವಯ ಆಗುವ ಹೊಸ ನಿಯಮಗಳಿವು..

ಆನ್​ಲೈನ್​ ವಹಿವಾಟು ಮತ್ತು ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡುವ ಸಂಬಂಧ ಇಂದಿನಿಂದ ಒಂದಷ್ಟು ಬದಲಾವಣೆ ಮಾಡಲು ಕೆಲವು ಬ್ಯಾಂಕ್​ಗಳು ನಿರ್ಧರಿಸಿವೆ. ಇಂದಿನಿಂದ (ಮಾ.1) ಇಂಡಿಯನ್ ಬ್ಯಾಂಕ್​ (Indian Bank) ಎಟಿಎಂಗಳಲ್ಲಿ 2000 ರೂ. ನೋಟುಗಳು ಸಿಗುವುದಿಲ್ಲ.

New Rules in March: ಎಟಿಎಂ, ಫಾಸ್​ಟ್ಯಾಗ್​ ಸೇರಿ ಮಾ.1ರಿಂದ ಅನ್ವಯ ಆಗುವ ಹೊಸ ನಿಯಮಗಳಿವು..
ಫಾಸ್​ಟ್ಯಾಗ್ ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Mar 01, 2021 | 3:11 PM

Share

ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನ ತೈಲ ಮಾರ್ಕೆಟಿಂಗ್ ಕಂಪನಿಗಳು ಗ್ಯಾಸ್​ ಸಿಲಿಂಡರ್​​ಗಳ ಹೊಸ ದರವನ್ನು ಪರಿಷ್ಕರಿಸುತ್ತವೆ. ಅಂತೆಯೇ ಇಂದು ಕೂಡ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ ದರ ಹೆಚ್ಚಿದೆ. ಇದರ ಹೊರತಾಗಿ ಫೆಬ್ರವರಿಯಲ್ಲೇ ಮೂರು ಬಾರಿ ಪರಿಷ್ಕೃತಗೊಂಡಿವೆ. ಇಂದು ಮಾರ್ಚ್​ 1ರಿಂದ ಬರೀ ಗ್ಯಾಸ್​ ಸಿಲಿಂಡರ್​ಗಳ ಬೆಲೆಯಲ್ಲಷ್ಟೇ ಬದಲಾವಣೆಯಾಗಿದ್ದಲ್ಲ, ಅದರ ಹೊರತಾಗಿ ಕೂಡ ಬೇರೆ ಕೆಲವು ನಿಯಮಗಳು ಅನ್ವಯ ಆಗಲಿವೆ. ಹಾಗಿದ್ದರೆ ಯಾವ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆಗಳು ಇಂದಿನಿಂದ ಆಗಲಿವೆ ಎಂಬುದರ ಮಾಹಿತಿ ಇಲ್ಲಿದೆ..

ಫಾಸ್​ಟ್ಯಾಗ್​ (FASTag) ದೇಶಾದ್ಯಂತ ಫಾಸ್​ಟ್ಯಾಗ್​ ಬಳಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇಂದಿನವರೆಗೆ (ಮಾರ್ಚ್​ 1) ರಾಷ್ಟ್ರೀಯ ಹೆದ್ದಾರಿಗಳ ಟೋಲ್​ ಪ್ಲಾಜಾಗಳಲ್ಲಿ ಉಚಿತವಾಗಿಯೂ ವಿತರಣೆಯಾಗುತ್ತಿತ್ತು. ಆದರೆ ಇಂದಿನಿಂದ ಫಾಸ್​ಟ್ಯಾಗ್​(FASTag) ಎಲ್ಲಿಯೂ ಉಚಿತವಾಗಿ ಸಿಗುವುದಿಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಫಾಸ್​ಟ್ಯಾಗ್​ನ್ನು ಹೊಂದುವುದು ಕಡ್ಡಾಯವಾಗಿದ್ದು, ಅದನ್ನು ಪಡೆಯಲು ಇಂದಿನಿಂದ 100 ರೂ.ಶುಲ್ಕ ನೀಡಬೇಕಾಗುತ್ತದೆ.

ಟೋಲ್​ ಪ್ಲಾಜಾಗಳಲ್ಲಿ ವಾಹನ ದಟ್ಟಣೆಯಾಗುವುದನ್ನು ತಪ್ಪಿಸಲು, ವೇಗವಾಗಿ ಶುಲ್ಕ ವಸೂಲಿ ಮಾಡಲು ಈ ಫಾಸ್​ಟ್ಯಾಗ್​ ವಿದ್ಯುಚ್ಚಾಲಿತ ವಿಧಾನವನ್ನು ಅಳವಡಿಸಲಾಗಿದೆ. ಫೆ.16ರಿಂದಲೇ ಕಡ್ಡಾಯ ಮಾಡಲಾಗಿದ್ದು, ಪ್ರತಿಯೊಬ್ಬ ವಾಹನ ಮಾಲೀಕರೂ ಇದನ್ನು ಹೊಂದುವುದು ಕಡ್ಡಾಯವಾಗಿದೆ. ಇಷ್ಟು ದಿನ ದೇಶದ 770 ಟೋಲ್​ ಪ್ಲಾಜಾಗಳಲ್ಲಿ ಉಚಿತವಾಗಿ ಸಿಗುತ್ತಿದ್ದ ಫಾಸ್​ಟ್ಯಾಗ್​ ಇನ್ನು ಮುಂದೆ ಉಚಿತವಲ್ಲ.

ಕೊರೊನಾ ಲಸಿಕೆ 2ನೇ ಹಂತದ ವಿತರಣೆ ಕೊವಿಡ್​-19 ಲಸಿಕೆ 2ನೇ ಹಂತದ ವಿತರಣೆ ಇಂದಿನಿಂದ (ಮಾರ್ಚ್​ 1) ಶುರುವಾಗಿದೆ. ಈ ಬಾರಿ 60 ವರ್ಷ ಮೇಲ್ಪಟ್ಟ ಎಲ್ಲರಿಗೆ ಮತ್ತು 45 ವರ್ಷ ಮೇಲ್ಪಟ್ಟ, ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊವಿಡ್​ 19 ಲಸಿಕೆ ನೀಡಲಾಗುತ್ತದೆ. ಇಂದಿನಿಂದ ಶುರುವಾಗಿರುವ ಲಸಿಕೆ ವಿತರಣೆ ಅಭಿಯಾನದ ನಿಯಮಗಳು ಯಾರಿಗೆ ಅನ್ವಯ ಆಗುತ್ತವೆಯೋ, ಅವರು ತಮ್ಮ ಹೆಸರನ್ನು ರಿಜಿಸ್ಟಾರ್​ ಮಾಡಿಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಗುರುತು ಪತ್ರ ನೀಡಿದರೆ ಸಾಕು. ಆದರೆ 45ವರ್ಷ ಮೇಲ್ಪಟ್ಟು, ಬೇರೆ ಆರೋಗ್ಯ ಸಮಸ್ಯೆ ಉಳ್ಳವರು ತಮ್ಮ ಕಾಯಿಲೆಯ ಬಗೆಗಿನ ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಬೇಕು. ಹಾಗೇ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್​ಗೆ 250 ರೂ.ಶುಲ್ಕ ವಿಧಿಸಲಾಗುವುದು.

ಬ್ಯಾಂಕಿಂಗ್​ ವಲಯದಲ್ಲೊಂದಷ್ಟು ಬದಲಾವಣೆ ಆನ್​ಲೈನ್​ ವಹಿವಾಟು ಮತ್ತು ಎಟಿಎಂನಲ್ಲಿ ಹಣ ವಿತ್​ಡ್ರಾ ಮಾಡುವ ಸಂಬಂಧ ಇಂದಿನಿಂದ ಒಂದಷ್ಟು ಬದಲಾವಣೆ ಮಾಡಲು ಕೆಲವು ಬ್ಯಾಂಕ್​ಗಳು ನಿರ್ಧರಿಸಿವೆ. ಇಂದಿನಿಂದ (ಮಾ.1) ಇಂಡಿಯನ್ ಬ್ಯಾಂಕ್​ (Indian Bank) ಎಟಿಎಂಗಳಲ್ಲಿ 2000 ರೂ. ನೋಟುಗಳು ಸಿಗುವುದಿಲ್ಲ. ಬ್ಯಾಂಕ್​ ಗ್ರಾಹಕರಿಗೆ 2000 ರೂ.ನೋಟು ಬೇಕಾದರೆ ಅವರು ಹತ್ತಿರದ ಬ್ರ್ಯಾಂಚ್​​ಗಳಿಗೇ ಭೇಟಿ ಕೊಡಬೇಕು. ಎಟಿಎಂಗಳಲ್ಲಿ 2000 ರೂ.ನೋಟು ಹಾಕುವುದರಿಂದ ಅದಕ್ಕೆ ಚಿಲ್ಲರೆ ಪಡೆಯುವುದು ಗ್ರಾಹಕರಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಬ್ಯಾಂಕ್​ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ, ಇಂಡಿಯನ್ ಬ್ಯಾಂಕ್​ ಜತೆ ವಿಲೀನಗೊಂಡಿರುವ ಅಲಹಾಬಾದ್​ ಬ್ಯಾಂಕ್​ ಕೂಡ ತನ್ನ ಎಟಿಎಂಗಳಲ್ಲಿ 2000 ರೂ.ನೋಟು ತುಂಬುವುದನ್ನು ನಿಲ್ಲಿಸುತ್ತವೆಯಾ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಐಎಫ್​​ಎಸ್​ಸಿ ಕೋಡ್​ ಇರೋದಿಲ್ಲ ಬ್ಯಾಂಕ್​ ಆಫ್​ ಬರೋಡಾದಲ್ಲಿ, ವಿಜಯಾ ಬ್ಯಾಂಕ್​, ದೇನಾ ಬ್ಯಾಂಕ್ ವಿಲೀನಗೊಂಡಿದ್ದು ಗೊತ್ತೇ ಇದೆ. ಇದೀಗ ಇ-ವಿಜಯಾ ಮತ್ತು ಇ-ದೇನಾ ಆನ್​ಲೈನ್ ಬ್ಯಾಂಕಿಂಗ್​ ವಹಿವಾಟಿನಲ್ಲಿ ಇಂದಿನಿಂದ ಹಳೇ IFSC ಕೋಡ್​​ಗಳು ಸ್ಥಗಿತಗೊಳ್ಳಲಿವೆ. ಬ್ಯಾಂಕ್​​ಗಳ ಗ್ರಾಹಕರು ಹೊಸ IFSC ಕೋಡ್​ ಪಡೆಯಲು 8422009988ಕ್ಕೆ ರಿಜಿಸ್ಟರ್ ಮೊಬೈಲ್​ನಿಂದ ಮೆಸೇಜ್​ ಮಾಡಬೇಕು. ಅದು MIGR ನಿಮ್ಮ ಹಳೇ ಅಕೌಂಟ್​ನ ಕೊನೇ ನಾಲ್ಕು ಡಿಜಿಟ್​ಗಳನ್ನು ನಮೂದಿಸಿ ಮಸೇಜ್​ ಮಾಡಬೇಕು. ಇದರೊಂದಿಗೆ ಬ್ಯಾಂಕ್ ಆಫ್ ಬರೋಡಾದ ಹೆಲ್ಪ್​ ಡೆಸ್ಕ್ 1800 258 1700 ಕ್ಕೂ ಕರೆ ಮಾಡಬಹುದು.

ಇದನ್ನೂ ಓದಿ: Bank Holidays in March 2021: ಮಾರ್ಚ್​ ತಿಂಗಳಲ್ಲಿ ಬ್ಯಾಂಕ್​ಗೆ ಎಷ್ಟೆಲ್ಲಾ ದಿನ ರಜೆ ಇದೆ ಎಂಬ ಮಾಹಿತಿ ಇಲ್ಲಿದೆ

Gold Silver Price: ಮಾರ್ಚ್​ ತಿಂಗಳ ಆರಂಭ.. ಇಳಿಕೆಯತ್ತ ಸಾಗುತ್ತಿರುವ ಚಿನ್ನದ ದರ!

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ