ದೀಪಾವಳಿಯಂದು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ದಂಡವಿಲ್ಲ: ಗೃಹ ಸಚಿವ

ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಶುಕ್ರವಾರ ಅಕ್ಟೋಬರ್ 21 ರಿಂದ 27 ರವರೆಗೆ ಸಂಚಾರ ಪೊಲೀಸರು ನಾಗರಿಕರಿಗೆ ದಂಡವನ್ನು ವಿಧಿಸುವಂತಿಲ್ಲ ಎಂದು ಘೋಷಿಸಿದ್ದಾರೆ

ದೀಪಾವಳಿಯಂದು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ದಂಡವಿಲ್ಲ: ಗೃಹ ಸಚಿವ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Oct 22, 2022 | 4:57 PM

ಗುಜರಾತ್:  ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಶುಕ್ರವಾರ ಅಕ್ಟೋಬರ್ 21 ರಿಂದ 27 ರವರೆಗೆ ಸಂಚಾರ ಪೊಲೀಸರು ನಾಗರಿಕರಿಗೆ ದಂಡವನ್ನು ವಿಧಿಸುವಂತಿಲ್ಲ ಎಂದು ಘೋಷಿಸಿದ್ದಾರೆ, ಇದೀಗ ಈ ಕ್ರಮ ವಿವಾದವನ್ನು ಸೃಷ್ಟಿಸಿದೆ. ಸೂರತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರ್ಷ್ ಸಾಂಘವಿ, ಇಂದಿನಿಂದ ಅ. 21 ರಿಂದ ಅಕ್ಟೋಬರ್ 27 ರವರೆಗೆ, ಗುಜರಾತ್ ಟ್ರಾಫಿಕ್ ಪೊಲೀಸರು ನಾಗರಿಕರಿಗೆ ಯಾವುದೇ ದಂಡವನ್ನು ವಿಧಿಸುವಂತಿಲ್ಲ . ಇದರರ್ಥ ನೀವು (ಸಾರ್ವಜನಿಕರು) ಸಂಚಾರ ನಿಯಮಗಳನ್ನು ಅನುಸರಿಸಬಾರದು ಎಂದಲ್ಲ. ನೀವು ತಪ್ಪು ಮಾಡುತ್ತೀರಿ, ಅದಕ್ಕಾಗಿ ನೀವು ದಂಡವನ್ನು ಪಾವತಿಸಬೇಕಿಲ್ಲ ಎಂದು ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದು ಕಾನೂನು ಉಲ್ಲಂಘನೆ ಅಲ್ಲ. ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ, ಗುಜರಾತ್ ಪೊಲೀಸರು ಹೂಗಳನ್ನು ನೀಡುವ ಮೂಲಕ ಈ ತಪ್ಪು ಮಾಡದಂತೆ ಮನವೊಲಿಸಬೇಕು ಎಂದು ಸಾಂಘವಿ ಹೇಳಿದರು.

ಇದೀಗ ಈ ಕ್ರಮಕ್ಕೆ ನಾಗರಿಕರು ಹಾಗೂ ರಾಜಕಾರಣಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಶುರುವಾಗಿದೆ. ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಸಿಂಗ್ ಚೌಧರಿ ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದ್ದಾರೆ, ಇದೊಂದು ಕೆಟ್ಟ ಕ್ರಮ ಮತಕ್ಕಾಗಿ ವಾಹನ ಚಾಲಕರ ಜೀವಕ್ಕೆ ಅಪಾಯ ಉಂಟು ಮಾಡುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗ ಕೂಡ ಚುನಾವಣೆ ಘೋಷನೆಯನ್ನು ತುಂಬಾ ತಡ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Published On - 2:37 pm, Sat, 22 October 22