AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baba Vanga Predictions ಬಾಬಾ ವಂಗಾ ಭವಿಷ್ಯ ನುಡಿ: ಭಾರತದಲ್ಲಿ ಏರಿಕೆಯಾಗಲಿದೆ ತಾಪಮಾನ, ಜಗತ್ತಿಗೆ ಮತ್ತೊಂದು ವೈರಸ್ ಆತಂಕ

ಭಾರತದಲ್ಲಿ ತಾಪಮಾನ 50 ಡಿಗ್ರಿಗೆ ಏರಿಕೆ ಆಗಲಿದ್ದು, ಬೆಳೆಗಳಿಗೆ ಮಿಡತೆ ಕಾಟ ಕಂಡುಬರುತ್ತದೆ. ಕ್ಷಾಮದ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪ್ರವಾಹ ಮತ್ತು ಏಷ್ಯಾದ ವಿವಿಧ ಭಾಗಗಳಲ್ಲಿ...

Baba Vanga Predictions ಬಾಬಾ ವಂಗಾ ಭವಿಷ್ಯ ನುಡಿ: ಭಾರತದಲ್ಲಿ ಏರಿಕೆಯಾಗಲಿದೆ ತಾಪಮಾನ, ಜಗತ್ತಿಗೆ ಮತ್ತೊಂದು ವೈರಸ್ ಆತಂಕ
ಬಾಬಾ ವಂಗಾ
TV9 Web
| Edited By: |

Updated on: Jul 17, 2022 | 4:44 PM

Share

ಬಾಲ್ಕನ್ ಪ್ರದೇಶದ ನಾಸ್ಟ್ರಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ (Baba Vanga) ನುಡಿದ ಭವಿಷ್ಯವಾಣಿಗಳಲ್ಲಿ ಶೇ 85ರಷ್ಟು ಭವಿಷ್ಯವಾಣಿ ನಿಜವಾಗಿದೆ. ಚರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾಳ ಮರಣ ಮತ್ತು ಸೋವಿಯತ್ ಒಕ್ಕೂಟದ ವಿಸರ್ಜನೆ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯ ನಿಜವಾಗಿತ್ತು. 1996ರಲ್ಲಿ ಬಾಬಾ ವಂಗಾ ಸಾವಿಗೀಡಾಗಿದ್ದರೂ ಆಕೆ ನುಡಿದ ಭವಿಷ್ಯವಾಣಿಗಳು ನಿಜವಾಗುತ್ತವೆ ಎಂದು ಬಹುತೇಕ ಜನರು ಈಗಲೂ ನಂಬುತ್ತಿದ್ದಾರೆ. ಬಾಬಾ ವಂಗಾ ಅವರ ಮುಂದಿನ ಭವಿಷ್ಯವಾಣಿ (Baba Vanga’s predictions) ಜಗತ್ತಿಗೆ ಕೆಟ್ಟದ್ದು ಸಂಭವಿಸುತ್ತದೆ ಎಂಬುದರ ಬಗ್ಗೆಯಾಗಿದೆ. 2022ರಲ್ಲಿನ ಭವಿಷ್ಯ ನುಡಿ ವರ್ಚುವಲ್ ರಿಯಾಲಿಟಿ ಬಗ್ಗೆ ಆಗಿದ್ದು ಜನರು ಹೆಚ್ಚಿನ ಸಮಯವನ್ನು ಸ್ಕ್ರೀನ್ ಮುಂದೆ ಕಳೆಯಲಿದ್ದಾರೆ ಎಂಬುದಾಗಿತ್ತು. ಈಗ ನೋಡಿದರೆ ಈ ಭವಿಷ್ಯವಾಣಿ ನಿಜವೇ ಆಗಿದೆ. ಬಾಬಾ ವಂಗಾ ಅವರ ನಿಜನಾಮ ವಂಜೆಲಿಯಾ ಗುಸ್ಟೆರೋವಾ (Vangelia Gushterova). ಈಕೆ ಇನ್ನೊಂದು ಸಾಂಕ್ರಾಮಿಕ ವೈರಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಹೆಪ್ಪುಗಟ್ಟಿದ ವೈರಸ್​​ನಿಂದ ಈ ರೋಗ ಉಂಟಾಗಲಿದ್ದು ಇದು ಸೈಬಿರಿಯಾದಲ್ಲಿ ಪತ್ತೆಯಾಗುತ್ತದೆ ಎಂದಿದ್ದರು. 2021 ಜುಲೈ ತಿಂಗಳಲ್ಲಿ ಸಂಶೋಧಕರ ತಂಡ ಚೀನಾದ ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಪ್ರಾಚೀನ ವೈರಸ್​​ಗಳಿಂದ ಹೆಪ್ಪುಗಟ್ಟಿದ ವೈರಸ್​​ಗಳನ್ನು ಪತ್ತೆ ಮಾಡಿದ್ದು, ಇವುಗಳು ಹಿಂದೆಂದೂ ಪತ್ತೆಯಾಗದವುಗಳಾಗಿವೆ. 2015ರಲ್ಲಿ ಸಂಗ್ರಹಿಸಲಾದ ಮಂಜುಗಡ್ಡೆಗಳಲ್ಲಿ ಕನಿಷ್ಠ ಪಕ್ಷ 14,400 ವರ್ಷಗಳ ಹಿಂದೆ ಹೆಪ್ಪುಗಟ್ಟಿದ ವೈರಸ್ ಗಳಾಗಿವೆ ಇವು ಎಂದು ಸಂಶೋಧಕರು ಮನಗಂಡಿದ್ದಾರೆ.

ವಿಶ್ಲೇಷಣೆ ನಡೆಸಿದಾಗ ಮಂಜುಗಡ್ಡೆಯಲ್ಲಿ 33 ವೈರಲ್ ಜೆನೆಟಿಕ್ ಕೋಡ್​​ಗಳು ಪತ್ತೆಯಾಗಿವೆ. ಈ ಪೈಕಿ 4ರಲ್ಲಿ ಇರುವ ಜೆನೆಟಿಕ್ ಕೋಡ್​​ಗಳು ಬ್ಯಾಕ್ಟೀರಿಯಾ ಮೇಲೆ ದಾಳಿ ನಡೆಸುವ ವೈರಸ್ ಕುಟುಂಬಕ್ಕೆ ಸೇರಿದವುಗಳಾಗಿವೆ ಎಂದು ಗುರುತಿಸಲಾಗಿದ. 28 ವೈರಸ್​​ಗಳು ನೋವೆಲ್ ವೈರಸ್​​ಗಳಾಗಿದ್ದು, ಹಿಂದೆಂದೂ ಪತ್ತೆಯಾಗದವುಗಳಾಗಿವೆ. ಬಾಬಾ ವಂಗಾ ಅವರ ಭವಿಷ್ಯ ನುಡಿ ಪ್ರಕಾರ ದೇಶಗಳು ಪರ್ಯಾಯ ವ್ಯವಸ್ಥೆ ಹುಡುಕಲೇ ಬೇಕಾದ ಪರಿಸ್ಥಿತಿ ಬರುತ್ತದೆ. ಹೆಚ್ಚಿನ ನಗರಗಳು ನೀರಿನ ಕೊರತೆ ಅನುಭವಿಸಲಿದ್ದು ಇದು ರಾಜಕೀಯ ಮೇಲೆ ಪ್ರಭಾವ ಬೀರುತ್ತದೆ. ಅದೇ ವೇಳೆ ಗ್ರಹಗಳ ಮೇಲೆ ಅನ್ಯಗ್ರಹ ಜೀವಿಗಳು ದಾಳಿ ಮಾಡಲಿವೆ.

ಭಾರತದಲ್ಲಿ ತಾಪಮಾನ 50 ಡಿಗ್ರಿಗೆ ಏರಿಕೆ ಆಗಲಿದ್ದು, ಬೆಳೆಗಳಿಗೆ ಮಿಡತೆ ಕಾಟ ಕಂಡುಬರುತ್ತದೆ. ಕ್ಷಾಮದ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪ್ರವಾಹ ಮತ್ತು ಏಷ್ಯಾದ ವಿವಿಧ ಭಾಗಗಳಲ್ಲಿ ಭೂಕಂಪ ಮತ್ತು ಸುನಾಮಿ ಕಂಡುಬರಲಿದೆ ಎಂದು ವಂಗಾ ಭವಿಷ್ಯವಾಣಿ ಇದೆ. ಬಾಬಾ ವಂಗಾ ಅವರು ಅಂಗಾಗ ಕಸಿ ತಂತ್ರಜ್ಞಾನದ ಬಗ್ಗೆಯೂ ಹೇಳಿದ್ದು 2046ರಲ್ಲಿ ಮನುಷ್ಯರು 100 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕುತ್ತಾರೆ ಎಂದಿದ್ದಾರೆ. 2100ರಲ್ಲಿ ಅಂಧಕಾರ ಮಾಯವಾಗಿ ಭೂಮಿಯ ಇನ್ನೊಂದು ಪ್ರದೇಶ ಕೃತಕ ಸೂರ್ಯನ ಬೆಳಕಿನಿಂದ ಬೆಳಗಲಿದೆ ಎಂದಿದ್ದಾರೆ. 2023ರಲ್ಲಿ ಭೂಮಿಯ ಕಕ್ಷೆ ಬದಲಾವಣೆ ಆಗಲಿದೆ , 2028ರಲ್ಲಿ ಮನುಷ್ಯರು ಶುಕ್ರನಲ್ಲಿಗೆ ಹೋಗಲಿದ್ದಾರೆ, 2043ರಲ್ಲಿ ಮುಸ್ಲಿಮರು ಯುರೋಪ್ ನಲ್ಲಿ ಅಧಿಕಾರಕ್ಕೆ ಬರಲಿದ್ದಾರೆ ಮತ್ತು 5079ರಲ್ಲಿ ಜಗತ್ತು ಅಂತ್ಯವಾಗಲಿದೆ ಎಂದು ವಂಗಾ ಭವಿಷ್ಯವಾಣಿ ಇದೆ.

Follow Us
‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯ
‘ನಿಮ್ಮ ಲೀಡರ್​​ಶಿಪ್ ಇಷ್ಟ’; ಧೋನಿ ಹಾಡಿ ಹೊಗಳಿದ ಶಿವಕಾರ್ತಿಕೇಯ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್